ಇಂದಿರಾ ಗಾಂಧಿ ಜೈಪುರದ ಜೈಗಢ ಕೋಟೆಯಲ್ಲಿ ‘ಎಮರ್ಜೆನ್ಸಿ’ ನಿಧಿ ಶೋಧ ನಡೆಸಿದಾಗ ಸಿಕ್ಕಿದ್ದೆಷ್ಟು? ಪಾಕಿಸ್ತಾನದ ಕ್ಯಾತೆ ಏನಿತ್ತು? ಮೂಲ ಎಲ್ಲಿತ್ತು?
Indira Gandhi Jaigarh Fort treasure hunt: ಅಂದು ಪ್ರಧಾನಿ ಇಂದಿರಾ ಗಾಂಧಿ ಜೈಗಢ ಕೋಟೆಯಲ್ಲಿ ಬೃಹತ್ ನಿಧಿ ಶೋಧನೆ ನಡೆಸಿದ್ದರು. ಆದರೆ ಪಾಕಿಸ್ತಾನ ಆ ಕೋಟೆಯ ಸಂಪತ್ತಿನಲ್ಲಿ ತನಗೂ ಪಾಲು ಸೇರಬೇಕು ಎಂಬ ವಾದ /ಹಕ್ಕು ಮಂಡಿಸಿತು. ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಭುಟ್ಟೊ ಇಂದಿರಾಗೆ ಪತ್ರ ಬರೆದು ಜೈಪುರ ಸಂಪತ್ತಿನಲ್ಲಿ ಪಾಲು ಕೊಡಿ ಎಂದಿದ್ದರು! ಏನದು ವ್ಯವಹಾರ? ಎಷ್ಟರ ವ್ಯವಹಾರ... ಸಂಪೂರ್ಣ ಲೆಕ್ಕ ಇಲ್ಲಿದೆ

1975 ರಲ್ಲಿ ಏನಾಯಿತೆಂದರೆ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಭಾರತದಲ್ಲಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಜೈಪುರದ ಗಾಯತ್ರಿ ದೇವಿ ತೀವ್ರವಾಗಿ ವಿರೋಧಿಸಿದರು. ಹಾಗಾಗಿ ಗಾಯತ್ರಿ ದೇವಿ ಅವರನ್ನು ಜೈಲಿನಲ್ಲಿರಿಸಲಾಯಿತು ಮತ್ತು ಜೈಪುರದ ಅಂತಃಪುರದಲ್ಲಿ ಆದಾಯ ತೆರಿಗೆ ದಾಳಿ ನಡೆಸಲಾಯಿತು. ಕುತೂಹಲಕಾರಿಯಾಗಿ, ಜೈಪುರದ ಎಲ್ಲಾ ಕೋಟೆಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಉಸ್ತುವಾರಿಯಲ್ಲಿದ್ದವು. ಆದರೆ ಜೈಗಢ ಕೋಟೆ ಜೈಪುರ ರಾಜಮನೆತನದ ಗಾಯತ್ರಿ ದೇವಿ ವಶದಲ್ಲಿತ್ತು. ಈ ಹಿನ್ನೆಲೆಯಲ್ಲಿ 1976 ರಲ್ಲಿ ಇಂದಿರಾ ಗಾಂಧಿ ಅವರ ಆಳ್ವಿಕೆಯಲ್ಲಿ ನಡೆದ ನಿಧಿ ಹುಡುಕಾಟವನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಆದರೆ ಇಂದಿರಾ ಗಾಂಧಿಯವರು (Indira Gandhi) 1976 ರಲ್ಲಿ ಜೈಪುರದ ಜೈಗಢ್ ಕೋಟೆಯಲ್ಲಿ (Jaipur Jaigarh Fort) ಐದು ತಿಂಗಳ ಕಾಲ ನಡೆದ ಬೃಹತ್ ನಿಧಿ ಶೋಧಕ್ಕೆ (treasure hunt) ಆದೇಶ ನೀಡಿದ್ದರು. ಆಗ ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಭುಟ್ಟೊ (Pakistan Prime Minister Zulfikar Bhutto) ಇಂದಿರಾಗೆ ಪತ್ರ ಬರೆದು ಜೈಪುರ ಕೋಟೆ ಸಂಪತ್ತಿನಲ್ಲಿ ಪಾಲು ಕೇಳಿದ್ದರು. ಅದು ಆಗಸ್ಟ್ 1976, ಮತ್ತು ಪಾಕಿಸ್ತಾನದ ಪ್ರಧಾನ ಮಂತ್ರಿ ಜುಲ್ಫಿಕರ್ ಅಲಿ ಭುಟ್ಟೋ ಅವರು ಸಹಿ ಮಾಡಿದ ಪತ್ರವು ನವದೆಹಲಿಯನ್ನು ತಲುಪಿತು. ಈ ಪತ್ರವನ್ನು ಅಂದಿನ ಭಾರತದ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಬರೆಯಲಾಗಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಹಕಾರದ ಕುರಿತು ಕೆಲವು ವಿಷಯಗಳ ಬಗ್ಗೆ ಮಾತನಾಡಿದ ನಂತರ, ರಾವಲ್ಪಿಂಡಿಯಿಂದ ಪತ್ರವು ತಕ್ಷಣವೇ ಒಂದು ನಿರ್ದಿಷ್ಟ ಬೇಡಿಕೆಯನ್ನು ಮುಂದಿಟ್ಟಿತ್ತು. “ನಿಮ್ಮ ಸರ್ಕಾರದ ಆದೇಶದ ಮೇರೆಗೆ ಜೈಪುರದಲ್ಲಿ ಅಗೆಯುತ್ತಿರುವ ನಿಧಿಯ ಬಗ್ಗೆ ನಾನು...
Published On - 11:27 am, Mon, 8 July 24