AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಕೆರೆಯ ಮೀನುಗಳಿಗೆ ಸಂಚಕಾರ ಬರುತ್ತಿದೆ ಎಂದು ಅಳಿವಿನಂಚಿನಲ್ಲಿರುವ ಪಕ್ಷಿಗಳಿಗೆ ವಿಷವುಣಿಸಿ ಕೊಲ್ಲುತ್ತಿದ್ದಾರೆ ದುರುಳರು

ಪಕ್ಷಿಗಳು ಕೆರೆಯಲ್ಲಿನ ಮೀನು ಮರಿಗಳನ್ನು ಹಿಡಿದು ತಿನ್ನುವುದರಿಂದ ಮೀನು ಹಿಡಿಯುವವರಿಗೆ ನಷ್ಟ ಆಗಲಿದೆ. ಹಾಗಾಗಿ ವಿಷಬೆರೆತ ಮೀನುಗಳನ್ನು ಕೆರೆಯ ದಂಡೆಯ ಮೇಲೆ ಇಡುತ್ತಿದ್ದಾರೆ. ಆಹಾರ ಅರಸಿ ಕೆರೆಯತ್ತ ಬರುವ ಪಕ್ಷಿಗಳು ಸುಲಭವಾಗಿ ಸಿಗುವ ಮೀನು ತಿಂದು ಸಾವಿಗೀಡಾಗುತ್ತಿವೆ.

ಶಿವಮೊಗ್ಗ: ಕೆರೆಯ ಮೀನುಗಳಿಗೆ ಸಂಚಕಾರ ಬರುತ್ತಿದೆ ಎಂದು ಅಳಿವಿನಂಚಿನಲ್ಲಿರುವ ಪಕ್ಷಿಗಳಿಗೆ ವಿಷವುಣಿಸಿ ಕೊಲ್ಲುತ್ತಿದ್ದಾರೆ ದುರುಳರು
ಅಳಿವಿನಂಚಿನಲ್ಲಿರುವ ಪಕ್ಷಿಗಳಿಗೆ ವಿಷವುಣಿಸಿ ಕೊಲ್ಲುತ್ತಿದ್ದಾರೆ ದುರುಳರು
TV9 Web
| Edited By: |

Updated on: Jan 11, 2023 | 10:46 AM

Share

ಶಿವಮೊಗ್ಗ ತಾಲೂಕಿನ (shivamogga) ವಿರುಪಿನಕೊಪ್ಪ ಶಕ್ತಿಧಾಮ ಲೇಔಟ್ ಬಳಿಯ ಕೆರೆಯ ದಂಡೆಯ ಮೇಲೆ ಇಟ್ಟ ಮೀನುಗಳನ್ನು (fish) ತಿಂದು ಹದ್ದು, ರಿವರ್ಟನ್‌ ಹಕ್ಕಿ ಸೇರಿ ಬೇರೆ ಬೇರೆ ಪಕ್ಷಿಗಳು ಅನುಮಾನಾಸ್ಪದವಾಗಿ (poison) ಸಾವಿಗೀಡಾಗಿವೆ. ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಸಮೀಪದ (tyavarekoppa tiger lion sanctuary) ವಿರುಪಿನಕೊಪ್ಪ ಬಳಿಯ ಕೆರೆಯ ದಂಡೆಯ ಮೇಲೆ ಇಟ್ಟ ಮೀನುಗಳನ್ನು ಈ ಪಕ್ಷಿಗಳು ತಿಂದಿವೆ. ಪಕ್ಷಿಗಳು ಕೆರೆಯಲ್ಲಿನ ಮೀನು ಮರಿಗಳನ್ನು ಹಿಡಿದು ತಿನ್ನುವುದರಿಂದ ಮೀನು ಹಿಡಿಯುವವರಿಗೆ ನಷ್ಟ ಆಗಲಿದೆ. ಕೆಲವರು ಆಹಾರಕ್ಕಾಗಿ ಪಕ್ಷಿಗಳ ಬೇಟೆಯಾಡುತ್ತಾರೆ. ಇವರು ವಿಷ ಬೆರೆತ ಮೀನುಗಳನ್ನು ಕೆರೆಯ ದಂಡೆಯ ಮೇಲೆ ಇಡುತ್ತಿದ್ದಾರೆ. ಆಹಾರ ಅರಸಿ ಕೆರೆಯತ್ತ ಬರುವ ಪಕ್ಷಿಗಳು ಸುಲಭವಾಗಿ ಸಿಗುವ ಮೀನು ತಿಂದು ಸಾವಿಗೀಡಾಗುತ್ತಿವೆ. ಇದು ಜಿಲ್ಲೆಯ ಪಕ್ಷಿ ಪ್ರಿಯರಲ್ಲಿ (birds) ಆತಂಕ ಮೂಡಿಸಿದೆ.

ಬಯಲಾಗಿದ್ದು ಹೀಗೆ

ತ್ಯಾವರೆಕೊಪ್ಪ ಹುಲಿ–ಸಿಂಹ ಧಾಮದ ವೈದ್ಯ ಡಾ.ಮುರಳಿ ಮನೋಹರ್ ಎರಡು ದಿನಗಳ ಹಿಂದೆ ವಿರುಪಿನಕೊಪ್ಪ ಕೆರೆಯ ಬಳಿಗೆ ಪಕ್ಷಿಗಳ ವೀಕ್ಷಣೆಗೆ ತೆರಳಿದ್ದಾರೆ. ಈ ವೇಳೆ ಕೆಲವರು ಪಕ್ಷಿಗಳಿಗೆ ವಿಷಪ್ರಾಶನ ಮಾಡಿ ಕೊಲ್ಲುತ್ತಿರುವುದು ಅವರ ಗಮನಕ್ಕೆ ಬಂದಿದೆ. ಆ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸಾವಿಗೀಡಾದ ಪಕ್ಷಿಗಳ ತಂದು ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪಕ್ಷಿಗಳಿಗೆ ವಿಷವಿಕ್ಕಿ ಕೊಲ್ಲುತ್ತಿರುವ ಬಗ್ಗೆ ಸಾಗರದಲ್ಲಿರುವ ಪೊಲೀಸ್‌ ಅರಣ್ಯ ಸಂಚಾರಿ ದಳಕ್ಕೂ ಡಾ.ಮುರಳಿ ಮಾಹಿತಿ ನೀಡಿದ್ದಾರೆ.

ಕೆರೆಯ ಕಾವಲಿಗೆ ಪೊಲೀಸ್‌ ಸಿಬ್ಬಂದಿ ನಿಯೋಜನೆ

‘ಕೆರೆಯ ಬಳಿ ದುಷ್ಕರ್ಮಿಗಳು ಪಕ್ಷಿಗಳನ್ನು ಕೊಲ್ಲುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಈಗ ಅಲ್ಲಿ ಬೆಳಿಗ್ಗೆ ಹಾಗೂ ಸಂಜೆ ನಮ್ಮ (ಪೊಲೀಸ್‌) ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಿದ್ದೇವೆ’ ಎಂದು ಪೊಲೀಸ್‌ ಅರಣ್ಯ ಸಂಚಾರಿ ದಳದ ಪಿಎಸ್‌ಐ ಕೆ. ವಿನಾಯಕ್‌ ಮಾಹಿತಿ ನೀಡಿದ್ದಾರೆ.

‘ಕೆರೆಯ ಆಸುಪಾಸಿನ ನಿವಾಸಿಗಳನ್ನು ವಿಚಾರಿಸಿದ್ದೇವೆ. ಕೆರೆಯಲ್ಲಿನ ಮೀನಿನ ರಕ್ಷಣೆಗೆ ಹಾಗೂ ಬೇಟೆಗಾಗಿ ಪಕ್ಷಿಗಳನ್ನು ಈ ರೀತಿ ಕೊಲ್ಲುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ದುಷ್ಕರ್ಮಿಗಳನ್ನು ಹಿಡಿದು ವಿಚಾರಣೆ ನಡೆಸಿದರೆ ನೈಜ ಸಂಗತಿ ಗೊತ್ತಾಗಲಿದೆ. ಅವರ ಪತ್ತೆಗೆ ಬಲೆ ಬೀಸಿದ್ದೇವೆ. ಈ ಬಗ್ಗೆ ಶಿವಮೊಗ್ಗದ ಅರಣ್ಯ ಇಲಾಖೆಯವರಿಗೂ ಮಾಹಿತಿ ನೀಡಲಾಗಿದೆ

ಅಳಿವಿನಂಚಿನಲ್ಲಿರುವ ಪಕ್ಷಿ

ಹದ್ದುಗಳು (Tawny Eagle) ದೇಶದಲ್ಲಿ ಷಡ್ಯೂಲ್‌ 1ರಲ್ಲಿ ಇರುವ ಪಕ್ಷಿಗಳು. ಇವು ಅಳಿವಿನಂಚಿನಲ್ಲಿವೆ. ರಿವರ್‌ಟನ್ ಕೂಡ ಮನುಷ್ಯಸ್ನೇಹಿ ಹಕ್ಕಿ ಇದು ಷಡ್ಯೂಲ್‌ 4ರಲ್ಲಿ ಇದೆ. ಆಂತರಿಕವಾಗಿ ಆದ ರಕ್ತಸ್ರಾವದಿಂದ ಆ ಪಕ್ಷಿಗಳು ಸಾವಿಗೀಡಾಗಿವೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿದೆ. ಹೆಚ್ಚಿನ ಪರೀಕ್ಷೆಗಾಗಿ ಪಕ್ಷಿಗಳ ದೇಹದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ಡಾ.ಮುರಳಿ ಮನೋಹರ ಹೇಳಿದ್ದಾರೆ.

ಹದ್ದುಗಳು ಗೂಡು ಕಟ್ಟಲು ದೊಡ್ಡಗಾತ್ರದ ಮರಗಳು ಬೇಕು. ಅರಣ್ಯ ನಾಶದಿಂದ ನೆಲೆ ಕಳೆದುಕೊಂಡ ಈ ಪಕ್ಷಿಗಳು ನಾಶದತ್ತ ಸಾಗಿವೆ. 2018ರಲ್ಲಿ ಹದ್ದುಗಳನ್ನು ಅಳಿವಿನಂಚಿನಲ್ಲಿರುವ ಪಕ್ಷಿಗಳ ಪಟ್ಟಿಗೆ ಸೇರಿಸಲಾಗಿದೆ. ಜಾಗತಿಕವಾಗಿ 4 ಲಕ್ಷದಷ್ಟು ಹದ್ದುಗಳು ಮಾತ್ರ ಕಾಣಸಿಗುತ್ತಿವೆ.

ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ 

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್