AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀನು ತಂದ ಅನುದಾನ ಎಲ್ರಿಗೂ ಹಂಚಿಕೆ ಆಗ್ಲಿ -ಅತಿವೃಷ್ಟಿ ಹಣಕ್ಕಾಗಿ ಟೇಬಲ್​ ಕುಟ್ಟಿ ಶಾಸಕ ಆಕ್ರೋಶ

ಅತಿವೃಷ್ಟಿಗೆ ಬಿಡುಗಡೆಯಾದ ಅನುದಾನದ ಹಂಚಿಕೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಎದುರೇ ಶಾಸಕರಿಬ್ಬರ ನಡುವೆ ಜಟಾಪಟಿ ಸಂಭವಿಸಿರುವ ಘಟನೆ ನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬೆಳಕಿಗೆ ಬಂದಿದೆ.

ನೀನು ತಂದ ಅನುದಾನ ಎಲ್ರಿಗೂ ಹಂಚಿಕೆ ಆಗ್ಲಿ -ಅತಿವೃಷ್ಟಿ ಹಣಕ್ಕಾಗಿ ಟೇಬಲ್​ ಕುಟ್ಟಿ ಶಾಸಕ ಆಕ್ರೋಶ
ಅತಿವೃಷ್ಟಿ ಅನುದಾನಕ್ಕಾಗಿ ಶಾಶಕರ ಜಟಾಪಟಿ
KUSHAL V
|

Updated on:Nov 26, 2020 | 6:20 PM

Share

ಹಾಸನ: ಅತಿವೃಷ್ಟಿಗೆ ಬಿಡುಗಡೆಯಾದ ಅನುದಾನದ ಹಂಚಿಕೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಎದುರೇ ಶಾಸಕರಿಬ್ಬರ ನಡುವೆ ಜಟಾಪಟಿ ಸಂಭವಿಸಿರುವ ಘಟನೆ ನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬೆಳಕಿಗೆ ಬಂದಿದೆ. ಶಾಸಕರಾದ ಶಿವಲಿಂಗೇಗೌಡ ಹಾಗೂ ಪ್ರೀತಂ ಗೌಡ ನಡುವೆ ವಾಗ್ವಾದ ನಡೆದಿದೆ.

ಕೆಲವು ಕ್ಷೇತ್ರಗಳಿಗೆ ಮಾತ್ರ ಅನುದಾನ ಹಂಚಲಾಗಿದೆ. ಅರಸೀಕೆರೆ, ಚನ್ನರಾಯಪಟ್ಟಣ ಕ್ಷೇತ್ರ ಕಡೆಗಣಿಸಲಾಗಿದೆ. ಜಿಲ್ಲೆಗೆ ಬಂದ 19 ಕೋಟಿ ಹಣ ಎಲ್ಲಾ ಕ್ಷೇತ್ರಗಳಿಗೂ ಹಂಚಿ. ಮಳೆಯಿಂದ ಹಾನಿಯಾದ ಎಲ್ಲ ಪ್ರದೇಶಗಳಿಗೂ ಹಂಚಬೇಕು ಎಂದು ಕೆಡಿಪಿ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಹಾಗೂ ಬಾಲಕೃಷ್ಣ ಆಗ್ರಹಿಸಿದ್ದಾರೆ.

ನೀನು ತಂದಿರೋದು ಸರ್ಕಾರದ ಅನುದಾನ. ಅದು ಎಲ್ಲಾ ಕ್ಷೇತ್ರಗಳಿಗೆ ಹಂಚಿಕೆಯಾಗಬೇಕು ಎಂದು ಮೇಜು ಕುಟ್ಟಿ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ತಮ್ಮ ಆಕ್ರೋಶ ಹೊರಹಾಕಿದರು. ಇದಕ್ಕೆ ಕೆರಳಿದ ಶಾಸಕ ಪ್ರೀತಂಗೌಡ ಶಿವಲಿಂಗೇಗೌಡರೊದಿಗೆ ವಾಗ್ವಾದಕ್ಕೆ ಇಳಿದರು. ‘ಇಷ್ಟು ದಿನ ರೇವಣ್ಣ ಕೊಂಡೊಯ್ತಿದ್ರು.. ಈಗ ನೀನು ಅವರಿಗಿಂತ ಜಾಸ್ತಿ ಮಾಡ್ತಿದ್ದೀಯಾ!’

‘ನೀವು ಟೇಬಲ್‌ ಬಡಿದರೆ ನಮಗೂ ಬಡಿಯೋಕೆ‌ ಬರುತ್ತದೆ’ ನೀವು ಟೇಬಲ್‌ ಬಡಿದರೆ ನಮಗೂ ಬಡಿಯೋಕೆ‌ ಬರುತ್ತದೆ.. ಸುಮ್ಮನಿರಿ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ತಿರುಗೇಟು ಕೊಟ್ಟರು. ನಮ್ಮ ಕ್ಷೇತ್ರದ ಬಗ್ಗೆ ಮಾತಾಡೋಕೆ ನೀವ್ಯಾರು? ನಮ್ಮ ಸರ್ಕಾರ, ನಮ್ಮ ಸಿಎಂ ನಮಗೆ ಅನುದಾನ ಕೊಟ್ಟಿದ್ದಾರೆ ಎಂದು ಪ್ರೀತಂಗೌಡ ತಿರುಗೇಟು ಕೊಟ್ಟರು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಎದುರೇ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿತು.

ಕೊನೆಗೆ, ಮಧ್ಯಪ್ರವೇಶಿಸಿದ ಸಚಿವ ಗೋಪಾಲಯ್ಯ ಚನ್ನರಾಯಪಟ್ಟಣ, ಅರಸೀಕೆರೆಗೆ ಅನುದಾನ ಕೊಡಿಸುತ್ತೇನೆ. ತಲಾ 2 ಕೋಟಿ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟರು. ಇದಕ್ಕೆ ಸ್ಪಂದಿಸಿದ ಶಾಸಕ ಶಿವಲಿಂಗೇಗೌಡ ಬಂದಿರೋ ಅನುದಾನದಲ್ಲಿ ನಮ್ಮ ಕ್ಷೇತ್ರಕ್ಕೂ ಅನುದಾನ ಕೊಡಿ. ಇಲ್ಲದಿದ್ದರೇ ಅತಿವೃಷ್ಟಿಯೇ ಇಲ್ಲಾ ಎಂದು ಪತ್ರ ಬರೀತ್ತೀವಿ. ನೀವು ಅದ್ಹೇಗೆ ಟೆಂಡರ್ ಕರೀತೀರೋ ನೋಡೋಣ ಎಂದು ಎಚ್ಚರಿಕೆ ನೀಡಿದರು. ಆಗ, ಶಾಸಕರನ್ನು ಸಮಾಧಾನಪಡಿಸಿದ ಸಚಿವರು ಯಾಕೆ‌ ಇಷ್ಟೊಂದು ಸಿಟ್ಟು ಮಾಡಿಕೊಳ್ತೀರಾ? ಸಮಸ್ಯೆ ಇದ್ದರೆ ಅನುನದಾನ‌ ಕೊಡಿಸೋಣ ಬಿಡಿ ಎಂದು ಶಾಸಕರಿಗೆ ಭರವಸೆ ನೀಡಿದರು.

Published On - 5:54 pm, Thu, 26 November 20

ಮೇಘಸ್ಫೋಟ, ಪ್ರವಾಹದ ಬಳಿಕ ಹಿಮಾಚಲ ಪ್ರದೇಶದ ಸ್ಥಿತಿ ಹೇಗಿದೆ ನೋಡಿ
ಮೇಘಸ್ಫೋಟ, ಪ್ರವಾಹದ ಬಳಿಕ ಹಿಮಾಚಲ ಪ್ರದೇಶದ ಸ್ಥಿತಿ ಹೇಗಿದೆ ನೋಡಿ
ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ