ಆಕ್ಸಿಜನ್ ಕೊರತೆಗೆ ಪರಿಹಾರ: ಆಕ್ಸಿಜನ್ ರೀಸೈಕ್ಲಿಂಗ್ ಸಿಸ್ಟಂ ನಿರ್ಮಿಸಿದ ಭಾರತೀಯ ನೌಕಾಪಡೆ

Oxygen Recycling System: ಪತ್ರಿಕಾ ಪ್ರಕಟಣೆಯ ಪ್ರಕಾರ, ಒಆರ್​ಎಸ್ ಅನ್ನು ಅಸ್ತಿತ್ವದಲ್ಲಿರುವ ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳ ಅವಧಿಗಿಂತ ಎರಡರಿಂದ ನಾಲ್ಕು ಪಟ್ಟು ವಿಸ್ತರಿಸಲು ವಿನ್ಯಾಸಗೊಳಿಸಲಾಗಿದೆ. ರೋಗಿಯು ಉಸಿರಾಡುವ ಅಲ್ಪ ಪ್ರಮಾಣದ ಆಮ್ಲಜನಕವನ್ನು ಮಾತ್ರ ಶ್ವಾಸಕೋಶದಿಂದ ಹೀರಿಕೊಳ್ಳಲಾಗುತ್ತದೆ

ಆಕ್ಸಿಜನ್ ಕೊರತೆಗೆ ಪರಿಹಾರ: ಆಕ್ಸಿಜನ್ ರೀಸೈಕ್ಲಿಂಗ್ ಸಿಸ್ಟಂ ನಿರ್ಮಿಸಿದ ಭಾರತೀಯ ನೌಕಾಪಡೆ
ಆಕ್ಸಿಜನ್ ರೀಸೈಕಲಿಂಗ್ ಸಿಸ್ಟಂ
Follow us
|

Updated on:May 20, 2021 | 5:38 PM

ದೆಹಲಿ: ಕೊವಿಡ್ ಎರಡನೇ ಅಲೆ ಮಧ್ಯೆ ಭಾರತೀಯ ನೌಕಾಪಡೆಯ ದಕ್ಷಿಣ ನೌಕಾ ಕಮಾಂಡ್‌ನ ಡೈವಿಂಗ್ ಸ್ಕೂಲ್ ದೇಶದಲ್ಲಿನ ಆಮ್ಲಜನಕದ ಕೊರತೆಯನ್ನು ನೀಗಿಸಲು ಆಕ್ಸಿಜನ್ ಮರುಬಳಕೆ ವ್ಯವಸ್ಥೆಯನ್ನು (ORS) ವಿನ್ಯಾಸಗೊಳಿಸಿದೆ. ಅಧಿಕೃತ  ಪ್ರಕಟಣೆಯ ಪ್ರಕಾರ, ಒಆರ್​ಎಸ್ ಅನ್ನು ಡೈವಿಂಗ್ ಶಾಲೆಯ ಲೆಫ್ಟಿನೆಂಟ್ ಕಮಾಂಡರ್ ಮಯಾಂಕ್ ಶರ್ಮಾ ವಿನ್ಯಾಸಗೊಳಿಸಿದ್ದಾರೆ. ಸಿಸ್ಟಮ್ ವಿನ್ಯಾಸಕ್ಕೆ ಪೇಟೆಂಟ್ ನೀಡಲಾಗಿದೆ, ಮತ್ತು ಈ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಮೇ 13 ರಂದು ಅರ್ಜಿ ಸಲ್ಲಿಸಿದೆ.

ಡೈವಿಂಗ್ ಸ್ಕೂಲ್ ಈ ಕ್ಷೇತ್ರದಲ್ಲ ಪರಿಣತಿಯನ್ನು ಹೊಂದಿದೆ. ಏಕೆಂದರೆ ಶಾಲೆಯು ಬಳಸುವ ಕೆಲವು ಡೈವಿಂಗ್ ಸೆಟ್‌ಗಳಲ್ಲಿ ಮೂಲ ಪರಿಕಲ್ಪನೆಯನ್ನು ಬಳಸಲಾಗುತ್ತದೆ. ಇದಕ್ಕೂ ಮೊದಲು ಮಾರ್ಚ್ 6 ರಂದು ಕೆವಾಡಿಯಾದಲ್ಲಿ ನಡೆದ ಸಂಯೋಜಿತ ಕಮಾಂಡರ್ಸ್ ಸಮ್ಮೇಳನದಲ್ಲಿ ಮಿನಿಯೇಚರೈಸ್ಡ್ ಲ್ಯಾಬ್ ಮಾದರಿಯಲ್ಲಿ ಇದೇ ರೀತಿಯ ವಿಚಾರವನ್ನು ಪ್ರಧಾನ ಮಂತ್ರಿ ಮುಂದೆ ಪ್ರದರ್ಶಿಸಲಾಗಿತ್ತು.

ಪತ್ರಿಕಾ ಪ್ರಕಟಣೆಯ ಪ್ರಕಾರ, ಒಆರ್​ಎಸ್ ಅನ್ನು ಅಸ್ತಿತ್ವದಲ್ಲಿರುವ ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳ ಅವಧಿಗಿಂತ ಎರಡರಿಂದ ನಾಲ್ಕು ಪಟ್ಟು ವಿಸ್ತರಿಸಲು ವಿನ್ಯಾಸಗೊಳಿಸಲಾಗಿದೆ. ರೋಗಿಯು ಉಸಿರಾಡುವ ಅಲ್ಪ ಪ್ರಮಾಣದ ಆಮ್ಲಜನಕವನ್ನು ಮಾತ್ರ ಶ್ವಾಸಕೋಶದಿಂದ ಹೀರಿಕೊಳ್ಳಲಾಗುತ್ತದೆ. ದೇಹದಲ್ಲಿ ಹೊರ ಹೋಗುವ ಕಾರ್ಬನ್ ಡೈಆಕ್ಸೈಡ್ ಜೊತೆಗೆ ಉಳಿದವುಗಳನ್ನು ಹೊರ ಬಿಡಲಾಗುತ್ತದೆ.

ಒಆರ್​ಎಸ್​ನ ಮೊದಲ ಸಂಪೂರ್ಣ ಕಾರ್ಯಾಚರಣೆಯ ಮೂಲಮಾದರಿಯನ್ನು ಏಪ್ರಿಲ್ 22 ರಂದು ಪ್ರದರ್ಶಿಸಲಾಯಿತು. ಐಎಸ್ಒ-ಪ್ರಮಾಣೀಕೃತ ಸಂಸ್ಥೆಗಳಿಂದ ತೃತೀಯ ವೀಕ್ಷಕರೊಂದಿಗೆ ಸದರ್ನ್ ನೇವಲ್ ಕಮಾಂಡ್ ನಲ್ಲಿ ಆಂತರಿಕ ಪ್ರಯೋಗಗಳು ಮತ್ತು ವಿನ್ಯಾಸ ಸುಧಾರಣೆಗಳನ್ನು ನಡೆಸಲಾಗಿದೆ. ಅದರ ನಂತರ, ನೀತಿ ಆಯೋಗದ ನಿರ್ದೇಶನದ ಮೇರೆಗೆ, ಈ ವ್ಯವಸ್ಥೆಯು ತಿರುವನಂತಪುರಂನ ಶ್ರೀ ಚಿತ್ರ ತಿರುನಾಳ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿ (SCTIMST) ಯ ತಜ್ಞರ ತಂಡದಿಂದ ವಿವರವಾದ ವಿಶ್ಲೇಷಣೆ ಮತ್ತು ಮೌಲ್ಯಮಾಪನಕ್ಕೆ ಒಳಗಾಯಿತು.

SCTIMST ಯ ತಜ್ಞರ ತಂಡವು ಆಕ್ಸಿಜನ್ ಮರುಬಳಕೆ ವ್ಯವಸ್ಥೆಯ ಪರಿಕಲ್ಪನೆ ಮತ್ತು ವಿನ್ಯಾಸವನ್ನು ಕಾರ್ಯಸಾಧ್ಯವೆಂದು ಕಂಡುಹಿಡಿದಿದೆ. ಕೆಲವು ಹೆಚ್ಚುವರಿ ಬದಲಾವಣೆಗಳನ್ನೂ ಸಹ ಸೂಚಿಸಿತ್ತು. ಒಆರ್​ಎಸ್ ಮೂಲ ಮಾದರಿಯ ಒಟ್ಟಾರೆ ವೆಚ್ಚವನ್ನು 1000 ರೂ ಆಗಿದ್ದು ಮರುಬಳಕೆ ಮಾಡುವ ಮೂಲಕ ಪ್ರತಿದಿನ 3,000 ರೂ ಉಳಿತಾಯ ಮಾಡಬಹುದಾಗಿದೆ. ದೇಶದಲ್ಲಿ ಅಸ್ತಿತ್ವದಲ್ಲಿರುವ ಆಮ್ಲಜನಕದ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವುದರ ಜೊತೆಗೆ ಪರ್ವತಾರೋಹಿಗಳು / ಸೈನಿಕರು ಬಳಸುವ ಆಮ್ಲಜನಕ ಸಿಲಿಂಡರ್‌ಗಳ ಅವಧಿ ವಿಸ್ತರಿಸಲು ORS ಅನ್ನು ಬಳಸಬಹುದು.

ಇದನ್ನೂ ಓದಿ:  ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕರ್ನಾಟಕದಲ್ಲಿ ಎದುರಾಗಿದೆ ತಜ್ಞರ ಕೊರತೆ: ಸಚಿವ ಜಗದೀಶ್ ಶೆಟ್ಟರ್ ಕಳವಳ

ಚಾಮರಾಜನಗರ ಆಕ್ಸಿಜನ್​ ದುರಂತದಲ್ಲಿ ಸತ್ತವರ ಕುಟುಂಬಕ್ಕೆ ತಕ್ಷಣ 2 ಲಕ್ಷ ರೂಪಾಯಿ ಪರಿಹಾರ ಕೊಡಿ: ಹೈಕೋರ್ಟ್ ವಿಭಾಗೀಯ ಪೀಠ

Published On - 5:28 pm, Thu, 20 May 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ