AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಸಿಜನ್​ ನಿರ್ವಹಣೆಗಾಗಿ ಹೊಸ ಮಾರ್ಗಸೂಚಿ ಬಿಡುಗಡೆ; ಇಲ್ಲಿದೆ ನೋಡಿ ರಾಜ್ಯ ಸರ್ಕಾರ ಮಾಡಿದ ವ್ಯವಸ್ಥೆಯ ಪಟ್ಟಿ..

ರಾಜ್ಯದಲ್ಲಿ ಆಕ್ಸಿಜನ್​ ಉತ್ಪಾದನೆ, ಸಾಗಣೆ, ವಿತರಣೆಯ ಉಸ್ತುವಾರಿ ಹೊರಲು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹಾಗೇ 24/7 ಕಾಲಾವಧಿ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನೂ ತೆರೆಯಲಾಗಿದೆ.

ಆಕ್ಸಿಜನ್​ ನಿರ್ವಹಣೆಗಾಗಿ ಹೊಸ ಮಾರ್ಗಸೂಚಿ ಬಿಡುಗಡೆ; ಇಲ್ಲಿದೆ ನೋಡಿ ರಾಜ್ಯ ಸರ್ಕಾರ ಮಾಡಿದ ವ್ಯವಸ್ಥೆಯ ಪಟ್ಟಿ..
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:May 12, 2021 | 5:20 PM

Share

ದೇಶಕ್ಕೆ ಕೊರೊನಾ ಕಾಲಿಟ್ಟು ಒಂದು ವರ್ಷದ ಮೇಲಾಗಿದೆ. ಸೋಂಕು ಕಳೆದ ವರ್ಷಕ್ಕಿಂತ ಈ ಬಾರಿ ಮತ್ತಷ್ಟು ಮಾರಣಾಂತಿಕವಾಗಿ ಪರಿಣಮಿಸಿದೆ. ಈ ಮಧ್ಯೆ ಆಕ್ಸಿಜನ್ ಅಭಾವದ ಸವಾಲು ಎದ್ದಿದೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ರಾಜ್ಯದಲ್ಲಿ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಕಾಣುತ್ತಿದೆ. ಈ ಸಮಸ್ಯೆ ಪರಿಹರಿಸಲು ರಾಜ್ಯಸರ್ಕಾರ ವೈದ್ಯಕೀಯ ಆಮ್ಲಜನಕ ನಿರ್ವಹಣಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ ಪ್ರತಿದಿನ 1500 ಮೆಟ್ರಿಕ್​ ಟನ್​ಗಳಷ್ಟು ಆಮ್ಲಜನಕ ಬೇಕು. ಆದರೆ ಸದ್ಯ ದಿನಕ್ಕೆ 950 ಮೆಟ್ರಿಕ್​ ಟನ್​ ಆಮ್ಲಜನಕ ಕೇಂದ್ರ ಸರ್ಕಾರದಿಂದ ಪೂರೈಕೆಯಾಗುತ್ತಿದೆ. ಹೀಗಾಗಿ ಈ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಹಂಚಿಕೆ ಮಾಡುವಾಗ ಪಾರದರ್ಶಕತೆ, ದಕ್ಷತೆ ಇರಬೇಕು. ಆಯಾ ಆಸ್ಪತ್ರೆಗಳ ಅಗತ್ಯತೆ ನೋಡಿಕೊಂಡು ಆಕ್ಸಿಜನ್ ಪೂರೈಕೆ ಮಾಡಬೇಕು. ಈ ನಿರ್ವಹಣೆಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಒಂದಷ್ಟು ನಿಯಮಗಳನ್ನು ಹೇಳಲಾಗಿದೆ.

ಇನ್ನು ರಾಜ್ಯದಲ್ಲಿ ಆಕ್ಸಿಜನ್​ ಉತ್ಪಾದನೆ, ಸಾಗಣೆ, ವಿತರಣೆಯ ಉಸ್ತುವಾರಿ ಹೊರಲು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹಾಗೇ 24/7 ಕಾಲಾವಧಿ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನೂ ತೆರೆಯಲಾಗಿದೆ. ಇನ್ನು ಜಿಲ್ಲೆಗಳಲ್ಲಿ ವೈದ್ಯಕೀಯ ಆಕ್ಸಿಜನ್ ಪೂರೈಕೆ ನಿರ್ವಹಣೆ ಹೇಗಿರಬೇಕು ಎಂದು ಈ ಗೈಡ್​ಲೈನ್​ನಲ್ಲಿ ತಿಳಿಸಲಾಗಿದ್ದು, ಅವು ಹೀಗಿವೆ.

1. ಎಲ್ಲ ಜಿಲ್ಲೆಗಳಲ್ಲಿ ಕೂಡಲೇ ವೈದ್ಯಕೀಯ ಆಕ್ಸಿಜನ್ ಸೆಲ್​ ಸ್ಥಾಪಿತವಾಗಬೇಕು 2. ಈ ಆಮ್ಲಜನಕ ಘಟಕಗಳು 24×7 ಕಾಲ ಕಾರ್ಯನಿರ್ವಹಿಸಬೇಕು. 3. ಜಿಲ್ಲಾ ಆಮ್ಲಜನಕ ಸೆಲ್​​ನ ಮುಖ್ಯಸ್ಥನಾಗಿ ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ನೇಮಕ ಮಾಡಲಾಗುವುದು. ಹಾಗೇ ಇದರಲ್ಲಿ ಜಿಲ್ಲಾ ನೋಡೆಲ್ ಅಧಿಕಾರಿ ಕೂಡ ಇರುತ್ತಾರೆ. ಇವರೊಂದಿಗೆ ಅಗತ್ಯ ಇರುವ ಅಧಿಕಾರಿಗಳು ಮತ್ತು ಕಂಪ್ಯೂಟರ್​ ವ್ಯವಸ್ಥೆಯಿದ್ದು, ಕಂಪ್ಯೂಟರ್ ಆಪರೇಟ್ ಮಾಡಲು ನುರಿತ ವ್ಯಕ್ತಿಯನ್ನು ನೇಮಕ ಮಾಡಲಾಗುತ್ತದೆ. 4. ಇನ್ನು ಸಹಾಯವಾಣಿ, ಆಕ್ಸಿಜನ್​ ಸೆಲ್​​ನ ಒಂದು ಅಂಗವಾಗಿ ಕಾರ್ಯನಿರ್ವಹಿಸಲಿದ್ದು, ಇಲ್ಲಿ ಅಗತ್ಯವಿರುವಷ್ಟು ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್​ ಇರಲಿದ್ದಾರೆ. ಆಮ್ಲಜನಕ ಸಹಾಯವಾಣಿ ಸಂಖ್ಯೆಗಳನ್ನು ಎಲ್ಲ ಪತ್ರಿಕೆಗಳು, ಮಾಧ್ಯಮ, ಸೋಷಿಯಲ್ ಮೀಡಿಯಾ, ಆಯಾ ಜಿಲ್ಲಾ ವೆಬ್​ಸೈಟ್​ಗಳ ಮೂಲಕ ಪ್ರಸಾರ ಮಾಡಲಾಗುವುದು. ಇದರಿಂದಾಗಿ ಯಾವುದೇ ಆಸ್ಪತ್ರೆಗಳು, ಎಷ್ಟೇ ಹೊತ್ತಿನಲ್ಲೂ ಕೂಡ ಈ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. 5. ಆಮ್ಲಜನಕ ಮರುಭರ್ತಿ ಮಾಡುವ ಕೇಂದ್ರಗಳಲ್ಲಿನ ಅಧಿಕಾರಿಗಳು, ಆಕ್ಸಿಜನ್​ ನಿರ್ವಹಣೆಗಾಗಿ ಡ್ರಗ್​ ಕಂಟ್ರೋಲ್​​ ಡಿಪಾರ್ಟ್​ಮೆಂಟ್​​ನಲ್ಲಿರುವವರು ಈ ಆಕ್ಸಿಜನ್ ಸೆಲ್​​ಗೆ ವರದಿ ಸಲ್ಲಿಸಬೇಕು. ಹಾಗೇ, ಆಮ್ಲಜನಕ ಮರುಭರ್ತಿ ಕೇಂದ್ರಗಳೂ ಮಾರ್ಗಸೂಚಿ ಅನ್ವಯ ಕೆಲಸ ಮಾಡುತ್ತಿವೆಯೇ ಎಂಬುದನ್ನು ಆಕ್ಸಿಜನ್ ಸೆಲ್​ಗಳು ಖಚಿತಪಡಿಸಿಕೊಳ್ಳಬೇಕು. 6. ಆಕ್ಸಿಜನ್​ ಸೆಲ್​ಗಳು ಕಾರ್ಯದ ಮೇಲೆ ಆಯಾ ಜಿಲ್ಲಾಧಿಕಾರಿಗಳು ನಿಗಾ ಇಡಬೇಕು. ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಬೆಡ್​ಗಳು ಹೆಚ್ಚಾದಲ್ಲಿ ಅದರ ಬಗ್ಗೆ ಸೆಲ್​ಗೆ ಕೂಡಲೇ ಮಾಹಿತಿ ಹೋಗುವುದು. ಸಂಪೂರ್ಣ ಸಮನ್ವಯತೆಯಿಂದ ಕೆಲಸಮಾಡಬೇಕು ಎಂದು ರಾಜ್ಯಸರ್ಕಾರ ತನ್ನ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: 30 ಬೆಡ್​ಗಳಿರುವ ಆಸ್ಪತ್ರೆಗಳಲ್ಲಿ ಬೆಡ್​ಗಳು ಸಿಗಲಿದೆ, ಕೆಲವೇ ದಿನಗಳಲ್ಲಿ ಬೆಡ್ ಸಮಸ್ಯೆ ಇಲ್ಲದಂತೆ ಕ್ರಮ ಕೈಗೊಳ್ಳುತ್ತೇವೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Covid 19: ಕೊರೊನಾಕ್ಕೆ ಬಲಿಯಾದ ಗರ್ಭಿಣಿ ವೈದ್ಯೆ; ಗಂಡ ಹಂಚಿಕೊಂಡ ಮನಕಲಕುವ ವಿಡಿಯೋ ಸಂದೇಶ ಇಲ್ಲಿದೆ

Published On - 5:18 pm, Wed, 12 May 21

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್