Sign In

By signing in or creating an account, you agree with Associated Broadcasting Company's Terms & Conditions and Privacy Policy.

Makar Sankranti 2024: ಮಕರ ಸಂಕ್ರಾಂತಿ ಹಬ್ಬದಂದು ಸೂರ್ಯ ದೇವ ಮಕರ ರಾಶಿಗೆ ಪ್ರವೇಶ, ಏನಿದರ ವಿಶೇಷತೆ?

ಈ ಬಾರಿ ಮಕರ ಸಂಕ್ರಾಂತಿ ಅಥವಾ ಸಂಕ್ರಾಂತಿ ಹಬ್ಬವನ್ನು ಜನವರಿ 15 (ಸೋಮವಾರ) ರಂದು ಆಚರಣೆ ಮಾಡಲಾಗುತ್ತದೆ. ಜೊತೆಗೆ ಸೂರ್ಯನ ಪಥ ಬದಲಾವಣೆಯ ಹಬ್ಬವಿದು. ಸೂರ್ಯ ದೇವ ಮಕರ ರಾಶಿಗೆ ಪ್ರವೇಶಿಸುವ ಹಬ್ಬವೇ ಮಕರ ಸಂಕ್ರಾಂತಿ. ಇಲ್ಲಿಂದ ಆರು ತಿಂಗಳು ಉತ್ತರಾಯಣ ಪುಣ್ಯಕಾಲ. ಹಾಗಾಗಿ ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಅದರದ್ದೇ ಆದ ಮಹತ್ವವಿದೆ.

Makar Sankranti 2024: ಮಕರ ಸಂಕ್ರಾಂತಿ ಹಬ್ಬದಂದು ಸೂರ್ಯ ದೇವ ಮಕರ ರಾಶಿಗೆ ಪ್ರವೇಶ, ಏನಿದರ ವಿಶೇಷತೆ?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 10, 2024 | 2:15 PM

ಕರ್ನಾಟಕದಲ್ಲಿ ಸುಗ್ಗಿ ಹಬ್ಬ, ತಮಿಳುನಾಡಿನಲ್ಲಿ ಪೊಂಗಲ್, ದೆಹಲಿ ಹರಿಯಾಣ ಸುತ್ತಮುತ್ತ ಸಕ್ರಾತ್, ಪಂಜಾಬಿನಲ್ಲಿ ಮಾಘಿ ಹೀಗೆ ಮಕರ ಸಂಕ್ರಾಂತಿಯನ್ನು ಭಾರತದಾದ್ಯಂತ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಈ ಬಾರಿ ಮಕರ ಸಂಕ್ರಾಂತಿ ಅಥವಾ ಸಂಕ್ರಾಂತಿ ಹಬ್ಬವನ್ನು ಜನವರಿ 15 (ಸೋಮವಾರ) ರಂದು ಆಚರಣೆ ಮಾಡಲಾಗುತ್ತದೆ. ಜೊತೆಗೆ ಸೂರ್ಯನ ಪಥ ಬದಲಾವಣೆಯ ಹಬ್ಬವಿದು. ಸೂರ್ಯ ದೇವ ಮಕರ ರಾಶಿಗೆ ಪ್ರವೇಶಿಸುವ ಹಬ್ಬವೇ ಮಕರ ಸಂಕ್ರಾಂತಿ. ಇಲ್ಲಿಂದ ಆರು ತಿಂಗಳು ಉತ್ತರಾಯಣ ಪುಣ್ಯಕಾಲ. ಹಾಗಾಗಿ ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಅದರದ್ದೇ ಆದ ಮಹತ್ವವಿದೆ.

ಮಕರ ಸಂಕ್ರಾಂತಿಯ ಮಹತ್ವ;

ಜನವರಿ 15 (ಸೋಮವಾರ) ಪುಷ್ಯ ಶುದ್ಧ ಪಂಚಮಿಯಂದು ಬೆಳಿಗ್ಗೆ 8. 31ರ ಸಮಯದಲ್ಲಿ ಶತಾಭಿಷ ನಕ್ಷತ್ರ, ವರಿಯಾನ್ ಯೋಗ, ಭದ್ರ ಕರಣ, ಮಕರ ಲಗ್ನದಲ್ಲಿ ರವಿಯು ನೀರಯಣ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಬಳಿಕ 1 ತಿಂಗಳ ಕಾಲ ಮಕರ ರಾಶಿಯಲ್ಲಿ ಇರುತ್ತಾನೆ. ಹಿಂದೂ ಧರ್ಮದಲ್ಲಿ ಸಂಕ್ರಾಂತಿಗೆ ಬಲು ಮಹತ್ವ. ಅದರಲ್ಲೂ ಮಕರ ಸಂಕ್ರಮಣ ಹಾಗೂ ಕರ್ಕಾಟಕ ಸಂಕ್ರಮಣಕ್ಕೆ ಇನ್ನಷ್ಟು ವಿಶೇಷತೆಗಳಿವೆ. ಇವೆರಡು ಆಯನ ಸಂಕ್ರಾಂತಿಗಳು. ಉತ್ತರಾಯಣ ಮತ್ತು ದಕ್ಷಿಣಾಯಣ ಈ ಎರಡು ಸಂಕ್ರಮಣದ ಸಂದರ್ಭದಲ್ಲಿ ಶುರುವಾಗುತ್ತದೆ. ಮಕರ ಸಂಕ್ರಮಣದ ಸಂದರ್ಭದಲ್ಲಿ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತದೆ. ಇನ್ನು ಪಂಚಾಂಗದಲ್ಲಿ ನೀಡಿರುವ ಮಕರ ಸಂಕ್ರಾಂತಿಯ ಫಲದ ಆದರದ ಮೇಲೆ ಒಳಿತು, ಕೆಡುಕಿನ ವಿಮರ್ಶೆ ಮಾಡಲಾಗುತ್ತದೆ. ಸಂಕ್ರಾಂತಿ ದೇವಿ ಧರಿಸಿದ ವಸ್ತುಗಳು ದುಬಾರಿಯಾಗುತ್ತದೆ. ಅವಳು ಹೋಗುವ ಮತ್ತು ನೋಡುವ ದಿಕ್ಕಿಗೆ ಕೆಡುಕಾಗುತ್ತದೆ ಎನ್ನುತ್ತದೆ ಪುರಾಣ.

ಮಕರ ಸಂಕ್ರಾಂತಿಯ ದಿನ ಸೂರ್ಯನಿಗೆ ಅರ್ಘ್ಯ ಅರ್ಪಿಸುವ ಸಂಪ್ರದಾಯ ಕೆಲವು ಕಡೆಗಳಲ್ಲಿ ಇದೆ. ಈ ಮೂಲಕ ಸೂರ್ಯನ ಅನುಗ್ರಹಕ್ಕೆ ಧನ್ಯವಾದ ಬೇಡಲಾಗುತ್ತದೆ. ಸೂರ್ಯದೇವನಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಈ ದಿನ ರೈತರು ಕೃಷಿಗೆ ಬಳಸುವ ಉಪಕರಣಗಳನ್ನು ಪೂಜಿಸುತ್ತಾರೆ. ಜತೆಗೆ, ಉತ್ತಮ ಇಳುವರಿಗಾಗಿ ಸೂರ್ಯ ದೇವರಿಗೆ ಕೃತಜ್ಞತೆ ಅರ್ಪಿಸುತ್ತಾರೆ.

ಇದನ್ನೂ ಓದಿ: ಸಂಕ್ರಾಂತಿಯ ಮಕರ ಸ್ನಾನದ ಮಹತ್ವವೇನು? ಅಂದು ಮಾಡುವ ದಾನ ಶ್ರೇಷ್ಠ ಎಂಬ ನಂಬಿಕೆಯಿದೆ

ಆಚರಣೆ ಹೇಗೆ?

ಮನೆ ಮನೆಗಳಲ್ಲಿ ಎಳ್ಳು- ಬೆಲ್ಲವನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿ ಬಳಿಕ ಸುತ್ತಮುತ್ತಲಿರುವವರಿಗೆ ಹಂಚುವುದು ವಾಡಿಕೆ. ಇದರ ಜೊತೆಗೆ ಹಣ್ಣು- ಹಂಪಲು ಕಬ್ಬಿನ ತಂಡುಗಳನ್ನು ಕೂಡ ನೀಡುತ್ತಾರೆ. ಈ ದಿನ ಮನೆಯ ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ ಎಳ್ಳು ಬೆಲ್ಲವನ್ನು ಎಲ್ಲರಿಗೂ ಹಂಚುತ್ತಾ, ಒಳ್ಳೆ ಒಳ್ಳೆ ಮಾತನಾಡಿ ಎನ್ನುತ್ತಾರೆ. ಈ ವಿನಿಮಯ ಒಂದು ರೀತಿಯ ಸಂಬಂಧಗಳ ಬೆಸುಗೆಯಂತೆ. ಇನ್ನು ಕರ್ನಾಟಕದಲ್ಲಿ ಅದರಲ್ಲಿಯೂ ಉತ್ತರ ಕನ್ನಡದಲ್ಲಿ ಈ ದಿನ ಸಂಕ್ರಾಂತಿ ಕಾಳುಗಳನ್ನು ಹಂಚಲಾಗುತ್ತದೆ. ಇದು ತುಂಬಾ ಸಿಹಿಯಾಗಿರುವುದರಿಂದ ಇದನ್ನು ಪ್ರೀತಿ ಮತ್ತು ಸಂತೋಷ ಹಂಚುವ ಕಾಳು ಎಂದು ಕೂಡ ಹೇಳಲಾಗುತ್ತದೆ.

ಅಧ್ಯಾತ್ಮ ಸಂಬಂಧಿತ ಇನ್ನಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ