AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಕ್ರೋಸಾಫ್ಟ್​ನಿಂದ ಮೇಯೋರಾನ 1 ಚಿಪ್: ಇಡೀ ಭೂಮಿಯ ಎಲ್ಲಾ ಕಂಪ್ಯೂಟರ್​ಗಳಿಂದಲೂ ಆಗದ ಕೆಲಸ ಈ ಅಂಗೈ ಅಗಲದ ಕ್ವಾಂಟಂ ಚಿಪ್​ನಿಂದ ಸಾಧ್ಯ

Microsoft unveils Mayorana 1: ಭವಿಷ್ಯದಲ್ಲಿ ಈಗಿರುವ ಕಂಪ್ಯೂಟರ್​​ಗಳು ಅಸ್ತಿತ್ವದಲ್ಲಿ ಇರೊಲ್ಲ. ಕ್ವಾಂಟಂ ಕಂಪ್ಯೂಟರ್​ಗಳು ಬರಲಿವೆ ಎಂದು ಸಾಕಷ್ಟು ಬಾರಿ ಕೇಳಿದ್ದೇವೆ. ಆ ಕನಸು ಬಹಳ ಬೇಗ ನೆರವೇರಲಿದೆ. ಮೈಕ್ರೋಸಾಫ್ಟ್ ಸಂಸ್ಥೆ ಮೇಯೋರಾನ ಎನ್ನುವ ಪ್ರಬಲ ಕ್ವಾಂಟಂ ಚಿಪ್ ನಿರ್ಮಿಸಿದೆ. ಟೋಪೋಕಂಡಕ್ಟರ್ ಎನ್ನುವ ಹೊಸ ದ್ರವ್ಯ ಸ್ಥಿತಿಯನ್ನು ಸೃಷ್ಟಿಸಿದ್ದೇವೆ. ಈ ಟೋಪೋಕಂಡಕ್ಟರ್ ಶಕ್ತಿಯಿಂದ ಕ್ಯುಬಿಟ್​ಗಳನ್ನು ರಚಿಸಿ ಆ ಮೂಲಕ ಕ್ವಾಂಟಂ ಚಿಪ್ ತಯಾರಿಸಲಾಗಿದೆ.

ಮೈಕ್ರೋಸಾಫ್ಟ್​ನಿಂದ ಮೇಯೋರಾನ 1 ಚಿಪ್: ಇಡೀ ಭೂಮಿಯ ಎಲ್ಲಾ ಕಂಪ್ಯೂಟರ್​ಗಳಿಂದಲೂ ಆಗದ ಕೆಲಸ ಈ ಅಂಗೈ ಅಗಲದ ಕ್ವಾಂಟಂ ಚಿಪ್​ನಿಂದ ಸಾಧ್ಯ
ಸತ್ಯ ನಾದೆಲ್ಲಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 21, 2025 | 11:47 AM

Share

ನವದೆಹಲಿ, ಫೆಬ್ರುವರಿ 21: ಮೈಕ್ರೋಸಾಫ್ಟ್ ಸಂಸ್ಥೆ ಮೇಯೋರಾನ1 (Mayorana 1) ಎನ್ನುವ ಹೊಸ ಕ್ವಾಂಟಂ ಚಿಪ್ ಬಿಡುಗಡೆ ಮಾಡಿದ್ದು, ಇದು ಹೊಸ ಇತಿಹಾಸ ಸೃಷ್ಟಿಗೆ ನಾಂದಿ ಹಾಡಿರುವುದಾಗಿ ಹೇಳಿದೆ. ಘನ, ದ್ರವ, ಅನಿಲ ಎನ್ನುವ ಮೂರು ಪ್ರಮುಖ ದ್ರವ್ಯತೆ (matter) ಜೊತೆಗೆ ಮೈಕ್ರೋಸಾಫ್ಟ್ ತಾನು ಟೋಪೋಕಂಡಕ್ಟರ್ಸ್ (Topoconductors) ಎನ್ನುವ ಹೊಸ ದ್ರವ್ಯ ಸ್ಥಿತಿಯನ್ನು (state of matter) ಸೃಷ್ಟಿಸಿದ್ದೇವೆ ಎಂದು ಹೇಳಿಕೊಂಡಿದೆ. ಟೋಪೋಕಂಡಕ್ಟರ್ಸ್ ಬಳಸಿ ಮೇಯೋರಾನ ಎನ್ನುವ ವಿಶ್ವದ ಮೊದಲ ಕ್ವಾಂಟಂ ಪ್ರೋಸಸಿಂಗ್ ಯುನಿಟ್ ಅನ್ನು ನಿರ್ಮಿಸಲಾಗಿದೆ. ಈ ಚಿಪ್ ಎಷ್ಟು ಶಕ್ತಿ ಶಾಲಿ ಎಂದರೆ, ವಿಶ್ವದ ಈಗಿನ ಎಲ್ಲಾ ಕಂಪ್ಯೂಟರ್​ಗಳನ್ನು ಒಟ್ಟಿಗೆ ಸೇರಿಸಿದರೂ ಬಗೆಹರಿಸಲಾಗದ ಸಮಸ್ಯೆಗಳನ್ನು ಅಂಗೈ ಅಗಲದ ಈ ಕ್ವಾಂಟಂ ಚಿಪ್ ಬಗೆಹರಿಸಬಲ್ಲುದಂತೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ನಿನ್ನೆ ಈ ಚಿಪ್ ಹಾಗೂ ತಮ್ಮ ಸಂಸ್ಥೆ ಮಾಡಿರುವ ಸಾಧನೆಯನ್ನು ವಿವರಿಸಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲಾನ್ ಮಸ್ಕ್ ಈ ಪೋಸ್ಟ್​ಗೆ ಕಾಮೆಂಟ್ ಮಾಡಿದ್ದು, ಕ್ವಾಂಟಂ ಕಂಪ್ಯೂಟಿಂಗ್​ನಿಂದ ಹೆಚ್ಚೆಚ್ಚು ಆವಿಷ್ಕಾರಗಳು ಆಗುತ್ತವೆ ಎಂದಿದ್ದಾರೆ.

ಮೈಕ್ರೋಸಾಫ್ಟ್​ನ ಮೇಯೋರಾನ1 ಚಿಪ್ ಬಗ್ಗೆ ಸಿಇಒ ಸತ್ಯ ನಾದೆಲ್ಲ ಹಾಕಿದ ಎಕ್ಸ್ ಪೋಸ್ಟ್​ನ ವಿವರ

‘ಬಹುತೇಕ ನಾವೆಲ್ಲರೂ ಘನ, ದ್ರವ ಮತ್ತು ಅನಿಲ ಎನ್ನುವ ಮೂರು ಪ್ರಮುಖ ದ್ರವ್ಯ ಸ್ಥಿತಿ ಬಗ್ಗೆ ತಿಳಿಯುತ್ತಾ ಬೆಳೆದಿದ್ದೇವೆ. ಇವತ್ತು ಅದು ಬದಲಾಗುತ್ತಿದೆ…. ಹತ್ತಿರಹತ್ತಿರ 20 ವರ್ಷದ ಪ್ರಯತ್ನದ ಬಳಿಕ ನಾವು ಸಂಪೂರ್ಣ ಹೊಸ ದ್ರವ್ಯ ಸ್ಥಿತಿ ಸೃಷ್ಟಿಸಿದ್ದೇವೆ. ಟೋಪೋಕಂಡಕ್ಟರ್ಸ್ ಎನ್ನುವ ಹೊಸ ಕಣಗಳಿಂದ ಇದು ಸಾಧ್ಯವಾಗಿದೆ. ಇದರಿಂದ ಕಂಪ್ಯೂಟಿಂಗ್​ನಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಇದು ಮೇಯೋರಾನಾ1 ಚಿಪ್​ನ ರಚನೆಗೆ ಶಕ್ತಿ ನೀಡಿದೆ. ಮೇಯೋರಾನಾ ಎಂಬುದು ಟೋಪೋಲಾಜಿಕಲ್ ಕೋರ್ ಮೇಲೆ ನಿರ್ಮಿತವಾದ ವಿಶ್ವದ ಮೊದಲ ಕ್ವಾಂಟಂ ಪ್ರೋಸಸಿಂಗ್ ಯೂನಿಟ್ ಎನಿಸಿದೆ’ ಎಂದು ಸತ್ಯ ನಾದೆಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: USAID: ಅಮೆರಿಕದ ಯುಎಸ್ ಏಡ್ ಇತಿಹಾಸ ಏನು, ಉದ್ದೇಶ ಯಾವುದು? ಟ್ರಂಪ್ ಬಳಗಕ್ಕೆ ಯಾಕೆ ಕೋಪ?

ಏನಿದು ಟೋಪೋಕಂಡಕ್ಟರ್..?

ಟೋಪೋಕಂಡಕ್ಟರ್​ಗಳು ಮೇಯೋರಾನಾ ಕಣಗಳನ್ನು ನಿಯಂತ್ರಿಸಿ ಕ್ಯುಬಿಟ್​ಗಳ ಸೃಷ್ಟಿಗೆ ಸಹಾಯವಾಗುತ್ತವೆ. ಕ್ಯುಬಿಟ್ ಎಂದರೆ ಕ್ವಾಂಟಂ ಬಿಟ್. ನಮ್ಮ ಮಾಮೂಲಿಯ ಕಂಪ್ಯೂಟರುಗಳಲ್ಲಿ ಬೈನರಿ ಡಿಜಿಟ್ ಅಥವಾ ಬಿಟ್ ಇರುವ ರೀತಿಯಲ್ಲಿ ಕ್ವಾಂಟಂ ಕಂಪ್ಯೂಟಿಂಗ್​ನಲ್ಲಿ ಕ್ಯೂಬಿಟ್​ಗಳು ಮೂಲ ಘಟಕಗಳಾಗಿರುತ್ತವೆ.

ಒಂದು ಪ್ರಬಲ ಕ್ವಾಂಟಂ ಕಂಪ್ಯೂಟರ್ ನಿರ್ಮಿಸಲು ಕೆಲ ದಶಕಗಳೇ ಬೇಕಾಗಬಹುದು ಎನ್ನುವ ಭಾವನೆ ಇದೆ. ಆದರೆ, ಮೈಕ್ರೋಸಾಫ್ಟ್​ನ ಈ ಆವಿಷ್ಕಾರವು ಕೆಲ ವರ್ಷಗಳಲ್ಲೇ ಈ ಕನಸನ್ನು ನನಸು ಮಾಡಬಹುದು ಎನ್ನುವುದು ನಾದೆಲ್ಲಾ ಅವರ ಅನಿಸಿಕೆ.

ಟೋಪೋಕಂಡಕ್ಟರ್ಸ್​ನಿಂದ ರಚಿತವಾದ ಕ್ಯುಬಿಟ್ ಒಂದು ಮಿಲಿಮೀಟರ್​ನ ನೂರನೇ ಒಂದು ಭಾಗದ ಗಾತ್ರದ್ದಾಗಿರುತ್ತದೆ. ಈ ಕ್ಯುಬಿಟ್​ಗಳು ಪುಟ್ಟದ್ದಾದರೂ ಬಹಳ ವೇಗವಾಗಿರುತ್ತವೆ. ಟೋಪೋಕಂಡಕ್ಟರ್​ಗಳ ಸಹಾಯದಿಂದ ಮಿಲಿಯನ್ ಕ್ಯುಬಿಟ್ ಪ್ರೋಸಸರ್ ನಿರ್ಮಾಣದ ದಾರಿ ಈಗ ಸುಗಮಗೊಂಡಂತಾಗಿದೆ ಎಂದು ಮೈಕ್ರೋಸಾಫ್ಟ್ ಮುಖ್ಯಸ್ಥರು ಹೇಳುತ್ತಾರೆ.

ಮಿಲಿಯನ್ ಕ್ಯೂಬಿಟ್ ಪ್ರೋಸಸರ್ ನಿರ್ಮಾಣದ ಬಗ್ಗೆ ವಿವರಣೆ ಇರುವ ವಿಡಿಯೋ

‘ಇವತ್ತು ಭೂಮಿಯಲ್ಲಿರುವ ಎಲ್ಲಾ ಕಂಪ್ಯೂಟರುಗಳನ್ನು ಸೇರಿಸಿದರೂ ಸಾಧ್ಯವಾಗದ ಕೆಲಸಗಳನ್ನು ನಿಮ್ಮ ಅಂಗೈ ಅಗಲದ ಚಿಪ್ ಮಾಡಬಲ್ಲುದು’ ಎಂದು ಸತ್ಯ ನಾದೆಲ್ಲಾ ಹೊಸ ಚಿಪ್ ಎಷ್ಟು ಶಕ್ತಿಯುತ ಎಂಬುದಕ್ಕೆ ಒಂದು ನಿದರ್ಶನವಾಗಿ ವಿವರಿಸುತ್ತಾರೆ.

ಇದನ್ನೂ ಓದಿ: ಪುಣೆ ಬಳಿ ಟೆಸ್ಲಾ ಫ್ಯಾಕ್ಟರಿ ಸ್ಥಾಪನೆ? ಟಾಟಾ ಮೋಟಾರ್ಸ್ ಜೊತೆ ಟೆಸ್ಲಾ ಹೊಂದಾಣಿಕೆಗೆ ಮಾತುಕತೆ: ವರದಿ

ಇಲಾನ್ ಮಸ್ಕ್ ಪ್ರತಿಕ್ರಿಯೆ

ಎಕ್ಸ್ ಪ್ಲಾಟ್​ಫಾರ್ಮ್​ನ ಮುಖ್ಯಸ್ಥ ಇಲಾನ್ ಮಸ್ಕ್ ಅವರು ಸತ್ಯ ನಾದೆಲ್ಲ ಅವರ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ಮೈಕ್ರೋಸಾಫ್ಟ್​ನ ಮೇಯೋರಾನ1 ಚಿಪ್ ಅನ್ನು ಸ್ವಾಗತಿಸಿರುವ ಅವರು, ಕ್ವಾಂಟಂ ಕಂಪ್ಯೂಟಿಂಗ್​ನಲ್ಲಿ ಹೆಚ್ಚೆಚ್ಚು ಆವಿಸ್ಕಾರಗಳು ಬರಲಿವೆ ಎಂದಿದ್ದಾರೆ.

ಮಸ್ಕ್ ಅವರ ಪ್ರತಿಕ್ರಿಯೆಗೆ ಸತ್ಯ ನಾದೆಲ್ಲ ಕೂಡ ಸ್ಪಂದಿಸಿದ್ದಾರೆ. ಇದನ್ನು ಕ್ವಾಂಟಂನ ಟ್ರಾನ್ಸಿಸ್ಟರ್ ಕ್ಷಣ ಎಂದು ಭಾವಿಸಬಹುದು ಎಂದಿರುವ ಅವರು, ಇಲಾನ್ ಮಸ್ಕ್ ಅವರ ಗ್ರೋಕ್ 3 ಟೀಮ್​ಗೆ ಅಭಿನಂದನೆ ಕೂಡ ಹೇಳಿದ್ದಾರೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Fri, 21 February 25

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ