AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲೂ ಚಳವಳಿ ಮುಂದುವರೆಸಲು ಮನೆ ನಿರ್ಮಿಸುತ್ತಿರುವ ದೆಹಲಿ ಚಲೋ ರೈತರು

ಕುಂಡ್ಲಿ ಪ್ರದೇಶದಲ್ಲಿ ನಿರ್ಮಿಸಲಾದ ಮನೆಗಳ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ದೂರು ನೀಡಿದ್ದು, ಎರಡು FIR ಗಳು ನೋಂದಣಿಯಾಗಿವೆ. ಈ ಮನೆಗಳು ಅನಧಿಕೃತ ಎಂದು ಪೊಲೀಸರು ಅಧಿಕೃತವಾಗಿ ತಿಳಿಸಿದ್ದಾರೆ.

ಬೇಸಿಗೆಯಲ್ಲೂ ಚಳವಳಿ ಮುಂದುವರೆಸಲು ಮನೆ ನಿರ್ಮಿಸುತ್ತಿರುವ ದೆಹಲಿ ಚಲೋ ರೈತರು
ರೈತರು ನಿರ್ಮಿಸಿದ ಮನೆಗಳು (ಚಿತ್ರಕೃಪೆ: ಗಜೇಂದ್ರ ಯಾದವ್, ಇಂಡಿಯನ್ ಎಕ್ಸ್​ಪ್ರೆಸ್)
guruganesh bhat
| Edited By: |

Updated on: Mar 14, 2021 | 11:37 AM

Share

ದೆಹಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯನ್ನು ಮೂರು ತಿಂಗಳಿಗೂ ಹೆಚ್ಚು ಕಾಲ ಮುಂದುವರೆಸಿರುವ ರೈತ ನಾಯಕರು ಇದೀಗ ತಮ್ಮ ಹೋರಾಟವನ್ನು ಇನ್ನಷ್ಟು ಬಿಗಿಗೊಳಿಸುವ ಸೂಚನೆ ನೀಡಿದ್ದಾರೆ. ಹರ್ಯಾಣ-ದೆಹಲಿಯ ಗಡಿಭಾಗಗಳಾದ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಶಾಶ್ವತ ಮನೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್  ವರದಿ ಮಾಡಿದೆ. ರೈತರು ಈಗಾಗಲೇ ಮನೆ ನಿರ್ಮಿಸಿ ಗೃಹ ಪ್ರವೇಶವನ್ನು ಮಾಡಿಬಿಟ್ಟಿದ್ದಾರೆ. ಮುಂದೆ ಬರಲಿರುವ ಬೇಸಿಗೆಯಲ್ಲಿ ಚಳವಳಿ ನಡೆಸುವ ಉದ್ದೇಶದೊಂದಿಗೆ ಈ ಮನೆಗಳನ್ನು ನಿರ್ಮಿಸುತ್ತಿದ್ದೇವೆ ಎಂದು ರೈತ ನಾಯಕರು ವಿವರಿಸುತ್ತಾರೆ. ಮಾರ್ಚ್ 12ರಂದು ಮೊದಲ ಮನೆಯ ಗೃಹಪ್ರವೇಶ ಶಾಸ್ತ್ರವನ್ನು ಮಾಡಿದ್ದಾಗಿ ಹೇಳುತ್ತಾರೆ. 10ರಿಂದ 12 ರೈತರು ಒಟ್ಟುಗೂಡಿ 2 ದಿನಗಳಲ್ಲಿ ಈ ಮನೆಗಳನ್ನು ನಿರ್ಮಿಸಿದ್ದಾರೆ.

ರೈತರು ಸಿಂಘು ಟಿಕ್ರಿ ಪ್ರದೇಶಗಳ ಹರಿಯಾಣ ಭಾಗದಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ. ಹೀಗಾಗಿ, ರೈತರು ಹೀಗೆ ಮನೆ ಕಟ್ಟಿದರೂ ದೆಹಲಿ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಮನೆ ಕಟ್ಟಲು ಅಗತ್ಯವಿರುವ ಇಟ್ಟಿಗೆ, ಸಿಮೆಂಟುಗಳನ್ನು ಟಿಕ್ರಿ ಗಡಿ ಸಮೀಪದ ಅಂಗಡಿಗಳಿಂದಲೇ ಕೊಂಡಿರುವ ರೈತರು, ಮನೆಯ ಮೇಲ್ಛಾವಣಿ ರೂಪಿಸಲು ಬಿದಿರುಗಳನ್ನು ಬಳಸಿದ್ದಾರೆ. ಈ ಬಿದಿರುಗಳು ಸಹ ಕೇವಲ 200 ಮೀಟರ್ ದೂರದ ಅಂಗಡಿಯಲ್ಲೇ ದೊರೆತಿದೆ. ಹೀಗಾಗಿ ಸಾಗಾಟದ ಯಾವುದೇ ತೊಂದರೆಯಿಲ್ಲದೇ ಮನೆ ಕಟ್ಟಲು ಅಗತ್ಯವಿದ್ದ ವಸ್ತುಗಳು ಅವರಿಗೆ ದೊರೆತಿದೆ. ಮೇಲ್ಛಾವಣಿಗೆ ಬಿದಿರಿನ ಮೇಲಿಂದ ಹುಲ್ಲಿನ ಹೊದಿಕೆ ಹೊದೆಸಿದ್ದು, ಇವುಗಳು ಪಂಜಾಬ್, ಹರ್ಯಾಣಗಳ ಸ್ವಗ್ರಾಮಗಳಿಂದ ಪೂರೈಕೆಯಾಗಿವೆ.

ಈ ಸರಳ ನಿವಾಸಗಳು ಎರಡು ಕಿಟಿಕಿಗಳನ್ನು ಹೊಂದಿವೆ. ಬೇಸಿಗೆಯಲ್ಲಿನ ತಾಪಮಾನವನ್ನು ತಡೆದುಕೊಳ್ಳಲು ಅನುಕೂಲವಾಗುವ ಉದ್ದೇಶದೊಂದಿಗೆ ಇಂತರ ಸ್ವರೂಪದ ಮನೆಗಳನ್ನು ನಿರ್ಮಿಸಲಾಗಿದೆ. ಹೊರಗಿನಿಂದ ಗಾಳಿ ಬರುವಂತೆ ಗೋಡೆಗಳ ಮಧ್ಯೆ ಖಾಲಿ ಜಾಗ ಬಿಡಲಾಗಿದೆ. ಬೇಸಿಗೆಯ ಧಗೆಯಿಂದ ಪಾರಾಗಲು ಈ ಉಪಾಯ ಕಂಡುಕೊಂಡಿದ್ದಾರೆ ರೈತ ಹೋರಾಟಗಾರರು.

ಇನ್ನು ಕೆಲವು ರೈತರು ಮನೆ ಕಟ್ಟಲು ಅಗತ್ಯವಾದ ಇಟ್ಟಿಗೆ ಮತ್ತು ಮಣ್ಣುಗಳನ್ನು ಸ್ವಗ್ರಾಮದಿಂದಲೇ ತರಿಸಿಕೊಂಡಿದ್ದಾರೆ. ಲಾರಿಗಳಲ್ಲಿ ಬಂದಿಳಿದಿರುವ ಇಟ್ಟಿಗೆ, ಮಣ್ಣು ಬಳಸಿ ನಿರ್ಮಿಸಿದ ಮನೆಗಳು ಸುಮಾರು 20 ಜನರು ಕುಳಿತುಕೊಳ್ಳುವಷ್ಟು ವಿಶಾಲವಾಗಿವೆ. ಆದರೆ ಈ ಎಲ್ಲಾ ಮನೆಗಳು ಹರಿಯಾಣ ಭಾಗದಲ್ಲಿರುವ ಕಾರಣ ದೆಹಲಿ ಪೊಲೀಸರು ಕೈಕಟ್ಟಿ ಕೂರುವಂತಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ  ಹರ್ಯಾಣ ಸ್ಥಳೀಯ ಪೊಲೀಸರು, ‘ರೈತರ ಬಳಿ ಮನೆಗಳನ್ನು ನಿರ್ಮಿಸದಂತೆ ಮನವಿ ಮಾಡಿದ್ದೇವೆ. ರೈತರೂ ಮನೆಗಳನ್ನು ನಿರ್ಮಿಸದಿರಲು ಒಪ್ಪಿದ್ದಾರೆ. ಆದರೆ, ಈಗಾಗಲೇ ನಿರ್ಮಾಣವಾದ ಮನೆಗಳನ್ನು ಮೇಲಧಿಕಾರಿಗಳ ಆದೇಶ ಬರದೇ ನಾವೇನೂ ಮಾಡುವಂತಿಲ್ಲ’ ಎಂದಿದ್ದಾರೆ.

ಆದರೆ ಕುಂಡ್ಲಿ ಪ್ರದೇಶದಲ್ಲಿ ನಿರ್ಮಿಸಲಾದ ಮನೆಗಳ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ದೂರು ನೀಡಿದ್ದು, ಎರಡು FIR ಗಳು ನೋಂದಣಿಯಾಗಿವೆ. ಈ ಮನೆಗಳು ಅನಧಿಕೃತ ಎಂದು ಪೊಲೀಸರು ಅಧಿಕೃತವಾಗಿ ತಿಳಿಸಿದ್ದಾರೆ.

2020ರ ನವೆಂಬರ್ 24ರಂದು ಪಂಜಾಬ್, ಹರಿಯಾಣ ರಾಜ್ಯಗಳ ಗ್ರಾಮಗಳಲ್ಲಿ ಹತ್ತಿದ ಕೃಷಿ ಕಾಯ್ದೆಗಳ (New Farm Laws) ವಿರುದ್ಧದ ಕಿಚ್ಚು, ನವೆಂಬರ್ 26ರಂದು ರಾಷ್ಟ್ರ ರಾಜಧಾನಿ ದೆಹಲಿ ತಲುಪಿ ಮುಂದೆ ದೇಶವ್ಯಾಪ್ತಿ ದಾವಾಗ್ನಿಯಾಗಿ ಬೆಳೆಯಿತು. ರೈತರ ಪಾಲಿಗೆ ದೆಹಲಿಯ ಒಳಾಂಗಣ ತಲುಪುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಗರದ ಹೊರವಲಯದ ಬುರಾರಿ ಮೈದಾನದಲ್ಲಿ ವಸತಿಗೆ ಅವಕಾಶ ಮಾಡಿಕೊಡುವುದಾಗಿ ಪೊಲೀಸರು ಹೇಳಿದರೂ ಅದಕ್ಕೊಪ್ಪದ ರೈತರು ದೆಹಲಿ ಪ್ರವೇಶಿಸಲು ಪ್ರಯತ್ನಿಸಿದರು. ಸಿಂಘು, ಟಿಕ್ರಿ, ಘಾಜಿಪುರ ಸೇರದಂತೆ ದೆಹಲಿಯ ಗಡಿಗಳಲ್ಲೇ ರೈತ ಪ್ರತಿಭಟನಾಕಾರರನ್ನು ಪೊಲೀಸರು ತಡೆದ ಕಾರಣ ರೈತರ ಪ್ರತಿಭಟನೆ ಗಡಿಗಳಲ್ಲೇ ಅವಿರತವಾಗಿ ಸಾಗಿತು. ಮುಂದೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ 11 ಸುತ್ತಿನ ಮಾತುಕತೆ ನಡೆದರೂ ಯಾವುದೇ ಒಮ್ಮತ ಮೂಡಲು ಸಾಧ್ಯವಾಗಲಿಲ್ಲ. ಈ ಮುನ್ನವೇ ದೇಶವಿರೋಧಿ ಶಕ್ತಿಗಳು ದೆಹಲಿ ಚಲೋ ಚಳವಳಿಯಲ್ಲಿ ಕೈಜೋಡಿಸಿದ್ದಾರೆ ಎಂಬ ದೂರುಗಳಿತ್ತು. ಆದರೆ, ರೈತ ನಾಯಕರು ಮಾತ್ರ ಯಾವುದೇ ರಾಜಕೀಯ ಪ್ರೇರಣೆಯಿಂದ ದೂರವೇ ಉಳಿದು ಹೋರಾಟ ಮುಂದುವರೆಸಿದ್ದರು.

ಆದರೆ ಜನವರಿ 26, ಗಣರಾಜ್ಯೋತ್ಸವದಂದು ನಡೆದ ಟ್ರ್ಯಾಕ್ಟರ್ ಮೆರವಣಿಗೆ ರೈತರ ಕುರಿತು ಮೂಡಿದ್ದ ಅನುಕಂಪವನ್ನು ಕುಗ್ಗಿಸುವಲ್ಲಿ ಪ್ರಬಲ ಅಂಶವಾಯಿತು. ರೈತರ ಟ್ರ್ಯಾಕ್ಟರ್ ಮೆರವಣಿಗೆಯ ಪ್ರತಿಭಟನೆ ಪೊಲೀಸರ ಮಾರ್ಗಸೂಚಿಗಳನ್ನು ಮೀರಿ ಸಾಗಿತು. ಐತಿಹಾಸಿಕ ಕೆಂಪುಕೋಟೆಯ ಮೇಲೆ ಅನ್ಯಧ್ವಜ ಹಾರಾಟ, ಪೊಲೀಸರ ಮೇಲೆ ಹಲ್ಲೆಯಂತಹ ಕೃತ್ಯಗಳು ಚಳವಳಿ ಕುರಿತು ನಕಾರಾತ್ಮಕ ಭಾವನೆ ಮೂಡಲು ಕಾರಣವಾದವು. ಆದರೆ, ರೈತ ನಾಯಕರು ಮಾತ್ರ ಈ ದುಷ್ಕೃತ್ಯಗಳ ಹಿಂದೆ ರೈತ ಹೋರಾಟದ ಕೈವಾಡವಿಲ್ಲ, ಅನ್ಯಶಕ್ತಿಗಳ ಪಿತೂರಿ ರೈತ ಹೋರಾಟವನ್ನು ಮಣಿಸಲು ಹೂಡಿದ ತಂತ್ರ ಎಂದು ಸ್ಪಷ್ಟನೆ ನೀಡಿದರು. ಈ ಎಲ್ಲ ಘಟನೆಗಳ ನಡುವೆ ರೈತ ನಾಯಕ ರಾಕೇಶ್ ಟಿಕಾಯತ್ ಹೆಸರು ದೇಶದ ಎಲ್ಲೆಡೆ ಮುನ್ನೆಲೆಗೆ ಬಂತು.

ಇದನ್ನೂ ಓದಿ: Delhi Chalo: ದೆಹಲಿ ಚಲೋಗೆ ನೂರು ದಿನ; ಕರ್ನಾಟಕದಲ್ಲೂ ನಡೆಯಲಿದೆ ರೈತ ಪಂಚಾಯತ್, ಬರ್ತಾರೆ ರಾಕೇಶ್ ಟಿಕಾಯತ್

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ