AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಬ್ಯಾಕ್​ಅಪ್​ನ್ನು ಹೆಚ್ಚಿಸಲು ಇಲ್ಲಿವೆ ಆರು ಉಪಯುಕ್ತ ಮಾಹಿತಿ

ಉತ್ತಮ ಬ್ಯಾಟರಿ ಬಾಳಿಕೆ ನೀಡುವ ಫೋನ್​ನ್ನು ಖರೀದಿಸುವುದು ಬುದ್ಧಿವಂತಿಕೆಯಾದರೂ, ಬ್ಯಾಟರಿ ಕಾರ್ಯಕ್ಷಮತೆಯು ನೀವು ಅದನ್ನು ಬಳಸುವ ವಿಧಾನವನ್ನು ಅವಲಂಬಿಸಿರುತ್ತದೆ. ಅಂತಹ ಕೆಲವೊಂದು ಟಿಪ್ಸ್ ಇಲ್ಲಿದೆ ಮುಂದೆ ಓದಿ.

ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಬ್ಯಾಕ್​ಅಪ್​ನ್ನು ಹೆಚ್ಚಿಸಲು ಇಲ್ಲಿವೆ ಆರು ಉಪಯುಕ್ತ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 03, 2022 | 11:19 AM

smartphone tips: ನಾವು ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುತ್ತೇವೆ. ಆದರೆ ಅದರ ಬ್ಯಾಟರಿ ಬ್ಯಾಕ್​ಅಪ್ (battery backup) ಬಹಳ ಸಮಯದವರೆಗೂ ಬರುವುದಿಲ್ಲ.  ಬಹಳ ಸಮಯದವರೆಗೂ ಬಳಕೆ ಬರುವ ಬ್ಯಾಟರಿ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಗುರುತಿಸುವುದು ಕಷ್ಟ ಅಥವಾ ತುಂಬಾ ದುಬಾರಿಯಾಗಿದೆ. ಜನರು ಸಾಮಾನ್ಯವಾಗಿ ಹೆಚ್ಚಿನ ಎಂಎಎಚ್ (mAh) ರೇಟಿಂಗ್ ಬ್ಯಾಟರಿಗಳನ್ನು ಹೊಂದಿರುವ  ಫೋನ್‌ಗಳನ್ನು ಹುಡುಕುತ್ತಾರೆ. ಉತ್ತಮ ಬ್ಯಾಟರಿ ಬಾಳಿಕೆ ನೀಡುವ ಫೋನ್​ನ್ನು ಖರೀದಿಸುವುದು ಬುದ್ಧಿವಂತಿಕೆಯಾದರೂ, ಬ್ಯಾಟರಿ ಕಾರ್ಯಕ್ಷಮತೆಯು ನೀವು ಅದನ್ನು ಬಳಸುವ ವಿಧಾನವನ್ನು ಅವಲಂಬಿಸಿರುತ್ತದೆ. ಅಂತಹ ಕೆಲವೊಂದು ಟಿಪ್ಸ್ ಇಲ್ಲಿದೆ ಮುಂದೆ ಓದಿ.

ಲೈವ್ ವಾಲ್‌ಪೇಪರ್‌ ಬಳಕೆ: ಲೈವ್ ವಾಲ್‌ಪೇಪರ್‌ಗಳು ಭಾರೀ ಕಸ್ಟಮೈಸ್ ಮಾಡಿದ ಅಪ್ಲಿಕೇಶನ್‌ಗಳಾಗಿವೆ. ಈ ವಾಲ್‌ಪೇಪರ್‌ಗಳು ನಿಮ್ಮ ಫೋನ್​ನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದರೂ, ಕೂಡ ಇದು ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿಯ ಹೆಚ್ಚಿನ ಶಕ್ತಿಯನ್ನು ಹಾಳುಮಾಡುತ್ತದೆ ಎಂದು ನೆನಪಿಡಿ. ಲೈವ್ ವಾಲ್‌ಪೇಪರ್‌ಗಳು ಅಥವಾ ಅನಿಮೇಟೆಡ್ ಚಿತ್ರಗಳನ್ನು ಬಳಸುವುದನ್ನು ತಪ್ಪಿಸಿ, ಬದಲಿಗೆ ಸ್ಥಿರ ವಾಲ್‌ಪೇಪರ್‌ಗಳನ್ನು ಇಡುವುದು ಉತ್ತಮ.

ಪರದೆಯ ಹೊಳಪು (brightness) ಕಡಿಮೆ ಇರಲಿ : ಸಾಮಾನ್ಯವಾಗಿ ಜನರು ತಮ್ಮ ಸ್ಮಾರ್ಟ್‌ಫೋನ್‌ ಪರದೆಯ ಹೊಳಪನ್ನು ಗರಿಷ್ಠವಾಗಿ ಇರಿಸಿಕೊಳ್ಳಲು ಬಯಸುತ್ತಾರೆ. ಆದರೆ ಇದು ಹೆಚ್ಚಿನ ಶಕ್ತಿಯನ್ನು ಸೇವಿಸುವ ಮತ್ತೊಂದು ಅಂಶವಾಗಿದೆ. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳು ಸ್ವಯಂ-ಪ್ರಕಾಶಮಾನ ವೈಶಿಷ್ಟ್ಯವನ್ನು ಹೊಂದಿದ್ದು, ಅದು ಸ್ವಯಂಚಾಲಿತವಾಗಿ ಬೆಳಕಿನ ಮಟ್ಟಕ್ಕೆ ಪರದೆಯ ಹೊಳಪನ್ನು ಸರಿಹೊಂದಿಸುತ್ತದೆ. ನೀವು ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದರೆ, ನಿಮ್ಮ ಫೋನ್‌ನ ಬ್ಯಾಟರಿಯ ಜೀವಿತಾವಧಿಯನ್ನು ವಿಸ್ತರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ವೈ-ಫೈ, ಬ್ಲೂಟೂತ್ ಅಥವಾ ಎನ್‌ಎಫ್‌ಸಿ ನಿಷ್ಕ್ರಿಯಗೊಳಿಸಿ: ವೈ-ಫೈ, ಬ್ಲೂಟೂತ್ ಅಥವಾ ಎನ್‌ಎಫ್‌ಸಿ ಬಳಕೆಯಲ್ಲಿಲ್ಲದಿದ್ದಾಗ ಅವುಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ನೀವು ಬ್ಯಾಟರಿಯನ್ನು ಸಂರಕ್ಷಿಸಬಹುದಾಗಿದೆ. ನಿಮ್ಮ ಮೊಬೈಲ್ ಡೇಟಾ ಆನ್ ಆಗಿದ್ದರೆ ಅಥವಾ ನೀವು ಇರುವ ಪ್ರದೇಶವು ಕಳಪೆ ನೆಟ್‌ವರ್ಕ್ ಹೊಂದಿದ್ದರೆ, ಅದು ಹುಡುಕುತ್ತಲೇ ಇರುತ್ತದೆ ಮತ್ತು ಹತ್ತಿರದ ನೆಟ್‌ವರ್ಕ್‌ಗೆ ಸಂಪರ್ಕಿಸಲು ಪ್ರಯತ್ನಿಸುತ್ತದೆ. ಇದು ತುಲನಾತ್ಮಕವಾಗಿ ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ. ಆದ್ದರಿಂದ Wi-Fi, ಬ್ಲೂಟೂತ್ ಮತ್ತು NFC ನಂತಹ ವೈಶಿಷ್ಟ್ಯಗಳನ್ನು ಅಗತ್ಯವಿಲ್ಲದಿದ್ದಾಗ ಆಫ್ ಮಾಡುವುದು ಉತ್ತಮ.

ಪುಶ್ ನೋಟಿಪಿಕೇಶನ್​ನ್ನು ನಿಯಂತ್ರಿಸುವುದು: ಅಧಿಸೂಚನೆಗಳು ಬ್ಯಾಟರಿಯನ್ನು ಸಹ ಬಳಸುತ್ತವೆ. ನಿಮ್ಮ ಫೋನ್ ಬೀಪ್ ಸೌಂಡ್ ಮಾಡಿದಾಗ ಮತ್ತು ಆನ್ ಆದಾಗ ಅಧಿಸೂಚನೆಯು ಪಾಪ್ ಅಪ್ ಆಗುತ್ತದೆ. ಕೆಲವೊಮ್ಮೆ, ಜನರು ಫೋನ್‌ನ ಕಂಪನವನ್ನು ಬಿಟ್ಟುಬಿಡುತ್ತಾರೆ, ಅದು ಹೆಚ್ಚುವರಿ ಶಕ್ತಿಯನ್ನು ಬಳಸುತ್ತದೆ. ಈ ಎಲ್ಲಾ ಸೆಟ್ಟಿಂಗ್‌ಗಳು ಬ್ಯಾಟರಿಯನ್ನು ಬಳಸುತ್ತವೆ. ವಿಶೇಷವಾಗಿ ನೀವು ಸಾಕಷ್ಟು ಅಧಿಸೂಚನೆಗಳನ್ನು ಸ್ವೀಕರಿಸಿದರೆ. ಮೇಲಾಗಿ, ಅನಗತ್ಯ ಅಪ್ಲಿಕೇಶನ್‌ಗಳಿಂದ ಬರುವ ಅಧಿಸೂಚನೆಗಳನ್ನು ಆಫ್ ಮಾಡಿ. ಇಲ್ಲವೇ ನೀವು ಫೋನ್‌ನ ವೈಬ್ರೇಟ್ ಮೋಡ್​ನ್ನು ಆಫ್ ಮಾಡಬಹುದು ಅಥವಾ ಕಡಿಮೆ ವಾಲ್ಯೂಮ್​ನಲ್ಲಿ ಇಟ್ಟುಕೊಳ್ಳುವುದು ಉತ್ತಮ.

ಬ್ಯಾಟರಿಯನ್ನು ಹಾಗ್ ಮಾಡುವ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಿ: ಯಾವುದೇ ಅಪ್ಲಿಕೇಶನ್​ನ್ನು ಡೌನ್‌ಲೋಡ್ ಮಾಡುವ ಮೊದಲು, ಅವು ಎಷ್ಟು ಬ್ಯಾಟರಿಯನ್ನು ಬಳಸುತ್ತವೆ ಎಂಬುದನ್ನು ಪರಿಶೀಲಿಸುವುದು ಬುದ್ಧಿವಂತಿಕೆಯಾಗಿದೆ. ನಿರ್ದಿಷ್ಟ ಅಪ್ಲಿಕೇಶನ್ ಹೆಚ್ಚು ಬ್ಯಾಟರಿಯನ್ನು ಬಳಸಿದರೆ ನೀವು ಯಾವಾಗಲೂ ಪರ್ಯಾಯವನ್ನು ಆಯ್ಕೆ ಮಾಡಬಹುದು. ಅಲ್ಲದೆ, ನಾವು ಅಪ್ಲಿಕೇಶನ್‌ಗಳನ್ನು ಬಳಸಿದಾಗ ಮತ್ತು ಅವುಗಳನ್ನು ಸರಿಯಾಗಿ ಆಫ್ ಮಾಡದೇ ಇರುವಾಗ, ಅವು ಆನ್​ನಲ್ಲಿರುವತ್ತವೆ. ಮತ್ತು ಹಿನ್ನೆಲೆಯಲ್ಲಿ ಚಾಲನೆಯಾಗುತ್ತವೆ. ಅಪ್ಲಿಕೇಶನ್‌ಗಳು ಅಮೂಲ್ಯವಾದ ಶಕ್ತಿಯನ್ನು ಹೇಗೆ ತಿನ್ನುತ್ತವೆ ಎಂಬುದು ಇದು ಒಂದು ಮಾರ್ಗವಾಗಿದೆ. ಹಿನ್ನೆಲೆಯಲ್ಲಿ ತೆರೆದಿರುವ ಅಪ್ಲಿಕೇಶನ್‌ಗಳು ನಿಮ್ಮ ಫೋನ್​ನ್ನು ನೀವು ಪ್ರತಿ ಬಾರಿ ಬದಲಾಯಿಸಿದಾಗಲೂ ನವೀಕರಿಸುತ್ತಲೇ ಇರುತ್ತವೆ.

ಬ್ಯಾಟರಿ ಪ್ಯಾಕ್​ನ್ನು ಖರೀದಿಸಿ: ಮೇಲೆ ತಿಳಿಸಿದ ಸಲಹೆಗಳನ್ನು ಅನುಸರಿಸಿದ ನಂತರವೂ, ಫೋನ್‌ನ ಬ್ಯಾಟರಿ ಬಾಳಿಕೆಯಲ್ಲಿ ಯಾವುದೇ ಸುಧಾರಣೆ ಇಲ್ಲವೆಂದ್ದಾದರೆ ನೀವು ಯಾವಾಗಲೂ ಬಾಹ್ಯ ಬ್ಯಾಟರಿ ಪ್ಯಾಕ್​ನ್ನು ಖರೀದಿಸುವುದು ಉತ್ತಮ. ಇದನ್ನು ಪವರ್ ಬ್ಯಾಂಕ್ ಎಂದೂ ಕರೆಯುತ್ತಾರೆ. ಈ ಬ್ಯಾಟರಿ ಪ್ಯಾಕ್‌ಗಳು ಪೋರ್ಟಬಲ್ ಆಗಿದ್ದು, ಅದನ್ನು ನಿಮ್ಮ ಬ್ಯಾಗ್ ಅಥವಾ ಪಾಕೆಟ್‌ನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ.

ಇದನ್ನೂ ಓದಿ;

Smartphone Tips: ಸ್ಮಾರ್ಟ್​ಫೋನ್ ಚಾರ್ಜ್​ಗೆ ಹಾಕಿದಾಗ ಬಿಸಿಯಾಗುತ್ತಿದ್ದರೆ ನಿರ್ಲಕ್ಷಿಸದಿರಿ: ಹೀಗೆ ಮಾಡಿ

ಉತ್ತರ ಕನ್ನಡ ಜಿಲ್ಲೆಯ 4 ತಾಲೂಕುಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ
ಉತ್ತರ ಕನ್ನಡ ಜಿಲ್ಲೆಯ 4 ತಾಲೂಕುಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ
ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಯಾದ ಬಸ್, 20 ಜನ ಜಸ್ಟ್ ಮಿಸ್
ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಯಾದ ಬಸ್, 20 ಜನ ಜಸ್ಟ್ ಮಿಸ್
ಮನಾಲಿಗೆ ಬರಲೇಬೇಡಿ, ಪಾಕ್​ಗಿಂತಾ ಕೆಟ್ಟದಾಗಿದೆ ಎಂದ ಮಹಿಳೆ
ಮನಾಲಿಗೆ ಬರಲೇಬೇಡಿ, ಪಾಕ್​ಗಿಂತಾ ಕೆಟ್ಟದಾಗಿದೆ ಎಂದ ಮಹಿಳೆ
ಕಳ್ಳತನ ಆರೋಪ, ಆರೋಪಿಯ ಶರ್ಟ್​ ಬಿಚ್ಚಿ, ಚಪ್ಪಲಿ ಹಾರ ಹಾಕಿದ ಪೊಲೀಸರು
ಕಳ್ಳತನ ಆರೋಪ, ಆರೋಪಿಯ ಶರ್ಟ್​ ಬಿಚ್ಚಿ, ಚಪ್ಪಲಿ ಹಾರ ಹಾಕಿದ ಪೊಲೀಸರು
ಶಿಗ್ಗಾಂವಿ ಗುತ್ತಿಗೆದಾರನ ಕೊಲೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಸಂಬಂಧಿಕರು
ಶಿಗ್ಗಾಂವಿ ಗುತ್ತಿಗೆದಾರನ ಕೊಲೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಸಂಬಂಧಿಕರು
VIDEO: ಮಗಾ... ಚೆನ್ನಾಗಿ ಹೋಗ್ತಿದೆ... ಆಂಗ್ಲರ ನಾಡಿನಲ್ಲಿ ಕನ್ನಡದ ಕಂಪು
VIDEO: ಮಗಾ... ಚೆನ್ನಾಗಿ ಹೋಗ್ತಿದೆ... ಆಂಗ್ಲರ ನಾಡಿನಲ್ಲಿ ಕನ್ನಡದ ಕಂಪು
ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ ಹಾಗೂ ಆಚರಣೆ ಬಗ್ಗೆ ತಿಳಿಯಿರಿ
ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ ಹಾಗೂ ಆಚರಣೆ ಬಗ್ಗೆ ತಿಳಿಯಿರಿ
Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್