AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನನ್ನು ಟೀಕಿಸಿ ಟ್ರೋಲ್ ಮಾಡಲಾಗಿತ್ತು; ಸುಪ್ರೀಂಕೋರ್ಟ್ ಸಿಜೆಐ ಚಂದ್ರಚೂಡ್

ನಾಲ್ಕೈದು ದಿನಗಳ ಹಿಂದೆ ಪ್ರಕರಣದ ವಿಚಾರಣೆ ವೇಳೆ ನನ್ನ ಬೆನ್ನಿನಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ನಾನು ನ್ಯಾಯಾಲಯದಲ್ಲಿ ಕುಳಿತುಕೊಳ್ಳುವಾಗ ನನ್ನ ಮೊಣಕೈಯನ್ನು ಕುರ್ಚಿಯ ಕೈ ಮೇಲೆ ಇರಿಸಿ, ನನಗೆ ಅನುಕೂಲವಾಗುವಂತೆ ಕುಳಿತುಕೊಂಡೆ. ಆದರೆ ಸಿಜೆಐ ಅವರು ನ್ಯಾಯಾಲಯದಲ್ಲಿ ಪ್ರಮುಖ ವಾದದ ಮಧ್ಯದಲ್ಲಿ ಎದ್ದರು ಎಂದು ಹೇಳುವ ಮೂಲಕ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ನನ್ನನ್ನು "ಅಹಂಕಾರಿ" ಎಂದು ಕರೆದರು ಎಂದು ಟ್ರೋಲ್ ಬಗ್ಗೆ ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.

ನನ್ನನ್ನು ಟೀಕಿಸಿ ಟ್ರೋಲ್ ಮಾಡಲಾಗಿತ್ತು; ಸುಪ್ರೀಂಕೋರ್ಟ್ ಸಿಜೆಐ ಚಂದ್ರಚೂಡ್
ಸಿಜೆಐ ಚಂದ್ರಚೂಡ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 23, 2024 | 8:43 PM

ಬೆಂಗಳೂರು ಮಾರ್ಚ್ 23: ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (D Y Chandrachud) ಅವರು ವಿಚಾರಣೆಯ ಸಮಯದಲ್ಲಿ ಸರಿಯಾಗಿ ಕುಳಿತುಕೊಳ್ಳಲು ನೋಡುತ್ತಿರುವಾಗ ‘ಟ್ರೋಲಿಂಗ್’ ಮತ್ತು ‘ಕೆಟ್ಟ’ ನಿಂದನೆಗೆ ಗುರಿಯಾದ ಇತ್ತೀಚಿನ ಘಟನೆಯನ್ನು ಶನಿವಾರ ನೆನಪಿಸಿಕೊಂಡರು. ಬೆಂಗಳೂರಿನಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ ದ್ವೈವಾರ್ಷಿಕ ಸಮಾವೇಶದಲ್ಲಿ (biennial conference) ಮಾತನಾಡಿದ ಸಿಜೆಐ ಚಂದ್ರಚೂಡ್, ನಾಲ್ಕೈದು ದಿನಗಳ ಹಿಂದೆ ಪ್ರಕರಣದ ವಿಚಾರಣೆ ವೇಳೆ ನನ್ನ ಬೆನ್ನಿನಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ನಾನು ನ್ಯಾಯಾಲಯದಲ್ಲಿ ಕುಳಿತುಕೊಳ್ಳುವಾಗ ನನ್ನ ಮೊಣಕೈಯನ್ನು ಕುರ್ಚಿಯ ಕೈ ಮೇಲೆ ಇರಿಸಿ, ನನಗೆ ಅನುಕೂಲವಾಗುವಂತೆ ಕುಳಿತುಕೊಂಡೆ. ಆದರೆ ಸಿಜೆಐ ಅವರು ನ್ಯಾಯಾಲಯದಲ್ಲಿ ಪ್ರಮುಖ ವಾದದ ಮಧ್ಯದಲ್ಲಿ ಎದ್ದರು ಎಂದು ಹೇಳುವ ಮೂಲಕ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ನನ್ನನ್ನು “ಅಹಂಕಾರಿ” ಎಂದು ಕರೆದರು.

“ಅವರು ನಿಮಗೆ ಹೇಳದೇ ಇರುವ ವಿಷಯ ಎಂದರೆ ನಾನು ಕುರ್ಚಿಯಲ್ಲಿ ನನ್ನ ಸ್ಥಾನ ಬದಲಿಸಿದ್ದೆ ಎಂಬುದನ್ನು. 24 ವರ್ಷಗಳ ಕಾಲ ನನ್ನ ಕಾರ್ಯದ ನಡುವೆ ಆದದ್ದು ಇಷ್ಟೇ. ನಾನು ನ್ಯಾಯಾಲಯದಿಂದ ಹೊರ ಹೋಗಿಲ್ಲ. ನಾನು ನನ್ನ ಸ್ಥಾನವನ್ನು ಬದಲಾಯಿಸಿದೆ. ಆದರೆ ನಾನು ಕೆಟ್ಟ ನಿಂದನೆ, ಟ್ರೋಲಿಂಗ್‌ಗೆ ಒಳಗಾಗಿದ್ದೇನೆ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಅನಗತ್ಯ ಟೀಕೆಗಳ ಹೊರತಾಗಿಯೂ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಾಮಾನ್ಯ ನಾಗರಿಕರಿಗೆ ಶ್ರದ್ಧೆಯಿಂದ ಸೇವೆ ಸಲ್ಲಿಸಲು ನ್ಯಾಯಾಂಗದ ಬದ್ಧತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. “ನಮ್ಮ ಭುಜಗಳು ಸಾಕಷ್ಟು ವಿಶಾಲವಾಗಿವೆ. ನಾವು ಮಾಡುವ ಕೆಲಸದಲ್ಲಿ ಸಾಮಾನ್ಯ ನಾಗರಿಕರು ವಿಶ್ವಾಸ ಹೊಂದಿದ್ದಾರೆ ಎಂಬುದೇ ನಮ್ಮ ಆತ್ಮವಿಶ್ವಾಸ ಎಂದು ಹೇಳಿದ್ದಾರೆ.

ಎರಡು ದಿನಗಳ ಸಮ್ಮೇಳನದ ವಿಷಯಗಳಲ್ಲಿ ಒಂದಾದ ಒತ್ತಡವನ್ನು ನಿರ್ವಹಿಸುವ ಮತ್ತು ಕೆಲಸ-ಜೀವನದ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಂಗ ಅಧಿಕಾರಿಗಳ ಅಗತ್ಯವನ್ನು ಒತ್ತಿಹೇಳುವಾಗ ಚಂದ್ರಚೂಡ್ ಘಟನೆಯ ಕುರಿತು ಪ್ರತಿಕ್ರಿಯಿಸಿದರು.

“ಕೆಲವೊಮ್ಮೆ ನ್ಯಾಯಾಧೀಶರಾಗಿ ಅವರು ನಮ್ಮೊಂದಿಗೆ ವ್ಯವಹರಿಸುವಾಗ, ಅವರು ಗಡಿ ದಾಟುತ್ತಾರೆ. ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ, ನ್ಯಾಯಾಲಯದಲ್ಲಿ ನಮ್ಮೊಂದಿಗೆ ಮಾತನಾಡುವಾಗ ಹಲವಾರು ವಕೀಲರು ಮತ್ತು ದಾವೆದಾರರು ಗೆರೆ ದಾಟುವುದನ್ನು ನಾನು ನೋಡುತ್ತೇನೆ ಈ ದಾವೆದಾರರು ರೇಖೆಯನ್ನು ದಾಟಿದಾಗ ಉತ್ತರವು ನ್ಯಾಯಾಂಗ ನಿಂದನೆಯ (ನ್ಯಾಯಾಲಯದ) ಅಧಿಕಾರವನ್ನು ಬಳಸುವುದು ಅಲ್ಲ, ಆದರೆ ಅವರು ಏಕೆ ಗೆರೆಯನ್ನು ದಾಟಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಇದನ್ನೂ ಓದಿ: ಇದು ‘ಮೋದಿ ಕಿ ಗ್ಯಾರಂಟಿ’; ಪ್ರಧಾನಿ ನರೇಂದ್ರ ಮೋದಿ ಭೇಟಿಗಾಗಿ ಧನ್ಯವಾದ ಸಲ್ಲಿಸಿದ ಭೂತಾನ್ ಪಿಎಂ

ವಕೀಲರು ಮತ್ತು ಅವರ ಕಕ್ಷಿದಾರರು ಎದುರಿಸುತ್ತಿರುವ ಕೆಲವು ಆಳವಾದ ಬೇರೂರಿರುವ ಅನ್ಯಾಯವಿರಬೇಕು, ಅದಕ್ಕಾಗಿಯೇ ಅವರು ಕೆಲವೊಮ್ಮೆ ಅವರು ಹೇಳದಂತಹ ವಿಷಯಗಳನ್ನು ಉಚ್ಚರಿಸುತ್ತಾರೆ ಎಂದು ಅವರು ಹೇಳಿದರು.

“ಈ ಸಂದರ್ಭದಲ್ಲಿ, ನೀವು ನಿರ್ವಹಿಸುವ ಜವಾಬ್ದಾರಿಯು ಅಪಾರವಾಗಿದೆ.ಇಲ್ಲಿ ಶಾಂತ ಮತ್ತು ಸಹಾನುಭೂತಿಯ ವಿಧಾನದ ಅಗತ್ಯವಿದೆ. ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವುದು ಈ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಅವಿಭಾಜ್ಯ ಘಟಕವಾಗಿದೆ ಎಂದು ಅವರು ನ್ಯಾಯಾಂಗ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ