AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health: ಒಬ್ಬ ಭಾರತೀಯ ಪ್ರತಿ ವರ್ಷ ಸರಾಸರಿ 14 ಕೆಜಿ ಸಕ್ಕರೆ ಸೇವಿಸುತ್ತಾನೆ; ಅದು ಎಷ್ಟು ಅಪಾಯಕಾರಿ ಎಂದು ತಿಳಿದಿದೆಯೇ?

ಸಕ್ಕರೆಗೆ ಬದಲಿಯಾಗಿ ಇರುವ ಈ ವಸ್ತುಗಳು ಕೂಡ ನೈಸರ್ಗಿಕವಾಗಿಲ್ಲ. ಹಾಗಿದ್ದರೂ, ಅವುಗಳನ್ನು ಎಚ್ಚರಿಕೆಯಿಂದ ಮತ್ತು ಸಮತೋಲಿತ ಪ್ರಮಾಣದಲ್ಲಿ ಸೇವಿಸಬಹುದು. ಇಲ್ಲಿ ನಾವು ಅಂತಹ ಕೆಲವು ಸಿಹಿಕಾರಕಗಳ ಬಗ್ಗೆ ಹೇಳುತ್ತಿದ್ದೇವೆ.

Health: ಒಬ್ಬ ಭಾರತೀಯ ಪ್ರತಿ ವರ್ಷ ಸರಾಸರಿ 14 ಕೆಜಿ ಸಕ್ಕರೆ ಸೇವಿಸುತ್ತಾನೆ; ಅದು ಎಷ್ಟು ಅಪಾಯಕಾರಿ ಎಂದು ತಿಳಿದಿದೆಯೇ?
ಪ್ರಾತಿನಿಧಿಕ ಚಿತ್ರ
TV9 Web
| Updated By: ganapathi bhat|

Updated on: Mar 13, 2022 | 8:04 AM

Share

ಮಧುಮೇಹ ರೋಗಿಗಳಿಗೆ ಸಕ್ಕರೆ ತುಂಬಾ ಅಪಾಯಕಾರಿ. ಅಂದಹಾಗೆ, ನೀವು ವೈದ್ಯಕೀಯ ವಿಜ್ಞಾನದ ದೃಷ್ಟಿಕೋನದಿಂದ ಸಕ್ಕರೆಯ ಬಗ್ಗೆ ವಿವರವಾಗಿ ಓದಿದರೆ, ಆರೋಗ್ಯವಂತ ಮನುಷ್ಯನಿಗೆ ಸಕ್ಕರೆಯು ಎಷ್ಟು ಅಪಾಯಕಾರಿ ಎಂದು ನಿಮಗೆ ತಿಳಿಯುತ್ತದೆ. ಮಧುಮೇಹ ರೋಗಿಗಳಿಗೆ, ಸಕ್ಕರೆ ವಿಷವಾಗಿಯೇ ಕಾರ್ಯನಿರ್ವಹಿಸುತ್ತದೆ. ಕೆಲವರು ಅಪಾಯ ತಪ್ಪಿಸಲು ಸಕ್ಕರೆ ರಹಿತವಾದ ಆಹಾರ ಸೇವನೆ ಮಾಡುತ್ತಾರೆ. ಶುಗರ್ ಇರುವವರಂತೂ ಆದಷ್ಟು ಸಕ್ಕರೆ ಇಲ್ಲದ ತಿನಿಸನ್ನೇ ಬಯಸುತ್ತಾರೆ. ಕಾಫಿ, ಟೀ ಕೂಡ ಶುಗರ್ ಲೆಸ್ ಕುಡಿಯುತ್ತಾರೆ. ಸಕ್ಕರೆಯ ಗ್ಲೈಸೆಮಿಕ್ ಸೂಚ್ಯಂಕವು 70 ಆಗಿದೆ, ಅಂದರೆ ಅದು ಒಮ್ಮೆ ದೇಹವನ್ನು ಪ್ರವೇಶಿಸಿದಾಗ ಹೆಚ್ಚಿನ ವೇಗದಲ್ಲಿ ರಕ್ತದಲ್ಲಿ ಬೆರೆತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಬಹಳ ವೇಗವಾಗಿ ಹೆಚ್ಚಿಸುತ್ತದೆ.

ಹೀಗೆ ಗ್ಲೈಸೆಮಿಕ್ ಇಂಡೆಕ್ಸ್ ಎಂಬ ಅಂಶವನ್ನು ಹೆಚ್ಚಿರುವ ವಸ್ತುಗಳು ನಮ್ಮ ಹಾರ್ಮೋನ್ ಇನ್ಸುಲಿನ್ ಮೇಲೆ ಅಪಾಯಕಾರಿ ಪರಿಣಾಮವನ್ನು ಬೀರುತ್ತವೆ. ಅದು ನಮ್ಮ ಇನ್ಸುಲಿನ್ ಹಾರ್ಮೋನ್ ಅನ್ನು ಪ್ರಚೋದಿಸುತ್ತದೆ. ಈ ವೈಜ್ಞಾನಿಕ ಕಾರಣಕ್ಕಾಗಿ, ಸಕ್ಕರೆಯ ಸೇವನೆಯು ಮಧುಮೇಹ ರೋಗಿಗಳಿಗೆ ವಿಶೇಷವಾಗಿ ಹಾನಿಕಾರಕವಾಗಿದೆ. ಪ್ರಸ್ತುತ ಅತಿಯಾದ ಸಕ್ಕರೆ ಸೇವನೆಯ ಅಪಾಯಗಳ ಬಗ್ಗೆ ಹಲವರು ಅರಿತುಕೊಂಡಿದ್ದಾರೆ. ಸಕ್ಕರೆಗೆ ಪರ್ಯಾಯವಾಗಿ ಬೆಲ್ಲದಂತಹ ವಸ್ತು ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಸಕ್ಕರೆಗೆ ಪರ್ಯಾಯವಾಗಿ ಇನ್ನೂ ಕೆಲವು ಬದಲಿಗಳಿವೆ. ಅವು ಶೂನ್ಯ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ ಮತ್ತು ಅವು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅವುಗಳ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲವಾದ್ದರಿಂದ, ಇದು ಇನ್ಸುಲಿನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಸಕ್ಕರೆಗೆ ಬದಲಿಯಾಗಿ ಇರುವ ಈ ವಸ್ತುಗಳು ಕೂಡ ನೈಸರ್ಗಿಕವಾಗಿಲ್ಲ. ಹಾಗಿದ್ದರೂ, ಅವುಗಳನ್ನು ಎಚ್ಚರಿಕೆಯಿಂದ ಮತ್ತು ಸಮತೋಲಿತ ಪ್ರಮಾಣದಲ್ಲಿ ಸೇವಿಸಬಹುದು. ಇಲ್ಲಿ ನಾವು ಅಂತಹ ಕೆಲವು ಸಿಹಿಕಾರಕಗಳ ಬಗ್ಗೆ ಹೇಳುತ್ತಿದ್ದೇವೆ. ಇದು ಸಕ್ಕರೆ ಅಥವಾ ಸಕ್ಕರೆಗೆ ಪರ್ಯಾಯವಾಗಿ ಬಳಕೆ ಮಾಡಬಹುದಾಗಿದೆ.

1. ಸ್ಟೀವಿಯಾ: ಇದು ಸಕ್ಕರೆಗೆ ಪರ್ಯಾಯವಾಗಿದೆ. ಇದನ್ನು ಸ್ಟೀವಿಯಾ ರೆಬೌಡಿಯಾನಾ ಎಂಬ ಮರದಿಂದ ತಯಾರಿಸಲಾಗುತ್ತದೆ. ಇದು ರುಚಿಯಲ್ಲಿ ತುಂಬಾ ಸಿಹಿಯಾಗಿದೆ. ಈ ಮರವು ಹೆಚ್ಚಾಗಿ ಬ್ರೆಜಿಲ್ ಮತ್ತು ಪರಾಗ್ವೆಯಲ್ಲಿ ಕಂಡುಬರುತ್ತದೆ. ಸ್ಟೀವಿಯಾ ಗ್ಲೈಸೆಮಿಕ್ ಸೂಚ್ಯಂಕದಲ್ಲಿ ಶೂನ್ಯವಾಗಿರುತ್ತದೆ, ಅಂದರೆ ಅದರ ಸೇವನೆಯು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅದಕ್ಕಾಗಿಯೇ ಇದನ್ನು ಸಕ್ಕರೆಗೆ ಉತ್ತಮ ಪರ್ಯಾಯವೆಂದು ಪರಿಗಣಿಸಲಾಗಿದೆ.

2. ಎರಿಥ್ರಿಟಾಲ್: ಇದು ಸಕ್ಕರೆಗೆ ಪರ್ಯಾಯವಾಗಿದೆ. ಇದನ್ನು ರಾಸಾಯನಿಕ ಪ್ರಕ್ರಿಯೆಯಿಂದ ತಯಾರಿಸಲಾಗುತ್ತದೆ. ಜೋಳವನ್ನು ಹುದುಗಿಸುವ ಮೂಲಕ ಮತ್ತು ಅದಕ್ಕೆ ಕೆಲವು ಕಿಣ್ವಗಳನ್ನು ಸೇರಿಸುವ ಮೂಲಕ ಎರಿಥ್ರಿಟಾಲ್ ಅನ್ನು ತಯಾರಿಸಲಾಗುತ್ತದೆ. ಇದು ಮಧುಮೇಹ ರೋಗಿಗಳಿಗೆ ಸಕ್ಕರೆಗೆ ಉತ್ತಮ ಪರ್ಯಾಯವಾಗಿದೆ. ಕೀಟೊ ಕುಕೀಗಳು, ಕೀಟೊ ಚಾಕೊಲೇಟ್ ಮತ್ತು ಮಧುಮೇಹ ಸ್ನೇಹಿ ಆಹಾರ ಉತ್ಪನ್ನಗಳಲ್ಲಿ ಸಕ್ಕರೆಯ ಬದಲಿಗೆ ಎರಿಥ್ರಿಟಾಲ್ ಎಂಬ ಹೆಸರನ್ನು ನೀವು ಸಾಮಾನ್ಯವಾಗಿ ಕಾಣಬಹುದು. ಇದು ಸಕ್ಕರೆಯಂತೆ ಸಿಹಿಯಾಗಿರುತ್ತದೆ, ಆದರೆ ಅದರ ಗ್ಲೈಸೆಮಿಕ್ ಸೂಚ್ಯಂಕವು ಶೂನ್ಯವಾಗಿರುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ.

ಸ್ಟೀವಿಯಾ ಮತ್ತು ಎರಿಥ್ರಿಟಾಲ್ ಅನ್ನು ಸೇವಿಸಬಹುದು. ಇವೆರಡೂ ರಾಸಾಯನಿಕ ಸಕ್ಕರೆಗೆ ಉತ್ತಮ ಪರ್ಯಾಯವಾಗಬಹುದು. ಆದರೆ ಇಲ್ಲಿ ಇದನ್ನು ಬಹಳ ಸಮತೋಲಿತ ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ. ಇದು ಕೂಡ ಒಂದು ರೀತಿಯ ರಾಸಾಯನಿಕವಾಗಿರುವುದರಿಂದ, ಅತಿಯಾಗಿ ತಿನ್ನುವುದರಿಂದ ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಸಣ್ಣ ಪ್ರಮಾಣದಲ್ಲಿ ತೆಗೆದುಕೊಂಡರೆ, ಅದು ನಿಮಗೆ ಹಾನಿ ಮಾಡುವುದಿಲ್ಲ ಮತ್ತು ನೀವು ಸಿಹಿತಿಂಡಿಗಳನ್ನು ಆನಂದಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಯಾವುದೇ ಪೋಷಕಾಂಶ ಇಲ್ಲದ ಬಿಳಿ ಪದಾರ್ಥವೇ ಸಕ್ಕರೆ! ಸಕ್ಕರೆ ಶುದ್ದೀಕರಿಸಿದಾಗ 64 ಅನ್ನಘಟಕಗಳು ನಾಶವಾಗುತ್ತವೆ!

ಇದನ್ನೂ ಓದಿ: ಸಕ್ಕರೆ ಕಾಯಿಲೆ ಲಕ್ಷಣಗಳೇನು? ಆರೋಗ್ಯ ಕಾಪಾಡುವುದು ಹೇಗೆ? ಡಯಾಬಿಟೀಸ್ ಇರುವವರಿಗೆ ವೈದ್ಯರ ಸಲಹೆಗಳು

ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ