Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನದ ಸಂಪೂರ್ಣ ಅಭಿವ್ಯಕ್ತಿಯೇ ಯುಗಾದಿ: ಗುರುದೇವ್ ಶ್ರೀ ಶ್ರೀ ರವಿ ಶಂಕರ್

ಯುಗಾದಿ 2025: ‘‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’’ ಎಂಬಂತೆ ಮತ್ತೆ ಯುಗಾದಿ ಹಬ್ಬ ಆಗಮಿಸಿದೆ. ವಿಶ್ವಾವಸು ನಾಮ ಸಂವತ್ಸರದ ಆಗಮನದ ಈ ಹೊತ್ತಿನಲ್ಲಿ, ಹೊಸ ವರ್ಷವನ್ನು ನಾವು ಹೇಗೆ ಸ್ವಾಗತಿಸಬೇಕು? ಹೊಸ ವರ್ಷಕ್ಕೆ ನಮ್ಮ ಯೋಚನಾ ಲಹರಿ ಹೇಗಿರಬೇಕು ಎಂಬುದನ್ನು ಗುರುದೇವ್ ಶ್ರೀ ಶ್ರೀ ರವಿ ಶಂಕರ್ ವಿವರಿಸಿದ್ದಾರೆ. ಮುಂದಿನದ್ದನ್ನು ಅವರದೇ ಬರಹಗಳಲ್ಲಿ ಓದಿ.

ಜೀವನದ ಸಂಪೂರ್ಣ ಅಭಿವ್ಯಕ್ತಿಯೇ ಯುಗಾದಿ: ಗುರುದೇವ್ ಶ್ರೀ ಶ್ರೀ ರವಿ ಶಂಕರ್
ಜೀವನದ ಸಂಪೂರ್ಣ ಅಭಿವ್ಯಕ್ತಿಯೇ ಯುಗಾದಿ: ಗುರುದೇವ್ ಶ್ರೀ ಶ್ರೀ ರವಿ ಶಂಕರ್
Follow us
TV9 Web
| Updated By: Ganapathi Sharma

Updated on: Mar 29, 2025 | 5:49 PM

ಸಾಮಾನ್ಯವಾಗಿ ಉತ್ಸವದ ಸಂಭ್ರಮದಲ್ಲಿರುವಾಗ ಮೌನ (Festival and Silence) ಇಷ್ಟವಾಗುವುದಿಲ್ಲ. ಮೌನವನ್ನು ಇಷ್ಟ ಪಡುವವರಿಗೆ  ಉತ್ಸವಗಳ ಸಂಭ್ರಮದಿಂದ ಸಂತೋಷ ದೊರೆಯುವುದಿಲ್ಲವೆಂಬಂತೆ ಕಾಣಿಸುತ್ತದೆ. ಮೌನದಲ್ಲಿರುವವರು ಮಂಕು ಬಡಿದವರಂತೆ, ವಿಷಾದದಿಂದ ತುಂಬಿಕೊಂಡಿರುವಂತೆ ಕಾಣುತ್ತಾರೆ. ನಾವು ಮೌನವಾಗಿಯೂ ಇರುತ್ತೇವೆ; ಸಂಭ್ರಮವನ್ನೂ ಅನುಭವಿಸುತ್ತೇವೆ. ಇದೇ ನಮ್ಮ ವಿಶೇಷತೆ. ಯುಗಾದಿಯ (Ugadi 2025) ಅಚರಣೆಯು ಹೊಸವರ್ಷವನ್ನು ಸ್ವಾಗತಿಸುವ ಒಂದು ಉತ್ತಮ, ಸುಂದರ ವಿಧಾನ. ಸಂದ ವರ್ಷಕ್ಕೆ ಕೃತಜ್ಞತೆಯನ್ನು ಅರ್ಪಿಸೋಣ. ಕಳೆದ ವರ್ಷದ ಘಟನೆಗಳು ಬದುಕಿನಲ್ಲಿ ಮುನ್ನಡೆಯುವ ಸಂಕಲ್ಪವನ್ನು ನಮ್ಮೆಲ್ಲರಲ್ಲಿ ಮೂಡಿಸಿವೆ. ಕಳೆದ ವರ್ಷದಲ್ಲಿಯೂ ನಾವು ಅನೇಕ ಸವಾಲುಗಳನ್ನು ಎದುರಿಸಿದ್ದು ಅವೆಲ್ಲವೂ ನಮ್ಮನ್ನು ಒಂದಲ್ಲ ಒಂದು ರೀತಿಯಿಂದ ಗಟ್ಟಿಮಾಡಿವೆ. ನಮಗೆ ದೊರೆತ ಅನೇಕ ಕೊಡುಗೆಗಳು, ಅವಕಾಶಗಳು ನಮಗೆ ಅನೇಕ ರೀತಿಯಲ್ಲಿ ಸಂತೋಷವನ್ನು ನೀಡಿವೆ.

ಯಾವ ವರ್ಷವೂ ನಮಗೆ ಪಾಠವನ್ನು ಕಲಿಸದೆ ಕಳೆಯುವುದಿಲ್ಲ. ಇದೀಗ ಸರಿಯುತ್ತಿರುವ ಈ ವರ್ಷವೂ ಎಲ್ಲ ವರ್ಷಗಳಂತೆ ನಮಗೆ ಕೆಲವು ಪಾಠಗಳನ್ನು ಕಲಿಸಿದೆ; ನಮ್ಮ ಜ್ಞಾನವನ್ನು ಹೆಚ್ಚಿಸಿದೆ. ಈ ಪಾಠಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ಮುನ್ನಡೆಯಬೇಕು.

ಕಾಲವನ್ನು ಹರಿಯುವ ನದಿಗೆ ಹೋಲಿಸಬಹುದು. ನದಿಗೆ ಅಡ್ಡವಾಗಿ ಅಣೆಕಟ್ಟುಗಳನ್ನು ಕಟ್ಟಬಹುದಾದರೂ ಅದರ ಹರಿವನ್ನು ಸಂಪೂರ್ಣವಾಗಿ ತಡೆಯಲಾಗುವುದಿಲ್ಲ. ನದಿಯು ಅಣೆಕಟ್ಟೆಯ ದಂಡೆಗಳನ್ನೂ ಮೀರಿ ಧುಮುಕತೊಡಗುತ್ತದೆ. ಆದುದರಿಂದ ನೀರನ್ನು ಹೊರಗೆ ಬಿಡಲೇಬೇಕಾಗುತ್ತದೆ. ಒಂದು ನಿರ್ದಿಷ್ಟ ಪ್ರಮಾಣದ ನೀರನ್ನು ನೀವು ಸಂಗ್ರಹಿಸಬಹುದು. ಆದರೆ ಕಾಲದ ವಿಷಯದಲ್ಲಿ ಅದೂ ಸಾಧ್ಯವಿಲ್ಲ. ಕಾಲವು ಬಹಳ ವೇಗವಾಗಿ ಹರಿಯುವ ನದಿ.

ಇದನ್ನೂ ಓದಿ
Image
ಮರಣದ ನಂತರ ಮೋಕ್ಷ ಪಡೆಯಲು ಏನು ಮಾಡಬೇಕು? ಗರುಡ ಪುರಾಣ ಹೇಳುವುದೇನು?
Image
ಇಂದು ಶನಿ ಅಮಾವಾಸ್ಯೆ; ಸಾಡೇಸಾತಿ ಇರುವವರು ತಪ್ಪದೇ ಈ ಕೆಲಸ ಮಾಡಿ
Image
ಜಾತಕದಲ್ಲಿ ಮಂಗಳ ದೋಷ ಇದ್ದರೆ ತಿಳಿಯುವುದು ಹೇಗೆ? ಅದಕ್ಕೆ ಪರಿಹಾರಗಳೇನು?
Image
ಯುಗಾದಿ ಹಬ್ಬದಂದು ಏನು ಮಾಡಬೇಕು ಮತ್ತು ಏನು ಮಾಡಬಾರದು?

ಗಾಳಿಯಂತೆ ಕಾಲವನ್ನೂ ಹಿಡಿದು ನಿಲ್ಲಿಸುವುದು ಸಾಧ್ಯವಿಲ್ಲ. ಕಾಲವು ಸೂರ್ಯನಂತೆ; ಸೂರ್ಯನ ಸುತ್ತ ಭೂಮಿ ತಿರುಗುತ್ತಿರುತ್ತದೆ. ಕಾಲವನ್ನು ನಮ್ಮ ಮನಸ್ಸಿಗೆ ಹೋಲಿಸಬಹುದು; ಇದು ನಮ್ಮ ಮನಸ್ಸಿನಂತೆ ಅತ್ಯಂತ ಪುರಾತನವಾದದ್ದು, ಆದರೆ ಅಷ್ಟೇ ನವೀನವಾದದ್ದೂ ಆಗಿದೆ. ಆದುದರಿಂದ ನವವರ್ಷದ ಆಚರಣೆ ಎಂದರೆ ಅದು ಕಾಲವನ್ನು ಗೌರವಿಸುವ ಸಮಯ. ಕಾಲವನ್ನು ಗೌರವಿಸುವುದೆಂದರೆ ಮನಸ್ಸನ್ನು ಗೌರವಿಸಿದಂತೆ, ಮನಸ್ಸನ್ನು ಗೌರವಿಸುವುದೆಂದರೆ ನಮ್ಮ ಆತ್ಮವನ್ನು ಗೌರವಿಸಿಕೊಳ್ಳುವುದು. ನಮ್ಮ ಆತ್ಮವನ್ನು ಗೌರವಿಸಿಕೊಳ್ಳುವುದೆಂದರೆ ನಾನು “ಅಪರಾಧಿಯೂ ಅಲ್ಲ, ಬಲಿಪಶುವೂ ಅಲ್ಲ” ಎಂದು ತಿಳಿಯುವುದು.

ನಿಮ್ಮನ್ನು ನೀವೇ ಗೌರವಿಸಿಕೊಳ್ಳಲು ಯಾವ ಅಡೆತಡೆಗಳಿವೆ? “ನಾನು ಅಪರಾಧಿ, ನಾನು ತಪ್ಪು ಮಾಡಿದ್ದೇನೆ, ನಾನು ಪಾಪಿ” ಎಂಬ ಅಪರಾಧಿಪ್ರಜ್ಞೆಯು ನಿಮ್ಮಲ್ಲಿದ್ದರೆ ನಿಮ್ಮ ಆತ್ಮವನ್ನು ನೀವು ಗೌರವಿಸಿಕೊಳ್ಳುವುದು ಸಾಧ್ಯವಿಲ್ಲ. ನಿಮಗೆ ಅಂತರಂಗದ ಶಾಂತಿ ದೊರೆಯುವುದೇ ಇಲ್ಲ

ಅಪರಾಧಿ ಪ್ರಜ್ಞೆಯು ನಿಮ್ಮನ್ನು ಒಳಗಿನಿಂದಲೇ ತಿನ್ನುತ್ತದೆ. ನೀವು ಅಪರಾಧಿಪ್ರಜ್ಞೆಯಿಂದ ಮುಕ್ತರಾದಾಗ ನಿಮ್ಮಲ್ಲಿ ಶಾಂತಿ ಮೂಡುತ್ತದೆ. ನಿಮ್ಮಲ್ಲಿ ಅಧ್ಯಾತ್ಮದ ಬೆಳಕು ಪ್ರಕಾಶಿಸುತ್ತದೆ. “ನನ್ನೊಳಗೆ ಬೆಳಕಿದೆ, ನಾನು ಬೆಳಕಿನ ಭಾಗ, ಎಲ್ಲೆಯಿಲ್ಲದ ವೈಶ್ವಿಕ ಪ್ರೇಮದ ಭಾಗ ನಾನು” ಎಂದು ನೀವು ಭಾವಿಸಬೇಕು. ನೀವು ವೈಶ್ವಿಕ ಪ್ರೇಮದ ಒಂದು ಕಿಡಿ. ನಿಮ್ಮಂತೆಯೇ ಪ್ರತಿಯೊಬ್ಬರೂ ಈ ವೈಶ್ವಿಕ ಪ್ರೇಮವನ್ನು ಅನುಭವಿಸಲು, ಅದರ ಭಾಗವಾಗಲು ಬಯಸುತ್ತಾರೆ. ಆದರೆ, ಅಪರಾಧಿಪ್ರಜ್ಞೆಯಿಂದ ಹೊರ ಬಂದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಇನ್ನೊಂದು ‘ಬಲಿಪಶುʼ ಪ್ರಜ್ಞೆ, ನೀವು ‘ಬಲಿಪಶುʼ ಆಗಿದ್ದೀರಿ ಎಂಬ ಭಾವನೆ ಇರುವವರೆಗೆ ಸತ್ಯವನ್ನು ಹೇಳುವುದು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮಲ್ಲಿನ ದೈವತ್ವ ಪ್ರಕಟವಾಗುವುದಿಲ್ಲ. ಬದುಕಿನ ಉದ್ದೇಶವೇ ಬೆಳಕು, ಪ್ರೀತಿ ಮತ್ತು ಬದುಕಿನ ಸಂಪೂರ್ಣ ಅಭಿವ್ಯಕ್ತಿ. ಬದುಕನ್ನು ಸಂಪೂರ್ಣವಾಗಿ ಅಭಿವ್ಯಕ್ತಿಸುವುದೇ ಉತ್ಸವ. ಪ್ರೇಮ, ಸಂತೋಷ, ಜ್ಞಾನ ಮುಂತಾದ ಬದುಕಿನ ಹಲವು ಆಯಾಮಗಳನ್ನು ಸಂಪೂರ್ಣವಾಗಿ ಪ್ರಕಟಪಡಿಸಿ. ನಾವು ಇಲ್ಲಿರುವುದು ಆ ರೀತಿಯ ಅಭಿವ್ಯಕ್ತಿಗಾಗಿ. ಆದರೆ ನೀವು ಸನ್ನಿವೇಶದ, ಕಾಲದ, ಇತರ ವ್ಯಕ್ತಿಗಳ ‘ಬಲಿಪಶುʼ ಆಗಿದ್ದೀರಿ ಎಂಬ ಭಾವನೆ ಹೊಂದಿರುವವರೆಗೆ ಆ ಅಭಿವ್ಯಕ್ತಿ ಸಾಧ್ಯವಾಗುವುದಿಲ್ಲ.

ಹಾಗಾದರೆ ಈ ʼಬಲಿಪಶುʼ ಪ್ರಜ್ಞೆಯಿಂದ ಹೊರಗೆ ಬರುವುದು ಹೇಗೆ? ಪ್ರತಿಯೊಂದು ಅಹಿತಕರ ಘಟನೆಯೂ ನಿಮಗೆ ಗಾಢವಾದ ಅನುಭವಗಳನ್ನು ನೀಡಿದೆ ಎಂಬುದಕ್ಕಾಗಿ ಅವುಗಳಿಗೆ ಧನ್ಯವಾದ ಹೇಳಿ. ಹಾಗೂ ಸುಂದರವಾದ ಅನುಭವಗಳು ಜನರ ಸೇವೆಯನ್ನು ಹೆಚ್ಚು ಹೆಚ್ಚಾಗಿ ಮಾಡಲು ಅವಕಾಶ ಒದಗಿಸಿವೆ ಎಂಬುದಕ್ಕಾಗಿಯೂ ಅವುಗಳಿಗೆ ಕೃತಜ್ಞತೆ ವ್ಯಕ್ತಪಡಿಸಿ. ಜೀವನವು ಒಳಿತು ಕೆಡುಕುಗಳ ಮಿಶ್ರಣ. ಅಹಿತಕರ ದಿನಗಳಲ್ಲಿ ನಮ್ಮ ಗಮನ ಕೇಂದ್ರಿತವಾದಷ್ಟು ಬೇರೆ ದಿನಗಳಲ್ಲಿ ಆಗುವುದಿಲ್ಲ. ಕೇಂದ್ರಿತವಾಗಲು ನಮಗೆ ಸಹಾಯ ಮಾಡಿದ ಅಹಿತಕರ ದಿನಗಳಿಗೆ ಧನ್ಯವಾದಗಳು. ಕಹಿ ಸಂಗತಿಗಳು ನಮ್ಮನ್ನು ಹೊರಗಿನ ವಿಷಯಗಳಿಂದ ಹಿಂದಕ್ಕೆ ಎಳೆದು ನಮ್ಮ ಬಗ್ಗೆ ಕೇಂದ್ರಿತವಾಗಿ ಚಿಂತಿಸುವಂತೆ ಮಾಡುತ್ತವೆ. ಅಂತಹ ಸಂಗತಿಗಳು ನಮಗೆ ಗಾಢ ಅನುಭವವನ್ನು ಕೊಡುವುದರ ಜೊತೆಗೆ ನಮ್ಮ ವ್ಯಕ್ತಿತ್ವವನ್ನೂ ಉತ್ತಮಗೊಳಿಸುತ್ತವೆ.

ಆದುದರಿಂದ “ನನ್ನ ಹದಿನೈದು ವರ್ಷಗಳ ಜೀವನ ವ್ಯರ್ಥವಾಯಿತು” ಎಂತಲೋ “ಈ ಹದಿನೈದು ವರ್ಷಗಳಲ್ಲಿ ಇಂಥವರೊಬ್ಬರು ನನಗೆ ಸಮಸ್ಯೆಗಳನ್ನು ಉಂಟು ಮಾಡಿದರು” ಎಂತಲೋ ಯೋಚಿಸುವುದನ್ನು ಬಿಟ್ಟು ಬಲವನ್ನು ನೀಡಿದ ಕಹಿ ದಿನಗಳಿಗೆ ಮತ್ತು ವ್ಯಕ್ತಿತ್ವಕ್ಕೆ ವೈಶಾಲ್ಯವನ್ನು ಕರುಣಿಸಿದ ಸಂತೋಷದ ದಿನಗಳಿಗೆ ಧನ್ಯವಾದಗಳನ್ನು ಹೇಳಿ. “ಈ ಎಲ್ಲ ದಿನಗಳು ನನ್ನ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡಿದವು, ನನ್ನ ಸಹಜ ಸ್ವಭಾವವಾದ ಆನಂದವನ್ನು ಅಭಿವ್ಯಕ್ತಿಸಲು ಸಹಾಯ ಮಾಡಿದವು” ಎಂದು ಹಿತ ಹಾಗೂ ಅಹಿತಗಳೆರಡಕ್ಕೂ ಧನ್ಯವಾದ ಹೇಳುವ ಮೂಲಕ “ಬಲಿಪಶು” ಪ್ರಜ್ಞೆಯಿಂದ ಮುಕ್ತರಾಗಬಹುದು.

ಇದನ್ನೂ ಓದಿ: ಯುಗಾದಿ ಹಬ್ಬದಂದು ಏನು ಮಾಡಬೇಕು ಮತ್ತು ಏನು ಮಾಡಬಾರದು?

ಈ ಯುಗಾದಿಯು ಹೊಸ ವರ್ಷವನ್ನು ಸ್ವಾಗತಿಸುವ ದಿನ. ನಾವು ಹೊಸ ವರ್ಷವನ್ನು ಹೊಸ ಸಂಕಲ್ಪದೊಂದಿಗೆ ಸ್ವಾಗತಿಸೋಣ. ಹೊಸವರ್ಷದಲ್ಲಿ ನಾವು ಉತ್ತಮವಾದ, ಶ್ರೇಷ್ಠವಾದ ಕೆಲಸಗಳನ್ನು ಮಾಡುವ ಸಂಕಲ್ಪ ತೆಗೆದುಕೊಳ್ಳೋಣ. ಇನ್ನೊಬ್ಬರಿಗೆ ಉಪಯುಕ್ತರಾಗುವಂತೆ ಸಂತೋಷದಿಂದ ಬದುಕುವುದರ ಜೊತೆಗೆ ಸಂತೋಷವನ್ನು ಹರಡುವ ಸಂಕಲ್ಪವನ್ನು ತೆಗೆದುಕೊಳ್ಳೋಣ. ವಿಶ್ವಾವಸು ನಾಮ ಸಂವತ್ಸರದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ.

ಅಧ್ಯಾತ್ಮ ಸಂಬಂಧಿತ ಇನ್ನಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಪಿಲಿಭಿತ್ ಅಭಯಾರಣ್ಯದಲ್ಲಿ ಹೆಬ್ಬಾವನ್ನು ತಿಂದು ವಾಂತಿ ಮಾಡಿದ ಹುಲಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಕೊಡಿಸುವ ಸವಾಲು ಸ್ವೀಕಾರ: ಬಿವೈವಿ
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ