AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kamsa Death: ಕಂಸನ ಮೃತ್ಯುವೂ, ದೈವ ನಿಶ್ಚಯವೂ! ಏನಿದರ ಮರ್ಮ?

The Killing of Kamsa; ಭಗವಾನ್ ಶ್ರೀಕೃಷ್ಣನ ಮಾವನಾದ ಕಂಸ ವಿಧಿಯಿಂದಾಗಿ ವಸುದೇವ ದೇವಕಿಯರನ್ನು ಒಂದೇ ಕಾರಾಗೃಹದಲ್ಲಿಟ್ಟ ಎನ್ನುವುದನ್ನು ಸಾಮಾನ್ಯವಾಗಿ ಓದಿರುತ್ತೇವೆ. ಇದೇ ಕಂಸ ಈ ಹಿಂದೆ ಕೃಷ್ಣನನ್ನು ತನ್ನ ಪಟ್ಟಣಕ್ಕೆ ಕರೆಸಿ ಕೊಲ್ಲುವ ಆಲೋಚನೆಗೆ ಪೂರಕವಾಗಿ ಹೂಡಿದ ತಂತ್ರದ ಒಳ ಮರ್ಮವೇನು??

Kamsa Death: ಕಂಸನ ಮೃತ್ಯುವೂ, ದೈವ ನಿಶ್ಚಯವೂ! ಏನಿದರ ಮರ್ಮ?
ಕಂಸನ ಮೃತ್ಯುವೂ, ದೈವ ನಿಶ್ಚಯವೂ! ಏನಿದರ ಒಳಾರ್ಥ?
TV9 Web
| Updated By: ಸಾಧು ಶ್ರೀನಾಥ್​|

Updated on: Jul 06, 2022 | 6:06 AM

Share

ಈಗೊಂದು ತಿಂಗಳ ಹಿಂದಿನ ಕಥೆ. ನಾನಾಗ ಊರಿನ ಕಡೆ ಇದ್ದೆ. ಮಳೆ ಸುರಿಯುತ್ತಿದ್ದದ್ದರಿಂದ ಸಹಜವಾಗಿಯೇ ಕೊಡೆ ಹಿಡಿದುಕೊಂಡು ನಡೆದುಹೋಗುತ್ತಿದ್ದೆ. ನಿಧಾನವಾಗಿ ಮೋಡಗಳು ಮಳೆಗರೆಯುವುದನ್ನು ನಿಲ್ಲಿಸಿದರೂ ಕರೆಯೊಂದರಲ್ಲಿ ನಿರತನಾಗಿದ್ದ ನನಗೆ ಕೊಡೆಯನ್ನು ಮಡಿಚುವ ವ್ಯವಧಾನವಿಲ್ಲದ್ದರಿಂದ ಬಿಡಿಸಿದ ಕೊಡೆ ಬಿಡಿಸಿಯೇ ಇತ್ತು. ಆಗಲೇ ದಾರಿಯವರೆಗೂ ತನ್ನ ಕೈಗಳನ್ನು ಚಾಚಿದ್ದ ಮರವೊಂದರ ಮೇಲಿಂದ ಒಣಗಿದ ಕೊಂಬೆ ಮುರಿದು ಬಿದ್ದಿದ್ದು ನನ್ನದೇ ಕೊಡೆಯ ಮೇಲೆ!!

ನನಗೆ ಕೊಡೆಯನ್ನು ಮಡಿಚಬೇಕೆಂದು ಏಕೆ ಅನ್ನಿಸಲಿಲ್ಲ??

ಅದನ್ನೇ ದೇವರ ಯೋಜನೆ ಎನ್ನುವುದು!! ನಮ್ಮ ಹಿರಿಯರು ಯಾವುದೋ ಜನ್ಮದ ಪುಣ್ಯ, ವಿಧಿ ಇತ್ಯಾದಿಯಾಗಿ ಕಾಣಿಸಿರುವುದೂ ಇದನ್ನೇ!! ಇದಕ್ಕೆ ಪುರಾಣ ಪ್ರಸಿದ್ಧವಾದ ಒಂದು ಉದಾಹರಣೆಯನ್ನು ನೀಡುತ್ತೇನೆ. ತನ್ಮೂಲಕ ಸಾಮಾನ್ಯವಾಗಿ ಆ ಕಥೆ ಹರಿದು ಬಂದಿರುವ ರೀತಿಗೂ, ಅದರ ಮೂಲಕ್ಕೂ ವ್ಯತ್ಯಾಸವನ್ನೂ ತಿಳಿಯುವಂತಾಗಲಿ ಎನ್ನುವುದೇ ಆಶಯ.

ಭಗವಾನ್ ಶ್ರೀಕೃಷ್ಣನ ಮಾವನಾದ ಕಂಸ ವಿಧಿಯಿಂದಾಗಿ ವಸುದೇವ ದೇವಕಿಯರನ್ನು ಒಂದೇ ಕಾರಾಗೃಹದಲ್ಲಿಟ್ಟ ಎನ್ನುವುದನ್ನು ಸಾಮಾನ್ಯವಾಗಿ ಪ್ರವಚನಗಳಲ್ಲಿಯೋ, ಲೇಖನಗಳಲ್ಲಿಯೂ ಓದಿರುತ್ತೇವಲ್ಲ, ಇದೇ ಕಂಸ ಈ ಹಿಂದೆ ಅರಿಷ್ಟ, ಪೂತನೀ, ತೃಣಾವರ್ತಾದಿ ವಿಶಿಷ್ಟ ಬಲಸಮನ್ವಿತರಾದ ರಾಕ್ಷಸರು ಯಾವ ಕೃಷ್ಣನ ಕೂದಲನ್ನೂ ಕೊಂಕಿಸಲು ಅಸಮರ್ಥರಾದರೋ ಅಂತಹ ಕೃಷ್ಣನನ್ನು ತನ್ನ ಪಟ್ಟಣಕ್ಕೆ ಕರೆಸಿ ಕೊಲ್ಲುವ ಆಲೋಚನೆಗೆ ಪೂರಕವಾಗಿ ಹೂಡಿದ ತಂತ್ರವೇನು?? ಮದವೇರಿದ ಕುವಲಯಾಪೀಡ ಎನ್ನುವ ತನ್ನ ಪಟ್ಟದಾನೆಯನ್ನೂ, ಯಾವುದೇ ರಾಕ್ಷಸೀ ಶಕ್ತಿಗಳಿಲ್ಲದ ಐವರು (ಚಾಣೂರ, ಮುಷ್ಟಿಕ, ಶಲ, ತೋಶಲ, ಕೂಟ) ಜಟ್ಟಿಗಳನ್ನೂ, ಕೊನೆಯಲ್ಲಿ ಗತ್ಯಂತರವಿಲ್ಲದೇ ತನ್ನ ಎಂಟು ಜನ ಸಹೋದರರನ್ನು ಮುಂದಟ್ಟಿ ಕೃಷ್ಣ-ಬಲರಾಮರನ್ನು ಕೊಲ್ಲಿಸುವುದು!! ಮಲ್ಲಯುದ್ಧ ರಂಗದ ಪ್ರವೇಶದ್ವಾರದ ತೋರಣವನ್ನು ಬೀಳಿಸಿ ಕೊಲ್ಲುವುದು!!

ಅಷ್ಟಕ್ಕೂ ಕಂಸ ಕೃಷ್ಣ-ಬಲರಾಮರನ್ನು ಕಡಿಮೆ ಎಂದೇನೂ ಎಣಿಸಿರಲಿಲ್ಲ. ಆತ ಅವರನ್ನು ಕರೆಸಿದ್ದೇ “ಯಾವನ್ನ ಬಲಮಾರೂಢೌ ರಾಮಕೃಷ್ಣೌ ಸುಬಾಲಕೌ | ತಾವದೇವ ಮಯಾ ವಧ್ಯಾವಸಾಧ್ಯೌ ರೂಢಯೌವನೌ ||”

(ಈ ರಾಮ-ಕೃಷ್ಣರು ಇನ್ನೂ ಬಾಲಕರಿದ್ದಾಗಲೇ ಇವರನ್ನು ಕೊಲ್ಲಬೇಕು. ಒಂದು ಪಕ್ಷ ಇವರು ಯೌವನಸ್ಥರಾಗಿ ಮತ್ತಷ್ಟು ಬಲಶಾಲಿಗಳಾದರೆ ಅವಧ್ಯರಾಗುತ್ತಾರೆ) ಎಂಬ ಯೋಚನೆ ಅವನ ತಲೆ ಹೊಕ್ಕಿದ್ದರಿಂದಲೇ!! ಆದರೂ ಅಲ್ಲಿ ದೈವನಿಶ್ಚಯವೇ ಬೇರೆ ಇದ್ದಿದ್ದರಿಂದ ಕಂಸ ತಲೆಗೆ ಕೆಲಸ ಕೊಟ್ಟದ್ದು ಸಾಲದಾಯಿತು. ಹೆಣ್ಣು ಕೊಟ್ಟ ಮಾವನೂ, ಆ ಕಾಲದಲ್ಲೇ ಮಹಾಪರಾಕ್ರಮಿಯೂ ಆಗಿದ್ದ ಜರಾಸಂಧ ಆತನ ಸ್ಮೃತಿಪಟಲವನ್ನು ತಟ್ಟಲಿಲ್ಲ. ಅಥವಾ ಇವನೇ ನಿರ್ಲಕ್ಷ್ಯಿಸಿದನೋ (!!). ಅದು ಹೋಗಲಿ. ತಾನೇ ಸ್ವತಃ ಕುವಲಯಾಪೀಡವನ್ನು ಬಾಲ ಹಿಡಿದು ತಿರುಗಿಸಿ ಎಸೆದವನೂ, ಪರಶುರಾಮನಿಂದ ಕೂರಲ್ಪಟ್ಟಿದ್ದ ಮಹೇಂದ್ರಪರ್ವತವನ್ನೂ, ವೈಷ್ಣವ ಧನುಸ್ಸನ್ನೂ ಎತ್ತಿದವನೂ ಆಗಿದ್ದ ಕಂಸ ಕೃಷ್ಣನೊಡನೆ ಕಾದಲೇ ಇಲ್ಲವಲ್ಲ!! ಇಂತಹ ಕಂಸ ಕೃಷ್ಣನಿಂದ ಸತ್ತದ್ದಾದರೂ ಹೇಗೆ??

“ತಸ್ಯೋಪರಿಷ್ಟಾತ್ ಸ್ವಯಮಬ್ಜನಾಭಃ | ಪಪಾತ ವಿಶ್ವಾಶ್ರಯ ಆತ್ಮತಂತ್ರಃ ||” ಅವನನ್ನು ಆಸನದಿಂದ ಬೀಳಿಸಿದ ಕೃಷ್ಣ ತಾನೂ ಅವನ ಮೇಲೆ ಬಿದ್ದ. ಪ್ರಕರಣವೇ ಮುಗಿದುಹೋಯಿತು!! ಅತ್ತ ಅನುಗಾಲವೂ ವೈರಭಾವದಿಂದಲೇ ಕೃಷ್ಣನನ್ನು ನೆನೆಯುತ್ತಿದ್ದ ಕಾರಣದಿಂದ ಕಂಸನಲ್ಲಿದ್ದ ಕಾಲನೇಮಿಯೆಂಬ ರಾಕ್ಷಸಾಂಶವೂ ತೊಲಗಿ ಆತನಿಗೆ ಮುಕ್ತಿಯೂ ದೊರೆಯಿತು!! (“ತಂ ಕಂಸಂ ಪಾತಯಾಮಾಸ ತಸ್ಯೋಪರಿ ಪಪಾತ ಚ” ಎನ್ನುವ ವಿಷ್ಣುಪುರಾಣದ ವಾಕ್ಯದ ಅಭಿಪ್ರಾಯವೂ ಸಹ ಇದೇ ಆಗಿದೆ)

ಈ ದೈವನಿಶ್ಚಯ ಅಥವಾ ವಿಧಿ ಎನ್ನುವುದು ಇರುವುದರಿಂದಲೇ ಕೃಷ್ಣ ಅರ್ಜುನನ ನಿಮಿತ್ತದಿಂದ ಸಮಸ್ತ ಮಾನವಕುಲಕ್ಕೆ ಕರ್ಮದಲ್ಲಿ ಮಾತ್ರ ನಿಮಗೆ ಅಧಿಕಾರ. ಆಗಬೇಕಾದದ್ದು ಆಗಿಯೇ ತೀರುವುದರಿಂದ ಫಲಾಪೇಕ್ಷೆಯಿಲ್ಲದೇ ನಿಮಿತ್ತಮಾತ್ರರೂ, ನಿರ್ಲಿಪ್ತರೂ ಆಗಿ ಕರ್ಮವನ್ನು ಮಾಡಿರಿ ಎಂದು ಬೋಧಿಸುವುದು. ಶ್ರದ್ಧಾವಂತರಾದ ಶೋ(ಸಾ)ಧಕರಿಗೆ ಸವಿಸ್ತಾರವಾಗಿ ತೆರೆದುಕೊಳ್ಳುವ ಭಗವಂತ ಒಳಗಿರುವ ತಾನು “ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ” ಅಂತ ಸ್ಪಷ್ಟವಾಗಿಯೇ ಹೇಳಿಬಿಟ್ಟಿದ್ದಾನೆ. ಆ ತತ್ವವನ್ನು ಸಾಕ್ಷಾತ್ಕರಿಸಿಕೊಂಡು ಅನುಸರಿಸುವುದರಲ್ಲಿಯೇ ಎಲ್ಲ ವಿಧವಾದ ಮಾನಸಿಕ ದುಃಖಗಳಿಂದ ದೂರವಾಗುವ ಮಾರ್ಗವಿರುವುದು. ತನ್ನ ಆಳ ಅಗಲಗಳನ್ನು ತಾನು ತಿಳಿಯಬಲ್ಲವನಿಗೆ ಯಾವ ಮನಃಶಾಸ್ತ್ರಜ್ಞರೂ ಬೇಕಿಲ್ಲ. ಆದರೆ, “ಅರಿತೆವೇನು ನಾವು ನಮ್ಮ ಅಂತರಾಳವ??”

ಬರಹ: ನಚಿಕೇತ್ ಹೆಗಡೆ

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್