AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆಂಗಲ್​ಗೆ ರಾಯಚೂರು ರೈತರು ಕಂಗಾಲ್: ನೆಲಕಚ್ಚಿದ ಭತ್ತ..ಕಟಾವು ಮಷಿನ್ ದರ ದುಪ್ಪಟ್ಟು

ಅಲ್ಲೋಲ ಕಲ್ಲೋಲ ಸೃಷ್ಟಿಸಿರೊ ಫೆಂಗಲ್ ಚಂಡುಮಾರುತಕ್ಕೆ ರಾಯಚೂರು ಜಿಲ್ಲೆ ರೈತರು ಕಂಗಲಾಗಿದ್ದಾರೆ. ಜಿಲ್ಲೆಯಾದ್ಯಂತ ಭಯಂಕರ ತುಫಾನ್​ಗೆ ಅಪಾರ ಪ್ರಮಾಣದ ಭತ್ತ ಹಾನಿಯಾಗಿದ್ರೆ ಮತ್ತೊಂದು ಕಡೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ಭತ್ತ ಕಟಾವು ಮಷಿನ್ ದರ ದುಪ್ಪಟ್ಟು ಮಾಡಿ ರೈತರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ.

ಫೆಂಗಲ್​ಗೆ ರಾಯಚೂರು ರೈತರು ಕಂಗಾಲ್: ನೆಲಕಚ್ಚಿದ ಭತ್ತ..ಕಟಾವು ಮಷಿನ್ ದರ ದುಪ್ಪಟ್ಟು
ಭತ್ತ ನೆಲಕಚ್ಚಿರುವುದು
ಭೀಮೇಶ್​​ ಪೂಜಾರ್
| Edited By: |

Updated on: Dec 04, 2024 | 8:02 PM

Share

ರಾಯಚೂರು, (ಡಿಸೆಂಬರ್ 04): ತಮಿಳುನಾಡಿನ ಫೆಂಗಲ್​ ಚಂಡಮಾರುತ ಕರ್ನಾಟಕದ ಮೇಲೂ ಪರಿಣಾಮ ಬೀರಿದ್ದು, ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಅದರಲ್ಲೂ ರಾಯಚೂರು ಜಿಲ್ಲೆಯಲ್ಲೂ ಸಹ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ. ಹೌದು…ಭತ್ತ ಮಖಾಡೆ ಮಲಗಿದೆ. ಯಾವುದೋ ರೋಲರ್ ರೋಲ್​ ಮಾಡಿಸಿದಂಗತೆ ಭತ್ತದ ಬೆಳೆ ಸಂಪೂರ್ಣವಾಗಿ ನೆಲಸಮವಾಗಿದೆ. ರಾಯಚೂರು ತಾಲ್ಲೂಕಿನ ಕಲ್ಮಲ,ಸಿರವಾರ,ದೇವದುರ್ಗ,ಸಿಂಧನೂರು ಸೇರಿ ಜಿಲ್ಲೆಯಾದ್ಯಂತ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತ ಸದ್ಯ ಕಟಾವಿನ ಹಂತಕ್ಕೆ ಬಂದಿದೆ. ಈಗಾಗಲೇ ಜಿಲ್ಲೆಯಾದ್ಯಂತ ಕಟಾವು ಪ್ರಕ್ರಿಯೆ ಸಹ ಶುರುವಾಗಿದೆ. ಆದ್ರೆ, ಇದರ ಮಧ್ಯ ಫೆಂಗಲ್​ ರೈತರ ಖುಷಿಯನ್ನೇ ಕಸಿದುಕೊಂಡಿದೆ.

ರೈತರು ಭತ್ತ ಕಟಾವು ಮಾಡಿ, ರಾಶಿ ಮಾಡಿ ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಈ ಮಧ್ಯೆಯೇ ಈಗ ಫೆಂಗಲ್ ಚಂಡಮಾರುತ ರೈತರ ಖುಷಿಯನ್ನೇ ಕೊಂದು ಹಾಕಿದೆ. ಭರ್ಜರಿಯಾಗಿ ಬೆಳೆದಿದ್ದ ಭತ್ತ ಇನ್ನೇನು ಒಂದೇರಡು ದಿನಗಳಲ್ಲಿ ಕಟಾವು ಆಗ್ತಿತ್ತು..ಆದ್ರೆ ತುಫಾನ್​ನಿಂದ ಉಂಟಾಗಿರೊ ಗಾಳಿ, ತುಂತುರು ಮಳೆಗೆ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ.

ಭತ್ತೆ ನೆಲಕಚ್ಚಿದ್ದರಿಂದ ರೈತರು ಕಂಗಾಲಾಗಿದ್ರೆ ಮತ್ತೊಂದು ಕಡೆ ಫೆಂಗಲ್ ಚಂಡಮಾರುತದ ಸಮಸ್ಯೆಯನ್ನೇ ಮಧ್ಯವರ್ತಿಗಳು ಬಂಡವಾಳ ಮಾಡಿಕೊಂಡಿದ್ದಾರೆ.. ಹೇಗಿದ್ದರೂ ರೈತರು ಭತ್ತ ಕಟಾವು ಮಾಡೇ ಮಾಡ್ತಾರೆ ಎಂದು ಭತ್ತ ಕಟಾವು ಮಷಿನ್ ದರವನ್ನ ದುಪ್ಪಟ್ಟು ಮಾಡುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆದಿದ್ದಾರೆ.

ಇತ್ತೀಚೆಗೆ ಒಂದು ಗಂಟೆ ಭತ್ತ ಕಟಾವಿಗೆ 1500 ರೂ.ಇತ್ತು. ಆದ್ರೆ ಈಗ 3300 ರೂಪಾಯಿ ಆಗಿದೆ. ಅದರಲ್ಲೂ ಸಾಮಾನ್ಯವಾಗಿ ಒಂದು ಎಕರೆ ಭತ್ತ ಕಟಾವು ಮಾಡಲು ಒಂದುವರೆ ಗಂಟೆ ಆಗುತ್ತಿತ್ತು. ಈಗ ಭತ್ತ ನೆಲಕಚ್ಚಿರುವುದರಿಂದ ಭತ್ತ ಕಟಾವು ಮಾಡಲು ಮೂರು ಗಂಟೆ ಬೇಕು. ಇದರಿಂದ ಬೆಳೆದ ಬೆಳೆಯಿಂದ ಬರುವ ಹಣ ಎಲ್ಲಾ ಭತ್ತ ಕಟಾವು ಮಷಿನ್​ಗೆ ಕೊಡುವ ಸ್ಥಿತಿ ಬಂದಿದೆ. ಇನ್ನು ಭತ್ತ ನೆಲಕಚ್ಚಿರುವುದರಿಂದ ಭತ್ತ ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಕ್ವಾಲಿಟಿ ಉಳಿಯಲ್ಲ. ಇದನ್ನು ಕಡಿಮೆ ಬೆಲೆಗೆ ಕೇಳುತ್ತಾರೆ. ಹೀಗಾಗಿ ರೈತರು ಕಣ್ಣೀರಿರುವ ಸ್ಥಿತಿ ನಿರ್ಮಾಣವಾಗಿದೆ.

ಇದಷ್ಟೇ ಅಲ್ಲ ಭತ್ತದ ದರ ಕೂಡ ಕುಸಿದಿದೆ. ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತದ ದರ ಇತ್ತೀಚೆಗೆ ಕುಸಿದಿದ್ದೂ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕೂಡಲೇ ಸರ್ಕಾರ, ಜಿಲ್ಲಾಡಳಿತ ರೈತರ ಪಾಲಿಗೆ ಬರಬೇಕಿದೆ.

Follow Us
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು