- Kannada News Photo gallery chamarajanagar border villagers find natural water resources and give up pipeline tap water
ಸರ್ಕಾರಿ ಕೊಳವೆಯಲ್ಲಿ ಬರುವ ನೀರಿಗಿಂತ, ನಿಸರ್ಗ ಸಹಜ ಝರಿಯ ನೀರು ಶ್ರೇಷ್ಠ, ಆರೋಗ್ಯಕರ ಎನ್ನುತ್ತಿದ್ದಾರೆ ಗಡಿ ಗ್ರಾಮಸ್ಥರು!
chamarajanagar: ಇಲ್ಲಿನ ಜನರಿಗೆ ನಲ್ಲಿ ನೀರಿಗಿಂತ ಹೊಳೆಯಲ್ಲಿ ಹರಿಯುವ ನೀರು ಶ್ರೇಷ್ಠ. ಅದನ್ನೇ ನಂಬಿರುವ ಅವರು ಆರೋಗ್ಯವಾಗಿಯೂ ಇದಾರೆ. ನಗರಗಳಲ್ಲಿ ಫಿಲ್ಟರ್ ನೀರು ಕುಡಿದು ಅನಾರೋಗ್ಯಕ್ಕೆ ಒಳಗಾಗುವ ಜನರ ನಡುವೆ ಇಲ್ಲಿನ ಜನರ ಜೀವನಶೈಲಿ ಆಶ್ಚರ್ಯ ಹುಟ್ಟಿಸಿರುವುದು ಸುಳ್ಳಲ್ಲ.
Updated on: Dec 28, 2022 | 11:31 AM

ಗ್ರಾಮೀಣ ಭಾಗದ ಪ್ರತಿ ಮನೆಗೂ ಕುಡಿಯುವ ನೀರು ಕಲ್ಪಿಸಬೇಕೆಂದು ಸರ್ಕಾರ ಮನೆ ಮನೆಗೆ ಗಂಗೆ ಹರಿಸಲು ನಲ್ಲಿ ಕೊಳವೆ ಅಳವಡಿಸಿದೆ. ಇದ್ರಿಂದ ಜನರಿಗೆ ಸಾಕಷ್ಟು ಅನುಕೂಲವು ಸಹ ಆಗಿದೆ. ಆದ್ರೆ ಗಡಿ ಜಿಲ್ಲೆ ಚಾಮರಾಜನಗರದ (chamarajanagar) ಈ ಊರಿನ ಜನರಿಗೆ ನಲ್ಲಿ ನೀರಿನ ಅವಶ್ಯಕತೆಯೇ ಇಲ್ಲ. ಹಾಗಾದ್ರೆ ಅವರು ಕುಡಿಯುವ ನೀರಿಗಾಗಿ ಕಂಡುಕೊಂಡಿರುವ ಮಾರ್ಗ ಎಂತದ್ದು ಅಂತಿರಾ.

ಹಾಗಾದ್ರೆ ಈ ಸ್ಟೋರಿ ನೋಡಿ. ಸುತ್ತಲೂ ಹಸಿರು ಹೊದ್ದಿರುವ ಕಾಡು... ಸುಮಾರು 25 ಕಿಲೋ ಮೀಟರ್ ದೂರದ ಕಾಡಿನಿಂದ ಹರಿದು ಬರುತ್ತಿರುವ ಝರಿ ನೀರು (natural water resources). ಈ ದೃಶ್ಯ ಕಂಡುಬರುವುದು ಚಾಮರಾಜನಗರ ತಾಲೂಕಿನ ರಂಗಸಂದ್ರ (ಬೂದಿಪಡಗ) ಗ್ರಾಮದಲ್ಲಿ (border villagers).

ಲಂಬಾಣಿ, ಸೋಲಿಗ ಬುಡಕಟ್ಟು ಸಮುದಾಯದವರೇ ವಾಸಿಸುತ್ತಿರುವ ಈ ಗ್ರಾಮಕ್ಕೆ ಸಿಸಿ ರಸ್ತೆ, ಪ್ರತಿ ಮನೆಗೂ ನಲ್ಲಿ ವ್ಯವಸ್ಥೆಯನ್ನು (tap water) ಸರ್ಕಾರ ಮಾಡಿಕೊಟ್ಟಿದೆ.

ಆದ್ರೆ ಈ ನಲ್ಲಿ ನೀರು ಈ ಜನರಿಗೆ ಬೇಡವಾಗಿದೆ. ಕಾಡಿನಿಂದ ಝರಿ ರೂಪದಲ್ಲಿ ಹರಿದುಬರುವ ತಣ್ಣನೆಯ ನೀರನ್ನೆ ಬಳಸುತ್ತಾರೆ. ನಿತ್ಯ ಬೆಳಗ್ಗೆ ಬಿಂದಿಗೆಯಲ್ಲಿ ನೀರು ತೆಗೆದುಕೊಂಡು ಹೊಗುವ ಅವರು ಅಡುಗೆ ಮತ್ತು ಕುಡಿಯಲು ಸಹ ಬಳಸ್ತಾರೆ. ನಲ್ಲಿ ನೀರನ್ನು ಪಾತ್ರೆ, ಬಟ್ಟೆ ತೊಳೆಯಲಷ್ಟೇ ಬಳಸ್ತಾರೆ.

ಇದಕ್ಕೆ ಕಾರಣಗಳು ಹತ್ತು ಹಲವಾರು. ಕಾಡಿನಿಂದ ಬರುವ ನೀರಿನಲ್ಲಿ ಗಿಡಮೂಲಿಕೆಗಳ ಮಿಶ್ರಣವಿದೆ. ಅದನ್ನ ಸೇವಿಸಿದರೆ ಯಾವುದೇ ರೋಗ ಬರುವುದಿಲ್ಲ. ಹೀಗಾಗಿ ನಲ್ಲಿ ನೀರಿಗಿಂತ ಝರಿಯ ನೀರೆ ಶ್ರೇಷ್ಠ ಎನ್ನುತ್ತಾರೆ ಸ್ಥಳೀಯರು.

ಇನ್ನು ತಾತ ಮುತ್ತಾತರ ಕಾಲದಿಂದಲೂ ಹೊಳೆ ನೀರನ್ನೇ ಸೇವಿಸುತ್ತಿದ್ದು ನಲ್ಲಿ ನೀರು ಆರೋಗ್ಯಕ್ಕೆ ಒಗ್ಗುವುದಿಲ್ಲ. ವರ್ಷದ 12 ತಿಂಗಳು ಹೊಳೆ ಹರಿಯುತ್ತೆ. ಬೇಸಿಗೆ ಸಂದರ್ಭದಲ್ಲಿ ಹಳ್ಳ ತೆಗೆದು ನೀರು ತಗೋತಿವಿ.

ನಮಗೆ ಪ್ರಕೃತಿ ಮಡಿಲಲ್ಲಿ ಹರಿದು ಬರುವ ನೀರು ಶ್ರೇಷ್ಠ. ಅರಣ್ಯ ಇಲಾಖೆ ಅಧಿಕಾರಿಗಳು ಸಹ ಪರೀಕ್ಷೆಗಾಗಿ ನೀರನ್ನು ತೆಗೆದುಕೊಂಡು ಹೋಗಿದ್ರು. ಈ ನೀರಲ್ಲಿ ಯಾವುದೇ ಕಲ್ಮಶವಿಲ್ಲ ಅಂತ ಸ್ಥಳೀಯರು ಹೇಳುತ್ತಿದ್ದಾರೆ..

ಒಟ್ಟಾರೆ, ಇಲ್ಲಿನ ಜನರಿಗೆ ನಲ್ಲಿ ನೀರಿಗಿಂತ ಹೊಳೆಯಲ್ಲಿ ಹರಿಯುವ ನೀರು ಶ್ರೇಷ್ಠ. ಅದನ್ನೇ ನಂಬಿರುವ ಅವರು ಆರೋಗ್ಯವಾಗಿಯೂ ಇದಾರೆ. ನಗರಗಳಲ್ಲಿ ಫಿಲ್ಟರ್ ನೀರು ಕುಡಿದು ಅನಾರೋಗ್ಯಕ್ಕೆ ಒಳಗಾಗುವ ಜನರ ನಡುವೆ ಇಲ್ಲಿನ ಜನರ ಜೀವನಶೈಲಿ ಆಶ್ಚರ್ಯ ಹುಟ್ಟಿಸಿರುವುದು ಸುಳ್ಳಲ್ಲ. ವರದಿ: ದಿಲೀಪ್ ಚೌಡಹಳ್ಳಿ, ಟಿ ವಿ 9, ಚಾಮರಾಜನಗರ



















