ಆಂಧ್ರ ಅಸೆಂಬ್ಲಿ ಚುನಾವಣೆ: ಚಂದ್ರಬಾಬು ನಾಯ್ಡುಗೆ ಅಳಿವು ಉಳಿವಿನ ಪ್ರಶ್ನೆ, ಟಿಡಿಪಿಗೆ ಮತ್ತೆ ‘ಅಳಿಯನ ಕಂಟಕ’ ಎದುರಾಗಬಹುದೇ?

175 ಸದಸ್ಯರ ಆಂಧ್ರ ಪ್ರದೇಶ ವಿಧಾನಸಭೆಗೆ ಮುಂದಿನ ತಿಂಗಳು ಮೇ 13 ರಂದು ಚುನಾವಣೆ ನಡೆಯಲಿದೆ. ಜೈಲುವಾಸಿ ಚಂದ್ರಬಾಬು ನಾಯ್ಡುಗೆ ಈ ಚುನಾವಣೆ ಬಹಳ ಮಹತ್ವದ್ದು. ಖಚಿತವಾಗಿ ಗೆಲ್ಲಲೇಬೇಕು. ಇಲ್ಲವಾದಲ್ಲಿ ಅದರ ನಂತರ ಟಿಡಿಪಿ ಪಕ್ಷದ ಸ್ಥಿತಿ ಏನಾಗಬಹುದು ಎಂಬುದು ಎಲ್ಲರಿಗಿಂತಲೂ ಬಾಬುಗೇ ಚೆನ್ನಾಗಿ ಗೊತ್ತು! ಈ ಮಧ್ಯೆ, ಪಕ್ಷಕ್ಕೆ ಅಂಟಿಕೊಂಡಿರುವ ಅಳಿಯನ ಕಂಟಕ ಏನು? ಪಕ್ಷದ ಏಳುಬೀಳುಗಳ ಒಂದು ಅಧ್ಯಯನ ಇಲ್ಲಿದೆ.

ಆಂಧ್ರ ಅಸೆಂಬ್ಲಿ ಚುನಾವಣೆ: ಚಂದ್ರಬಾಬು ನಾಯ್ಡುಗೆ ಅಳಿವು ಉಳಿವಿನ ಪ್ರಶ್ನೆ, ಟಿಡಿಪಿಗೆ ಮತ್ತೆ ಅಳಿಯನ ಕಂಟಕ ಎದುರಾಗಬಹುದೇ?
ಟಿಡಿಪಿಗೆ ಮತ್ತೆ 'ಅಳಿಯನ ಕಂಟಕ' ಎದುರಾಗಬಹುದೇ?
ಸಾಧು ಶ್ರೀನಾಥ್​

Updated on: Apr 20, 2024 | 1:26 PM

ನಾರಾ ಚಂದ್ರಬಾಬು ನಾಯ್ಡು… ಟಿಡಿಪಿ ನಾಯಕ… ಆಂಧ್ರಪ್ರದೇಶ ರಾಜಕೀಯದಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ಸುದೀರ್ಘ ಅನುಭವ ಹೊಂದಿರುವ ನಾಯಕ. ತಮ್ಮ ರಾಜಕೀಯ ಜಾಣ್ಮೆಯಿಂದ ಪಕ್ಷವನ್ನು ಹಲವು ಬಿಕ್ಕಟ್ಟುಗಳಿಂದ ಪಾರು ಮಾಡುತ್ತಾ ಬಂದಿರುವ ಅವರು… ಅಖಂಡ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ, ವಿಭಜನೆಯ ನಂತರವೂ ತಮ್ಮದೇ ಶೈಲಿಯಲ್ಲಿ ಆಡಳಿತ ನಡೆಸಿದ ನಾಯಕ. ಆದರೆ ಇಷ್ಟು ವರ್ಷ ಎದುರಿಸಿದ ಪರೀಕ್ಷೆಗಳೇ ಬೇರೆ, ಇನ್ನು ಮುಂದಿನ ಪರೀಕ್ಷೆಯೇ ಬೇರೆ. ವಾಸ್ತವವಾಗಿ ಮೇ 13ರಂದು ನಡೆಯಲಿರುವ ಚುನಾವಣೆ ಅವರ ಪಕ್ಷದ ಭವಿಷ್ಯವನ್ನಷ್ಟೇ ಅಲ್ಲ ಅವರ ರಾಜಕೀಯ ಭವಿಷ್ಯವನ್ನೂ ನಿರ್ಧರಿಸಲಿದೆ. ಮತ್ತು ಅವರಿಗೂ ಇದರ ಬಗ್ಗೆ ತಿಳಿದಿದೆಯೇ? ಅದಕ್ಕೇ ಇಷ್ಟೆಲ್ಲಾ ದುಡಿಯುತ್ತಿದ್ದಾರಾ..? ಅವರು ಬಯಸಿದ ಫಲಿತಾಂಶವನ್ನು ಪಡೆಯದಿದ್ದರೆ… ವಾಟ್ ನೆಕ್ಸ್ಟ್​​​? ಚಂದ್ರಬಾಬು ನಾಯ್ಡು – ದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರಧಾರಿ ನಾರಾ ಚಂದ್ರಬಾಬು ನಾಯ್ಡು ಅವರು ಟಿಡಿಪಿ ಮುಖ್ಯಸ್ಥರಾಗಿ ದೇಶಾದ್ಯಂತ ಹೆಸರುವಾಸಿಯಾಗಿದ್ದಾರೆ. ಹೆಸರಿಗೆ ಅವರದು ಪ್ರಾದೇಶಿಕ ಪಕ್ಷವಾದರೂ ಅದೊಮ್ಮೆ NDA ಸಂಚಾಲಕರಾಗಿ ದೇಶ ರಾಜಕೀಯದಲ್ಲಿ ಚಕ್ರ ಉರುಳಿಸಿದ ವ್ಯಕ್ತಿ. ದೇಶದ ರಾಷ್ಟ್ರಪತಿ ಯಾರಾಗಬೇಕು? ಲೋಕಸಭೆಯ ಸ್ಪೀಕರ್ ಯಾರಾಗಬೇಕು… ಅಂದಿನ ಎನ್ ಡಿಎಗೆ ಯಾವ ಪಕ್ಷವನ್ನು ಹೇಗೆ ತರುವುದು…? ಹೀಗೆ ಬರೀ ರಾಜಕೀಯಕ್ಕಷ್ಟೇ ಅಲ್ಲ.. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಹೈಟೆಕ್ ಸಿಟಿ ನಿರ್ಮಾಣದೊಂದಿಗೆ ಬಿಲ್ ಗೇಟ್ಸ್, ಬಿಲ್ ಕ್ಲಿಂಟನ್ ರಂತಹ ಮಹಾನ್ ವ್ಯಕ್ತಿಗಳನ್ನು ಹೈದರಾಬಾದ್ ಗೆ ಕರೆತಂದ...

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ