AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೊಮ್ಮೆ ಅತಿಥಿಯಾಗಿದ್ದೆ, ಅವಕಾಶ ಸಿಕ್ಕರೆ ಇನ್ನೊಮ್ಮೆ ಹೋಗ್ತೀನಿ: ಪೊಲೀಸ್ ಠಾಣೆ ರಿವ್ಯೂ ಬರೆದ ಭೂಪ!

ಗೂಗಲ್ ಮ್ಯಾಪ್​ನಲ್ಲಿ ಪೊಲೀಸ್ ಠಾಣೆಯ ರಿವ್ಯೂ ಬರೆದಿರುವ ಭೂಪನೋರ್ವ ತಾನು ಹಿಂದೊಮ್ಮೆಅತಿಥಿಯಾಗಿದ್ದನ್ನೂ ನೆನಪಿಸಿಕೊಂಡಿದ್ದಾನೆ. ಅವಕಾಶ ಸಿಕ್ಕರೆ ಇನ್ನೊಮ್ಮೆ ಪೊಲೀಸ್ ಠಾಣೆಯಲ್ಲಿ ಉಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾನೆ.

ಹಿಂದೊಮ್ಮೆ ಅತಿಥಿಯಾಗಿದ್ದೆ, ಅವಕಾಶ ಸಿಕ್ಕರೆ ಇನ್ನೊಮ್ಮೆ ಹೋಗ್ತೀನಿ: ಪೊಲೀಸ್ ಠಾಣೆ ರಿವ್ಯೂ ಬರೆದ ಭೂಪ!
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 13, 2020 | 9:33 PM

Share

ಮುಂಬೈ: ತಾವು ಪ್ರವಾಸ ಹೋದ, ತಿಂದು ತೇಗಿದ ಎಲ್ಲವನ್ನೂ ಜಗತ್ತಿಗೆ ಸಾರಿ ಹೇಳುವ ಪ್ರವೃತ್ತಿ ಜನರಲ್ಲಿ ಹೆಚ್ಚುತ್ತಲೇ ಇದೆ. ಇದಕ್ಕಾಗಿಯೇ ನೀವು ಭೇಟಿ ನೀಡಿದ ಸ್ಥಳ ಹಾಗೂ ಹೋಟೆಲ್​ಗೆ ರಿವ್ಯೂ ಕೊಡುವ ಆಯ್ಕೆಯನ್ನು ಗೂಗಲ್​ ಮ್ಯಾಪ್​ ಪರಿಚಯಿಸಿದೆ. ಆದರೆ, ಇಲ್ಲೋರ್ವ ಗೂಗಲ್ ಮ್ಯಾಪ್​ನಲ್ಲಿ ಪೊಲೀಸ್ ಠಾಣೆಯ ರಿವ್ಯೂ ಬರೆದಿದ್ದಾನೆ. ತಾನು ಹಿಂದೊಮ್ಮೆ ಅತಿಥಿಯಾಗಿದ್ದನ್ನೂ ನೆನಪಿಸಿಕೊಂಡಿದ್ದಾನೆ!

ಹೌದು, ವ್ಯಕ್ತಿಯೋರ್ವ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ನಯಾ ನಗರ್ ಪೊಲೀಸ್ ಠಾಣೆಗೆ ತೆರಳಿದ್ದನಂತೆ. ಪೊಲೀಸ್​ ಠಾಣೆಯಲ್ಲೇ ಕೆಲ ದಿನ ಇದ್ದು ಬಂದಿದ್ದಾನೆ ಎನ್ನಲಾಗಿದೆ. ಲಾಕಪ್​ನಿಂದ ಹೊರ ಬಂದರೂ ಅದರ ಮೇಲಿರುವ ಪ್ರೀತಿ ಮಾತ್ರ ಕಡಿಮೆ ಆದಂತೆ ಕಾಣುವುದಿಲ್ಲ!

ಈ ಮಹಾಶಯ ಪೊಲೀಸ್ ಠಾಣೆಯ ಗೂಗಲ್ ಲೊಕೇಶನ್​ನಲ್ಲಿ ಪೊಲೀಸ್ ಠಾಣೆಯ ರಿವ್ಯೂ ಬರೆದಿದ್ದಾನೆ. ತಾನು ಹಿಂದೆ ಅಲ್ಲಿ ಅತಿಥಿಯಾಗಿದ್ದಾಗಿ ಹೇಳಿರುವ ಈತ, ಅಲ್ಲಿ ಉತ್ತಮ ಸೌಲಭ್ಯಗಳಿರುವುದಾವಾಗಿಯೂ ಹೇಳಿದ್ದಾನೆ. ಅವಕಾಶ ಸಿಕ್ಕರೆ ಇನ್ನೊಮ್ಮೆ ನಯಾ ನಗರ್ ಪೊಲೀಸ್ ಠಾಣೆಯಲ್ಲಿ ಉಳಿಯುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾನೆ! ರಾಯಗಢದ ಎಸ್​ಪಿ ಆಗಿರುವ ಸಂತೋಶ್ ಸಿಂಗ್​ ಮಾಡಿರುವ ಈ ಟ್ವೀಟ್ ಈಗ ವೈರಲ್ ಆಗಿದೆ. ಆದರೆ ಆತ ಬರೆದದ್ದರ ಸತ್ಯಾಸತ್ಯತೆಯ ಕುರಿತು ಈವರೆಗೂ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ