AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Corona Vaccine: ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಕೊರೊನಾದ ವಿರುದ್ಧ ಪರಿಣಾಮಕಾರಿಯೇ?

ಭಾರತದಲ್ಲಿ ಸದ್ಯ ಬಳಕೆಗೆ ಅನುಮತಿ ದೊರಕಿರುವ ಅಥವಾ ಬಳಕೆ ಆರಂಭವಾಗಿರುವ ಲಸಿಕೆಗಳು ಕೊವಿಶೀಲ್ಡ್, ಕೊವ್ಯಾಕ್ಸಿನ್ ಹಾಗೂ ರಷ್ಯಾದ ಸ್ಪುಟ್ನಿಕ್ ವಿ ಆಗಿದೆ. ಇದೀಗ ಕೊವಿಶೀಲ್ಡ್​ನ ಮೊದಲ ಡೋಸ್ ಮಾತ್ರ ಎಷ್ಟು ಪರಿಣಾಮಕಾರಿ ಎಂಬ ಅಧ್ಯಯನಗಳು ಆಗಲಿದೆ.

Corona Vaccine: ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಕೊರೊನಾದ ವಿರುದ್ಧ ಪರಿಣಾಮಕಾರಿಯೇ?
ಕೋವಿಶೀಲ್ಡ್ ಲಸಿಕೆ
Follow us
TV9 Web
| Updated By: ganapathi bhat

Updated on:Aug 14, 2021 | 1:01 PM

ದೆಹಲಿ: ಆಕ್ಸ್​ಫರ್ಡ್ ಆಸ್ಟ್ರಾಜೆನೆಕಾದ ಅಭಿವೃದ್ಧಿಪಡಿಸಿರುವ ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಯ ಮೇಲೆ ಹೊಸದೊಂದು ಅಧ್ಯಯನ ನಡೆಸಲು ಯೋಜಿಸಲಾಗಿದೆ. ಕೊವಿಶೀಲ್ಡ್ ಲಸಿಕೆಯ ಮೊದಲ/ ಸಿಂಗಲ್ ಡೋಸ್​ನಿಂದ ಕೊರೊನಾ ವೈರಸ್ ವಿರುದ್ಧ ಸೂಕ್ತ ರಕ್ಷಣೆ ದೊರೆಯಲಿದೆಯೇ ಎಂದು ಈ ಅಧ್ಯಯನದಲ್ಲಿ ತಿಳಿಯಲಾಗುತ್ತದೆ. ಈ ಬಗ್ಗೆ ಸರ್ಕಾರಿ ಅಧಿಕಾರಿಯೊಬ್ಬರು ಅಧಿಕೃತ ಮಾಹಿತಿ ನೀಡಿದ್ದಾರೆ.

ಕೊರೊನಾ ಲಸಿಕೆ ಕೊವಿಶೀಲ್ಡ್​ನ ಮೊದಲ ಡೋಸ್​ನ ಪರಿಣಾಮಕಾರಿತ್ವ ಪರಿಶೀಲನೆ ಇನ್ನೊಂದು ತಿಂಗಳ ಒಳಗಾಗಿ ಆರಂಭವಾಗಲಿದೆ. ಲಸಿಕೆ ನೀಡಿಕೆಯ ಬಗ್ಗೆ ಅಧ್ಯಯನ ಸಲುವಾಗಿ ಈ ವಿಚಾರ ಪರಿಶೀಲನೆಯಾಗಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ನೇಷನಲ್ ಎಥಿಕ್ಸ್ ಕಮಿಟಿಯಿಂದ ಅನುಮತಿಗಾಗಿ ಕಾಯುತ್ತಿದ್ದೇವೆ. ಬಳಿಕ, ಕೊವಿಶೀಲ್ಡ್​ನ ಮೊದಲ ಡೋಸ್ ಹಾಗೂ ಎರಡು ಡೋಸ್ ಬೇರೆ ಬೇರೆ ಲಸಿಕೆಗಳ ಮಿಶ್ರಣದ ಬಗ್ಗೆ ಪರಿಶೀಲನೆ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದಲ್ಲಿ ಸದ್ಯ ಬಳಕೆಗೆ ಅನುಮತಿ ದೊರಕಿರುವ ಅಥವಾ ಬಳಕೆ ಆರಂಭವಾಗಿರುವ ಲಸಿಕೆಗಳು ಕೊವಿಶೀಲ್ಡ್, ಕೊವ್ಯಾಕ್ಸಿನ್ ಹಾಗೂ ರಷ್ಯಾದ ಸ್ಪುಟ್ನಿಕ್ ವಿ ಆಗಿದೆ. ಇದೀಗ ಕೊವಿಶೀಲ್ಡ್​ನ ಮೊದಲ ಡೋಸ್ ಮಾತ್ರ ಎಷ್ಟು ಪರಿಣಾಮಕಾರಿ ಎಂಬ ಅಧ್ಯಯನಗಳು ಆಗಲಿದೆ.

ಕೊವಿಡ್ ಲಸಿಕೆಗಳ ಕೊರತೆಯಿಂದ ಲಸಿಕೆ ವಿತರಣೆ ನಿಧಾನಗೊಂಡಿರುವ ಹೊತ್ತಲ್ಲೇ ಸರ್ಕಾರದ ಹೊಸ ಲಸಿಕೆ  ಕಾರ್ಯತಂತ್ರದ ಪ್ರಕಾರ ಲಸಿಕೆಗಳನ್ನು ಬೆರೆಸುವ ಮತ್ತು ಒಂದು ಡೋಸ್ ಕೊವಿಶೀಲ್ಡ್ ಪರಿಣಾಮಕಾರಿತ್ವ ಪರೀಕ್ಷೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಎರಡು ವಿಭಿನ್ನ ಲಸಿಕೆಗಳನ್ನು ಬೆರೆಸುವ ಅಧ್ಯಯನವು ಒಂದು ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಎರಡರಿಂದ ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿತ್ತು.

ಹೊಸ ಅಪ್ಲಿಕೇಶನ್‌ನಲ್ಲಿ ದಾಖಲಿಸಲಾದ ಲಸಿಕೆ ಡೇಟಾವನ್ನು ಕೇಂದ್ರವು ನಿರ್ಣಯಿಸುತ್ತದೆ, ಇದು ವ್ಯಾಕ್ಸಿನೇಷನ್ ನಂತರ ಪ್ರತಿಕೂಲ ಘಟನೆಗಳನ್ನು ವರದಿ ಮಾಡಲು ಸುಲಭವಾಗುತ್ತದೆ. ಕೊವಿನ್‌ಗೆ ಸಂಪರ್ಕ ಕಲ್ಪಿಸಲಿರುವ ಈ ಪ್ಲಾಟ್‌ಫಾರ್ಮ್, ಲಸಿಕೆ ಪಡೆದ ನಂತರ ತಮ್ಮ ಅನುಭವಗಳನ್ನು ದಾಖಲಿಸಲು ಸಾಧ್ಯವಾಗುತ್ತದೆ. ಇದಾದ ನಂತರ ಜಿಲ್ಲೆಯ ಅಧಿಕಾರಿಯೊಬ್ಬರು ಪ್ರಕರಣಗಳನ್ನು ಫಾಲೋ ಮಾಡಲಿದ್ದಾರೆ.

ಇತ್ತೀಚೆಗೆ 20 ಜನರಿಗೆ ಆಕಸ್ಮಿಕವಾಗಿ ಎರಡು ವಿಭಿನ್ನ ಲಸಿಕೆಗಳನ್ನು ನೀಡಿದ ಪ್ರಕರಣದ ನಂತರ, ಕೇಂದ್ರವು ಕಳವಳಕ್ಕೆ ಯಾವುದೇ ಕಾರಣವನ್ನು ತಳ್ಳಿಹಾಕಿತ್ತು. ಲಸಿಕೆಗಳನ್ನು ಬೆರೆಸುವುದು ಪರಿಣಾಮಕಾರಿಯಾಗಿದೆಯೇ ಎಂದು ಪರಿಶೀಲಿಸಲು ಆಳವಾದ ಸಂಶೋಧನೆ ಅಗತ್ಯ ಎಂದು ನೀತಿ ಆಯೋಗದ ಸದಸ್ಯ ಮತ್ತು ಭಾರತದ ಕೊವಿಡ್ ಕಾರ್ಯಪಡೆಯ ಮುಖ್ಯಸ್ಥ ವಿ.ಕೆ.ಪೌಲ್ ಹೇಳಿದ್ದರು.

ಇದನ್ನೂ ಓದಿ: Corona Vaccine: ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ಲಸಿಕೆ; ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಚಾಲನೆ

ಕೊರೊನಾ ಲಸಿಕೆ ಖರೀದಿಗಾಗಿ ಜಾಗತಿಕ ಟೆಂಡರ್ ಕೈಬಿಟ್ಟ ಕರ್ನಾಟಕ ಸರ್ಕಾರ: ಮುಂದೇನು?

Published On - 8:54 pm, Mon, 31 May 21

ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್