Facebook Scam: ಫೇಸ್​ಬುಕ್ ಹೊಸ ಸ್ಕ್ಯಾಮ್​ಗೆ ಬೆಚ್ಚಿಬಿದ್ದ ಜನತೆ: ನಿಮಗೂ ಹೀಗೆ ಮೆಸೇಜ್ ಬರಬಹುದು

Hack: ಇದೀಗ ಫೇಸ್​ಬುಕ್​ನಲ್ಲಿ ನಡೆಯುತ್ತಿರುವ ದೊಡ್ಡ ಸ್ಕ್ಯಾಮ್ ಒಂದು ಹೊರಬಿದ್ದಿದೆ. ಸ್ಕ್ಯಾಮರ್​ಗಳು ಫೇಸ್​ಬುಕ್​ನಲ್ಲಿ ಸ್ವಲ್ಪವೂ ಅನುಮಾನ ಬರದ ರೀತಿಯಲ್ಲಿ ಬಳಕೆದಾರರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ.

Facebook Scam: ಫೇಸ್​ಬುಕ್ ಹೊಸ ಸ್ಕ್ಯಾಮ್​ಗೆ ಬೆಚ್ಚಿಬಿದ್ದ ಜನತೆ: ನಿಮಗೂ ಹೀಗೆ ಮೆಸೇಜ್ ಬರಬಹುದು
Facebook Scam
Follow us
|

Updated on: Jun 01, 2023 | 2:43 PM

ಇಂದಿನ ಡಿಜಿಟಲ್ ಯುಗದಲ್ಲಿ ಸ್ಕ್ಯಾಮರ್​ಗಳು (Scam) ಎಗ್ಗಿಲ್ಲದೆ ಅಮಾಯಕರ ಹಣ ಎಗರಿಸುತ್ತಿದ್ದಾರೆ. ಈ ಬಗ್ಗೆ ಪ್ರತಿ ದಿನ ಒಂದಲ್ಲ ಒಂದು ವರದಿ ಆಗುತ್ತಲೇ ಇದೆ. ಬ್ಯಾಂಕುಗಳು ಕಳುಹಿಸುವ ಸಂದೇಶದಂತೆ ಫೇಕ್ ಮೆಸೇಜ್​ಗಳನ್ನು (Fake Message) ಕಳುಹಿಸಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈರೀತಿಯ ಪ್ರಕರಣ ಹೆಚ್ಚುತ್ತಿದೆ. ಇದೀಗ ಫೇಸ್​ಬುಕ್​ನಲ್ಲಿ ನಡೆಯುತ್ತಿರುವ ದೊಡ್ಡ ಸ್ಕ್ಯಾಮ್ ಒಂದು ಹೊರಬಿದ್ದಿದೆ. ಹ್ಯಾಕರ್​ಗಳು ಫೇಸ್​ಬುಕ್​ನಲ್ಲಿ (Facebook) ಸ್ವಲ್ಪವೂ ಅನುಮಾನ ಬರದ ರೀತಿಯಲ್ಲಿ ಬಳಕೆದಾರರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್​ನಲ್ಲಿ ನಡೆಯುತ್ತಿರುವ ಹೊಸ ಸ್ಕ್ಯಾಮ್​ನ ಹೆಸರು “look who just died” ಎಂದು. ಫೇಸ್​ಬುಕ್​ನಲ್ಲಿ ಹ್ಯಾಕರ್​ಗಳು ಅಮಾಯಕ ಬಳಕೆದಾರರ ಖಾತೆಗೆ ನೇರವಾಗಿ ಒಂದು ಮೆಸೇಜ್ ಕಳುಹಿಸುತ್ತಾರೆ. ಇದರಲ್ಲಿ ನಿಮ್ಮ ಫೇಸ್​ಬುಕ್​ನ ಆತ್ಮಿಯರು ನಿಧನ ಹೊಂದಿರುವ ಸುದ್ದಿ ಇರುತ್ತದೆ. ಜೊತೆಗೆ ಈ ವ್ಯಕ್ತಿ ನಿಮಗೆ ಗೊತ್ತು, ನಿಮ್ಮ ತುಂಬಾ ಆತ್ಮೀಯರು ನಿಧನರಾಗಿದ್ದಾರೆ ಎಂದು ಬರೆದು ಕಳುಹಿಸುತ್ತಾರೆ. ಈ ಸುದ್ದಿಯನ್ನು ಓದಲು ನಿಮ್ಮ ಫೇಸ್​ಬುಕ್ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನಮೋದಿಸಿ ಎಂದು ಕೇಳಲಾಗುತ್ತಿದೆ. ಅದರಂತೆ ನೀವು ಸುದ್ದಿ ಓದಲು ಪಾಸ್ವವರ್ಡ್ ಮತ್ತು ಐಡಿ ಹಾಕಿದರೆ ಮುಗಿಯಿತು. ನಿಮ್ಮ ಖಾತೆ ಹ್ಯಾಕ್.

iQoo Z7s 5G: ಸೂಪರ್ ಸ್ಪೀಡ್ ಫೋನ್ ಕ್ರೇಜಿ ಬೆಲೆಗೆ ಲಭ್ಯ

ಇದನ್ನೂ ಓದಿ
Image
Virus: ಶಾಕಿಂಗ್: ಗೂಗಲ್ ಪ್ಲೇ ಸ್ಟೋರ್‌ನಲ್ಲಿ 100 ಕ್ಕೂ ಹೆಚ್ಚು ಆ್ಯಪ್​ಗಳಿಗೆ ವೈರಸ್: ನಿಮ್ಮಲ್ಲಿದ್ರೆ ತಕ್ಷಣ ಡಿಲೀಟ್ ಮಾಡಿ
Image
Vivo S17 Series: ಬಿಡುಗಡೆ ಆಯಿತು ವಿವೋ S ಸರಣಿಯ ಮೂರು ಹೊಸ ಸ್ಮಾರ್ಟ್​ಫೋನ್ಸ್: ಯಾವುದು?, ಬೆಲೆ ಎಷ್ಟು?
Image
ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಖರೀದಿಸಿರುವ ಅನುಮಾನವಿದೆಯೇ? ಹೀಗೆ ಪರೀಕ್ಷಿಸಿಕೊಳ್ಳಿ
Image
Asus Expertbook: ಏಸಸ್ ಎಕ್ಸ್​ಪರ್ಟ್​ಬುಕ್ LAPTOP ಗ್ಯಾಜೆಟ್ ರಿವ್ಯೂ | Gadget Review | Unboxing

ಹ್ಯಾಕರ್ ನಿಮ್ಮ ಖಾತೆಯ ಮಾಹಿತಿ ಪಡೆದುಕೊಂಡು ಲಾಗಿನ್ ಆಗಿ, ನಿಮ್ಮ ಫ್ರೆಂಡ್ ಲಿಸ್ಟ್​ನಲ್ಲಿ ಇರುವ ಇತರರಿಗೂ ಈ ಮೆಸೇಜ್ ಕಳುಹಿಸುತ್ತಾರೆ. ಬಳಿಕ ಅವರ ಖಾತೆಯನ್ನೂ ಹ್ಯಾಕ್ ಮಾಡುತ್ತಾರೆ. ಅಲ್ಲದೆ ನಿಮ್ಮ ಖಾತೆಯಲ್ಲಿರುವ ಮೊಬೈಲ್ ನಂಬರ್, ಜನ್ಮ ದಿನಾಂಕ, ವೈಯಕ್ತಿಕ ಮೆಸೇಜ್ ಅನ್ನು ಪಡೆದುಕೊಳ್ಳುತ್ತಾರೆ. ಈ ರೀತಿಯ ಫೇಕ್ ಮೆಸೇಜ್, ಹ್ಯಾಕರ್​ಗಳಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳಲು ಈ ಕೆಳಗಿನ ಸೂತ್ರ ನೆನಪಿನಲ್ಲಿಡಿ.

ಫೇಸ್‌ಬುಕ್‌ ವಂಚನೆಯಿಂದ ಪಾರಾಗುವುದು ಹೇಗೆ?:

  • ಫೇಸ್‌ಬುಕ್‌ನಿಂದ ಬಂದಿರುವುದು ಎಂದು ಹೇಳಿಕೊಳ್ಳುವ ಅನುಮಾನಾಸ್ಪದ ಇಮೇಲ್ ಅಥವಾ ಸಂದೇಶವನ್ನು ನೀವು ಪಡೆದರೆ, ಯಾವುದೇ ಲಿಂಕ್‌ಗಳು ಅಥವಾ ಲಗತ್ತುಗಳನ್ನು ಕ್ಲಿಕ್ ಮಾಡಬೇಡಿ. ನಿಮ್ಮ ಫೇಸ್‌ಬುಕ್‌ ಸೆಟ್ಟಿಂಗ್‌ಗಳಲ್ಲಿ ಫೇಸ್‌ಬುಕ್‌ನಿಂದ ಕಳುಹಿಸಲಾದ ಇತ್ತೀಚಿನ ಇಮೇಲ್‌ಗಳನ್ನು ಮೊದಲು ಪರೀಕ್ಷಿಸಿ.
  • ಸ್ಕ್ಯಾಮರ್‌ಗಳು ನಿಮ್ಮಿಂದ ಹಣ ದೋಚಲು ವಿವಿಧ ಮಾರ್ಗಗಗಳನ್ನು ಹುಡುಕುತ್ತಾರೆ. ನಿಮಗೆ ಬೆದರಿಕೆ ಹಾಕಬಹುದು. ಪರಿಚಿತ ವ್ಯಕ್ತಿಯಿಂದ ಮೆಸೇಜ್ ಬಂದರೂ ಮತ್ತೊಮ್ಮೆ ಪರಿಶೀಲಿಸಿ.
  • ಸ್ಕ್ಯಾಮರ್‌ಗಳು ಆಗಾಗ್ಗೆ ಮೆಸೇಜ್ ಮಡುತ್ತಲೆ ಇರುತ್ತಾರೆ. ಈ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿ. ಹೀಗೆ ಮೆಸೇಜ್ ಬರುತ್ತಿರುತ್ತದೆ.
  • ಸ್ಕ್ಯಾಮರ್‌ಗಳು ಹೆಚ್ಚಾಗಿ ನಿಮಗೆ ಪರಿಚಿತರ ಫೋಟೋವನ್ನು ಬಳಸಬಹುದು. ನಂತರ ಹಣಕ್ಕೆ ಬೇಡಿಕೆ ಇಡಬಹುದು.
  • ನಿಮ್ಮ ಪಾಸ್‌ವರ್ಡ್, ಸಾಮಾಜಿಕ ಭದ್ರತೆ ಸಂಖ್ಯೆ, ಕ್ರೆಡಿಟ್ ಕಾರ್ಡ್ ಸಂಖ್ಯೆಗಳಂತಹ ಹಣಕಾಸಿನ ಮಾಹಿತಿ ಮತ್ತು ನಿಮ್ಮ ಆನ್‌ಲೈನ್ ಭದ್ರತೆಯನ್ನು ಬಲಪಡಿಸಲು ಕೇಳುವ ಸಂದೇಶಗಳಿಗೆ ಉತ್ತರಿಸಬೇಡಿ ಮತ್ತು ವರದಿ ಮಾಡಬೇಡಿ. ಟು-ಸ್ಟೆಪ್ ವೆರಿಫಿಕೇಷನ್ ಸಕ್ರಿಯಗೊಳಿಸಿ.
  • ವಿಶ್ವಾಸಾರ್ಹ ಆಂಟಿವೈರಸ್ ಸಾಫ್ಟ್‌ವೇರ್ ಬಳಸಿ. ಈ ಸಾಫ್ಟ್‌ವೇರ್ ಅನ್ನು ಅಪ್ಡೇಟ್ ಮಾಡುತ್ತಿರಿ.
  • ಲಾಗಿನ್ ಎಲರ್ಟ್ ಆನ್ ಮಾಡಿ. ಇದರಿಂದ ಯಾರಾದರೂ ನಿಮ್ಮ ಖಾತೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದರೆ ನಿಮಗೆ ಮೆಸೇಜ್ ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?