ಹಾಸನ: ಜಿಲ್ಲೆಯ ಇಂದ್ರಾಪುರ ಬಳಿಯ ಕ್ವಾರಿ ಮೇಲೆ ಆಂತರಿಕ ಭದ್ರತಾದಳ ಮತ್ತು ಗೊರೂರು ಪೊಲೀಸರಿಂದ ದಾಳಿ ನಡೆಯಿತು. ದಾಳೆ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದ ಭಾರಿ ಪ್ರಮಾಣದ ಸ್ಫೋಟಕವನ್ನು ಜಪ್ತಿ ಮಾಡಲಾಗಿದೆ.
ಹನುಮಂತಪುರದ ಮಂಜೇಗೌಡ ಎಂಬುವವರ ಕ್ವಾರಿ ಮೇಲೆ ದಾಳಿ ನಡೆದಿದೆ. ಈ ವೇಳೆ, ಅಕ್ರಮವಾಗಿ ಸಂಗ್ರಹ ಮಾಡಿದ್ದ 1,200 ಜಿಲೆಟಿನ್ ಕಡ್ಡಿಗಳು, 2 ಡಿಟೋನೇಟರ್ ಮತ್ತು 10 ಕೆ.ಜಿ ಅಮೋನಿಯಂ ನೈಟ್ರೇಟ್ ಜಪ್ತಿ ಮಾಡಲಾಗಿದೆ.
ISD ಮೈಸೂರು DySP ಪ್ರಭಾಕರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರುತಿ, ಹುಂಡೈ ಕಾರುಗಳು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು, ಯಾವೂರಲ್ಲಿ?