AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ್ರೋಹ ಕಾಯ್ದೆಯಡಿ ಕೇಜ್ರಿವಾಲ್‌ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೆಹಲಿ ಎಲ್‌ಜಿಗೆ ಕಾಂಗ್ರೆಸ್‌ ನಾಯಕ ಮನವಿ: ವರದಿ

2015 ರಲ್ಲಿ ಎಎಪಿ ತನ್ನ ಮೊದಲ ಪೂರ್ಣಾವಧಿಯನ್ನು ಗೆದ್ದಾಗ - ಅದು 'ಪ್ರತಿಕ್ರಿಯೆ ಘಟಕ('feedback unit )' ಅಥವಾ FBU ಅನ್ನು ಸ್ಥಾಪಿಸಿತು. ಅದರ ಅಧಿಕಾರ ವ್ಯಾಪ್ತಿಯಲ್ಲಿರುವ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ಸಂಸ್ಥೆಗಳು ಮತ್ತು ಘಟಕಗಳ ಬಗ್ಗೆ ಸಂಬಂಧಿತ ಮಾಹಿತಿ...

ದೇಶದ್ರೋಹ ಕಾಯ್ದೆಯಡಿ ಕೇಜ್ರಿವಾಲ್‌ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೆಹಲಿ ಎಲ್‌ಜಿಗೆ ಕಾಂಗ್ರೆಸ್‌ ನಾಯಕ ಮನವಿ: ವರದಿ
ಅರವಿಂದ ಕೇಜ್ರಿವಾಲ್
ರಶ್ಮಿ ಕಲ್ಲಕಟ್ಟ
|

Updated on:Mar 01, 2023 | 6:14 PM

Share

2015ರಲ್ಲಿ ಎಎಪಿ ಸರ್ಕಾರದ ವಿಶೇಷ ಘಟಕವು ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ಬೇಹುಗಾರಿಕೆ ನಡೆಸಿದೆ ಎಂಬ ಆರೋಪದ ಮೇಲೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವಂತೆ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ (Sandeep Dikshit) ಬುಧವಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾಗೆ (Delhi Lieutenant Governor VK Saxena )ಮನವಿ ಮಾಡಿದ್ದಾರೆ. ದೇಶದ್ರೋಹ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೀಕ್ಷಿತ್ ಸಕ್ಸೇನಾಗೆ ಮನವಿ ಮಾಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ವಾರ ಕೇಂದ್ರ ಗೃಹ ಸಚಿವಾಲಯವು ಮನೀಶ್ ಸಿಸೋಡಿಯಾ ಅವರನ್ನು ಔಪಚಾರಿಕವಾಗಿ ತನಿಖೆ ಮಾಡಲು ಸಿಬಿಐಗೆ ಅನುಮತಿ ನೀಡಿತು. ಭಾನುವಾರ ಸಿಸೋಡಿಯಾ ಬಂಧನವಾಗಿದ್ದು ಅವರೀಗ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಎಎಪಿಯ ಪ್ರತಿಸ್ಪರ್ಧಿಗಳ ಬಗ್ಗೆ ಬೇಹುಗಾರಿಕೆ ಮಾಡಿ ಮಾಹಿತಿ ಸಂಗ್ರಹಿಸಲು ಸಿಸೋಡಿಯಾ ಆಪಾದಿತ ಪ್ರತಿಕ್ರಿಯೆ ಘಟಕದ ನೇತೃತ್ವ ವಹಿಸಿದ್ದರು ಎಂದು ಸಿಬಿಐ ಹೇಳಿಕೊಂಡಿದೆ.

ಏನಿದು ಫೀಡ್ ಬ್ಯಾಕ್ ಯೂನಿಟ್ ಬೇಹುಗಾರಿಕೆ ಪ್ರಕರಣ?.

2015 ರಲ್ಲಿ ಎಎಪಿ ತನ್ನ ಮೊದಲ ಪೂರ್ಣಾವಧಿಯನ್ನು ಗೆದ್ದಾಗ – ಅದು ‘ಪ್ರತಿಕ್ರಿಯೆ ಘಟಕ(‘feedback unit )’ ಅಥವಾ FBU ಅನ್ನು ಸ್ಥಾಪಿಸಿತು. ಅದರ ಅಧಿಕಾರ ವ್ಯಾಪ್ತಿಯಲ್ಲಿರುವ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ಸಂಸ್ಥೆಗಳು ಮತ್ತು ಘಟಕಗಳ ಬಗ್ಗೆ ಸಂಬಂಧಿತ ಮಾಹಿತಿ ಮತ್ತು ಕ್ರಮಬದ್ಧ ಪ್ರತಿಕ್ರಿಯೆಯನ್ನು ಸಂಗ್ರಹಿಸುವುದು ಮತ್ತು ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡುವುದು ಇದರ ಉದ್ದೇಶ ಎಂದು ಹೇಳಲಾಗಿತ್ತು.

ಆಗಿನ ಲೆಫ್ಟಿನೆಂಟ್ ಜನರಲ್ ನಜೀಬ್ ಜಂಗ್ ಅವರಿಂದ ಯಾವುದೇ ಅನುಮತಿಯನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಸಿಬಿಐ ಹೇಳಿಕೊಂಡಿದೆ.

ಎಫ್‌ಬಿಯು ಮುಂದಿನ ವರ್ಷ ಫೆಬ್ರವರಿಯಲ್ಲಿ ₹ 1 ಕೋಟಿಯ ತಾತ್ಕಾಲಿಕ ಬಜೆಟ್‌ನೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು, ಸಿಬಿಐ ಪ್ರಕಾರ, ಎಂಟು ತಿಂಗಳಲ್ಲಿ 700ಕ್ಕಿಂತಲೂ ಪ್ರಕರಣಗಳನ್ನು ತನಿಖೆ ಮಾಡಿದೆ ಎಂದು ಹೇಳಿಕೊಂಡಿದೆ. ಇವುಗಳಲ್ಲಿ 40 ಪ್ರತಿಶತ ಬೇಹುಗಾರಿಕೆಗೆ ಸಂಬಂಧಿಸಿದೆ.

ದೆಹಲಿ ಸರ್ಕಾರದ ಹಿತಾಸಕ್ತಿಯಲ್ಲಿ ಅಲ್ಲ ಆದರೆ ಎಎಪಿ ಮತ್ತು ಸಿಸೋಡಿಯಾ ಅವರ ಖಾಸಗಿ ಹಿತಾಸಕ್ತಿಯಲ್ಲಿ ಎಫ್‌ಬಿಯು ‘ಗುಪ್ತ ಉದ್ದೇಶವನ್ನು ಹೊಂದಿದೆ ಎಂದು ಸಿಬಿಐ ಹೇಳಿದೆ.

ಯಾವುದೇ ಶಾಸಕಾಂಗ, ನ್ಯಾಯಾಂಗ ಅಥವಾ ಕಾರ್ಯನಿರ್ವಾಹಕ ಮೇಲ್ವಿಚಾರಣೆಯಿಲ್ಲದೆ… ಸ್ನೂಪಿಂಗ್ ಮತ್ತು ಅತಿಕ್ರಮದ ಮಿತಿಮೀರಿದ ಅಧಿಕಾರಗಳೊಂದಿಗೆ ಬಾಹ್ಯ ಮತ್ತು ಸಮಾನಾಂತರ ರಹಸ್ಯ ಸಂಸ್ಥೆಯನ್ನು ಸ್ಥಾಪಿಸಲು ಉತ್ತಮವಾದ ಯತ್ನವನ್ನು ತೋರುತ್ತಿದೆ” ಎಂದು ದೆಹಲಿ ಎಲ್‌ಜಿ ಸಕ್ಸೇನಾ ಜನವರಿ 12 ರ ಟಿಪ್ಪಣಿಯಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.

ಎಎಪಿ ಹೇಳಿದ್ದೇನು?

ಎಎಪಿ ‘ರಾಜಕೀಯ ಪ್ರೇರಿತ’ ಆರೋಪಗಳನ್ನು ತಳ್ಳಿಹಾಕಿದೆ. ಇಲ್ಲಿಯವರೆಗೆ, ಸಿಬಿಐ, ಇಡಿ ಮತ್ತು ದೆಹಲಿ ಪೊಲೀಸರು ನಮ್ಮ ವಿರುದ್ಧ 163 ಪ್ರಕರಣಗಳನ್ನು ದಾಖಲಿಸಿದ್ದಾರೆ … ಬಿಜೆಪಿಗೆ ಒಂದೇ ಒಂದು ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ … ಈ ಪೈಕಿ 134 ಪ್ರಕರಣಗಳನ್ನು ವಜಾಗೊಳಿಸಲಾಗಿದೆ … ಉಳಿದವುಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರಕ್ಕೆ ಪುರಾವೆ ಒದಗಿಸಲು ಸಾಧ್ಯವಾಗಲಿಲ್ಲ ಎಂದು ಪಕ್ಷ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Wed, 1 March 23

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ