ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಭಾರತೀಯ ಔಷಧ ನಿಯಂತ್ರಣಾ ಮಂಡಳಿ ಎರಡು ಲಸಿಕೆಗಳಿಗೆ ಅನುಮತಿ ನೀಡಿದೆ. ಸೆರಮ್ ಸಂಸ್ಥೆಯ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಒಪ್ಪಿಗೆ ಸಿಕ್ಕಿದೆ. ಆದರೆ, ಈ ವಿಚಾರದಲ್ಲೀಗ ರಾಜಕೀಯ ಜಗಳಗಳು ಹಾಗೂ ಹಲವು ಗೊಂದಲಗಳು ತಳುಕು ಹಾಕಿಕೊಂಡು ಹೊಸ ಚರ್ಚೆಗೆ ನಾಂದಿ ಹಾಡಿದೆ.
ಸೆರಮ್ ಸಂಸ್ಥೆಯ ಕೊವಿಶೀಲ್ಡ್ ಲಸಿಕೆ 3 ಹಂತಗಳ ಪರೀಕ್ಷೆಯನ್ನು ಎದುರಿಸಿ ನಂತರ ಅನುಮತಿ ಗಿಟ್ಟಿಸಿಕೊಂಡಿದೆ. ಆದರೆ, ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಇನ್ನೂ 3ನೇ ಹಂತದ ಪರೀಕ್ಷೆ ಪೂರೈಸಿಲ್ಲ. ಆದ್ದರಿಂದ ಪೂರ್ಣ ಪರೀಕ್ಷೆಗೂ ಮುನ್ನ ಆತುರದಲ್ಲಿ ಬಳಕೆಗೆ ಅಸ್ತು ಎಂದಿರುವುದು ಏಕೆ? ಅದರಿಂದ ತೊಂದರೆ ಆದರೆ ಯಾರು ಹೊಣೆ? ಎನ್ನುವುದು ಹಲವರ ಪ್ರಶ್ನೆ.
ಮುಖ್ಯವಾಗಿ ಈ ವಿಚಾರವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ನಿನ್ನೆಯಿಂದಲೂ ಒಂದರ ಮೇಲೊಂದರಂತೆ ಟ್ವೀಟ್ ಮಾಡುತ್ತಿದ್ದಾರೆ. ಕೊವ್ಯಾಕ್ಸಿನ್ ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆ ಎತ್ತಿರುವ ತರೂರ್ ಟ್ವಿಟರ್ನಲ್ಲಿ ಕೇಂದ್ರ ಆರೋಗ್ಯ ಸಚಿವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಮೂರನೇ ಹಂತದ ಪರೀಕ್ಷೆ ಮುಗಿಯುವ ಮುನ್ನವೇ ಅನುಮತಿ ನೀಡಿರುವುದು ಎಷ್ಟು ಸಮಂಜಸ? ಈ ನಿರ್ಧಾರ ಆತುರದ್ದಾಗಿದ್ದು ಅಪಾಯಕ್ಕೆ ಆಹ್ವಾನ ನೀಡುವ ಸಾಧ್ಯತೆ ಇದೆ. ಆದರೆ, ಆರೋಗ್ಯ ಸಚಿವರು ಕೊವ್ಯಾಕ್ಸಿನ್ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನಿತರ ಲಸಿಕೆಗಳಂತೆಯೇ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ. ಹೀಗೆ ‘ಸಾಧ್ಯತೆ’ಯ ಮೇಲೆ ವಿಶ್ವಾಸವಿಡುವುದಕ್ಕಿಂತ 3 ಹಂತದ ಪರೀಕ್ಷೆ ಮುಗಿದ ಮೇಲೆ ಅಧಿಕೃತವಾಗಿ ಹೇಳುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
. Very pleased to hear there were no serious adverse consequences, @drharshvardhan. But your saying “it’s more likely to work” & “it’s likely to have similar protective efficacy reported for others” is not reassuring. “Likely” can only be “certain“ after Phase3 clinical trials.
— Shashi Tharoor (@ShashiTharoor) January 4, 2021
. First: I have never questioned the valour of our soldiers. Second: I would be happy and proud if more Indian vaccines are approved — but only after a full 3-phase trial confirms they are safe & effective. Short-circuiting the process is unprecedented, inadvisable &risks lives.
— Shashi Tharoor (@ShashiTharoor) January 3, 2021
ಈ ಕುರಿತು ಧ್ವನಿ ಎತ್ತಿರುವ ಕಾಂಗ್ರೆಸ್ ಪಕ್ಷದ ಜೈರಾಮ್ ರಮೆಶ್ ಸಹ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಕೊವ್ಯಾಕ್ಸಿನ್ ಲಸಿಕೆಗೆ ಅನುಮತಿ ನೀಡಿರುವ ಕುರಿತು ಆರೋಗ್ಯ ಸಚಿವರು ವಿವರಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
Bharat Biotech is a first-rate enterprise, but it is puzzling that internationally-accepted protocols relating to phase 3 trials are being modified for Covaxin. Health Minister @drharshvardhan should clarify. pic.twitter.com/5HAWZtmW9s
— Jairam Ramesh (@Jairam_Ramesh) January 3, 2021
ಬಿಜೆಪಿ ಲಸಿಕೆ ಮೇಲಿಲ್ಲ ನಂಬಿಕೆ ಇದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಅಖಿಲೇಶ್ ಯಾದವ್ ಈ ಲಸಿಕೆಗಳನ್ನು ಬಿಜೆಪಿ ಲಸಿಕೆ ಎಂದು ಕರೆದಿದ್ದು, ತನಗೆ ಲಸಿಕೆ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ. ಲಸಿಕೆಗೂ ರಾಜಕೀಯ ಬೆರೆಸಿರುವುದಕ್ಕೆ ಅಖಿಲೇಶ್ ಯಾದವ್ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ನ ರಶೀದ್ ಅಲ್ವಿ, ಅಖಿಲೇಶ್ ಹೇಳಿರುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
ಸಿಬಿಐ, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳನ್ನು ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಸರ್ಕಾರ ದುರ್ಬಳಕೆ ಮಾಡುತ್ತಿದೆ. ಅದನ್ನು ಗಮನಿಸಿದರೆ, ಅಖಿಲೇಶ್ ಯಾದವ್ರ ಕೊರೊನಾ ಲಸಿಕೆ ಕುರಿತ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎನಿಸುತ್ತದೆ ಎಂದು ರಶೀದ್ ಅಲ್ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಪಷ್ಟನೆ ಕೊಟ್ಟ ಹರ್ಷವರ್ಧನ್ ಈ ಎಲ್ಲಾ ವಿರೋಧಗಳಿಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೊವಿಶೀಲ್ಡ್ಗೆ ನೀಡಿರುವ ಅನುಮತಿಗೂ ಕೊವ್ಯಾಕ್ಸಿನ್ಗೆ ನೀಡಿರುವ ಅನುಮತಿಗೂ ವ್ಯತ್ಯಾಸವಿದೆ. ಕೊವ್ಯಾಕ್ಸಿನ್ ಲಸಿಕೆ ಪಡೆದವರ ಮೇಲೆ ಹೆಚ್ಚಿನ ನಿಗಾ ವಹಿಸಲು ತಿಳಿಸಲಾಗಿದೆ. ಇದು ಪರೀಕ್ಷಾ ಮಾದರಿಯಲ್ಲೇ ಇರುತ್ತದೆ. ಭಾರತ ಲಸಿಕೆ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಸ್ವಾಗತಿಸಿದೆ. ಆದರೆ, ಪ್ರತಿಪಕ್ಷದವರಿಗೆ ಇದನ್ನು ಒಪ್ಪಿಕೊಳ್ಳಲು ಕಷ್ಟವಾಗಿರುವುದು ವಿಪರ್ಯಾಸ ಎಂದು ಕಾಲೆಳೆದಿದ್ದಾರೆ.
For those spreading rumours let it be known that EUA for COVAXIN is differently conditional – in clinical trial mode
EUA for COVAXIN is different from COVISHIELD because its use will be in clinical trial mode.All COVAXIN recipients to be tracked,monitored as if they’re in trial pic.twitter.com/1N8LGnhC3w
— Dr Harsh Vardhan (@drharshvardhan) January 3, 2021
Whole world is cheering India for granting emergency approval to @SerumInstIndia , @BharatBiotech vaccines ensuring safety, efficacy & immunogenicity showcasing our scientific capability & innovation ecosystem. India celebrates the win but Opposition fails to applaud our prowess.
— Dr Harsh Vardhan (@drharshvardhan) January 3, 2021
Kudos to Hon’ble PM Sh @narendramodi ji for re-establishing India as the vaccine capital of the world !Anti-national comments & cynicism of the Opposition notwithstanding, @WHO has welcomed the Indian approval of both #COVISHIELD & #COVAXIN ! Roll up your sleeves everyone ! pic.twitter.com/UqLPgWrwDi
— Dr Harsh Vardhan (@drharshvardhan) January 3, 2021
ಕೊರೊನಾ ಲಸಿಕೆಯನ್ನು ದೇಶಾದ್ಯಂತ ಹಂಚುತ್ತೇವೆ: ಪ್ರಧಾನಿ ನರೇಂದ್ರ ಮೋದಿ ಅಭಯ ಹಸ್ತ