AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aditya L1 Mission: ಎರಡನೇ ಕಕ್ಷೆಯನ್ನು ಪ್ರವೇಶಿಸಿದ ಆದಿತ್ಯ, ಸೂರ್ಯನತ್ತ ಮುಂದುವರೆದ ನೌಕೆಯ ಪ್ರಯಾಣ

ಸೂರ್ಯನ ಕುರಿತ ಸಂಶೋಧನೆಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕಳುಹಿಸಿದ್ದ ಆದಿತ್ಯ ಎಲ್1(Aditya L1) ಯಶಸ್ವಿಯಾಗಿ ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ.ಸೆಪ್ಟೆಂಬರ್ 5 ರ ರಾತ್ರಿ 2.45 ಕ್ಕೆ ಆದಿತ್ಯ ಎಲ್ -1 ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಇಸ್ರೋ ತಿಳಿಸಿದೆ. ಈಗ ಆದಿತ್ಯ L-1 ಸೆಪ್ಟೆಂಬರ್ 10 ರಂದು ರಾತ್ರಿ 2.30 ಕ್ಕೆ ಮೂರನೇ ಕಕ್ಷೆಯನ್ನು ಪ್ರವೇಶಿಸುತ್ತದೆ ಎನ್ನುವ ಮಾಹಿತಿಯನ್ನು ಇಸ್ರೋ ನೀಡಿದೆ. ಸೆಪ್ಟೆಂಬರ್ 3 ರಂದು, ಸೂರ್ಯ ಮಿಷನ್ ಆದಿತ್ಯ L-1 ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಬದಲಾಯಿಸಿದೆ.

Aditya L1 Mission: ಎರಡನೇ ಕಕ್ಷೆಯನ್ನು ಪ್ರವೇಶಿಸಿದ ಆದಿತ್ಯ, ಸೂರ್ಯನತ್ತ ಮುಂದುವರೆದ ನೌಕೆಯ ಪ್ರಯಾಣ
ಆದಿತ್ಯ ಎಲ್​ 1
Follow us
ನಯನಾ ರಾಜೀವ್
|

Updated on: Sep 05, 2023 | 7:27 AM

ಸೂರ್ಯನ ಕುರಿತ ಸಂಶೋಧನೆಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕಳುಹಿಸಿದ್ದ ಆದಿತ್ಯ ಎಲ್1(Aditya L1) ಯಶಸ್ವಿಯಾಗಿ ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ.ಸೆಪ್ಟೆಂಬರ್ 5 ರ ರಾತ್ರಿ 2.45 ಕ್ಕೆ ಆದಿತ್ಯ ಎಲ್ -1 ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಇಸ್ರೋ ತಿಳಿಸಿದೆ. ಈಗ ಆದಿತ್ಯ L-1 ಸೆಪ್ಟೆಂಬರ್ 10 ರಂದು ರಾತ್ರಿ 2.30 ಕ್ಕೆ ಮೂರನೇ ಕಕ್ಷೆಯನ್ನು ಪ್ರವೇಶಿಸುತ್ತದೆ ಎನ್ನುವ ಮಾಹಿತಿಯನ್ನು ಇಸ್ರೋ ನೀಡಿದೆ. ಸೆಪ್ಟೆಂಬರ್ 3 ರಂದು, ಸೂರ್ಯ ಮಿಷನ್ ಆದಿತ್ಯ L-1 ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಬದಲಾಯಿಸಿದೆ. ಇಸ್ರೋ ಭಾನುವಾರ ಬೆಳಿಗ್ಗೆ 11.45 ರ ಸುಮಾರಿಗೆ ಭೂಮಿಗೆ ಫೈರಿಂಗ್ ಮಾಡಿತು, ಅದರ ಸಹಾಯದಿಂದ ಆದಿತ್ಯ ಎಲ್ -1 ತನ್ನ ಕಕ್ಷೆಯನ್ನು ಬದಲಾಯಿಸಿತು.

ಭಾರತದ ಮೊದಲ ಸೌರ ವೀಕ್ಷಣಾಲಯವನ್ನು ಸೂರ್ಯ-ಭೂಮಿ ‘L1’ ಪಾಯಿಂಟ್‌ನಲ್ಲಿ ಸ್ಥಾಪಿಸುವ ಮೂಲಕ ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುವ ಗುರಿಯನ್ನು ಈ ಮಿಷನ್ ಹೊಂದಿದೆ. L1 ಎಂದರೆ ಲಾಗ್ರೇಂಜ್ ಪಾಯಿಂಟ್ 1, ಅಲ್ಲಿ ಬಾಹ್ಯಾಕಾಶ ನೌಕೆಯನ್ನು ನಿಲ್ಲಿಸಲಾಗುತ್ತದೆ.

ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಈ ಕಾರ್ಯಾಚರಣೆಯನ್ನು ನಡೆಸಿತು. ಮಾರಿಷಸ್, ಬೆಂಗಳೂರು ಮತ್ತು ಪೋರ್ಟ್ ಬ್ಲೇರ್‌ನಲ್ಲಿರುವ ಐಟ್ರಾಕ್‌ನ ಗ್ರೌಂಡ್ ಸ್ಟೇಷನ್‌ಗಳು ಉಪಗ್ರಹವನ್ನು ಪತ್ತೆಹಚ್ಚಿವೆ ಎಂದು ಇಸ್ರೋ ಹೇಳಿದೆ. ಹೊಸ ಕಕ್ಷೆಯು 282 ಕಿಮೀ X 40,225 ಕಿಮೀ. ಭೂಮಿಯಿಂದ ಈ ಕಕ್ಷೆಯ ಕನಿಷ್ಠ ದೂರ 282 ಕಿಮೀ ಆಗಿದ್ದರೆ, ಗರಿಷ್ಠ ದೂರ 40,225 ಕಿಮೀ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಮತ್ತಷ್ಟು ಓದಿ: Aditya L1 Mission: ಮೊದಲ ಕಕ್ಷೆಯನ್ನು ಪೂರ್ಣಗೊಳಿಸಿ ಸೂರ್ಯನತ್ತ ಮತ್ತೊಂದು ಹೆಜ್ಜೆ ಇಟ್ಟ ಆದಿತ್ಯ

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮೊದಲ ಸನ್ ಮಿಷನ್ ಆದಿತ್ಯ-ಎಲ್1 ಅನ್ನು ಶನಿವಾರ (ಸೆಪ್ಟೆಂಬರ್ 2) ಉಡಾವಣೆ ಮಾಡಲಾಯಿತು. ಇಸ್ರೋದ PSLV-C57 ರಾಕೆಟ್ ಸಹಾಯದಿಂದ ಅದನ್ನು ಭೂಮಿಯ ಕಕ್ಷೆಗೆ ಸೇರಿಸಲಾಯಿತು.

ಇಸ್ರೋ ಟ್ವೀಟ್

ಇದರ ಆರಂಭಿಕ ಕಕ್ಷೆಯು 235 ಕಿಮೀ x 19000 ಕಿಮೀ ಆಗಿತ್ತು. ಸೂರ್ಯ ಭೂಮಿಯ ಕಕ್ಷೆಯಲ್ಲಿ ಒಟ್ಟು 16 ದಿನಗಳ ಕಾಲ (ಸೆಪ್ಟೆಂಬರ್ 18) ಇರಬೇಕಾಗುತ್ತದೆ. ಇದರ ನಂತರ, ಅದು ಹೊರಬರುತ್ತದೆ ಮತ್ತು ಸೂರ್ಯನ ಕಡೆಗೆ ಲಾಗ್ರೇಂಜ್-1 (L1) ಪಾಯಿಂಟ್‌ಗೆ ಹೊರಡುತ್ತದೆ.

L1 ಪಾಯಿಂಟ್ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ, ಅಲ್ಲಿ ಸೂರ್ಯ ಮತ್ತು ಭೂಮಿಯು ಪರಸ್ಪರ ಗುರುತ್ವಾಕರ್ಷಣೆಯನ್ನು ತಟಸ್ಥಗೊಳಿಸುತ್ತವೆ. ಭೂಮಿಯಿಂದ ಎಲ್1 ಬಿಂದುವನ್ನು ತಲುಪಲು ಒಟ್ಟು 125 ದಿನಗಳನ್ನು ಪ್ರಯಾಣಿಸಬೇಕು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?