AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರುಣಾಚಲ ಪ್ರದೇಶದಲ್ಲಿ ಚೀನಾದ ನೆಲೆಯನ್ನು ತೋರಿಸಿವೆ ಹೊಸ ಉಪಗ್ರಹ ಚಿತ್ರಗಳು: ವರದಿ

Arunachal Pradesh ಎನ್‌ಡಿಟಿವಿಗೆ ಲಭಿಸಿದ ಚಿತ್ರಗಳ ಪ್ರಕಾರ, ಈ ಎರಡನೇ ನೆಲ ಭಾರತದೊಳಗೆ ಆರು ಕಿಲೋಮೀಟರ್ ದೂರದಲ್ಲಿದೆ, ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಮತ್ತು ಪ್ರತಿ ರಾಷ್ಟ್ರವು ತನ್ನದೇ ಆದ ಪ್ರದೇಶವೆಂದು ಹೇಳಿಕೊಳ್ಳುವ ಅಂತರರಾಷ್ಟ್ರೀಯ ಗಡಿಯ ನಡುವೆ ಇದು ಇದೆ.

ಅರುಣಾಚಲ ಪ್ರದೇಶದಲ್ಲಿ ಚೀನಾದ ನೆಲೆಯನ್ನು ತೋರಿಸಿವೆ ಹೊಸ ಉಪಗ್ರಹ ಚಿತ್ರಗಳು: ವರದಿ
ಉಪಗ್ರಹ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Nov 18, 2021 | 7:32 PM

Share

ದೆಹಲಿ: ಹೊಸ ಉಪಗ್ರಹ ಚಿತ್ರಗಳು ಅರುಣಾಚಲ ಪ್ರದೇಶದ (Arunachal Pradesh) ಭಾರತೀಯ ಭೂಪ್ರದೇಶದಲ್ಲಿ ಕನಿಷ್ಠ 60 ಕಟ್ಟಡಗಳನ್ನು ಒಳಗೊಂಡಿರುವ ಎರಡನೇ ಚೀನಾದ ನೆಲೆ (Chinese settlement )ಬಹಿರಂಗಪಡಿಸಿವೆ ಎಂದು ಎನ್​​ಡಿಟಿವಿ ಗುರುವಾರ ವರದಿ ಮಾಡಿದೆ. ಈ ಎರಡನೇ ಆವೃತ ವಲಯ, ಅರುಣಾಚಲದ ಶಿ ಯೋಮಿ (Shi Yomi)ಜಿಲ್ಲೆಯಲ್ಲಿದೆ.  ಅಂದರೆ ಈ ವರ್ಷದ ಜನವರಿಯಲ್ಲಿ ಉಪಗ್ರಹ ಚಿತ್ರಗಳ ಮೂಲಕ ಬಹಿರಂಗಪಡಿಸಿದ ಮೊದಲ ನೆಲೆ ಪ್ರದೇಶದಿಂದ 93 ಕಿಮೀ ಪೂರ್ವದಲ್ಲಿದೆ. ಇದರ ಅಸ್ತಿತ್ವವನ್ನು ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಡಿಫೆನ್ಸ್ (DOD) ದೇಶಕ್ಕೆ ಸಲ್ಲಿಸಿದ ವರದಿಯಿಂದ ದೃಢಪಡಿಸಲಾಗಿದೆ. 2020 ರಲ್ಲಿ ಅರುಣಾಚಲ ಪ್ರದೇಶದಲ್ಲಿ ನಿರ್ಮಿಸಲಾದ 100 ಮನೆಗಳ ನಾಗರಿಕ ಗ್ರಾಮವನ್ನು ಕೇಂದ್ರಕ್ಕೆ ಸ್ಪಷ್ಟವಾಗಿ ಉಲ್ಲೇಖಿಸಿದೆ.  ಎನ್‌ಡಿಟಿವಿಗೆ ಲಭಿಸಿದ ಚಿತ್ರಗಳ ಪ್ರಕಾರ, ಈ ಎರಡನೇ ನೆಲ ಭಾರತದೊಳಗೆ ಆರು ಕಿಲೋಮೀಟರ್ ದೂರದಲ್ಲಿದೆ, ನೈಜ ನಿಯಂತ್ರಣ ರೇಖೆ (LAC) ಮತ್ತು ಪ್ರತಿ ರಾಷ್ಟ್ರವು ತನ್ನದೇ ಆದ ಪ್ರದೇಶವೆಂದು ಹೇಳಿಕೊಳ್ಳುವ ಅಂತರರಾಷ್ಟ್ರೀಯ ಗಡಿಯ ನಡುವೆ ಇದು ಇದೆ.2019 ರಿಂದ ಅದೇ ಪ್ರದೇಶದ ಚಿತ್ರಗಳು ಅಂತಹ ಯಾವುದೇ ನೆಲೆಗಳನ್ನು ತೋರಿಸುವುದಿಲ್ಲ, ಇದು ಕಳೆದ ವರ್ಷದೊಳಗೆ ನಿರ್ಮಿಸಲಾಗಿದೆ ಎಂದು ಸೂಚಿಸುತ್ತದೆ.

ಸುದ್ದಿ ಸಂಸ್ಥೆಯು ಭಾರತೀಯ ಸೇನೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿದಾಗ, ಹೊಸ ನೆಲೆ ಭಾರತೀಯ ಭೂಪ್ರದೇಶದೊಳಗೆ ಬಂದಿದೆ ಎಂದು ನಿರಾಕರಿಸುವ ಸ್ಪಷ್ಟ ಹೇಳಿಕೆಯನ್ನು ನೀಡಿಲ್ಲ ಎಂದು ಎನ್​​ಡಿಟಿವಿ ವರದಿ ಮಾಡಿದೆ.

2019 ರಲ್ಲಿ ಸಂಸತ್ತಿನಲ್ಲಿ ಅರುಣಾಚಲ ಪ್ರದೇಶಕ್ಕೆ ಚೀನಾದ ಅತಿಕ್ರಮಣದ ಕುರಿತು ಅರುಣಾಚಲ ಪೂರ್ವದ (ಶಿಯೋಮಿ ಜಿಲ್ಲೆಯನ್ನು ಸಹ ಒಳಗೊಂಡಿದೆ) ಬಿಜೆಪಿ ಸಂಸದ ತಪಿರ್ ಗಾವೊ ಅವರು ಸಂಸತ್ತಿನಲ್ಲಿ ಮಾತನಾಡಿದ್ದರು ಎಂದು ಎನ್‌ಡಿಟಿವಿ ವರದಿ ಉಲ್ಲೇಖಿಸಿದೆ, “ದಯವಿಟ್ಟು ಮುಂದಿನ ಡೋಕ್ಲಾಮ್‌ಗೆ ಅವಕಾಶ ನೀಡಬೇಡಿ. ಅರುಣಾಚಲ ಪ್ರದೇಶವು ಚೀನಾದಂತೆಯೇ ರಾಜ್ಯದ 50 ಕಿ.ಮೀ.ಗೂ ಹೆಚ್ಚು ಭೂಮಿಯನ್ನು ಅತಿಕ್ರಮಿಸಿದೆ ಎಂದು ಅವರು ಹೇಳಿದ್ದರು.

ಪ್ರತಿಕ್ರಿಯೆಗಾಗಿ ದಿ ವೈರ್, ಗಾವೊ ಅವರನ್ನು ಸಂಪರ್ಕಿಸಿದ್ದರೂ ಅವರು ಕೋಲ್ಕತ್ತಾದಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿದ್ದರಿಂದ ಪ್ರತಿಕ್ರಿಯೆ ಪಡೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಈ ವಿಷಯವನ್ನು ಪ್ರಸ್ತಾಪಿಸುತ್ತಿರುವ ಅರುಣಾಚಲದ ಮಾಜಿ ಸಂಸದ ಮತ್ತು ರಾಜ್ಯ ಕಾಂಗ್ರೆಸ್ ನಾಯಕ ನಿನೊಂಗ್ ಎರಿಂಗ್ ಅವರು ಟ್ವಿಟರ್‌ನಲ್ಲಿ ಎನ್‌ಡಿಟಿವಿ ವರದಿಗೆ ಪ್ರತಿಕ್ರಿಯಿಸಿ, “ಈ ಬೆಳವಣಿಗೆಯನ್ನು ಸರ್ಕಾರವು ಗಮನಿಸುತ್ತಿದೆಯೇ?” ಎಂದು ಕೇಳಿದ್ದಾರೆ.

ಪೆಂಟಗನ್ ವರದಿಯನ್ನು ಪ್ರಕಟಿಸಿದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ಅರಿಂದಮ್ ಬಾಗ್ಚಿ, ಭಾರತವು ವರದಿಯನ್ನು “ಗಮನಿಸಿಕೊಂಡಿದೆ” ಮತ್ತು ಚೀನಾವು  ದಶಕಗಳಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಒಳಗೊಂಡಂತೆ ಕಳೆದ ಹಲವಾರು ವರ್ಷಗಳಿಂದ ಗಡಿಯಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಭಾರತವು ತನ್ನ ಭೂಪ್ರದೇಶದ ಯಾವುದೇ ಅಕ್ರಮ ಆಕ್ರಮಣ ಅಥವಾ ಯಾವುದೇ “ನ್ಯಾಯಸಮ್ಮತವಲ್ಲದ ಚೀನೀ ವಾದಗಳನ್ನು” ಒಪ್ಪಿಕೊಂಡಿಲ್ಲ ಎಂದು ಬಾಗ್ಚಿ ತಿಳಿಸಿದ್ದಾರೆ.

ಆದಾಗ್ಯೂ, ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಈ ವಾದಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು, ಚೀನಾವು ಎಲ್​​ಎಸಿಯ ಸ್ವಂತ ಭಾಗದಲ್ಲಿ ಮಾತ್ರ ನಿರ್ಮಾಣವನ್ನು ಕೈಗೊಂಡಿದೆ ಎಂದು ಹೇಳಿದರು. ಟೈಮ್ಸ್ ನೌ ಶೃಂಗಸಭೆ 2021 ರಲ್ಲಿ ಮಾತನಾಡಿದ ರಾವತ್ “ನಮಗೆ ಸಂಬಂಧಿಸಿದಂತೆ, ನಮ್ಮ ಎಲ್​​ಎಸಿಯ ಭಾಗದಲ್ಲಿ ಅಂತಹ ಯಾವುದೇ ಗ್ರಾಮ ನೆಲೆ ಮಾಡಿದ್ದಿಲ್ಲ” ಎಂದು ಅಮೆರಿಕದ ವರದಿಯ ವಾದ ಉಲ್ಲೇಖಿಸಿ ಹೇಳಿದ್ದಾರೆ

“ಈಗಿನ ವಿವಾದ ಭುಗಿಲೆದ್ದಿದೆ. ಚೀನೀಯರು ನಮ್ಮ ಪ್ರದೇಶಕ್ಕೆ ಅಡ್ಡಲಾಗಿ ಬಂದು ಹೊಸ ಗ್ರಾಮವನ್ನು ನಿರ್ಮಿಸಿದ್ದಾರೆ ಎಂಬುದು ನಿಜವಲ್ಲ” ಎಂದು ಅವರು ಹೇಳಿದರು.

ಎನ್​​ಡಿಟಿವಿ ವರದಿಯು ಉಪಗ್ರಹ ಚಿತ್ರಗಳ ಮೂಲಕ ಬಹಿರಂಗಪಡಿಸಿದ ಹೊಸ ರಚನೆಯ ನಿರ್ದೇಶಾಂಕಗಳು ಕೇಂದ್ರ ಸರ್ಕಾರದ ಅಧಿಕೃತ ನಕ್ಷೆ ಸೇವೆ, ಭಾರತ್‌ಮ್ಯಾಪ್ಸ್ ಮತ್ತು ಸರ್ವೆ ಆಫ್ ಇಂಡಿಯಾ ವೆಬ್‌ಸೈಟ್‌ನ ಅಧಿಕೃತ ಡೇಟಾದಿಂದ ದಾಖಲಿಸಲ್ಪಟ್ಟಿರುವಂತೆ ಭಾರತೀಯ ಪ್ರದೇಶದೊಳಗೆ ಬರುತ್ತವೆ ಎಂದು ದೃಢಪಡಿಸುತ್ತದೆ. ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ದಿ ಸಂಸ್ಥೆಯು ಈ ವರ್ಷದ ಜುಲೈನಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅರುಣಾಚಲ ಪ್ರದೇಶದ ದೇಶದ ಗಡಿಯಲ್ಲಿನ ರೈಲು ಮಾರ್ಗದ ಪ್ರಗತಿಯನ್ನು ಪರಿಶೀಲಿಸಲು ಭೇಟಿ ನೀಡಿದಾಗ ಈ ನೆಲೆಯ ಫೋಟೋಗಳನ್ನು ಪ್ರಕಟಿಸಿತು.

ಅಕ್ಟೋಬರ್ 23 ರಂದು ಚೀನಾ ಭೂ ಗಡಿ ಕಾನೂನನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಇತ್ತೀಚಿನ ಬೆಳವಣಿಗೆಗಳು ಬೆಳಕಿಗೆ ಬಂದಿವೆ. ಜನವರಿ 1, 2022 ರಿಂದ ಜಾರಿಗೆ ಬರಲಿರುವ ಕಾನೂನು ರಾಜ್ಯವು “ರಾಷ್ಟ್ರೀಯ ಸಮಗ್ರತೆಯನ್ನು ದೃಢವಾಗಿ ರಕ್ಷಿಸಬೇಕು” ಮತ್ತು “ಯಾವುದೇ ಕಾಯ್ದೆಯನ್ನು ಎದುರಿಸಬೇಕು” ಎಂದು ಷರತ್ತು ವಿಧಿಸುತ್ತದೆ. ಇದು ಭೂಮಿಯ ಗಡಿಗಳನ್ನು ಹಾಳುಮಾಡುತ್ತದೆ.

ಈ ಹೊಸ ಕಾನೂನಿನ ನೆಪದಲ್ಲಿ ಬೀಜಿಂಗ್ LAC ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಇತ್ತೀಚೆಗೆ ಭರವಸೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಪೂರ್ವ ಲಡಾಖ್‌ನಲ್ಲಿ ನವೀಕರಿಸಿದ ಯುದ್ಧ ಸ್ಮಾರಕ ಉದ್ಘಾಟಿಸಿದ ರಾಜನಾಥ್ ಸಿಂಗ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ