AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohan Bhagwat: ಪುರುಷರಿಗಿಂತಲೂ ಮಹಿಳೆಯರ ಸಾಮರ್ಥ್ಯ ದೊಡ್ಡದು, ಅವರ ಪಾಡಿಗೆ ಅವರನ್ನು ಬಿಡಿ; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್

Gender Equality: ಮನೆಗಳಲ್ಲಿ ಅವರನ್ನು ಗುಲಾಮರಂತೆ ಶೋಷಿಸುತ್ತೇವೆ. ಮಹಿಳೆಯರ ಸಬಲೀಕರಣವು ನಮ್ಮ ಮನೆಗಳಲ್ಲಿ ಆರಂಭವಾಗಬೇಕಿದೆ ಎಂದು ಕಿವಿಮಾತು ಹೇಳಿದರು.

Mohan Bhagwat: ಪುರುಷರಿಗಿಂತಲೂ ಮಹಿಳೆಯರ ಸಾಮರ್ಥ್ಯ ದೊಡ್ಡದು, ಅವರ ಪಾಡಿಗೆ ಅವರನ್ನು ಬಿಡಿ; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
ಆರ್​ಎಸ್​ಎಸ್​ ಸರಸಂಘಚಾಲಕ ಮೋಹನ್ ಭಾಗವತ್
TV9 Web
| Edited By: |

Updated on:Aug 19, 2022 | 7:46 AM

Share

ನಾಗಪುರ: ಪುರುಷ ಮತ್ತು ಮಹಿಳೆಯರ ನಡುವೆ ದೈಹಿಕ ವ್ಯತ್ಯಾಸಗಳು ಬಿಟ್ಟರೆ ಉಳಿದೆಲ್ಲ ರೀತಿಯಲ್ಲಿ ಅವರು ಸಮಾನರು. ಅವರಿಬ್ಬರಿಗೂ ಸಮಾನ ಸಾಮರ್ಥ್ಯಗಳು ಇವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh – RSS) ಸರಕಾರ್ಯವಾಹ ಮೋಹನ್ ಭಾಗವತ್ (Mohan Bhagwat) ಹೇಳಿದರು. ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ರಾಷ್ಟ್ರ ಸೇವಿಕಾ ಸಮಿತಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ‘ಜಗಜ್ಜನನಿ’ (ವಿಶ್ವದ ತಾಯಿ) ಎಂದು ನಾವು ಗೌರಿಸುತ್ತೇವೆ. ಆದರೆ ಮನೆಗಳಲ್ಲಿ ಅವರನ್ನು ಗುಲಾಮರಂತೆ ಶೋಷಿಸುತ್ತೇವೆ. ಮಹಿಳೆಯರ ಸಬಲೀಕರಣವು ನಮ್ಮ ಮನೆಗಳಲ್ಲಿ ಆರಂಭವಾಗಬೇಕಿದೆ. ಸಮಾಜದಲ್ಲಿ ಮಹಿಳೆಯರಿಗೆ ತಕ್ಕ ಸ್ಥಾನಮಾನ ನೀಡಿ ಗೌರವಿಸಬೇಕಿದೆ ಎಂದು ಕಿವಿಮಾತು ಹೇಳಿದರು.

ಮಹಿಳೆಯರನ್ನು ಉದ್ಧಾರ ಮಾಡುತ್ತೇವೆ ಎನ್ನುವ ಮನಸ್ಥಿತಿಯಿಂದ ಪುರುಷರು ಏನೂ ಮಾಡಬೇಕಿಲ್ಲ. ಅದು ಅವರ ಸಾಮರ್ಥ್ಯಕ್ಕೆ ಮೀರಿದ್ದು. ಏಕೆಂದರೆ ಮಹಿಳೆಯರು ಪುರುಷರಿಗಿಂತಲೂ ಹೆಚ್ಚಿನ ಕಾರ್ಯಕ್ಷಮತೆ ಹೊಂದಿದ್ದಾರೆ. ಅವರ ಇಷ್ಟದ ಹಾದಿಯನ್ನು ಆರಿಸಿಕೊಳ್ಳಲು ಮತ್ತು ಅದರಲ್ಲಿ ಮುಂದುವರಿಯಲು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟರೆ ಸಾಕು ಎಂದು ಅವರು ಕರೆ ನೀಡಿದರು. ಅವರನ್ನು ಬಹುಕಾಲದಿಂದ ಬಂಧಿಸಿಟ್ಟಿದ್ದೇವೆ. ಈಗಲಾದರೂ ಅವರಿಗೆ ಬಲ ತುಂಬೋಣ. ಪುರುಷ ಪ್ರಾಧಾನ್ಯ ಚಿಂತನೆಯನ್ನು ಬದಿಗಿಟ್ಟು ಮಹಿಳೆಯರನ್ನು ಗೌರವಿಸುವುದನ್ನು ನಾವು ರೂಢಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

‘ಅಖಿಲ ಭಾರತೀಯ ಮಹಿಳಾ ಚೈತ್ರ ಕೋಶ – ಮೊದಲ ಸಂಪುಟ’ (Akhil Bharatiya Mahila Charitra Kosh First Volume – Ancient India) ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಹಿಳೆಯರಿಗಿಂತಲೂ ಪುರುಷರೇ ಶ್ರೇಷ್ಠ ಎನ್ನಲು ಯಾವುದೇ ಆಧಾರವಿಲ್ಲ. ಈ ಬಗ್ಗೆ ಚರ್ಚಿಸುವುದೂ ಅಗತ್ಯವಿಲ್ಲ. ಮಹಿಳೆಯರು ಮತ್ತು ಪುರುಷರು ಸಮಾಜವೆಂಬ ರಥದ ಎರಡು ಚಕ್ರಗಳು ಎಂದರು. ಭಾರತವು ಮತ್ತೊಮ್ಮೆ ‘ವಿಶ್ವಗುರು’ ಆಗಬೇಕು ಎನ್ನುವ ಆಶಯ ಈಡೇರಲು ಮಹಿಳೆಯರ ಪಾತ್ರ ಬಹುದೊಡ್ಡದು. ನಾವು ಮಹಿಳೆಯರ ಸಮಾನ ಪಾಲ್ಗೊಳ್ಳುವಿಕೆಯ ಮೂಲಕ ಭಾರತವನ್ನು ‘ವಿಶ್ವಗುರು’ ಆಗಿಸಬೇಕು. ಎಲ್ಲರ ಹಿನ್ನೆಲೆ ಮತ್ತು ಬದುಕುತ್ತಿರುವ ರೀತಿ ಬೇರೆ. ನಮ್ಮ ಸಮಸ್ಯೆಗಳು ಮತ್ತು ಪರಿಹಾರಗಳೂ ಭಿನ್ನವಾಗಿವೆ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರ ಬಗೆಗಿನ ದೃಷ್ಟಿಕೋನವು ಕಾಲಕ್ಕೆ ತಕ್ಕಂತೆ ನಿಧಾನವಾಗಿ ಬದಲಾಗುತ್ತಿದೆ. ಆದರೆ ಇದರ ವೇಗ ಹೆಚ್ಚಾಗಬೇಕಿದೆ. ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳಲ್ಲಿ ಶೇ 30ರಷ್ಟು ಮೀಸಲಾತಿ ಕೊಡುವ ವಿಚಾರದ ಬಗ್ಗೆ ಆಕ್ಷೇಪಗಳಿವೆ. ಆದರೆ ಕಾಲಕ್ರಮೇಣ ಎಲ್ಲವೂ ಮಹಿಳೆಯರ ಪರವಾಗಿ ಬದಲಾಗುತ್ತಿವೆ ಎಂದು ಹೇಳಿದರು.

ಮೌಲ್ಯಗಳು, ಮದುವೆ ಮತ್ತು ಮಹಿಳೆಯರ ಸ್ವಾತಂತ್ರ್ಯವನ್ನು ಟೀಕಿಸುತ್ತಿದ್ದವರು ಇಂದು ಭಾರತದ ಕೌಟುಂಬಿಕ ವ್ಯವಸ್ಥೆಯ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ. ನಾವು ಸಾವಿರಾರು ವರ್ಷಗಳಿಂದ ಏನು ಹೇಳುತ್ತಿದ್ದೇವೆಯೋ ಅದರ ಬಗ್ಗೆ ಅವರು ಈಗ ಮಾತನಾಡುತ್ತಿದ್ದಾರೆ. ಮನೆಗಳಲ್ಲಿ ಮಹಿಳೆಯರನ್ನು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ, ಅವರಿಗೆ ಸೂಕ್ತ ಸ್ಥಾನಮಾನ ಸಿಕ್ಕಿದೆಯೇ ಎನ್ನುವ ಬಗ್ಗೆ ವಿಮರ್ಶಿಸಿಕೊಳ್ಳಲು ಇದು ಸಕಾಲ ಎಂದು ಅಭಿಪ್ರಾಯಪಟ್ಟರು.

Published On - 7:36 am, Fri, 19 August 22

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?