AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಸಿಜನ್ ಕೊರತೆಗೆ ಪರಿಹಾರ: ಆಕ್ಸಿಜನ್ ರೀಸೈಕ್ಲಿಂಗ್ ಸಿಸ್ಟಂ ನಿರ್ಮಿಸಿದ ಭಾರತೀಯ ನೌಕಾಪಡೆ

Oxygen Recycling System: ಪತ್ರಿಕಾ ಪ್ರಕಟಣೆಯ ಪ್ರಕಾರ, ಒಆರ್​ಎಸ್ ಅನ್ನು ಅಸ್ತಿತ್ವದಲ್ಲಿರುವ ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳ ಅವಧಿಗಿಂತ ಎರಡರಿಂದ ನಾಲ್ಕು ಪಟ್ಟು ವಿಸ್ತರಿಸಲು ವಿನ್ಯಾಸಗೊಳಿಸಲಾಗಿದೆ. ರೋಗಿಯು ಉಸಿರಾಡುವ ಅಲ್ಪ ಪ್ರಮಾಣದ ಆಮ್ಲಜನಕವನ್ನು ಮಾತ್ರ ಶ್ವಾಸಕೋಶದಿಂದ ಹೀರಿಕೊಳ್ಳಲಾಗುತ್ತದೆ

ಆಕ್ಸಿಜನ್ ಕೊರತೆಗೆ ಪರಿಹಾರ: ಆಕ್ಸಿಜನ್ ರೀಸೈಕ್ಲಿಂಗ್ ಸಿಸ್ಟಂ ನಿರ್ಮಿಸಿದ ಭಾರತೀಯ ನೌಕಾಪಡೆ
ಆಕ್ಸಿಜನ್ ರೀಸೈಕಲಿಂಗ್ ಸಿಸ್ಟಂ
ರಶ್ಮಿ ಕಲ್ಲಕಟ್ಟ
|

Updated on:May 20, 2021 | 5:38 PM

Share

ದೆಹಲಿ: ಕೊವಿಡ್ ಎರಡನೇ ಅಲೆ ಮಧ್ಯೆ ಭಾರತೀಯ ನೌಕಾಪಡೆಯ ದಕ್ಷಿಣ ನೌಕಾ ಕಮಾಂಡ್‌ನ ಡೈವಿಂಗ್ ಸ್ಕೂಲ್ ದೇಶದಲ್ಲಿನ ಆಮ್ಲಜನಕದ ಕೊರತೆಯನ್ನು ನೀಗಿಸಲು ಆಕ್ಸಿಜನ್ ಮರುಬಳಕೆ ವ್ಯವಸ್ಥೆಯನ್ನು (ORS) ವಿನ್ಯಾಸಗೊಳಿಸಿದೆ. ಅಧಿಕೃತ  ಪ್ರಕಟಣೆಯ ಪ್ರಕಾರ, ಒಆರ್​ಎಸ್ ಅನ್ನು ಡೈವಿಂಗ್ ಶಾಲೆಯ ಲೆಫ್ಟಿನೆಂಟ್ ಕಮಾಂಡರ್ ಮಯಾಂಕ್ ಶರ್ಮಾ ವಿನ್ಯಾಸಗೊಳಿಸಿದ್ದಾರೆ. ಸಿಸ್ಟಮ್ ವಿನ್ಯಾಸಕ್ಕೆ ಪೇಟೆಂಟ್ ನೀಡಲಾಗಿದೆ, ಮತ್ತು ಈ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಮೇ 13 ರಂದು ಅರ್ಜಿ ಸಲ್ಲಿಸಿದೆ.

ಡೈವಿಂಗ್ ಸ್ಕೂಲ್ ಈ ಕ್ಷೇತ್ರದಲ್ಲ ಪರಿಣತಿಯನ್ನು ಹೊಂದಿದೆ. ಏಕೆಂದರೆ ಶಾಲೆಯು ಬಳಸುವ ಕೆಲವು ಡೈವಿಂಗ್ ಸೆಟ್‌ಗಳಲ್ಲಿ ಮೂಲ ಪರಿಕಲ್ಪನೆಯನ್ನು ಬಳಸಲಾಗುತ್ತದೆ. ಇದಕ್ಕೂ ಮೊದಲು ಮಾರ್ಚ್ 6 ರಂದು ಕೆವಾಡಿಯಾದಲ್ಲಿ ನಡೆದ ಸಂಯೋಜಿತ ಕಮಾಂಡರ್ಸ್ ಸಮ್ಮೇಳನದಲ್ಲಿ ಮಿನಿಯೇಚರೈಸ್ಡ್ ಲ್ಯಾಬ್ ಮಾದರಿಯಲ್ಲಿ ಇದೇ ರೀತಿಯ ವಿಚಾರವನ್ನು ಪ್ರಧಾನ ಮಂತ್ರಿ ಮುಂದೆ ಪ್ರದರ್ಶಿಸಲಾಗಿತ್ತು.

ಪತ್ರಿಕಾ ಪ್ರಕಟಣೆಯ ಪ್ರಕಾರ, ಒಆರ್​ಎಸ್ ಅನ್ನು ಅಸ್ತಿತ್ವದಲ್ಲಿರುವ ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳ ಅವಧಿಗಿಂತ ಎರಡರಿಂದ ನಾಲ್ಕು ಪಟ್ಟು ವಿಸ್ತರಿಸಲು ವಿನ್ಯಾಸಗೊಳಿಸಲಾಗಿದೆ. ರೋಗಿಯು ಉಸಿರಾಡುವ ಅಲ್ಪ ಪ್ರಮಾಣದ ಆಮ್ಲಜನಕವನ್ನು ಮಾತ್ರ ಶ್ವಾಸಕೋಶದಿಂದ ಹೀರಿಕೊಳ್ಳಲಾಗುತ್ತದೆ. ದೇಹದಲ್ಲಿ ಹೊರ ಹೋಗುವ ಕಾರ್ಬನ್ ಡೈಆಕ್ಸೈಡ್ ಜೊತೆಗೆ ಉಳಿದವುಗಳನ್ನು ಹೊರ ಬಿಡಲಾಗುತ್ತದೆ.

ಒಆರ್​ಎಸ್​ನ ಮೊದಲ ಸಂಪೂರ್ಣ ಕಾರ್ಯಾಚರಣೆಯ ಮೂಲಮಾದರಿಯನ್ನು ಏಪ್ರಿಲ್ 22 ರಂದು ಪ್ರದರ್ಶಿಸಲಾಯಿತು. ಐಎಸ್ಒ-ಪ್ರಮಾಣೀಕೃತ ಸಂಸ್ಥೆಗಳಿಂದ ತೃತೀಯ ವೀಕ್ಷಕರೊಂದಿಗೆ ಸದರ್ನ್ ನೇವಲ್ ಕಮಾಂಡ್ ನಲ್ಲಿ ಆಂತರಿಕ ಪ್ರಯೋಗಗಳು ಮತ್ತು ವಿನ್ಯಾಸ ಸುಧಾರಣೆಗಳನ್ನು ನಡೆಸಲಾಗಿದೆ. ಅದರ ನಂತರ, ನೀತಿ ಆಯೋಗದ ನಿರ್ದೇಶನದ ಮೇರೆಗೆ, ಈ ವ್ಯವಸ್ಥೆಯು ತಿರುವನಂತಪುರಂನ ಶ್ರೀ ಚಿತ್ರ ತಿರುನಾಳ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿ (SCTIMST) ಯ ತಜ್ಞರ ತಂಡದಿಂದ ವಿವರವಾದ ವಿಶ್ಲೇಷಣೆ ಮತ್ತು ಮೌಲ್ಯಮಾಪನಕ್ಕೆ ಒಳಗಾಯಿತು.

SCTIMST ಯ ತಜ್ಞರ ತಂಡವು ಆಕ್ಸಿಜನ್ ಮರುಬಳಕೆ ವ್ಯವಸ್ಥೆಯ ಪರಿಕಲ್ಪನೆ ಮತ್ತು ವಿನ್ಯಾಸವನ್ನು ಕಾರ್ಯಸಾಧ್ಯವೆಂದು ಕಂಡುಹಿಡಿದಿದೆ. ಕೆಲವು ಹೆಚ್ಚುವರಿ ಬದಲಾವಣೆಗಳನ್ನೂ ಸಹ ಸೂಚಿಸಿತ್ತು. ಒಆರ್​ಎಸ್ ಮೂಲ ಮಾದರಿಯ ಒಟ್ಟಾರೆ ವೆಚ್ಚವನ್ನು 1000 ರೂ ಆಗಿದ್ದು ಮರುಬಳಕೆ ಮಾಡುವ ಮೂಲಕ ಪ್ರತಿದಿನ 3,000 ರೂ ಉಳಿತಾಯ ಮಾಡಬಹುದಾಗಿದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ಆಮ್ಲಜನಕದ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವುದರ ಜೊತೆಗೆ ಪರ್ವತಾರೋಹಿಗಳು / ಸೈನಿಕರು ಬಳಸುವ ಆಮ್ಲಜನಕ ಸಿಲಿಂಡರ್‌ಗಳ ಅವಧಿ ವಿಸ್ತರಿಸಲು ORS ಅನ್ನು ಬಳಸಬಹುದು.

ಇದನ್ನೂ ಓದಿ:  ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕರ್ನಾಟಕದಲ್ಲಿ ಎದುರಾಗಿದೆ ತಜ್ಞರ ಕೊರತೆ: ಸಚಿವ ಜಗದೀಶ್ ಶೆಟ್ಟರ್ ಕಳವಳ

ಚಾಮರಾಜನಗರ ಆಕ್ಸಿಜನ್​ ದುರಂತದಲ್ಲಿ ಸತ್ತವರ ಕುಟುಂಬಕ್ಕೆ ತಕ್ಷಣ 2 ಲಕ್ಷ ರೂಪಾಯಿ ಪರಿಹಾರ ಕೊಡಿ: ಹೈಕೋರ್ಟ್ ವಿಭಾಗೀಯ ಪೀಠ

Published On - 5:28 pm, Thu, 20 May 21

ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು