AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಲಿಕಾಂ ಕಂಪನಿಗಳಿಗೆ ಭಾರಿ ನಷ್ಟ, ಉಂಟಾಗಿದೆ ಮುಚ್ಚುವ ಭೀತಿ

ದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಕಂಪನಿ ಕ್ರಾಂತಿಯನ್ನೇ ಮಾಡಿದ್ರೆ. ಇನ್ನುಳಿದ ಕಂಪನಿಗಳು ಮುಚ್ಚೋ ಭೀತಿಯಲ್ಲಿವೆ. ಅದ್ರಲ್ಲೂ ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಳೆದ ಕೆಲ ತಿಂಗಳಿಂದ ಭಾರಿ ನಷ್ಟಕ್ಕೀಡಾಗಿವೆ. ಎಷ್ಟರ ಮಟ್ಟಿಗೆ ಅಂದ್ರೆ, ಕೇಂದ್ರ ಸರ್ಕಾರ ನೆರವಿನ ಪ್ಯಾಕೇಜ್ ನೀಡಿದ್ರೆ ಮಾತ್ರ ವಹಿವಾಟು ಮುಂದುವರಿಸಲು ಸಾಧ್ಯ ಅಂತ ವೊಡಾಫೋನ್‌ ಐಡಿಯಾ ಅಸಹಾಯಕತೆ ಹೊರಹಾಕಿದೆ. ಎಷ್ಟು ನಷ್ಟ..? ಎಷ್ಟು ಬಾಕಿ..? ವೊಡಾಫೋನ್ ಐಡಿಯಾ ನೀಡಿರುವ ಮಾಹಿತಿ ಪ್ರಕಾರ ಕಂಪನಿಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು […]

ಟೆಲಿಕಾಂ ಕಂಪನಿಗಳಿಗೆ ಭಾರಿ ನಷ್ಟ, ಉಂಟಾಗಿದೆ ಮುಚ್ಚುವ ಭೀತಿ
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
|

Updated on:Nov 16, 2019 | 10:49 PM

Share

ದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಕಂಪನಿ ಕ್ರಾಂತಿಯನ್ನೇ ಮಾಡಿದ್ರೆ. ಇನ್ನುಳಿದ ಕಂಪನಿಗಳು ಮುಚ್ಚೋ ಭೀತಿಯಲ್ಲಿವೆ. ಅದ್ರಲ್ಲೂ ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಳೆದ ಕೆಲ ತಿಂಗಳಿಂದ ಭಾರಿ ನಷ್ಟಕ್ಕೀಡಾಗಿವೆ. ಎಷ್ಟರ ಮಟ್ಟಿಗೆ ಅಂದ್ರೆ, ಕೇಂದ್ರ ಸರ್ಕಾರ ನೆರವಿನ ಪ್ಯಾಕೇಜ್ ನೀಡಿದ್ರೆ ಮಾತ್ರ ವಹಿವಾಟು ಮುಂದುವರಿಸಲು ಸಾಧ್ಯ ಅಂತ ವೊಡಾಫೋನ್‌ ಐಡಿಯಾ ಅಸಹಾಯಕತೆ ಹೊರಹಾಕಿದೆ.

ಎಷ್ಟು ನಷ್ಟ..? ಎಷ್ಟು ಬಾಕಿ..? ವೊಡಾಫೋನ್ ಐಡಿಯಾ ನೀಡಿರುವ ಮಾಹಿತಿ ಪ್ರಕಾರ ಕಂಪನಿಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ ಒಟ್ಟಾರೆ 50,922 ಕೋಟಿ ರೂಪಾಯಿ ನಷ್ಟ ಎದುರಿಸಿದೆ. ಇದೇ ಅವಧಿಯಲ್ಲಿ ವೊಡಾಫೋನ್‌ ಚಂದಾದಾರರ ಸಂಖ್ಯೆ 32 ಕೋಟಿಯಿಂದ 31.1 ಕೋಟಿಗೆ ಇಳಿಕೆಯಾಗಿದೆ.

ಇನ್ನು ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ಏರ್​ಟೆಲ್ ಕಂಪನಿ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 23,045 ಕೋಟಿ ರೂಪಾಯಿ ನಿವ್ವಳ ನಷ್ಟ ಎದುರಿಸಿದೆ. ಇದಲ್ಲದೆ ದೂರಸಂಪರ್ಕ ಇಲಾಖೆಗೆ ಎರಡೂ ಕಂಪನಿಗಳು 92 ಸಾವಿರ ಕೋಟಿಗೂ ಹೆಚ್ಚು ಬಾಕಿ ನೀಡಬೇಕಾಗಿದೆ.

ಕೇಂದ್ರದ ಕೈಯಲ್ಲಿದೆ ಕಂಪನಿಗಳ ಅಳಿವು, ಉಳಿವು..! ಒಂದ್ಕಡೆ ಎರಡೂ ಕಂಪನಿಗಳ ನಷ್ಟವೇ 74 ಸಾವಿರ ಕೋಟಿ ದಾಟಿದೆ. ಇದ್ರ ಜೊತೆಗೆ ಗ್ರಾಸ್ ಅಡ್ಜಸ್ಟ್​ಮೆಂಟ್ ರೆವೆನ್ಯೂದಿಂದ 92 ಸಾವಿರ ಕೋಟಿ ರೂಪಾಯಿ ಬಾಕಿ ಮೊತ್ತ ನೀಡಬೇಕಿರೋದು ಟೆಲಿಕಾಂ ಕಂಪನಿಗಳ ಆರ್ಥಿಕ ಹೊರೆ ಹೆಚ್ಚಾಗುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಟೆಲಿಕಾಂ ಕಂಪನಿಗಳನ್ನ ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ‌ಕೇಂದ್ರ ಸರ್ಕಾರ ಸಮಿತಿಯೊಂದನ್ನ ರಚಿಸಿತ್ತು.

ಕಾಲ್ ದರ ನಿಗದಿಪಡಿಸಲು ಸಮಿತಿ ನೀಡಿರೋ ವರದಿಯನ್ನ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಜಿಯೋ ಹೊರತುಪಡಿಸಿ ಉಳಿದೆಲ್ಲಾ ಟೆಲಿಕಾಂ ಕಂಪನಿಗಳು ‌ನಷ್ಟದಲ್ಲಿವೆ‌‌. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಟೆಲಿಕಾಂ ಕಂಪನಿಗಳ ನೆರವಿಗೆ ಕೇಂದ್ರದ ಮೋದಿ ಸರ್ಕಾರ ನಿಲ್ಲಬೇಕಿದೆ.

Published On - 9:05 pm, Sat, 16 November 19

ಕುಡಿದ ಅಮಲಿನಲ್ಲಿ ಪೊಲೀಸರನ್ನು ಎಳೆದಾಡಿದ ಯುವಕರು
ಕುಡಿದ ಅಮಲಿನಲ್ಲಿ ಪೊಲೀಸರನ್ನು ಎಳೆದಾಡಿದ ಯುವಕರು
ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ