3 ವರ್ಷಗಳಲ್ಲಿ ಮೂರು ದೇಶಗಳ 3117 ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ; ಸಚಿವ ನಿತ್ಯಾನಂದ ರೈ ಮಾಹಿತಿ

2014ರ ಡಿಸೆಂಬರ್​ 31ರ ಮೊದಲು ಮತ್ತು ಆ ದಿನ ಭಾರತವನ್ನು ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ( ಆ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ) ಭಾರತದ ನಾಗರಿಕತ್ವ ನೀಡುವ ಸಂಬಂಧ ಕೇಂದ್ರ ಸರ್ಕಾರ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೊಳಿಸಿದೆ.

3 ವರ್ಷಗಳಲ್ಲಿ ಮೂರು ದೇಶಗಳ 3117 ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ; ಸಚಿವ ನಿತ್ಯಾನಂದ ರೈ ಮಾಹಿತಿ
ಸಚಿವ ನಿತ್ಯಾನಂದ ರೈ
Follow us
| Updated By: Lakshmi Hegde

Updated on: Dec 22, 2021 | 3:44 PM

2018ರಿಂದ 2021ರವರೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಒಟ್ಟು 3117 ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.  ಸಂಸತ್ತಿನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ರಾಜ್ಯ ಸಭಾ ಸಂಸದ ಡಾ. ಕೆ.ಕೇಶವ ರಾವ್​ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ, ಸಿಖ್, ಜೈನ್ ಮತ್ತು ಕ್ರಿಶ್ಚಿಯನ್ನರಂತಹ ಅಲ್ಪಸಂಖ್ಯಾತ ಗುಂಪುಗಳಿಂದ 2018-2021ರವರೆಗೆ ಪಡೆದ ಒಟ್ಟು ಅರ್ಜಿಗಳು ಮತ್ತು ಎಷ್ಟು ಜನರಿಗೆ ಪೌರತ್ವ ನೀಡಲಾಗಿದೆ ಎಂಬುದರ ಬಗ್ಗೆ ಡಾ. ಕೆ.ಕೇಶವ ರಾವ್​ ಪ್ರಶ್ನೆ ಕೇಳಿದ್ದರು.  

2018-2021ರವರೆಗೆ ಕೇಂದ್ರ ಸರ್ಕಾರ, ನೆರೆರಾಷ್ಟ್ರಗಳ ಅಲ್ಪಸಂಖ್ಯಾತರಿಂದ ಒಟ್ಟು 8244 ಪೌರತ್ವ ಅರ್ಜಿಗಳನ್ನು ಸ್ವೀಕರಿಸಿದೆ. ಅವರಲ್ಲಿ 3117 ಅರ್ಜಿದಾರರಿಗೆ ಭಾರತದ ಪೌರತ್ವ ನೀಡಲಾಗಿದೆ. ಇವರಲ್ಲಿ ನಿರಾಶ್ರಿತರೂ ಸೇರಿದ್ದಾರೆ. ಇವರೆಲ್ಲರೂ ವಿದೇಶಿಯರ ಕಾಯ್ದೆ 1946, ವಿದೇಶಿಯರ ನೋಂದಣಿ ಕಾಯ್ದೆ 1939, ಪಾಸ್​ಪೋರ್ಟ್​ (ಭಾರತಕ್ಕೆ ಪ್ರವೇಶ) ಕಾಯ್ದೆ 1920 ಮತ್ತು ಪೌರತ್ವ ಕಾಯ್ದೆ  1955ರಲ್ಲಿರುವ ನಿಬಂಧನೆಗಳ ಮೂಲಕ ನಿಯಂತ್ರಿಸಲ್ಪಡುತ್ತಾರೆ ಎಂದು  ರೈ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ಇನ್ನು ಪೆಂಡಿಂಗ್​ ಇರುವ ಪೌರತ್ವ ಅರ್ಜಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ರೈ, ಅಫ್ಘಾನಿಸ್ತಾನದಿಂದ ಬಂದಿರುವ 1152 ಅರ್ಜಿಗಳು ಬಾಕಿ ಇವೆ. 224 ಶ್ರೀಲಂಕಾ ಮತ್ತು ಯುಎಸ್​ಎ, ನೇಪಾಳ ಮೂಲದವರ 189 ಮತ್ತು ಬಾಂಗ್ಲಾದೇಶಿಗರು ಕಳಿಸಿದ ಅರ್ಜಿಗಳಲ್ಲಿ 161 ಇನ್ನೂ ಪೆಂಡಿಂಗ್​ ಇದೆ ಎಂದು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಹಾಗೇ, ಚೀನಾ ಮೂಲದ 10 ಮಂದಿ ಕೂಡ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅವಿಷ್ಟೂ ಹಾಗೇ ಇದೆ ಎಂದು ಹೇಳಿದ್ದಾರೆ.

2014ರ ಡಿಸೆಂಬರ್​ 31ರ ಮೊದಲು ಮತ್ತು ಆ ದಿನ ಭಾರತವನ್ನು ಪ್ರವೇಶಿಸಿದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ( ಆ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ) ಭಾರತದ ನಾಗರಿಕತ್ವ ನೀಡುವ ಸಂಬಂಧ ಕೇಂದ್ರ ಸರ್ಕಾರ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೊಳಿಸಿದೆ. ಆ ಸಿಎಎ ಕಾಯ್ದೆ ವಿರೋಧಿಸಿ ಅಸ್ಸಾಂ ಸೇರಿ ಇತರ ಈಶಾನ್ಯ ರಾಜ್ಯಗಳಲ್ಲಿ ವಿಪರೀತ ಪ್ರತಿಭಟನೆ ನಡೆದಿತ್ತು. ದೆಹಲಿಯ ಶಹೀನ್​ ಬಾಗ್​ನಲ್ಲಿ 2020ರವರೆಗೂ ಪ್ರತಿಭಟನೆ ನಡೆದು, ಅದು ಹಿಂಸಾಚಾರ ಸ್ವರೂಪವನ್ನೂ ತಲುಪಿತ್ತು.

ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ಮಂಡಿನೋವಿನಿಂದ ಮುಕ್ತಿ ಪಡೆಯಲು ಈ ಕ್ರಮಗಳನ್ನು ಅನುಸರಿಸಿ