ನಾಗ್ಪುರದಲ್ಲಿ ಪತಂಜಲಿ ಮೆಗಾ ಫುಡ್ ಪಾರ್ಕ್, ಮಾರ್ಚ್ 9ರಿಂದ ಕಾರ್ಯಾರಂಭ
Patanjali’s Mega Food Park : ಪತಂಜಲಿ ಆಯುರ್ವೇದ ನಾಗ್ಪುರದಲ್ಲಿ ಮೆಗಾ ಆಹಾರ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಲಿದೆ. 1,500 ಕೋಟಿ ರೂ. ಹೂಡಿಕೆಯೊಂದಿಗೆ ನಾಗ್ಪುರದಲ್ಲಿ ಸ್ಥಾಪಿಸಲಾದ ತನ್ನ ಮೆಗಾ ಆಹಾರ ಸಂಸ್ಕರಣಾ ಘಟಕವು ಭಾನುವಾರದಿಂದ ಕಾರ್ಯಾರಂಭ ಮಾಡಲಿದೆ ಎಂದು ಕಂಪನಿ ತಿಳಿಸಿದೆ. ನಾಗ್ಪುರದ ಮಿಹಾನ್ನಲ್ಲಿ 1,500 ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಿರ್ಮಿಸಲಾದ 'ಪತಂಜಲಿ ಮೆಗಾ ಫುಡ್ ಮತ್ತು ಹರ್ಬಲ್ ಪಾರ್ಕ್' ಮಾರ್ಚ್ 9 ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಬಾಬಾ ರಾಮದೇವ್ ಅವರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಲಿದೆ.

ನಾಗ್ಪುರ, ಮಾರ್ಚ್ 08: ಪತಂಜಲಿ ಆಯುರ್ವೇದವು ನಾಗ್ಪುರದಲ್ಲಿ ಸ್ಥಾಪಿಸಿರುವ ಮೆಗಾ ಆಹಾರ ಸಂಸ್ಕರಣಾ ಘಟಕದ ಕಾರ್ಯಾಚರಣೆಯನ್ನು ಮಾರ್ಚ್ 9ರಿಂದ ಪ್ರಾರಂಭಿಸಲಿದೆ ಎನ್ನುವ ಮಾಹಿತಿ ನೀಡಿದೆ. 1,500 ಕೋಟಿ ರೂ. ಹೂಡಿಕೆಯಲ್ಲಿ ನಿರ್ಮಿಸಲಾಗಿದ್ದು, ಮಾರ್ಚ್ 9 ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಯೋಗ ಗುರು ರಾಮ್ದೇವ್ ಸೇರಿದಂತೆ ಇತರರ ಸಮ್ಮುಖದಲ್ಲಿ ಉದ್ಘಾಟಿಸಲಾಗುವುದು. ಈ ಪಾರ್ಕ್ ದಿನಕ್ಕೆ 800 ಟನ್ ಸಾಮರ್ಥ್ಯದ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕಗಳನ್ನು ಹೊಂದಿರುತ್ತದೆ.
ಪತಂಜಲಿ ಆಯುರ್ವೇದ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಘಟಕವು ಈ ಪ್ರದೇಶದಲ್ಲಿ ಕೃಷಿ ಕ್ರಾಂತಿಯನ್ನು ತರುತ್ತದೆ ಮತ್ತು ವಿದರ್ಭಾದ ರೈತರ ಜೀವನದಲ್ಲಿ ಸಂತೋಷವನ್ನು ತರುತ್ತದೆ ಎಂದು ಹೇಳಿದರು. ನಾಗ್ಪುರದಲ್ಲಿರುವ ಪತಂಜಲಿಯ ಕಿತ್ತಳೆ ಸಂಸ್ಕರಣಾ ಘಟಕವು ಏಷ್ಯಾದಲ್ಲಿಯೇ ಅತಿ ದೊಡ್ಡ ಮತ್ತು ಅತ್ಯಂತ ಮುಂದುವರೆದ ಘಟಕವಾಗಿದೆ ಎಂದು ಬಾಲಕೃಷ್ಣ ಹೇಳಿದರು.
800 ಟನ್ ಸಾಮರ್ಥ್ಯ ಹೊಂದಿರುವ ಈ ಸ್ಥಾವರವು ಕಿತ್ತಳೆ ಜೊತೆಗೆ ಅದರ ಉಪ ಉತ್ಪನ್ನಗಳು ಮತ್ತು ಇತರ ಹಣ್ಣುಗಳನ್ನು ಕೂಡ ಸಂಸ್ಕರಿಸುತ್ತದೆ ಎಂದು ಬಾಲಕೃಷ್ಣ ಹೇಳಿದರು, ಈ ಸೌಲಭ್ಯವು ಈ ಪ್ರದೇಶದ ರೈತರ ಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ಹೇಳಿದರು. ಈ ಸ್ಥಾವರವು ಪ್ಯಾಕೇಜಿಂಗ್ ಲೈನ್, ಟೆಕ್ನೋಪ್ಯಾಕ್ ಮತ್ತು ಸುಧಾರಿತ ಸಂಶೋಧನಾ ಪ್ರಯೋಗಾಲಯಗಳನ್ನು ಒಳಗೊಂಡಂತೆ ಆಧುನಿಕ ಮಾನದಂಡಗಳನ್ನು ಆಧರಿಸಿದ ಸಂಪೂರ್ಣ ಸುಧಾರಿತ ವ್ಯವಸ್ಥೆಯನ್ನು ಹೊಂದಿದೆ.
ಮತ್ತಷ್ಟು ಓದಿ: ರಾಜ್ಯದಲ್ಲೂ ಬ್ಯಾನ್ ಆಗುತ್ತಾ ಪತಂಜಲಿ ಉತ್ಪನ್ನಗಳು? ಪರೀಕ್ಷೆ ನಡೆಸುವಂತೆ ಆರೋಗ್ಯ ಸಚಿವ ಸೂಚನೆ
ನಮ್ಮ ಉತ್ಪನ್ನಗಳ ಗುಣಮಟ್ಟ ಅತ್ಯುತ್ತಮವಾಗಿದೆ. ಇಡೀ ವಿಶ್ವ ಮಾರುಕಟ್ಟೆ ನಮಗಾಗಿ ಮುಕ್ತವಾಗಿದೆ. ಆದರೆ ನಮ್ಮ ಆದ್ಯತೆ ದೇಶದ ಜನರಿಗೆ ಅತ್ಯುತ್ತಮ ರಫ್ತು ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದು ಎಂದು ಹೇಳಿದ್ದಾರೆ. ಈ ಸ್ಥಾವರವು ಶೂನ್ಯ ತ್ಯಾಜ್ಯ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಕಿತ್ತಳೆ ಸಿಪ್ಪೆಗಳಿಂದ ಬಾಷ್ಪಶೀಲ ಮತ್ತು ಸುಗಂಧ ತೈಲಗಳನ್ನು ಸಹ ಹೊರತೆಗೆಯಲಾಗುತ್ತದೆ. ಕಿತ್ತಳೆ ಸಂಸ್ಕರಣಾ ಘಟಕವು ವಿದರ್ಭದ ರೈತರ ಜೀವನೋಪಾಯದ ಮೂಲಗಳನ್ನು ಹೆಚ್ಚಿಸುವಲ್ಲಿ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ