AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google: ನಾಸಾ ಡಾರ್ಟ್ ಮಿಷನ್ ಯಶಸ್ವಿ: ಗೂಗಲ್​ನಿಂದ ವಿಶೇಷ ಸಂಭ್ರಮಾಚರಣೆ

ನಾಸಾದ ಈ ಯಶಸ್ವಿ ಕಾರ್ಯಾಚರಣೆಯನ್ನು ಗೂಗಲ್ ವಿಶೇಷವಾಗಿ ಸಂಭ್ರಮಿಸಿದೆ. ಈಗ ನೀವು ಗೂಗಲ್ ಸರ್ಚ್​ನಲ್ಲಿ ನಾಸಾ ಡಾರ್ಟ್ ಎಂದು ಸರ್ಚ್ ಹೊಡೆದರೆ ವಿಶೇಷವಾದ ಅನಿಮೇಷನ್ ಕಾಣಿಸಿಕೊಳ್ಳುತ್ತದೆ.

Google: ನಾಸಾ ಡಾರ್ಟ್ ಮಿಷನ್ ಯಶಸ್ವಿ: ಗೂಗಲ್​ನಿಂದ ವಿಶೇಷ ಸಂಭ್ರಮಾಚರಣೆ
TV9 Web
| Updated By: Vinay Bhat|

Updated on:Sep 27, 2022 | 12:13 PM

Share

ನಾಸಾದ (NASA) ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ ಡಾರ್ಟ್ (DART) ಯೋಜನೆಯಡಿ ನೌಕೆಯು ಸೋಮವಾರ ಬೆಳಗ್ಗೆ ಸರಿಯಾಗಿ 7.14ಕ್ಕೆ ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ. ಇದೀಗ ಕ್ಷುದ್ರಗ್ರಹಕ್ಕೆ ನೌಕೆ ಅಪ್ಪಳಿಸಿರುವುದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ. ಇದನ್ನು ಯುಎಸ್ (US) ಬಾಹ್ಯಾಕಾಶ ಸಂಸ್ಥೆ ವಿಶ್ವದ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆ ಎಂದು ಹೇಳಿದೆ. “ನಾವು ಹೊಸ ಯುಗವನ್ನು ಪ್ರಾರಂಭಿಸುತ್ತಿದ್ದೇವೆ, ಅಪಾಯಕಾರಿ ಕ್ಷುದ್ರಗ್ರಹದ ಪ್ರಭಾವದಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಭೂಮಿಯಲ್ಲಿರುವ ಜನರು ಚೆನ್ನಾಗಿ ನಿದ್ರಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದು ನಾಸಾದ ಗ್ರಹಗಳ ವಿಜ್ಞಾನ ವಿಭಾಗದ ನಿರ್ದೇಶಕ ಲೋರಿ ಗ್ಲೇಜ್ ಹೇಳಿದ್ದಾರೆ.

ನಾಸಾದ ಈ ಯಶಸ್ವಿ ಕಾರ್ಯಾಚರಣೆಯನ್ನು ಗೂಗಲ್ ವಿಶೇಷವಾಗಿ ಸಂಭ್ರಮಿಸಿದೆ. ಈಗ ನೀವು ಗೂಗಲ್ ಸರ್ಚ್​ನಲ್ಲಿ ನಾಸಾ ಡಾರ್ಟ್ ಎಂದು ಸರ್ಚ್ ಹೊಡೆದರೆ ವಿಶೇಷವಾದ ಅನಿಮೇಷನ್ ಕಾಣಿಸಿಕೊಳ್ಳುತ್ತದೆ. ಸರ್ಚ್ ಕೊಟ್ಟಾಗ ಮೊದಲಿಗೆ ಈ ಕುರಿತ ಸುದ್ದಿಗಳು ಬರುತ್ತವೆ. ನಂತರ ಡಿಸ್ ಪ್ಲೇಯಲ್ಲಿ ಸೆಟಲೈಟ್ ಒಂದು ಬಂದು ಬಲಬದಿಯ ಸ್ಕ್ರೀನ್​ಗೆ ಡಿಕ್ಕಿ ಹೊಡೆಯುತ್ತದೆ. ಈ ಸಂದರ್ಭ ಸ್ಕ್ರೀನ್ ಕೊಂಚ ನಲುಗಿ ಬಲಬದಿಗೆ ತಿರುಗುತ್ತದೆ. ಗೂಗಲ್ ಈರೀತಿ ಸಂಭ್ರಮಿಸಿರುವ ಬಗ್ಗೆ ನಾಸಾ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

ಇದನ್ನೂ ಓದಿ
Image
PDF File: ಪಿಡಿಫ್ ಫೈಲ್​ಗಳ ಪಾಸ್‌ವರ್ಡ್ ರಿಮೂವ್‌ ಮಾಡಲು ಇಲ್ಲಿದೆ ನೋಡಿ ಟ್ರಿಕ್ಸ್
Image
WhatsApp Uber service: ಇದೀಗ ವಾಟ್ಸ್​ಆ್ಯಪ್​ ಮೂಲಕ ಉಬರ್ ಕ್ಯಾಬ್ ಬುಕ್ ಮಾಡಿ: ಇಲ್ಲಿದೆ ಸಂಪೂರ್ಣ ಮಾಹಿತಿ
Image
Huawei Nova 10 SE: ಮಾರುಕಟ್ಟೆಗೆ ಬಂತು 108MP ಕ್ಯಾಮೆರಾದ ಮತ್ತೊಂದು ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?
Image
iPhone 13: ದಿಢೀರ್ ಔಟ್-ಆಫ್-ಸ್ಟಾಕ್: ಫ್ಲಿಪ್​ಕಾರ್ಟ್, ಅಮೆಜಾನ್​ನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಐಫೋನ್ 13 ನಾಪತ್ತೆ

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಡಬಲ್ ಕ್ಷುದ್ರಗ್ರಹ ರೆಂಡೆಜ್ವಸ್ ಟೆಸ್ಟ್ (DART) ಪ್ರೋಬ್ ಅನ್ನು ಸೆಪ್ಟೆಂಬರ್ 26ರ ರಾತ್ರಿ ಹಾರಿ ಬಿಟ್ಟಿದ್ದು, ಭೂಮಿಯಿಂದ 7 ಮಿಲಿಯನ್ ಮೈಲಿ (11 ಮಿಲಿಯನ್ ಕಿಲೋಮೀಟರ್) ದೂರದಲ್ಲಿರುವ ಕ್ಷುದ್ರಗ್ರಹಕ್ಕೆ ಅದು ಅಪ್ಪಳಿಸಿದೆ. ಇದನ್ನು ಯುಎಸ್ ಬಾಹ್ಯಾಕಾಶ ಸಂಸ್ಥೆ ವಿಶ್ವದ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆ ಎಂದು ಹೇಳಿದೆ.

ಇದೀಗ ಕ್ಷುದ್ರಗ್ರಹಕ್ಕೆ ನೌಕೆ ಅಪ್ಪಳಿಸಿರುವುದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ. ಈ ಪರೀಕ್ಷೆಯು ಬಾಹ್ಯಾಕಾಶ ನೌಕೆಯೊಂದು ಟಾರ್ಗೆಟ್ ಮಾಡಲಾದ ಕ್ಷುದ್ರಗ್ರಹಕ್ಕೆ ತಾನಾಗಿಯೇ ನ್ಯಾವಿಗೇಟ್ ಮಾಡಬಹುದು ಮತ್ತು ಉದ್ದೇಶಪೂರ್ವಕವಾಗಿ ಅದರೊಂದಿಗೆ ಘರ್ಷಿಸುತ್ತದೆ ಎಂಬುದನ್ನು ತೋರಿಸುತ್ತದೆ.

ನೌಕೆಯು ಕ್ಷುದ್ರಗ್ರಹದ ಹತ್ತಿರವಾದಾಗ ಸ್ವಯಂಚಾಲಿತ ನ್ಯಾವಿಗೇಶನ್ ಚಾಲೂ ಆಗಿ ಡಿಕ್ಕಿ ಹೊಡೆಯುವಂತೆ ಮಾಡಿದೆ. ಇದಕ್ಕೆ ಕೆಲವೇ ಕ್ಷಣಗಳ ಮುಂಚೆ ನೌಕೆ ಕೃತಕ ಉಪಗ್ರಹವೊಂದನ್ನು ಬಿಡುಗಡೆ ಮಾಡಿದೆ. ಡಿಕ್ಕಿಯಾದಾಗ ಪ್ರಖರ ಬೆಳಕಿನೊಂದಿಗೆ ಅಪಾರ ದೂಳು ಏಳುತ್ತದೆ. ದೂಳು ಕಡಿಮೆಯಾದ ಹಲವು ವರ್ಷಗಳ ನಂತರ ಅಲ್ಲಿಗೆ ತೆರಳುವ ಗಗನನೌಕೆ ಆಘಾತದ ಪ್ರಮಾಣ ಮತ್ತು ಅಲ್ಲಿನ ಸ್ಪಷ್ಟ ಚಿತ್ರ ರವಾನಿಸುತ್ತದೆ ಎಂದು ನಾಸಾ ಹೇಳಿಕೊಂಡಿದೆ.

ಈ ಪ್ರಭಾವದ ಮೊದಲು ನಾಸಾಗಾಗಿ ಮಿಷನ್ ಅನ್ನು ಮೇಲ್ವಿಚಾರಣೆ ಮಾಡುವ JHUAPL ನಲ್ಲಿ DART ಸಮನ್ವಯ ಪ್ರಮುಖವಾಗಿದೆ. ಆನ್–ಟಾರ್ಗೆಟ್ ಕ್ರ್ಯಾಶ್‌ನ ಹೊರತಾಗಿಯೂ ಬಾಹ್ಯಾಕಾಶ ನೌಕೆಯು ಅದರ ವಿನಾಶದ ಕಡೆಗೆ ವೇಗವಾಗಿ ಸಾಗುತ್ತಿದ್ದಂತೆ JHUAPL ನಲ್ಲಿನ DART ಮಿಷನ್ ನಿಯಂತ್ರಣ ಕೇಂದ್ರದಲ್ಲಿ ಶಾಂತ ಮತ್ತು ನಿರೀಕ್ಷೆಯ ಮಿಶ್ರಣವಿತ್ತು. ಅಪಘಾತದ ಸಮಯದಲ್ಲಿ ಏನೂ ತಪ್ಪಿಲ್ಲ, ಆದ್ದರಿಂದ ಎಂಜಿನಿಯರ್‌ಗಳು ತಮ್ಮ ಪಾಕೆಟ್‌ನಲ್ಲಿರುವ 21 ವಿಭಿನ್ನ ಆಕಸ್ಮಿಕ ಯೋಜನೆಗಳಲ್ಲಿ ಒಂದನ್ನು ಪ್ರಯತ್ನಿಸಬೇಕಾಗಿಲ್ಲ ಎಂದು ತಿಳಿಸಿದೆ.

Published On - 12:13 pm, Tue, 27 September 22

ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ