AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಲಿಕಾಂ ಕಂಪನಿಗಳಿಗೆ ಭಾರಿ ನಷ್ಟ, ಉಂಟಾಗಿದೆ ಮುಚ್ಚುವ ಭೀತಿ

ದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಕಂಪನಿ ಕ್ರಾಂತಿಯನ್ನೇ ಮಾಡಿದ್ರೆ. ಇನ್ನುಳಿದ ಕಂಪನಿಗಳು ಮುಚ್ಚೋ ಭೀತಿಯಲ್ಲಿವೆ. ಅದ್ರಲ್ಲೂ ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಳೆದ ಕೆಲ ತಿಂಗಳಿಂದ ಭಾರಿ ನಷ್ಟಕ್ಕೀಡಾಗಿವೆ. ಎಷ್ಟರ ಮಟ್ಟಿಗೆ ಅಂದ್ರೆ, ಕೇಂದ್ರ ಸರ್ಕಾರ ನೆರವಿನ ಪ್ಯಾಕೇಜ್ ನೀಡಿದ್ರೆ ಮಾತ್ರ ವಹಿವಾಟು ಮುಂದುವರಿಸಲು ಸಾಧ್ಯ ಅಂತ ವೊಡಾಫೋನ್‌ ಐಡಿಯಾ ಅಸಹಾಯಕತೆ ಹೊರಹಾಕಿದೆ. ಎಷ್ಟು ನಷ್ಟ..? ಎಷ್ಟು ಬಾಕಿ..? ವೊಡಾಫೋನ್ ಐಡಿಯಾ ನೀಡಿರುವ ಮಾಹಿತಿ ಪ್ರಕಾರ ಕಂಪನಿಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು […]

ಟೆಲಿಕಾಂ ಕಂಪನಿಗಳಿಗೆ ಭಾರಿ ನಷ್ಟ, ಉಂಟಾಗಿದೆ ಮುಚ್ಚುವ ಭೀತಿ
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 16, 2019 | 10:49 PM

Share

ದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಕಂಪನಿ ಕ್ರಾಂತಿಯನ್ನೇ ಮಾಡಿದ್ರೆ. ಇನ್ನುಳಿದ ಕಂಪನಿಗಳು ಮುಚ್ಚೋ ಭೀತಿಯಲ್ಲಿವೆ. ಅದ್ರಲ್ಲೂ ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಳೆದ ಕೆಲ ತಿಂಗಳಿಂದ ಭಾರಿ ನಷ್ಟಕ್ಕೀಡಾಗಿವೆ. ಎಷ್ಟರ ಮಟ್ಟಿಗೆ ಅಂದ್ರೆ, ಕೇಂದ್ರ ಸರ್ಕಾರ ನೆರವಿನ ಪ್ಯಾಕೇಜ್ ನೀಡಿದ್ರೆ ಮಾತ್ರ ವಹಿವಾಟು ಮುಂದುವರಿಸಲು ಸಾಧ್ಯ ಅಂತ ವೊಡಾಫೋನ್‌ ಐಡಿಯಾ ಅಸಹಾಯಕತೆ ಹೊರಹಾಕಿದೆ.

ಎಷ್ಟು ನಷ್ಟ..? ಎಷ್ಟು ಬಾಕಿ..? ವೊಡಾಫೋನ್ ಐಡಿಯಾ ನೀಡಿರುವ ಮಾಹಿತಿ ಪ್ರಕಾರ ಕಂಪನಿಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ ಒಟ್ಟಾರೆ 50,922 ಕೋಟಿ ರೂಪಾಯಿ ನಷ್ಟ ಎದುರಿಸಿದೆ. ಇದೇ ಅವಧಿಯಲ್ಲಿ ವೊಡಾಫೋನ್‌ ಚಂದಾದಾರರ ಸಂಖ್ಯೆ 32 ಕೋಟಿಯಿಂದ 31.1 ಕೋಟಿಗೆ ಇಳಿಕೆಯಾಗಿದೆ.

ಇನ್ನು ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ಏರ್​ಟೆಲ್ ಕಂಪನಿ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 23,045 ಕೋಟಿ ರೂಪಾಯಿ ನಿವ್ವಳ ನಷ್ಟ ಎದುರಿಸಿದೆ. ಇದಲ್ಲದೆ ದೂರಸಂಪರ್ಕ ಇಲಾಖೆಗೆ ಎರಡೂ ಕಂಪನಿಗಳು 92 ಸಾವಿರ ಕೋಟಿಗೂ ಹೆಚ್ಚು ಬಾಕಿ ನೀಡಬೇಕಾಗಿದೆ.

ಕೇಂದ್ರದ ಕೈಯಲ್ಲಿದೆ ಕಂಪನಿಗಳ ಅಳಿವು, ಉಳಿವು..! ಒಂದ್ಕಡೆ ಎರಡೂ ಕಂಪನಿಗಳ ನಷ್ಟವೇ 74 ಸಾವಿರ ಕೋಟಿ ದಾಟಿದೆ. ಇದ್ರ ಜೊತೆಗೆ ಗ್ರಾಸ್ ಅಡ್ಜಸ್ಟ್​ಮೆಂಟ್ ರೆವೆನ್ಯೂದಿಂದ 92 ಸಾವಿರ ಕೋಟಿ ರೂಪಾಯಿ ಬಾಕಿ ಮೊತ್ತ ನೀಡಬೇಕಿರೋದು ಟೆಲಿಕಾಂ ಕಂಪನಿಗಳ ಆರ್ಥಿಕ ಹೊರೆ ಹೆಚ್ಚಾಗುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಟೆಲಿಕಾಂ ಕಂಪನಿಗಳನ್ನ ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ‌ಕೇಂದ್ರ ಸರ್ಕಾರ ಸಮಿತಿಯೊಂದನ್ನ ರಚಿಸಿತ್ತು.

ಕಾಲ್ ದರ ನಿಗದಿಪಡಿಸಲು ಸಮಿತಿ ನೀಡಿರೋ ವರದಿಯನ್ನ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಜಿಯೋ ಹೊರತುಪಡಿಸಿ ಉಳಿದೆಲ್ಲಾ ಟೆಲಿಕಾಂ ಕಂಪನಿಗಳು ‌ನಷ್ಟದಲ್ಲಿವೆ‌‌. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಟೆಲಿಕಾಂ ಕಂಪನಿಗಳ ನೆರವಿಗೆ ಕೇಂದ್ರದ ಮೋದಿ ಸರ್ಕಾರ ನಿಲ್ಲಬೇಕಿದೆ.

Published On - 9:05 pm, Sat, 16 November 19

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!