AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bad Habits: ಈ ಕೆಟ್ಟ ಅಭ್ಯಾಸಗಳು ನಿಮ್ಮ ಮನಸ್ಸಿನ ಶಾಂತಿಗೆ ಭಂಗ ಉಂಟುಮಾಡಬಹುದು

ನಿತ್ಯ ನಿಮ್ಮ ಜೀವನದಲ್ಲಿ ಹಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಖುಷಿ ಕೊಟ್ಟರೆ ಇನ್ನೂ ಕೆಲವು ನಮ್ಮಲ್ಲಿ ಗೊಂದಲ ಹಾಗೂ ನೋವನ್ನುಂಟುಮಾಡುತ್ತದೆ. ಕೆಲವರು ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಧ್ಯಾನ, ಯೋಗ ಮಾಡುತ್ತಾರೆ.

Bad Habits: ಈ ಕೆಟ್ಟ ಅಭ್ಯಾಸಗಳು ನಿಮ್ಮ ಮನಸ್ಸಿನ ಶಾಂತಿಗೆ ಭಂಗ ಉಂಟುಮಾಡಬಹುದು
ಧ್ಯಾನ
ನಯನಾ ರಾಜೀವ್
|

Updated on: Jul 04, 2023 | 9:00 AM

Share

ನಿತ್ಯ ನಿಮ್ಮ ಜೀವನದಲ್ಲಿ ಹಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಖುಷಿ ಕೊಟ್ಟರೆ ಇನ್ನೂ ಕೆಲವು ನಮ್ಮಲ್ಲಿ ಗೊಂದಲ ಹಾಗೂ ನೋವನ್ನುಂಟುಮಾಡುತ್ತದೆ. ಕೆಲವರು ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಧ್ಯಾನ, ಯೋಗ ಮಾಡುತ್ತಾರೆ. ಆದರೆ ನಿಮ್ಮಲ್ಲಿರುವ ಕೆಟ್ಟ ಅಭ್ಯಾಸಗಳನ್ನು ಗುರುತಿಸುವ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. ಮನಃಶಾಂತಿ ಎಂದರೇನು? ಇದು ಆಂತರಿಕ ಶಾಂತತೆ, ನೆಮ್ಮದಿ ಮತ್ತು ಮಾನಸಿಕ ಅಥವಾ ಭಾವನಾತ್ಮಕ ಅಡಚಣೆಯಿಂದ ಮುಕ್ತವಾಗಿರುವ ಸ್ಥಿತಿಯಾಗಿದೆ. ಇದು ನಿಮ್ಮೊಳಗಿನ ಸಂತೃಪ್ತಿ ಮತ್ತು ಸಾಮರಸ್ಯದ ಭಾವವಾಗಿದೆ, ಅಲ್ಲಿ ಚಿಂತೆಗಳು, ಆತಂಕಗಳು ಮತ್ತು ಒತ್ತಡಗಳನ್ನು ಕಡಿಮೆಗೊಳಿಸಲಾಗುತ್ತದೆ ಅಥವಾ ಉತ್ತಮವಾಗಿ ನಿರ್ವಹಿಸಲಾಗುತ್ತದೆ.

ಹಳೆ ನೆನಪುಗಳನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವುದು ಒಳ್ಳೆಯ ಕ್ಷಣಗಳನ್ನು ನೀವು ನೆನಪು ಮಾಡಿಕೊಂಡರೆ ನಿಮ್ಮ ಮನಸ್ಸಿಗೆ ಆನಂದವನ್ನು ನೀಡುತ್ತದೆ. ಹಾಗೆಯೇ ಕೆಟ್ಟ ಕ್ಷಣಗಳು ನಿಮ್ಮ ಮನಸ್ಸಿನ ಗಾಯಗಳನ್ನು ಮತ್ತಷ್ಟು ಘಾಸಿಗೊಳಿಸುತ್ತವೆ. ಹಿಂದೆ ಮಾಡಿದ್ದ ತಪ್ಪುಗಳು ನಿಮ್ಮನ್ನು ಕಾಡುತ್ತಿರುತ್ತದೆ. ಮೊದಲು ಹಳೆಯ ವಿಚಾರಗಳನ್ನು ಮೆಲುಕು ಹಾಕುವುದನ್ನು ಬಿಡಿ.

ಭವಿಷ್ಯದ ಬಗ್ಗೆ ಚಿಂತೆ ಏಕೆ? ಭವಿಷ್ಯದಲ್ಲಿ ಏನಾಗಬಹುದು ಎಂಬುದರ ಕುರಿತು ನಿರಂತರವಾಗಿ ಚಿಂತಿಸುವುದರಿಂದ ಆತಂಕ ಮತ್ತು ಒತ್ತಡವನ್ನು ಉಂಟುಮಾಡಬಹುದು, ನಿಮ್ಮ ಮನಸ್ಸಿನ ಶಾಂತಿಯನ್ನು ಕಸಿದುಕೊಳ್ಳಬಹುದು. ಯೋಜನೆ ಮತ್ತು ತಯಾರಿ ಮುಖ್ಯವಾಗಿದ್ದರೂ, ನಿಮ್ಮ ನಿಯಂತ್ರಣಕ್ಕೆ ಮೀರಿದ ವಿಷಯಗಳ ಬಗ್ಗೆ ಅತಿಯಾದ ಚಿಂತೆ ಹಾನಿಕಾರಕವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಅತಿಯಾಗಿ ಯೋಚಿಸುವುದು ಸನ್ನಿವೇಶಗಳನ್ನು ಅತಿಯಾಗಿ ವಿಶ್ಲೇಷಿಸುವುದು, ಅತಿಯಾಗಿ ಯೋಚಿಸುವುದು , ಸಂಭಾಷಣೆಗಳು ಅಥವಾ ಘಟನೆಗಳನ್ನು ನಿಮ್ಮ ಮನಸ್ಸಿನಲ್ಲಿ ಮತ್ತೆ ಮತ್ತೆ ಮರುಪ್ರಸಾರ ಮಾಡುವುದು ಮತ್ತು ಕಾಲ್ಪನಿಕ ಸನ್ನಿವೇಶಗಳನ್ನು ಸೃಷ್ಟಿಸುವುದು ಮಾನಸಿಕ ಬಳಲಿಕೆ ಮತ್ತು ಚಡಪಡಿಕೆಗೆ ಕಾರಣವಾಗಬಹುದು. ನಿಮ್ಮ ಮನಸ್ಸು ನಿರಂತರವಾಗಿ ವಲಯಗಳಲ್ಲಿ ಓಡುತ್ತಿರುವಾಗ ಶಾಂತಿಯನ್ನು ಕಂಡುಕೊಳ್ಳುವುದು ಸವಾಲಾಗಿರಬಹುದು.

ದ್ವೇಷಗಳನ್ನು ಹಿಡಿದಿಟ್ಟುಕೊಳ್ಳುವುದು ಇತರರ ಬಗ್ಗೆ ದ್ವೇಷ, ಅಸಮಾಧಾನ ಅಥವಾ ಕೋಪವನ್ನು ಹಿಡಿದಿಟ್ಟುಕೊಳ್ಳುವುದು ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ತಿನ್ನುತ್ತದೆ. ಇದು ನಕಾರಾತ್ಮಕ ಭಾವನೆಗಳನ್ನು ಜೀವಂತವಾಗಿರಿಸುತ್ತದೆ, ಮನಸ್ಸಿನ ಶಾಂತಿಯನ್ನು ಅನುಭವಿಸಲು ಕಷ್ಟವಾಗುತ್ತದೆ.

ನಿಮ್ಮನ್ನು ಇತರರೊಂದಿಗೆ ಹೋಲಿಸುವುದು ಕೆಲವರು ನಿಮಗಿಂತ ಹೆಚ್ಚಿನ ಧನ, ಆಸ್ತಿಪಾಸ್ತಿಗಳನ್ನು ಹೊಂದಿರಬಹುದು ಮತ್ತು ಇತರರು ಕಡಿಮೆ ಹೊಂದಿರಬಹುದು. ಆದರೆ ನಿಮ್ಮನ್ನು ಇತರರೊಂದಿಗೆ ಹೋಲಿಸುವುದು, ವಿಶೇಷವಾಗಿ ಸಾಧನೆಗಳು, ಆಸ್ತಿಗಳು ಅಥವಾ ಸಾಮಾಜಿಕ ಸ್ಥಾನಮಾನದ ವಿಷಯದಲ್ಲಿ, ನೀವು ಅಸಮರ್ಪಕ ಮತ್ತು ಅತೃಪ್ತಿಯನ್ನು ಅನುಭವಿಸಬಹುದು.

ಏಕ ಕಾಲದಲ್ಲಿ ತುಂಬಾ ಕೆಲಸ ಮಾಡಬೇಡಿ ಬಹುಕಾರ್ಯ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಆದರೆ ಒಂದೇ ಸಮಯದಲ್ಲಿ ತುಂಬಾ ಕೆಲಸಗಳನ್ನು ಮಾಡಬೇಡಿ. ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉತ್ಪಾದಕತೆಗೆ ಅಡ್ಡಿಯಾಗುತ್ತದೆ ಎಂದು ರಾಜ್ ಹೇಳುತ್ತಾರೆ. ಶಾಂತ ಮತ್ತು ಸ್ಪಷ್ಟತೆಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ಸಮತೋಲನವನ್ನು ಕಂಡುಹಿಡಿಯುವುದು ಮತ್ತು ಕಾರ್ಯಗಳಿಗೆ ಆದ್ಯತೆ ನೀಡುವುದು ಮುಖ್ಯವಾಗಿದೆ.

ಜೀವನಶೈಲಿಗೆ ಸಮಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್