AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ: ಒಮಿಕ್ರಾನ್ ಆತಂಕದ ನಡುವೆಯೇ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಳ

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಲಸಿಕೆ ಪಡೆಯಲು ಆಸಕ್ತಿ ಹೊಂದಿದವರ ಸಂಖ್ಯೆ ಜಾಸ್ತಿ ಆಗಿದೆ. ನವೆಂಬರ್ 23 ರಿಂದ ನಾಲ್ಕು ದಿನಗಳ ಅವಧಿಯಲ್ಲಿ ಕೇವಲ 4.4 ಲಕ್ಷ ಜನರು ಮಾತ್ರ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಅದು ತೋರಿಸುತ್ತದೆ.

ಕೇರಳ: ಒಮಿಕ್ರಾನ್ ಆತಂಕದ ನಡುವೆಯೇ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಳ
ವೀಣಾ ಜಾರ್ಜ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Dec 02, 2021 | 9:02 PM

Share

ತಿರುವನಂತಪುರಂ: ಒಮಿಕ್ರಾನ್ ರೂಪಾಂತರದ (Omicron variant) ಬಗ್ಗೆ ಇರುವ ಆತಂಕ ಕೇರಳದಲ್ಲಿ (kerala) ವ್ಯಾಕ್ಸಿನೇಷನ್ ಬೇಡಿಕೆಯನ್ನು ಹೆಚ್ಚಿಸಿದೆ. ಹೊಸ ಕೊವಿಡ್ -19 ರೂಪಾಂತರದ ವರದಿಗಳ ನಡುವೆ ಲಸಿಕೆ ಪಡೆಯುವ ಜನರ ಸಂಖ್ಯೆ ಹೆಚ್ಚಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಹೇಳಿದ್ದಾರೆ.  ಏತನ್ಮಧ್ಯೆ, ಭಾರತವು ತನ್ನ ಮೊದಲ ಎರಡು ಒಮಿಕ್ರಾನ್ ಪ್ರಕರಣಗಳನ್ನು ಗುರುವಾರ ವರದಿ ಮಾಡಿದೆ. ಇವೆರಡೂ ಕೇರಳದ ನೆರೆಯ ಕರ್ನಾಟಕದಲ್ಲಿವೆ. ಕೇರಳ ಸರ್ಕಾರವು ಡಿಸೆಂಬರ್ 1 ರಿಂದ ಎರಡು ವಾರಗಳ ವಿಶೇಷ ಲಸಿಕೆ ಅಭಿಯಾನವನ್ನು(special vaccination drive) ಪ್ರಾರಂಭಿಸಿದೆ. “ಇನ್ನೂ ಮೊದಲ ಡೋಸ್ ತೆಗೆದುಕೊಳ್ಳದವರನ್ನು ಪತ್ತೆಹಚ್ಚಲು ಮತ್ತು ಅವರಿಗೆ ಲಸಿಕೆ ಹಾಕಲು ಈ ಡ್ರೈವ್ ಉದ್ದೇಶಿಸಲಾಗಿದೆ. ಅಲ್ಲದೆ, ಮೊದಲ ಲಸಿಕೆ ತೆಗೆದುಕೊಂಡವರಿಗೆ ಎರಡನೇ ಡೋಸ್ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು,’’ ಎಂದು ವೀಣಾ ಜಾರ್ಜ್ ಹೇಳಿದರು. ಲಸಿಕೆಯನ್ನು ಪಡೆಯಲು ನಿರಾಕರಿಸುವವರಿಗೆ ಉಚಿತ ಚಿಕಿತ್ಸೆಯನ್ನು ನಿರಾಕರಿಸಲಾಗುವುದು ಎಂದು ಅವರು ಹೇಳಿದರು. ರಾಜ್ಯದಲ್ಲಿ ಎಂಟು ಲಕ್ಷ ಡೋಸ್‌ಗಳ ದಾಸ್ತಾನು ಇದೆ ಮತ್ತು ವಿಶೇಷ ಡ್ರೈವ್‌ಗಾಗಿ ಹೆಚ್ಚಿನ ಸರಬರಾಜುಗಳನ್ನು ಕೋರಿದೆ ಎಂದು ಅವರು ಹೇಳಿದರು. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಲಸಿಕೆ ಪಡೆಯಲು ಆಸಕ್ತಿ ಹೊಂದಿದವರ ಸಂಖ್ಯೆ ಜಾಸ್ತಿ ಆಗಿದೆ. ನವೆಂಬರ್ 23 ರಿಂದ ನಾಲ್ಕು ದಿನಗಳ ಅವಧಿಯಲ್ಲಿ ಕೇವಲ 4.4 ಲಕ್ಷ ಜನರು ಮಾತ್ರ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಅದು ತೋರಿಸುತ್ತದೆ. ನವೆಂಬರ್ 27 ರಿಂದ ಪ್ರಾರಂಭವಾದ ಮುಂದಿನ ನಾಲ್ಕು ದಿನಗಳಲ್ಲಿ ಈ ಸಂಖ್ಯೆ 6.25 ಲಕ್ಷಕ್ಕೆ ಏರಿತು. ಇದು ಒಮಿಕ್ರಾನ್ ರೂಪಾಂತರದ ವರದಿಗಳು ಬರಲು ಪ್ರಾರಂಭಿಸಿದ ಸಮಯವಾಗಿತ್ತು.

ನವೆಂಬರ್ 23-26ರ ಅವಧಿಯಲ್ಲಿ ಕೇವಲ 36,428 ಜನರು ಮೊದಲ ಡೋಸ್ ತೆಗೆದುಕೊಂಡಿದ್ದರೆ, ಈ ಸಂಖ್ಯೆಯು ಮುಂದಿನ ನಾಲ್ಕು ದಿನಗಳಲ್ಲಿ 57,991 ಕ್ಕೆ ಏರಿತು. ಈ ದಿನಗಳಲ್ಲಿ ಸಂಪೂರ್ಣ ಲಸಿಕೆ ಪಡೆದವರ ಸಂಖ್ಯೆ 4.03 ಲಕ್ಷದಿಂದ 5.67 ಲಕ್ಷಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು ಕಡಿಮೆಯಾದ ಕಾರಣ ಮತ್ತು ಲಾಕ್‌ಡೌನ್ ಮಾನದಂಡಗಳನ್ನು ಸರಾಗಗೊಳಿಸಿದ್ದರಿಂದ ಇತ್ತೀಚಿನ ವಾರಗಳಲ್ಲಿ ಕೇರಳದಲ್ಲಿ ವ್ಯಾಕ್ಸಿನೇಷನ್ ಕಡಿಮೆಯಾಗಿತ್ತು.

ಕೇರಳದ ಅರ್ಹ ಜನಸಂಖ್ಯೆಯ ಕನಿಷ್ಠ 50 ಪ್ರತಿಶತದಷ್ಟು ಜನರು ಆಗಸ್ಟ್ 1 ರ ವೇಳೆಗೆ ಮೊದಲ ಡೋಸ್ ಪಡೆದಿದ್ದಾರೆ. ಒಂದು ತಿಂಗಳೊಳಗೆ (ಸೆಪ್ಟೆಂಬರ್ 1 ರ ಹೊತ್ತಿಗೆ), ಈ ಅಂಕಿ ಅಂಶವು ಜನಸಂಖ್ಯೆಯ ಶೇಕಡಾ 74 ಕ್ಕೆ ಏರಿದೆ. ಆದರೆ ನವೆಂಬರ್‌ನಲ್ಲಿ ವ್ಯಾಕ್ಸಿನೇಷನ್‌ನ ವೇಗ ಕಡಿಮೆಯಾಗಿದೆ. ಅರ್ಹ ಜನಸಂಖ್ಯೆಯ 92 ಪ್ರತಿಶತದಷ್ಟು ಜನರು ನವೆಂಬರ್ 1 ರಂದು ಮೊದಲ ಡೋಸ್‌ ಪಡೆದಿದ್ದರೆ ಮೊದಲ ಡೋಸ್‌ನ ವ್ಯಾಪ್ತಿಯು ಡಿಸೆಂಬರ್ 1 ಕ್ಕೆ ಶೇ 96ಕ್ಕೆ ಏರಿತು.

ಇತ್ತೀಚೆಗೆ ರಾಜ್ಯ ಸರ್ಕಾರವು ಎಲ್ಲಾ ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಲಸಿಕೆ ಹಾಕುವಂತೆ ಸೂಚಿಸಿತು. ಲಸಿಕೆ ಹಾಕದೇ ಇರುವವರು ತಮ್ಮ ಸ್ವಂತ ವೆಚ್ಚದಲ್ಲಿ ಪ್ರತಿ ವಾರ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಆರೋಗ್ಯದ ಆಧಾರದ ಮೇಲೆ ಲಸಿಕೆಯಿಂದ ದೂರವಿರುವ ನೌಕರರು ಸರ್ಕಾರಿ ಸೇವೆಯಲ್ಲಿರುವ ವೈದ್ಯರಿಂದ ಸೂಕ್ತ ಪ್ರಮಾಣಪತ್ರಗಳನ್ನು ನೀಡಬೇಕು ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಲಸಿಕೆ ಹಾಕದ ಕೊವಿಡ್ ರೋಗಿಗಳಿಗೆ ಕೇರಳ ಸರ್ಕಾರ ಉಚಿತ ಚಿಕಿತ್ಸೆ ನೀಡುವುದಿಲ್ಲ: ಪಿಣರಾಯಿ ವಿಜಯನ್

Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’