AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fitness Tips: ಜಿಮ್‌ಗೆ ಹೋಗದೆ ಫಿಟ್ ಆಗಿರುವುದು ಹೇಗೆ?

ನಾವು ಆರೋಗ್ಯವಾಗಿರಬೇಕೆಂದರೆ ನಮ್ಮ ದೇಹದ ಫಿಟ್​ನೆಸ್ ಕೂಡ ಬಹಳ ಮುಖ್ಯ. ಇದಕ್ಕೆ ಗಂಟೆಗಟ್ಟಲೆ ಜಿಮ್​ನಲ್ಲಿ ಬೆವರು ಹರಿಸಬೇಕೆಂದೇನೂ ಇಲ್ಲ. ಮನೆಯಲ್ಲೇ ಅಥವಾ ನಾವು ಕೆಲಸ ಮಾಡುವ ಸ್ಥಳದಲ್ಲೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಾವು ಫಿಟ್ ಆಗಿರಬಹುದು.

ಸುಷ್ಮಾ ಚಕ್ರೆ
|

Updated on: Jan 16, 2024 | 6:47 PM

ಬೊಜ್ಜು ಈಗೀಗ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಈ ಬೊಜ್ಜು ಕೆಲವೊಮ್ಮೆ ನಮ್ಮ ಆರೋಗ್ಯಕ್ಕೆ ಅಪಾಯವನ್ನು ಕೂಡ ಉಂಟುಮಾಡಬಹುದು. ಹೀಗಾಗಿ, ಫಿಟ್ ಆಗಿರುವುದು ಅತ್ಯಗತ್ಯ.

ಬೊಜ್ಜು ಈಗೀಗ ಪ್ರತಿಯೊಬ್ಬರನ್ನೂ ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಈ ಬೊಜ್ಜು ಕೆಲವೊಮ್ಮೆ ನಮ್ಮ ಆರೋಗ್ಯಕ್ಕೆ ಅಪಾಯವನ್ನು ಕೂಡ ಉಂಟುಮಾಡಬಹುದು. ಹೀಗಾಗಿ, ಫಿಟ್ ಆಗಿರುವುದು ಅತ್ಯಗತ್ಯ.

1 / 9
ಇದಕ್ಕೆ ಜಿಮ್​ಗೆ ಹೋಗಿಯೇ ವರ್ಕ್​ಔಟ್ ಮಾಡಬೇಕೆಂದೇನೂ ಇಲ್ಲ. ನಮ್ಮ ಆಹಾರ, ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಮ್ಮ ದೇಹವನ್ನು ಶೇಪ್​ನಲ್ಲಿ ಇಟ್ಟುಕೊಳ್ಳಬಹುದು.

ಇದಕ್ಕೆ ಜಿಮ್​ಗೆ ಹೋಗಿಯೇ ವರ್ಕ್​ಔಟ್ ಮಾಡಬೇಕೆಂದೇನೂ ಇಲ್ಲ. ನಮ್ಮ ಆಹಾರ, ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಮ್ಮ ದೇಹವನ್ನು ಶೇಪ್​ನಲ್ಲಿ ಇಟ್ಟುಕೊಳ್ಳಬಹುದು.

2 / 9
ಫಿಟ್ ಆಗಿರಲು ಜಿಮ್​ನಲ್ಲಿ ವರ್ಕ್​ಔಟ್ ಮಾಡಬೇಕೆಂದೇನೂ ಇಲ್ಲ. ಇಡೀ ದಿನ ಚಟುವಟಿಕೆಯಿಂದ ಇರಿ. ಅಂದರೆ, ಒಂದೇ ಕಡೆ ಕುಳಿತುಕೊಂಡಿರಬೇಡಿ. ಓಡಾಡುತ್ತಿರಿ. ಲಿಫ್ಟ್​ ಬದಲು ಮೆಟ್ಟಿಲುಗಳನ್ನು ಹತ್ತಿ ಇಳಿಯಿರಿ. ಆದಷ್ಟು ನಡೆದಾಡುತ್ತಾ ಇರಿ.

ಫಿಟ್ ಆಗಿರಲು ಜಿಮ್​ನಲ್ಲಿ ವರ್ಕ್​ಔಟ್ ಮಾಡಬೇಕೆಂದೇನೂ ಇಲ್ಲ. ಇಡೀ ದಿನ ಚಟುವಟಿಕೆಯಿಂದ ಇರಿ. ಅಂದರೆ, ಒಂದೇ ಕಡೆ ಕುಳಿತುಕೊಂಡಿರಬೇಡಿ. ಓಡಾಡುತ್ತಿರಿ. ಲಿಫ್ಟ್​ ಬದಲು ಮೆಟ್ಟಿಲುಗಳನ್ನು ಹತ್ತಿ ಇಳಿಯಿರಿ. ಆದಷ್ಟು ನಡೆದಾಡುತ್ತಾ ಇರಿ.

3 / 9
ಗುಣಮಟ್ಟದ ನಿದ್ರೆಯು ಆರೋಗ್ಯಕರ ಜೀವನಶೈಲಿಗೆ ಅತ್ಯಗತ್ಯವಾಗಿದೆ. ನಿಯಮಿತವಾದ ಮಲಗುವ ಸಮಯದ ದಿನಚರಿಯನ್ನು ರೂಢಿಸಿಕೊಳ್ಳಿ. ಮಲಗುವ ಮುನ್ನ ಹೆಚ್ಚು ಟಿವಿ, ಮೊಬೈಲ್ ನೋಡಬೇಡಿ.

ಗುಣಮಟ್ಟದ ನಿದ್ರೆಯು ಆರೋಗ್ಯಕರ ಜೀವನಶೈಲಿಗೆ ಅತ್ಯಗತ್ಯವಾಗಿದೆ. ನಿಯಮಿತವಾದ ಮಲಗುವ ಸಮಯದ ದಿನಚರಿಯನ್ನು ರೂಢಿಸಿಕೊಳ್ಳಿ. ಮಲಗುವ ಮುನ್ನ ಹೆಚ್ಚು ಟಿವಿ, ಮೊಬೈಲ್ ನೋಡಬೇಡಿ.

4 / 9
ನಾವು ತಿನ್ನುವ ಆಹಾರ ಕೂಡ ಫಿಟ್​ನೆಸ್ ಮೇಲೆ ಪರಿಣಾಮ ಬೀರುತ್ತದೆ. ಸಮತೋಲಿತ ಆಹಾರವು ಆರೋಗ್ಯಕರ ಜೀವನಶೈಲಿಯ ಮೂಲಾಧಾರವಾಗಿದೆ. ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ನೇರ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಿ. ಸಂಸ್ಕರಿಸಿದ ಆಹಾರಗಳು, ಜಂಕ್ ತಿಂಡಿಗಳು ಮತ್ತು ಅತಿಯಾದ ಸಿಹಿತಿಂಡಿಗಳನ್ನು ಕಡಿಮೆ ಮಾಡಿ.

ನಾವು ತಿನ್ನುವ ಆಹಾರ ಕೂಡ ಫಿಟ್​ನೆಸ್ ಮೇಲೆ ಪರಿಣಾಮ ಬೀರುತ್ತದೆ. ಸಮತೋಲಿತ ಆಹಾರವು ಆರೋಗ್ಯಕರ ಜೀವನಶೈಲಿಯ ಮೂಲಾಧಾರವಾಗಿದೆ. ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ನೇರ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಿ. ಸಂಸ್ಕರಿಸಿದ ಆಹಾರಗಳು, ಜಂಕ್ ತಿಂಡಿಗಳು ಮತ್ತು ಅತಿಯಾದ ಸಿಹಿತಿಂಡಿಗಳನ್ನು ಕಡಿಮೆ ಮಾಡಿ.

5 / 9
ನಿಮ್ಮ ಮನೆಯನ್ನು ನಿಮ್ಮ ವೈಯಕ್ತಿಕ ಫಿಟ್‌ನೆಸ್ ಜಾಗವನ್ನಾಗಿ ಮಾಡಿಕೊಳ್ಳಿ. ಯೋಗ ಮಾಡಿ. ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡಿ. ಆನ್​ಲೈನ್ ಮೂಲಕ ಯೋಗ ಕ್ಲಾಸ್​ಗೆ ಸೇರಿಕೊಳ್ಳಿ.

ನಿಮ್ಮ ಮನೆಯನ್ನು ನಿಮ್ಮ ವೈಯಕ್ತಿಕ ಫಿಟ್‌ನೆಸ್ ಜಾಗವನ್ನಾಗಿ ಮಾಡಿಕೊಳ್ಳಿ. ಯೋಗ ಮಾಡಿ. ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡಿ. ಆನ್​ಲೈನ್ ಮೂಲಕ ಯೋಗ ಕ್ಲಾಸ್​ಗೆ ಸೇರಿಕೊಳ್ಳಿ.

6 / 9
ಬಿಡುವಿದ್ದಾಗ ಧ್ಯಾನ ಮಾಡುತ್ತಾ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಇದು ಕೂಡ ಫಿಟ್ ಆಗಿರಲು ಸಹಕಾರಿಯಾಗಿದೆ.

ಬಿಡುವಿದ್ದಾಗ ಧ್ಯಾನ ಮಾಡುತ್ತಾ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಇದು ಕೂಡ ಫಿಟ್ ಆಗಿರಲು ಸಹಕಾರಿಯಾಗಿದೆ.

7 / 9
ಆಫೀಸ್​ನಲ್ಲಿ ಇಡೀ ದಿನ ಕುಳಿತು ಕೆಲಸ ಮಾಡುವಾಗಲೂ ಆಗಾಗ ಬ್ರೇಕ್ ತೆಗೆದುಕೊಳ್ಳುತ್ತಿರಿ. ಆಚೀಚೆ ಓಡಾಡಿ. ಕೈ-ಕಾಲುಗಳನ್ನು ಸ್ಟ್ರೆಚ್ ಮಾಡುತ್ತಿರಿ.

ಆಫೀಸ್​ನಲ್ಲಿ ಇಡೀ ದಿನ ಕುಳಿತು ಕೆಲಸ ಮಾಡುವಾಗಲೂ ಆಗಾಗ ಬ್ರೇಕ್ ತೆಗೆದುಕೊಳ್ಳುತ್ತಿರಿ. ಆಚೀಚೆ ಓಡಾಡಿ. ಕೈ-ಕಾಲುಗಳನ್ನು ಸ್ಟ್ರೆಚ್ ಮಾಡುತ್ತಿರಿ.

8 / 9
ನಮ್ಮ ದೇಹಕ್ಕೆ ಅಗತ್ಯವಾದ ದ್ರವವನ್ನು ನಾವು ನೀಡುತ್ತಿದ್ದರೆ ಮಾತ್ರ ಜೀರ್ಣಕ್ರಿಯೆ ಸರಾಗವಾಗುತ್ತದೆ. ಆಗ ತೂಕ ಕಡಿಮೆಯಾಗುತ್ತದೆ. ಸಕ್ಕರೆ ಪಾನೀಯಗಳು ಮತ್ತು ಆಲ್ಕೋಹಾಲ್ ಸೇವಿಸುವುದನ್ನು ಬಿಟ್ಟು ಶುದ್ಧ ನೀರನ್ನು ಸೇವಿಸಿ.

ನಮ್ಮ ದೇಹಕ್ಕೆ ಅಗತ್ಯವಾದ ದ್ರವವನ್ನು ನಾವು ನೀಡುತ್ತಿದ್ದರೆ ಮಾತ್ರ ಜೀರ್ಣಕ್ರಿಯೆ ಸರಾಗವಾಗುತ್ತದೆ. ಆಗ ತೂಕ ಕಡಿಮೆಯಾಗುತ್ತದೆ. ಸಕ್ಕರೆ ಪಾನೀಯಗಳು ಮತ್ತು ಆಲ್ಕೋಹಾಲ್ ಸೇವಿಸುವುದನ್ನು ಬಿಟ್ಟು ಶುದ್ಧ ನೀರನ್ನು ಸೇವಿಸಿ.

9 / 9
Follow us
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ