AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಮತ್ತೊಮ್ಮೆ ಭಾಗಶಃ ಲಾಕ್ಡೌನ್ ಹೇರುವ ಚಿಂತನೆ: ಕೇಜ್ರಿವಾಲ್ | Delhi government plans partial lockdown again due to spurt in Covid-19 cases

ಕೊರೊನಾ ಪ್ರಕರಣಗಳನ್ನು ನಿಯಂತ್ರಣಕ್ಕೆ ತರುವುದು ಕಠಿಣವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಭಾಗಶಃ ಲಾಕ್ಡೌನ್ ಜಾರಿಮಾಡುವ ಕುರಿತು ಚಿಂತನೆ ದೆಹಲಿಯಲ್ಲಿ ಶುರುವಾಗಿದೆ. ಜನಸಂದಣಿ ಹೆಚ್ಚಿರುವ ಮಾರುಕಟ್ಟೆ ಪ್ರದೇಶಗಳು, ಕೊರೊನಾ ಹಾಟ್ ಸ್ಪಾಟ್ ಎಂದು ಕರೆಸಿಕೊಳ್ಳುತ್ತಿರುವ ಪ್ರದೇಶಗಳಲ್ಲಿ ಜನ ಸಂಚಾರ ನಿರ್ಬಂಧಿಸುವ ಸಾಧ್ಯತೆ ಇದ್ದು, ಸಮಾರಂಭಗಳಿಗೆ 200 ಜನ ಸೇರಬಹುದು ಎಂಬ ಆದೇಶವನ್ನು ಹಿಂಪಡೆದು ಕೇವಲ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸುವ ಕುರಿತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಾಲಾಜಿಯವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. […]

ದೆಹಲಿಯಲ್ಲಿ ಮತ್ತೊಮ್ಮೆ ಭಾಗಶಃ ಲಾಕ್ಡೌನ್ ಹೇರುವ ಚಿಂತನೆ: ಕೇಜ್ರಿವಾಲ್ | Delhi government plans partial lockdown again due to spurt in Covid-19 cases
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 17, 2020 | 6:28 PM

Share

ಕೊರೊನಾ ಪ್ರಕರಣಗಳನ್ನು ನಿಯಂತ್ರಣಕ್ಕೆ ತರುವುದು ಕಠಿಣವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಭಾಗಶಃ ಲಾಕ್ಡೌನ್ ಜಾರಿಮಾಡುವ ಕುರಿತು ಚಿಂತನೆ ದೆಹಲಿಯಲ್ಲಿ ಶುರುವಾಗಿದೆ. ಜನಸಂದಣಿ ಹೆಚ್ಚಿರುವ ಮಾರುಕಟ್ಟೆ ಪ್ರದೇಶಗಳು, ಕೊರೊನಾ ಹಾಟ್ ಸ್ಪಾಟ್ ಎಂದು ಕರೆಸಿಕೊಳ್ಳುತ್ತಿರುವ ಪ್ರದೇಶಗಳಲ್ಲಿ ಜನ ಸಂಚಾರ ನಿರ್ಬಂಧಿಸುವ ಸಾಧ್ಯತೆ ಇದ್ದು, ಸಮಾರಂಭಗಳಿಗೆ 200 ಜನ ಸೇರಬಹುದು ಎಂಬ ಆದೇಶವನ್ನು ಹಿಂಪಡೆದು ಕೇವಲ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸುವ ಕುರಿತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಾಲಾಜಿಯವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಭಾಗಶಃ ಲಾಕ್ಡೌನ್ ಹೇರಲು ಕೇಂದ್ರದ ಅನುಮತಿ ಪಡೆಯುವ ಕುರಿತು ಯೋಚಿಸಲಾಗುತ್ತಿದ್ದು ರಾಜ್ಯ, ಕೇಂದ್ರ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ದುಪ್ಪಟ್ಟು ಶ್ರಮ ವಹಿಸುತ್ತಿವೆ. ಆದರೆ, ದೀಪಾವಳಿಯ ಸಂದರ್ಭ ಸಾಕಷ್ಟು ಜನರು ಮಾಸ್ಕ್ ಧರಿಸದೆ ಓಡಾಡಿರುವುದು, ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿರುವುದು ಕೊರೊನಾ ಹಬ್ಬಲು ಕಾರಣವಾಗಿದೆ. ಒಂದು ವೇಳೆ ಜನರು ಸರಿಯಾಗಿ ನಿಯಮಗಳನ್ನು ಪಾಲಿಸಿದರೆ ಲಾಕ್ಡೌನ್ ಅವಶ್ಯಕತೆ ಎದುರಾಗುತ್ತಿರಲಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿರುವ ಕೇಜ್ರಿವಾಲ್, ‘ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ನಮಗೆ ಅಗತ್ಯ ಸಹಕಾರ ನೀಡಿದೆ. ದೆಹಲಿಗೆ 750 ಐಸಿಯು ಒದಗಿಸುವ ಭರವಸೆ ನೀಡಿದೆ. ಈಗಾಗಲೇ ಇರುವ ಬೆಡ್​ಗಳು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಿದೆ. ಆದರೆ, ಜನರು ದಯವಿಟ್ಟು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಯಮಗಳನ್ನು ಉಲ್ಲಂಘಿಸಬಾರದು, ಇದು ನಿಮ್ಮ ಹಾಗೂ ನಿಮ್ಮ ಕುಟುಂಬದ ಒಳಿತಿಗಾಗಿ ನಮ್ಮ ಪ್ರಾರ್ಥನೆ,’ ಎಂದು ವಿನಂತಿಸಿಕೊಂಡಿದ್ದಾರೆ.

ಆದರೆ, ಸೋಮವಾರ ದೆಹಲಿಯ ಆರೋಗ್ಯ ಮಂತ್ರಿ ಸತ್ಯೇಂದರ್ ಜೈನ್ ಕೊರೊನಾ ಮೂರನೇ ಅಲೆಯ ಕುರಿತು ಮಾತನಾಡಿದ್ದು, ದೆಹಲಿಯಲ್ಲಿ ಈಗಾಗಲೇ ಮೂರನೇ ಅಲೆ ಇಳಿಮುಖಗೊಂಡಿದೆ, ಹಾಗಾಗಿ ಲಾಕ್ಡೌನ್ ಮಾಡುವ ಸಂದರ್ಭ ಉದ್ಭವಿಸುವುದಿಲ್ಲ. ವೈರಸ್ ನಿಯಂತ್ರಿಸಲು ಜನ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಪರಿಹಾರವೇ ಹೊರತು ಲಾಕ್ಡೌನ್ ಅಲ್ಲ ಎಂದು ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ.