AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 130 ದಿನಗಳಲ್ಲಿ 20 ಕೋಟಿ ಕೋವಿಡ್ ಲಸಿಕೆ: ಈ ಸಾಧನೆ ಮಾಡಿದ ವಿಶ್ವದ 2ನೇ ದೇಶ ಭಾರತ

ಆರೋಗ್ಯ ಸಚಿವಾಲಯವು ಒದಗಿಸಿರುವ ಅಂಕಿ-ಅಂಶಗಳ ಪ್ರಕಾರ ಅಮೇರಿಕ 20 ಕೋಟಿ ಡೋಸುಗಳನ್ನು ಸಂಪೂರ್ಣಗೊಳಿಸಲು 124 ದಿನಗಳ ಕಾಲಾವಕಾಶ ತೆಗೆದುಕೊಂಡರೆ ಭಾರತ 130 ದಿನಗಳಲ್ಲಿ ಅಷ್ಟು ಸಂಖ್ಯೆಯ ಡೋಸುಗಳನ್ನು ನೀಡಿದೆ.

ಕೇವಲ 130 ದಿನಗಳಲ್ಲಿ 20 ಕೋಟಿ ಕೋವಿಡ್ ಲಸಿಕೆ: ಈ ಸಾಧನೆ ಮಾಡಿದ ವಿಶ್ವದ 2ನೇ ದೇಶ ಭಾರತ
ಕೊವಿಡ್-19 ಲಸಿಕಾ ಅಭಿಯಾನ
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on: May 26, 2021 | 8:46 PM

Share

ನವದೆಹಲಿ: ಕೇಂದ್ರ ಸರ್ಕಾರ ಕೋವಿಡ್-19 ವಿರುದ್ಧ ಲಸಿಕಾ ಅಭಿಯಾನವನ್ನು ಆರಂಭಿಸಿದ 130 ದಿನಗಳ ನಂತರ ದೇಶದಾದ್ಯಂತ ಲಸಿಕೆಯ 20 ಕೋಟಿ ಡೋಸುಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ಅಮೆರಿಕ ನಂತರ ಕಡಿಮೆ ಅತಿ ಕಡಿಮೆ ಅವಧಿಯಲ್ಲಿ 20 ಕೋಟಿ ಡೋಸುಗಳನ್ನು ನೀಡಿರುವ ಎರಡನೇ ರಾಷ್ಟ್ರ ಭಾರತವಾಗಿದೆ ಎಂದು ಸಹ ಅರೋಗ್ಯ ಇಲಾಖೆ ತಿಳಿಸಿದೆ. ಭಾರತದಲ್ಲಿ ಜನವರಿ 16ರಿಂದ ಲಸಿಕೆ ಅಭಿಯಾನ ನಡೆಯುತ್ತಿದೆ.

ಆರೋಗ್ಯ ಸಚಿವಾಲಯವು ಒದಗಿಸಿರುವ ಅಂಕಿ-ಅಂಶಗಳ ಪ್ರಕಾರ ಅಮೇರಿಕ 20 ಕೋಟಿ ಡೋಸುಗಳನ್ನು ಸಂಪೂರ್ಣಗೊಳಿಸಲು 124 ದಿನಗಳ ಕಾಲಾವಕಾಶ ತೆಗೆದುಕೊಂಡರೆ ಭಾರತ 130 ದಿನಗಳಲ್ಲಿ ಅಷ್ಟು ಸಂಖ್ಯೆಯ ಡೋಸುಗಳನ್ನು ನೀಡಿದೆ. ಬೇರೆ ದೇಶಗಳ ವಿವರಗಳನ್ನು ನೋಡಿದ್ದೇಯಾದರೆ, 6 ಕೋಟಿ ಡೋಸುಗಳನ್ನು ನೀಡಲು ಯುನೈಟೆಡ್ ಕಿಂಗ್​ಡಮ್168 ದಿಗಳನ್ನು ತೆಗೆದುಕೊಂಡರೆ, ಬ್ರೆಜಿಲ್ 128 ದಿನಗಳಲ್ಲಿ 5.9 ಕೋಟಿ ಡೋಸುಗಳನ್ನು ನೀಡಿದೆ. ಹಾಗೆಯೇ, ಜರ್ಮನಿ, ಫ್ರಾನ್ಸ್ ಮತ್ತು ಇಟಲಿ ದೇಶಗಳು ಕ್ರಮವಾಗಿ 4.5 ಕೋಟಿ, 3.3 ಕೋಟಿ ಮತ್ತು 3.1 ಕೋಟಿ ಡೋಸುಗಳನ್ನು ನೀಡಲು 149 ದಿನಗಳ ಸಮಯವನ್ನು ತೆಗೆದುಕೊಂಡಿವೆ.

ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯವು, ಬುಧವಾರ ಬೆಳಗ್ಗೆ 7 ಗಂಟೆಯ ಸಮಯದವರೆಗೆ 200,662,456 ಕೋವಿಡ್​ ಲಸಿಕೆಯ ಡೋಸುಗಳನ್ನು ವಿತರಿಸಲಾಗಿದ್ದು ಇದರಲ್ಲಿ 157,149,593 ಮೊದಲ ಡೋಸು ಮತ್ತು 43,512,863 ಎರಡನೇ ಡೋಸುಗಳಾಗಿವೆ ಎಂದು ತಿಳಿಸಿದೆ.‘ಕೇಂದ್ರ ಅರೋಗ್ಯ ಸಚಿವಾಲಯದಲ್ಲಿ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ 45ಕ್ಕಿಂತ ಹೆಚ್ಚಿನ ವಯೋಮಿತಿ ಜನಸಂಖ್ಯೆಯ ಶೇಕಡಾ 34 ರಷ್ಟು ಜನ ಕನಿಷ್ಟ ಕೊವಿಡ್-19 ಲಸಿಕೆಯ ಪ್ರಥಮ ಡೋಸ್ ಪಡೆದುಕೊಂಡಿದ್ದಾರೆ.

ಹಾಗೆಯೇ 60 ಕ್ಕಿಂತ ಹೆಚ್ಚಿನ ವಯೋಮಿತಿ ಜನಸಂಖ್ಯೆಯ ಶೇಕಡಾ 42 ಜನ ಕೊವಿಡ್-19 ಲಸಿಕೆಯ ಕನಿಷ್ಟ ಮೊದಲ ಡೋಸನ್ನು ಪಡೆದಿದ್ದಾರೆ, ಎಂದು ಸಚಿವಾಲಯದ ಪ್ರಕಟಣೆ ತಿಳಿಸುತ್ತದೆ.

ತನ್ನ ಬೃಹತ್ ಕೊವಿಡ್-19 ಲಸಿಕಾ ಅಭಿಯಾನದಲ್ಲಿ ಭಾರತವು ಮೂರು ಲಸಿಕೆಗಳನ್ನು ಉಪಯೋಗಿಸುತ್ತಿದೆ-ಪುಣೆತಯಲ್ಲಿರುವ ಸಿರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಷೀಲ್ಡ್ ಮತ್ತು ಹೈದರಾಬಾದ್ ಭರತ್ ಬಯೋಟೆಕ್​ ಸಂಸ್ಥೆಯ ಕೋವ್ಯಾಕ್ಸಿನ್. ‘ರಷ್ಯಾದಲ್ಲಿ ತಯಾರಾಗಿರುವ ಸ್ಫುಟ್ನಿಕ್ ವಿ ಲಸಿಕೆಯು ಭಾರತದ ಔಷಧ ಮಹಾನಿಯಂತ್ರಕರಿಂದ (ಡಿಜಿಸಿಐ) ತುರ್ತು ಸಂದರ್ಭಗಳಲ್ಲಿ ಪಡೆಯಲು ಅನುಮೋದನೆ ಪಡೆದಿರುವ ಲಸಿಕೆಯಾಗಿದೆ. ಇದನ್ನು ಕೆಲ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ,’ ಎಂದು ಸಚಿವಾಲಯ ತಿಳಿಸಿದೆ.

ಮೇ 1ರಂದು ಭಾರತದ ಲಸಿಕಾ ಅಭಿಯಾನವು ಮೂರನೇ ಹಂತವನ್ನು ಪ್ರವೇಶಿಸಿದ್ದು ಇದರಲ್ಲಿ 18ಕ್ಕಿಂತ ಜಾಸ್ತಿ ವಯಸ್ಸಿನವರಿಗೆ ಸೇರಿಸಿಕೊಳ್ಳುವ ಪ್ರಸ್ತಾಪ ಮಾಡಲಾಗಿದೆ. ಮೊದಲ ಹಂತದಲ್ಲಿ ಆದ್ಯತೆಯ ಆಧಾರದಲ್ಲಿ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಮುಂಚೂಣೀಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಮಾರ್ಚ್​ ಒಂದರಂದು ಶುರುವಾದ ಎರಡನೇ ಅಭಿಯಾನದಲ್ಲಿ 60ಕ್ಕಿಂತ ಜಾಸ್ತಿ ವಯಸ್ಸಿನವರಿಗೆ ಮತ್ತು ಕಾಯಿಲೆಗಳಿಗೆ ತುತ್ತಾಗಿರುವ 45 ರಿಂದ 59 ವರ್ಷ ವಯೋಮಿತಿಯಲ್ಲಿರಿವವರಿಗೆ ಲಸಿಕೆ ನೀಡಲು ಆಯ್ಕೆ ಮಾಡಿಕೊಳ್ಳಲಾಯಿತು. ಮೇ 1ರಂದು ಅಭಿಯಾನವು ಮೂರನೇ ಹಂತಕ್ಕೆ ವಿಸ್ತರಣೆಗೊಂಡಿದ್ದು ಇದರಲ್ಲಿ 45 ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದೆ.

ಇದನ್ನೂ ಓದಿ: 18-44 Vaccination in Karnataka: ಮೇ 22ರಿಂದಲೇ 18 ರಿಂದ 44 ವರ್ಷದವರಿಗೆ ಕೊವಿಡ್ ಲಸಿಕೆ; ಕೊವಿಡ್ ಸೇನಾನಿಗಳಿಗೆ ಮೊದಲ ಆದ್ಯತೆ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ