AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹರಾಮ್’ ಅಂಶಗಳಿದ್ದರೂ ತುರ್ತು ಪರಿಸ್ಥಿತಿಯಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳಬಹುದು: ಜಮಾತ್​-ಎ-ಇಸ್ಲಾಮಿ ಸ್ಪಷ್ಟನೆ

ಕೊವಿಡ್-19 ವಿರುದ್ಧದ ಲಸಿಕೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹರಾಮ್ ಆದ ಪದಾರ್ಥಗಳಿವೆ, ಹಾಗಾಗಿ ಲಸಿಕೆ ಪಡೆಯಬಾರದು ಎಂದು ಕೆಲವು ಮುಸ್ಲಿಂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದರು.

‘ಹರಾಮ್’ ಅಂಶಗಳಿದ್ದರೂ ತುರ್ತು ಪರಿಸ್ಥಿತಿಯಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳಬಹುದು: ಜಮಾತ್​-ಎ-ಇಸ್ಲಾಮಿ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Apr 06, 2022 | 11:05 PM

Share

ದೆಹಲಿ: ಕೊರೊನಾ ಲಸಿಕೆಯಲ್ಲಿ ಹರಾಮ್ (ಧರ್ಮ ಬಾಹಿರವಾದ) ಅಂಶಗಳಿದ್ದರೂ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ಜಮಾತ್-ಎ-ಇಸ್ಲಾಮಿ (ಹಿಂದ್) ಸಂಘಟನೆ ಶನಿವಾರ ಸ್ಪಷ್ಟನೆ ನೀಡಿದೆ.

ಕೊವಿಡ್-19 ವಿರುದ್ಧದ ಲಸಿಕೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹರಾಮ್ ಆದ ಪದಾರ್ಥಗಳಿವೆ, ಹಾಗಾಗಿ ಲಸಿಕೆ ಪಡೆಯಬಾರದು ಎಂದು ಕೆಲವು ಮುಸ್ಲಿಂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಮಾತ್-ಎ-ಇಸ್ಲಾಮಿ (ಹಿಂದ್), ಹರಾಮಿ ಅಂಶಗಳಿರದ ಲಸಿಕೆ ಅಲಭ್ಯವಾದರೆ ಯಾವುದೇ ಲಸಿಕೆ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.

ಜಮಾತ್-ಎ-ಇಸ್ಲಾಮಿ, ಶರಯಾ ಕೌನ್ಸಿಲ್ ಕಾರ್ಯದರ್ಶಿ ಡಾ. ರಾಝಿ-ಉಲ್-ಇಸ್ಲಾಂ ನದ್ವಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹರಾಮಿ ಅಂಶಗಳು ಮತ್ತೊಂದು ವಸ್ತುವಿನಲ್ಲಿ ಸಂಪೂರ್ಣ ಭಿನ್ನವಾಗಿ ಸೇರಿಕೊಂಡರೆ. ಹರಾಮಿ ಅಂಶಗಳ ಗುಣಲಕ್ಷಣಗಳು ಅದರಲ್ಲಿ ಇಲ್ಲದಿದ್ದರೆ ಅಂಥಾ ವಸ್ತುವನ್ನು ಬಳಸಬಹುದು. ಈ ನೀತಿಯ ಅನ್ವಯ, ಕೊರೊನಾ ಲಸಿಕೆ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಒಂದುವೇಳೆ ಈ ನಿಯಮವನ್ನು ತಿರಸ್ಕರಿಸುವವರಿದ್ದರೆ ಅಂಥವರು ಆಪತ್ಕಾಲದ ಅಥವಾ ತುರ್ತು ಸಂದರ್ಭದ ಕಾರಣದಿಂದ, ಹರಾಮಿ ಅಂಶಗಳಿದ್ದರೂ ಲಸಿಕೆ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಲಸಿಕೆಯಲ್ಲಿ ಬಳಸಿಕೊಂಡಿರುವ ವಸ್ತುಗಳ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ, ಲಸಿಕೆಯ ಬಗ್ಗೆ ಸದ್ಯ ಗೊಂದಲ ಬೇಡ. ಮುಂದೆ, ಲಸಿಕೆಗೆ ಬಳಸಿರುವ ಅಂಶಗಳ ಬಗ್ಗೆ ವಿವರ ಸಿಕ್ಕಿದರೆ ನಂತರ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಡಾ. ರಾಝಿ-ಉಲ್-ಇಸ್ಲಾಂ ನದ್ವಿ ಮಾಹಿತಿ ನೀಡಿದ್ದಾರೆ.

ಭಾರತ, ಇಂಡೊನೇಷ್ಯಾ ಹಾಗೂ ಯುಎಇ ದೇಶಗಳಲ್ಲಿ ಕೆಲವು ಮುಸ್ಲಿಂ ಸಂಘಟನೆಯ ವಿದ್ವಾಂಸರು, ಕೊರೊನಾ ಲಸಿಕೆಯಲ್ಲಿ ಹಂದಿ ಜೆಲೆಟಿನ್ ಇರುವುದರಿಂದ ಅವುಗಳನ್ನು ಸ್ವೀಕರಿಸಬಾರದು ಎಂದು ಹೇಳಿದ್ದರು. ಭಾರತದ ಸುನ್ನಿ ಜಮಿಯಾತ್-ಉಲ್-ಉಲೆಮಾ ಕೌನ್ಸಿಲ್ ಮತ್ತು ರಾಝಾ ಅಕಾಡೆಮಿ ಕೊವಿಡ್-19 ವಿರುದ್ಧದ ಲಸಿಕೆಯನ್ನು ಹರಾಮ್ ಎಂದು ಹೇಳಿತ್ತು. ಮುಸ್ಲಿಂ ಸಮುದಾಯದ ಜನರು ಲಸಿಕೆ ಪಡೆಯದಂತೆಯೂ ಸೂಚಿಸಿತ್ತು.

Explainer | ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ಸಿಕ್ಕಿದ್ದಾಯ್ತು; ಮುಂದೇನು?

Published On - 7:22 pm, Sun, 3 January 21

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?