AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ನಿಜಾ! ಕೊರೊನಾ ತಂದ ಸಂಕಷ್ಟ.. ಮೊಬೈಲ್ ಬಳಕೆ ಜಾಸ್ತಿಯಾಗಿ ಏನೆಲ್ಲ ಚಟ ಅಂಟಿಕೊಡಿದೆ ಗೊತ್ತಾ?

ಕೊರೊನಾ ನಂತರ ಸ್ಮಾರ್ಟ್​ಫೋನ್ ಬಳಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹೆಚ್ಚಿದ ಸ್ಮಾರ್ಟ್​ಪೋನ್ ಬಳಕೆ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಇದು ನಿಜಾ! ಕೊರೊನಾ ತಂದ ಸಂಕಷ್ಟ.. ಮೊಬೈಲ್ ಬಳಕೆ ಜಾಸ್ತಿಯಾಗಿ ಏನೆಲ್ಲ ಚಟ ಅಂಟಿಕೊಡಿದೆ ಗೊತ್ತಾ?
ಸಾಂಕೇತಿಕ ಚಿತ್ರ
guruganesh bhat
| Edited By: ಸಾಧು ಶ್ರೀನಾಥ್​|

Updated on: Dec 14, 2020 | 4:49 PM

Share

ಕೊರೊನಾ ನಂತರ ಸ್ಮಾರ್ಟ್​ಫೋನ್ ಬಳಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹೆಚ್ಚಿದ ಸ್ಮಾರ್ಟ್​ಪೋನ್ ಬಳಕೆ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ಮೊಬೈಲ್ ದಾಸರು ಸ್ಮಾರ್ಟ್​ಫೋನ್ ಕಂಪನಿ ವಿವೋ ಮತ್ತು ಸೈಬರ್ ಮೀಡಿಯಾ ರಿಸರ್ಚ್​ ಜಂಟಿಯಾಗಿ ನಡೆಸಿದ ‘ಸ್ಮಾರ್ಟ್​ಪೋನ್​ ಬಳಕೆ ಮತ್ತು ಮನುಷ್ಯ ಸಂಬಂಧಗಳ ಮೇಲೆ ಬೀರುವ ಪರಿಣಾಮ 2020’ ಎಂಬ ಸಮೀಕ್ಷೆಯಲ್ಲಿ ಈ ವಿವರ ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿನಿಂದ ಸ್ಮಾರ್ಟ್​ಫೋನ್​ಗಳ ಬಳಕೆಯಲ್ಲಿ ಆದ ಹೆಚ್ಚಳದ ಕುರಿತು ಸಮೀಕ್ಷೆ ವಿವರಿಸಿದೆ. ಮೊದಲಿಗಿಂತ ಹೆಚ್ಚು ಜನ ಸ್ಮಾರ್ಟ್​ಫೋನ್​ಗಳಿಗೆ ದಾಸರಾಗಿ ಬದಲಾಗಿದ್ದಾರೆ. ಈ ವಿಷಯ ತಿಳಿದಿದ್ದರೂ ಸ್ಮಾರ್ಟ್​ಪೋನ್​ನ ಅತಿ ಬಳಕೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ವರದಿ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿವೋ ಇಂಡಿಯಾದ ನಿಪುಮ್ ಮಾರ್ಯಾ, ಸ್ಮಾರ್ಟ್​ಪೋನ್​ಗಳ ಬಳಕೆ ಸಂಬಂಧಗಳಲ್ಲಿ ಬಿರುಕು ಉಂಟುಮಾಡುತ್ತಿದೆ. ಇದು ನಮ್ಮ ಕಂಪನಿ ನಂಬಿರುವ ಮೌಲ್ಯಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ. ಲಾಕ್​ಡೌನ್​ ಮತ್ತು ವರ್ಕ್ ಫ್ರಾಮ್ ಹೋಮ್ ಕುಟುಂಬದ ಜೊತೆ ಇರಲು ಹೆಚ್ಚು ಸಮಯ ನೀಡಿದೆ.

ಜೊತೆಗೆ ಸ್ಮಾರ್ಟ್​ಫೋನ್​ಗಳನ್ನು ಬಳಸುವ ಸಮಯದಲ್ಲೂ ಭಾರೀ ಏರಿಕೆ ಕಂಡಿದೆ ಎನ್ನುತ್ತದೆ ಸಮೀಕ್ಷೆ. 2019ರಲ್ಲಿ ಒಂದು ದಿನದಲ್ಲಿ ಸರಾಸರಿ 4.30 ಘಂಟೆ ಸ್ಮಾರ್ಟ್​ಫೋನ್ ಬಳಸಲಾಗುತ್ತಿತ್ತು. ಆದರೆ ಒಂದೇ ವರ್ಷದಲ್ಲಿ ದಿನಕ್ಕೆ ಸ್ಮಾರ್ಟ್​ಫೋನ್ ಬಳಕೆಯ ಅವಧಿ 7 ಗಂಟೆಗೆ ಏರಿಕೆಯಾಗಿದೆ.

ಸಮೀಕ್ಷೆಯಲ್ಲಿ ಇನ್ನೂ ಏನೇನಿದೆ? ಇಷ್ಟೇ ಅಲ್ಲದೇ, ಈ ಸಮೀಕ್ಷೆ ಇನ್ನೂ ಹಲವು ವಿಷಯಗಳನ್ನು ಬಹಿರಂಗಪಡಿಸಿದೆ. ಕಚೇರಿ ಕೆಲಸಗಳನ್ನು ತೊಡಗಿಸಿಕೊಳ್ಳುವ ಅವಧಿಯಲ್ಲೂ ಗಮನಾರ್ಹ ಏರಿಕೆಯಾಗಿದೆ. ಜನರು ಸುಮಾರು ಶೇ. 7ರಷ್ಟು ಹೆಚ್ಚು ತಮ್ಮ ಕಚೇರಿಯ ಕೆಲಸಗಳಲ್ಲಿ ಕಳೆಯುತ್ತಿದ್ದಾರೆ. ಈ ಮೊದಲು ಶೇ 63ರಷ್ಟಿದ್ದ ಈ ಅವಧಿ ಶೇ. 12ರಷ್ಟು ಹೆಚ್ಚಳವಾಗಿದೆ.

OTT ಬಳಕೆಯ ಅವಧಿಯಲ್ಲೂ ಶೇ 59ರಷ್ಟು ಹೆಚ್ಚಳವಾಗಿದೆ ಎನ್ನುತ್ತದೆ ಸಮೀಕ್ಷೆ. ಇತರ ವಿಡಿಯೋಗಳನ್ನು ವೀಕ್ಷಿಸುವ ಸಮಯದಲ್ಲಿ ಶೇ. 56, ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಶೇ. 55, ಮೊಬೈಲ್ ಗೇಮಿಂಗ್​​ ಬಳಕೆಯ ಅವಧಿಯಲ್ಲಿ ಶೇ. 45ರಷ್ಟು ಹೆಚ್ಚಳವಾಗಿದೆ. ಇವೆಲ್ಲವುಗಳಿಗಿಂತಲೂ ಹೆಚ್ಚು, ವರ್ಕ್ ಫ್ರಂ ಹೋಮ್​ನಲ್ಲಿ ಶೇ. 75ರಷ್ಟು ಹೆಚ್ಚಳ ಕಂಡುಬಂದಿದೆ ಎನ್ನುತ್ತದೆ ಸಮೀಕ್ಷೆ.

ಬಿಟ್ಟರೂ ಬಿಡಲಾರೆ ಈ ಮಾಯೆ! ಸ್ಮಾರ್ಟ್​ಪೋನ್​ಗಳ ಅತಿ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬುದು ಬಹುತೇಕರಿಗೆ ತಿಳಿದಿದೆ. ತಮ್ಮ ಪ್ರೀತಿಪಾತ್ರರ ಜೊತೆಗಿನ ಸಂಬಂಧದಲ್ಲಿ ಪರಿಣಾಮ ಬೀರುತ್ತಿದೆ ಎಂದು ತಿಳಿದಿದ್ದರೂ ಬಿಡಲಾಗದು ಎಂದೇ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಂಟೆಗೆ 5 ಬಾರಿಯಾದರೂ ಕಾರಣವಿಲ್ಲದೇ ಸ್ಮಾರ್ಟ್​ಫೋನ್ ನೋಡುವ ರೂಢಿ ಮಾಡಿಕೊಂಡಿದ್ದಾರೆ. ಅಲ್ಲದೇ ನಿದ್ದೆಯಿಂದ ಎಚ್ಚೆತ್ತ 15 ನಿಮಿಷದೊಳಗೆ ಸ್ಮಾರ್ಟ್​ಫೋನ್ ಬಳಸುತ್ತಾರೆ ಎಂದೂ ಸಮೀಕ್ಷೆ ಹೇಳಿದೆ.

ಮೊಬೈಲ್ ಇಲ್ಲದಿದ್ದರೆ ಹಾಳಾಗುತ್ತೆ ಮೂಡ್ ! ಶೇ. 74ರಷ್ಟು ಜನರಿಗೆ ಸ್ಮಾರ್ಟ್​ಫೋನ್ ಇಲ್ಲದಿದ್ದರೆ ಮೂಡ್ ಕೆಡುತ್ತದೆ ಎನ್ನುತ್ತದೆ ಸಮೀಕ್ಷೆ. ಹಿಂದಿನ ವರ್ಷ ಈ ಪ್ರಮಾಣ ಶೇ 33ರಷ್ಟಿತ್ತು. ಅರ್ಧಕ್ಕಿಂತ ಹೆಚ್ಚು ಏರಿಕೆಯಾಗಲು ಕೊರೊನಾ, ಲಾಕ್​ಡೌನ್ ಕಾರಣ ಎಂದೂ ಸಮೀಕ್ಷೆ ಹೇಳಿದೆ.

Follow Us
guruganesh bhat
guruganesh bhat
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ