AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎರಡನೇ ಅಲೆಯ ಆತಂಕ; ಮತ್ತೆ ಲಾಕ್ ಆದ್ರೆ ಎದುರಾಗಲಿದೆ ಕಷ್ಟ-ನಷ್ಟ

ಬೆಂಗಳೂರಿನಲ್ಲಿ 75 ಸಾವಿರ ಜನ ಬೀದಿ ಬದಿ ವ್ಯಾಪಾರಿಗಳಿದ್ದು, ರಾಜ್ಯದಲ್ಲಿ ಒಟ್ಟು 4.5 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಒಬ್ಬ ಬೀದಿ ಬದಿ ವ್ಯಾಪಾರಿಯ ದಿನದ ಆದಾಯ 200 ರಿಂದ 500 ರೂಪಾಯಿಯಾಗಿದ್ದು, ಕಳೆದ ಬಾರಿಯ ಲಾಕ್ ಡೌನ್ ನಿಂದ ಒಂದು ದಿನಕ್ಕೆ ಬರೋಬ್ಬರಿ 13.5 ಕೋಟಿ ರೂಪಾಯಿ ನಷ್ಟವಾಗಿತ್ತು.

ಕೊರೊನಾ ಎರಡನೇ ಅಲೆಯ ಆತಂಕ; ಮತ್ತೆ ಲಾಕ್ ಆದ್ರೆ ಎದುರಾಗಲಿದೆ ಕಷ್ಟ-ನಷ್ಟ
ಲಾಕ್​ಡೌನ್ (ಸಂಗ್ರಹ ಚಿತ್ರ)
preethi shettigar
| Edited By: ಆಯೇಷಾ ಬಾನು|

Updated on: Apr 12, 2021 | 10:04 AM

Share

ಬೆಂಗಳೂರು: ದೇಶದೆಲ್ಲೆಡೆ ಕೊರೊನಾ ಸೋಂಕು ಮತ್ತೆ ತೀವ್ರವಾಗುತ್ತಿದ್ದು, ಕೊವಿಡ್ 19 ರ ಎರಡನೇ ಅಲೆಗೆ ಇಡಿ ದೇಶವೇ ತತ್ತರಿಸುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕಳೆದ ವರ್ಷದ ಲಾಕ್​ಡೌನ್​ ನಿಂದಲೇ ಸಾಕಷ್ಟು ನಷ್ಟವಾಗಿದ್ದು, ಇನ್ನೇನು ಜನರು ಈ ನಷ್ಟದಿಂದ ಮೇಲೆದ್ದು, ಮತ್ತೆ ಮೊದಲಿನಂತೆ ಜೀವನ ನಡೆಸಲು ಮುಂದಾಗಿದ್ದರು. ಆದರೆ ಈ ನಿರಾಳತೆಗೆ ಮತ್ತೆ ತಡೆಯೊಡ್ಡಿದಂತಾಗಿದ್ದೆ. ಈಗಾಗಲೇ ನೈಟ್ ಕಫ್ಯೂ ಜಾರಿಯಾಗಿದ್ದು, ಜನರ ವ್ಯಾಪಾರದ ಮೇಲೆ ಮತ್ತೆ ಕೊಡಲಿ ಏಟು ಬಿದ್ದಂತಾಗಿದೆ. ಹಿಂದಿನ ವರ್ಷ ಲಾಕ್​ಡೌನ್​ನಿಂದಾಗಿ ಆದ ನಷ್ಟವನ್ನು ಗಮನಿಸಿದರೆ ಮತ್ತೆ ಲಾಕ್​ಡೌನ್ ಆದರೆ ಇದರ ದುಪ್ಪಟ್ಟು ನಷ್ಟ ಎದುರಿಸಬೇಕಾಗುತ್ತದೆ ಎನ್ನುವುದು ಮಾತ್ರ ನಿಜ.​

ಕಳೆದ ವರ್ಷದ ಲಾಕ್​ಡೌನ್​ನಿಂದಾದ ನಷ್ಟ ಬೆಂಗಳೂರಿನಲ್ಲಿ 75 ಸಾವಿರ ಜನ ಬೀದಿ ಬದಿ ವ್ಯಾಪಾರಿಗಳಿದ್ದು, ರಾಜ್ಯದಲ್ಲಿ ಒಟ್ಟು 4.5 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಒಬ್ಬ ಬೀದಿ ಬದಿ ವ್ಯಾಪಾರಿಯ ದಿನದ ಆದಾಯ 200 ರಿಂದ 500 ರೂಪಾಯಿಯಾಗಿದ್ದು, ಕಳೆದ ಬಾರಿಯ ಲಾಕ್​ಡೌನ್​ನಿಂದ ಒಂದು ದಿನಕ್ಕೆ ಬರೋಬ್ಬರಿ 13.5 ಕೋಟಿ ರೂಪಾಯಿ ನಷ್ಟವಾಗಿತ್ತು.

ಲಾಕ್​ಡೌನ್ ಬೆಂಗಳೂರಿನಲ್ಲಾದ ನಷ್ಟ ಎಷ್ಟು ಗೊತ್ತಾ? ಲಾಕ್​ಡೌನ್ ವೇಳೆ ಬೆಂಗಳೂರಿಗೆ ಪ್ರತೀ ಒಂದು ದಿನಕ್ಕೆ 100 ಕೋಟಿಗೂ ಅಧಿಕ ಮೊತ್ತದ ನಷ್ಟವಾಗಿತ್ತು. ಬೆಂಗಳೂರಿನಲ್ಲೇ‌ ಶೇಕಡಾ 60 ರಷ್ಟು ಆದಾಯ ಬರುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಿಂದ ಶೇಕಡಾ 40ರಷ್ಟು ಆದಾಯ ಬರುತ್ತಿದೆ. ಲಾಕ್​ಡೌನ್ ವೇಳೆ 12 ಸಾವಿರ ಕೋಟಿಗೂ ಅಧಿಕ ನಷ್ಟವಾಗಿತ್ತು. ಒಟ್ಟು ಅಂದಾಜು 12,100 ಕೋಟಿಗೂ ಅಧಿಕ ರೂಪಾಯಿ ನಷ್ಟವಾಗಿದೆ.

ಗಾರ್ಮೆಂಟ್ಸ್​ಗ​ಳ ಸ್ಥಿತಿ ಏನು? ಬೆಂಗಳೂರಿನಲ್ಲೇ 4 ಸಾವಿರ ಗಾರ್ಮೆಂಟ್ಸ್​ಗಳಿದ್ದು, ಲಾಕ್​ಡೌನ್ ವೇಳೆ ಪ್ರತೀ ದಿನ ಬೆಂಗಳೂರಿನಲ್ಲಿ 10 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿತ್ತು. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಒಟ್ಟು 3 ಸಾವಿರ ಗಾರ್ಮೆಂಟ್ಸ್​ಗ​ಳಿದ್ದು, ಲಾಕ್​ಡೌನ್ ವೇಳೆ ಪ್ರತೀ ದಿನ ರಾಜ್ಯದ ಇತರೆ ಜಿಲ್ಲೆಗಳಲ್ಲಿ 4.5 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿತ್ತು. ಬೆಂಗಳೂರಿನಲ್ಲಿ 8 ಲಕ್ಷ ಗಾರ್ಮೆಂಟ್ಸ್ ಕಾರ್ಮಿಕರು ದುಡಿಯುತ್ತಿದ್ದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 12 ರಿಂದ 14 ಲಕ್ಷ ಜನ ಕಾರ್ಮಿಕರಿದ್ದಾರೆ. ಪ್ರಸ್ತುತ ಶೇಕಡಾ 40ರಷ್ಟು ವ್ಯಾಪಾರ ಮಾತ್ರ ನಡೆಯುತ್ತಿದ್ದು, ಶೇಕಡಾ 60 ರಷ್ಟು ವ್ಯಾಪಾರ ಕುಸಿತವಾಗಿದೆ.

ಇನ್ನು ಪಬ್, ಬಾರ್ ಮತ್ತು ಕ್ಲಬ್​ಗಳಿಗೆ ಲಾಕ್​ಡೌನ್ ವೇಳೆ ಪ್ರತೀ ನಿತ್ಯ 50 ರಿಂದ 60 ಕೋಟಿ ರೂಪಾಯಿ ನಷ್ಟವಾಗಿದ್ದು, ಒಟ್ಟಾರೆ ಅಂದಾಜು 2 ಸಾವಿರದ 500 ಕೋಟಿ ರೂಪಾಯಿ ನಷ್ಟವಾಗಿದೆ. ಕಳೆದ ಬಾರಿ ಲಾಕ್​ಡೌನ್ ಆದಾಗ ಹೊಟೇಲ್​ಗಳಿಗೆ ಆದ ನಷ್ಟ ಹೊಟೇಲ್ ಉದ್ಯಮದಲ್ಲಿ12 ಕೋಟಿಗೂ ಅಧಿಕ (ದರ್ಶಿನಿ ಸೇರಿದಂತೆ ಸಣ್ಣ ಪುಟ್ಟ ಹೊಟೇಲ್ಸ್) ನಷ್ಟವಾಗಿದೆ.

ರೆಸ್ಟೋರೆಂಟ್: 18 ಕೋಟಿಗೂ ಅಧಿಕ ನಷ್ಟ ಹೊಟೇಲ್ ಮತ್ತು ರೆಸ್ಟೋರೆಂಟ್ ಎರಡೂ ಉದ್ಯಮದಿಂದ 30 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರದ ಹೆಬ್ಬಾರ್ ಅವರ ಮಾಹಿತಿ ಪ್ರಕಾರ ಸರ್ಕಾರಕ್ಕೆ ಕಟ್ಟುತ್ತಿದ್ದ ತೆರಿಗೆಯ 2 ಪಟ್ಟು ಹೆಚ್ಚು ನಷ್ಟವಾಗಿದೆ. ಪ್ರತಿ ವರ್ಷ ಸರ್ಕಾರಕ್ಕೆ 10 ಕೋಟಿ ತೆರಿಗೆ ಕಟ್ಟಲಾಗುತ್ತಿತ್ತು. ಅದರ ಆಧಾರದ ಮೇಲೆ 30 ಕೋಟಿ ಅಧಿಕ ನಷ್ಟ ಉಂಟಾಗಿದೆ (ಲಾಡ್ಜ್, ಹೊಟೇಲ್, ತ್ರಿ ಸ್ಟಾರ್, ಫೈವ್ ಸ್ಟಾರ್ ಹೊಟೇಲ್, ಎಸಿ, ನಾನ್ ಎಸಿ ಹೊಟೇಲ್, ಮಲ್ಟಿ ಡೀಲಕ್ಸ್ ಹೊಟೇಲ್ಸ್). ಹಾಗಾಗಿ ಮತ್ತೆ ಈಗ ಲಾಕ್​ಡೌನ್ ಆದರೆ ಮತ್ತಷ್ಟು ನಷ್ಟ ಆಗಲಿದ್ದು ಜನ ದೊಡ್ಡ ಸಂಕಷ್ಟವನ್ನೇ ಎದರಿಸಬೇಕಾಗುತ್ತೆ.

ಇದನ್ನೂ ಓದಿ:

ಭಾರತಕ್ಕೆ ಬರಲಿವೆ ಇನ್ನೂ 5 ಕೊರೊನಾ ಲಸಿಕೆಗಳು; ಎಲ್ಲರಿಗೂ ಶೀಘ್ರ ಲಸಿಕೆ ದೊರೆಯುವ ನಿರೀಕ್ಷೆ

Covid-19 Karnataka Update: ಕರ್ನಾಟಕದಲ್ಲಿ ಇಂದು 10,250 ಮಂದಿಗೆ ಕೊರೊನಾ ಸೋಂಕು, 40 ಸಾವು

(loss during first covid 19 lockdown)

Follow Us
preethi shettigar
preethi shettigar
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು