AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Christmas 2021: ಕ್ರಿಸ್​ ಮಸ್​ ಆಚರಣೆಗೆ ಸಜ್ಜಾದ ಜನ: ಕ್ರಿಸ್​ಮಸ್​ ಆಚರಣೆಯ ಇತಿಹಾಸ, ಮಹತ್ವದ ಕುರಿತಾದ ಇಂಟ್ರಸ್ಟಿಂಗ್​ ಮಾಹಿತಿ ಇಲ್ಲಿದೆ

2021 ಮುಗಿಯುತ್ತಿದೆ. ಹೊಸ ವರ್ಷದ ಹೊಸ್ತಿಲಲ್ಲಿ ಇರುವ ಇಡೀ ಜಗತ್ತು ಸಂಭ್ರಮದ ಆಚರಣೆಗೆ ಎದುರು ನೋಡುತ್ತಿದೆ. ಈ ನಡುವೆ ಕ್ರಿಸ್​ಮಸ್​ ಹೊಸ ವರ್ಷದ ಆಚರಣೆಗೆ ಮತ್ತಷ್ಟು ಮೆರಗು ನೀಡುತ್ತಿದೆ.

Christmas 2021: ಕ್ರಿಸ್​ ಮಸ್​ ಆಚರಣೆಗೆ ಸಜ್ಜಾದ ಜನ: ಕ್ರಿಸ್​ಮಸ್​ ಆಚರಣೆಯ ಇತಿಹಾಸ, ಮಹತ್ವದ ಕುರಿತಾದ ಇಂಟ್ರಸ್ಟಿಂಗ್​ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Dec 24, 2021 | 11:17 AM

Share

2021 ಮುಗಿಯುತ್ತಿದೆ. ಹೊಸ ವರ್ಷದ ಹೊಸ್ತಿಲಲ್ಲಿ ಇರುವ ಇಡೀ ಜಗತ್ತು ಸಂಭ್ರಮದ ಆಚರಣೆಗೆ ಎದುರು ನೋಡುತ್ತಿದೆ. ಈ ನಡುವೆ ಕ್ರಿಸ್​ಮಸ್​ ಹೊಸ ವರ್ಷದ ಆಚರಣೆಗೆ ಮತ್ತಷ್ಟು ಮೆರಗು ನೀಡುತ್ತಿದೆ. ಡಿ.25ರಂದು ಏಸುಕ್ರಿಸ್ತನ ಜನ್ಮದಿನವನ್ನು ಕ್ರಿಸ್​ಮಸ್​ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಗೆಟ್​ ಟುಗೇದರ್​ಗಳಲ್ಲಿ ಭಾಗವಹಿಸಿ, ಸ್ನೇಹಿತರನ್ನು ಭೇಟಿಯಾಗಿ ನೆನಪಿನ ಬುತ್ತಿಗೆ ಮತ್ತಷ್ಟು ಸಮಯಗಳನ್ನು ಸೇರಿಸಿಕೊಳ್ಳುವ ಮೂಲಕ ವಿಭಿನ್ನವಾಗಿ ಕ್ರಿಸ್​ಮಸ್​ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಶ್ಚಿಯನ್​ ಸಮುದಾಯದವರಿಗೆ ಇರುವ ವರ್ಷದ ಏಕೈಕ ಹಬ್ಬ ಕ್ರಿಸ್​ಮಸ್​. ಡಿಸೆಂಬರ್​ 25ರಂದು ಆಚರಿಸುವ ಈ ಹಬ್ಬದ ಸಂಭ್ರಮ ಡಿಸೆಂಬರ್ 24ರ ರಾತ್ರಿಯಿಂದಲೇ ಆರಂಭಗೊಳುತ್ತದೆ. ಇದನ್ನು ಕ್ರಿಸ್​ಮಸ್​ ಈವ್​ ಎಂದು ಕರೆಯುತ್ತಾರೆ. ಕ್ರಿಶ್ಚಿಯನ್ ಸಮುದಾಯದವರು ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಮನೆಯನ್ನು ದೀಪಗಳ ಮೂಲಕ ಅಲಂಕರಿಸಿ, ಕ್ರಿಸ್​ಮಸ್​ ಟ್ರೀಗೆ ಲೈಟ್​ಗಳನ್ನು ಹಾಕಿ, ರಿಬ್ಬನ್​ಗಳನ್ನು ಕಟ್ಟಿ, ಕೇಕ್​, ವೈನ್​ ಸೇರಿದಂತೆ ಸಿಹಿತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

ಕ್ರಿಸ್​ಮಸ್​ ಹಬ್ಬದ ಇತಿಹಾಸ ಏಸುಕ್ರಿಸ್ತನ ಜನ್ಮದಿನ ಕ್ರಿಶ್ಚಿಯನ್​ರ ಸಾಮೂಹಿಕ ದಿನವಾಗಿದೆ. ಕ್ರಿಸ್​ಮಸ್​ ಎನ್ನುವುದು ಇತ್ತೀಚೆಗೆ ಬಳಸಲ್ಪಟ್ಟ ಪದವಾಗಿದೆ. ಆದರೂ ವಿವಿಧ ದೇಶಗಳಲ್ಲಿ ಕ್ರಿಸ್​ಮಸ್​ಅನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಉದಾಹರಣೆಗೆ ಜರ್ಮನಿಯಲ್ಲಿ ಯುಲೈಟೆಡ್​, ಸ್ಪಾನಿಷ್​ನಲ್ಲಿ ನ್ಯಾವಿಡೆಡ್​ ಎಂದು ಕರೆದರೆ ಇಟಾಲಿಯನ್​ನಲ್ಲಿ ನಟಾಲ್​ ಮತ್ತು ಪ್ರಂಚ್​ನಲ್ಲಿ ನೋಯಲ್​ ಎಂದು ಕರೆಯುತ್ತಾರೆ.

ಅನೇಕ ಶತಮಾನಗಳ ಹಿಂದೆ ಯುರೋಪಿನಲ್ಲಿ ಚಳಿಗಾಲದ ಸಂದರ್ಭದಲ್ಲಿ ದೀರ್ಘವಾದ ರಾತ್ರಿಯಲ್ಲಿ ಏಸುವಿನ ಜನನವಾಗಿತ್ತು. ಜೀಸಸ್ ಕ್ರೈಸ್ಟ್​ ಮೇರಿ ಮತ್ತು ಜೋಸೆಫ್​ ದಂಪತಿಗೆ ಲೆಹಮ್​ನ ಮ್ಯಾಂಗರ್​ನಲ್ಲಿ ಏಸು ಜನಿಸಿದ್ದ. ಆಗ ಗ್ರೆಗೋರಿಯನ್​ ಕ್ಯಾಲೆಂಡರ್​ ಬಳಸುತ್ತಿದ್ದ ಕಾರಣ ಡಿಸೆಂಬರ್25ಕ್ಕೇ ಏಸುವಿನ ಜನನವಾಗಿತ್ತು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಬೈಬಲ್​ನಲ್ಲಿ ಕೂಡ ಏಸುವಿನ ಜನ್ಮ ದಿನಾಂಕವನ್ನು ಕೂಡ ಉಲ್ಲೇಖಿಸಿಲ್ಲ. ಚಕ್ರವರ್ತಿ ಕಾನ್ಸ್ಟೈನ್​ ಮೊದಲ ಬಾರಿಗೆ ಡಿಸೆಂಬರ್ 25ರಂದು ಕ್ರಿಸ್​ಮಸ್​ ಆಚರಿಸಬೇಕೆಂದು ಘೋಷಿಸಿದ್ದರು. ಕೆಲವು ವರ್ಷಗಳ ಬಳಿಕ ಪೋಪ್​ ಜೂಲಿಯನ್​ 1 ಕೂಡ ಡಿಸೆಂಬರ್25ನ್ನು ಕ್ರಿಸ್ತನ ಜನ್ಮದಿನವೆಂದು ಘೋಷಿಸಿದರು. ಆರಂಭಿಕ ದಿನಗಳಲ್ಲಿ ಏಸು ಹುತಾತ್ಮನೆಂದು ನಂಬಿದ್ದ ಜನ ಕ್ರಿಸ್ತನದ ಜನನ ದಿನದ ಆಚರಣೆಯನ್ನು ವಿರೋಧಿಸಿದ್ದರು. ನಂತರ ಹುತಾತ್ಮರನ್ನು ಗೌರವಿಸುವ ಸಲುವಾಗಿ ಕ್ರಿಸ್​ಮಸ್ ಅನ್ನು ರಜಾದಿನವೆಂದು ಘೋಷಿಸಿ ಆಚರಣೆಗೆ ತರಲಾಯಿತು.

ಕ್ರಿಸ್ ಮಸ್​​ ಅಚರಣೆಯ ಮಹತ್ವ ಕ್ರಿಸ್​ಮಸ್ ಕ್ರಿಶ್ಚಿಯನ್ ಸಮುದಾಯದ ಪಾಲಿಗೆ ವಿಶೇಷ ದಿನ. ದೇವರು ತನ್ನ ಮಗನನ್ನು ಭೂಮಿಯಲ್ಲಿರುವ ಜನತೆಗೆ ತ್ಯಾಗ ಮತ್ತು ಮಾನವೀಯ ಗುಣಗಳನ್ನು ತಿಳಿಸಲು ಕಳುಹಿಸಿದ್ದಾರೆ. ಜನರಿಗೋಸ್ಕರ ತ್ಯಾಗ ಮಾಡಿ ಏಸುಕ್ರಿಸ್ತ ಶಿಲುಬೆಗೆ ಏರಿದ್ದಾನೆ ಎಂದು ನಂಬಲಾಗಿದೆ.

ಆಧುನಿಕ ಪ್ರಪಂಚದಲ್ಲಿ ಯುಎಸ್​ ಮತ್ತು ಇತರ ದೇಶಗಳಲ್ಲಿ ಸಾಂತಾ ಕ್ಲಾಸ್​ ಎನ್ನುವ ವ್ಯಕ್ತಿಯ ಪರಿಕಲ್ಪನೆಯಿದೆ. ಆತ ಪ್ರತೀ ವರ್ಷ ಕಿಸ್​ ಮಸ್​ ಸಮಯದಲ್ಲಿ ಮಕ್ಕಳಿಗೆ ಉಡುಗೊರೆಯನ್ನು ತರುತ್ತಾನೆ. ಉತ್ತರ ದ್ರುವದಲ್ಲಿ ವಾಸಿಸುವ ಸಾಂತಾ ಕ್ರಿಸ್​ ಮಸ್​ ಹಿಂದಿನ ದಿನ ಜಗತ್ತಿನಲ್ಲಿರುವ ಎಲ್ಲಾ ಮಕ್ಕಳಿಗೆ ಉಡುಗೊರೆಯನ್ನು ನೀಡುತ್ತಾನೆ ಎನ್ನುವ ನಂಬಿಕೆಯಿದೆ.

ಕ್ರಿಸ್​ ಮಸ್​ ಹಿಂದಿನ ದಿನ ರಾತ್ರಿ ಕ್ರಿಸ್​ ಮಸ್ ಈವ್​ ಅನ್ನು ಆಚರಿಸಲು ಕ್ರಿಶ್ಚಿಯನ್ ಸಮುದಾಯದ ಜನರೆಲ್ಲರೂ ಚರ್ಚ್ ನಲ್ಲಿ ಸೇರುತ್ತಾರೆ. ಕ್ಯಾರೋಲೆಲ್​ಗಳನ್ನು ಹಾಡುವ ಮೂಲಕ ಪ್ರಸ್ತುತ ವರ್ಷಕ್ಕೆ ಅಂತ್ಯ ಹೇಳಿ ಹೊಸವರ್ಷವನ್ನು ಸ್ವಾಗತಿಸುತ್ತಾರೆ. ಪರಸ್ಪರ ಆಶೀರ್ವಾದಿಸಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ:

Relationship Tips: ಸಂಗಾತಿಯೊಂದಿಗಿನ ಸುಂದರ ಬದುಕಿನ ಪುಸ್ತಕಕ್ಕೆ ಈ ಅಂಶಗಳನ್ನು ಸೇರಿಸಿಕೊಳ್ಳಿ:ಖುಷಿಯ ದಿನಗಳನ್ನು ವೆಲ್​ಕಮ್​ ಮಾಡಿ

Published On - 11:16 am, Fri, 24 December 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ