AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವೇ ತಿಂಗಳಲ್ಲಿ ಮೊಬೈಲ್ ರೀಚಾರ್ಜ್‌ಗಳು ಮತ್ತೆ ದುಬಾರಿಯಾಗಲಿವೆ: ಜಿಯೋ, ಏರ್‌ಟೆಲ್, ವಿಐ ಬಳಕೆದಾರರಿಗೆ ಶಾಕ್

Mobile Recharge Hike: ಜಿಯೋ, ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ಕಳೆದ ವರ್ಷ ತಮ್ಮ ಎಲ್ಲಾ ಮೊಬೈಲ್ ರೀಚಾರ್ಜ್‌ಗಳನ್ನು ದುಬಾರಿಯನ್ನಾಗಿ ಮಾಡಿದ್ದವು ಎಂಬುದು ಗಮನಿಸಬೇಕಾದ ಸಂಗತಿ. 5G ನೆಟ್‌ವರ್ಕ್ ಅನ್ನು ಪ್ರಾರಂಭಿಸಿದ ನಂತರ ಕಂಪನಿಗಳು ಮೊಬೈಲ್ ಯೋಜನೆಗಳನ್ನು ದುಬಾರಿಯಾಗಿಸಲಿಲ್ಲ, ಆದ್ದರಿಂದ ಇದು ಸಂಭವಿಸುವುದು ಖಚಿತ ಎಂದು ಈ ಹಿಂದೆ ಹೇಳಲಾಗಿತ್ತು.

ಕೆಲವೇ ತಿಂಗಳಲ್ಲಿ ಮೊಬೈಲ್ ರೀಚಾರ್ಜ್‌ಗಳು ಮತ್ತೆ ದುಬಾರಿಯಾಗಲಿವೆ: ಜಿಯೋ, ಏರ್‌ಟೆಲ್, ವಿಐ ಬಳಕೆದಾರರಿಗೆ ಶಾಕ್
Jio Airtel And Vi
Follow us
Vinay Bhat
|

Updated on: Apr 19, 2025 | 3:24 PM

ಬೆಂಗಳೂರು (ಏ. 19): ದೇಶದ ಪ್ರಮುಖ ದೂರಸಂಪರ್ಕ ಕಂಪನಿಗಳಾದ ಜಿಯೋ, ಏರ್ಟೆಲ್ (Bharti Airtel) ಮತ್ತು ವೊಡಾಫೋನ್ ಐಡಿಯಾ ಈ ವರ್ಷಾಂತ್ಯದ ವೇಳೆಗೆ ತಮ್ಮ ಸುಂಕಗಳನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವರದಿಯಾಗಿದೆ. ಪ್ರಿಪೇಯ್ಡ್ ಮೊಬೈಲ್ ರೀಚಾರ್ಜ್‌ಗಳು ಮಾತ್ರವಲ್ಲ, ಪೋಸ್ಟ್‌ಪೇಯ್ಡ್ ಮೊಬೈಲ್ ರೀಚಾರ್ಜ್‌ಗಳು ಸಹ ದುಬಾರಿಯಾಗಬಹುದು. ಇದರರ್ಥ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿಡಲು ನೀವು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಕರೆ, ಇಂಟರ್ನೆಟ್ ಮತ್ತು SMS ಗಾಗಿ ನೀವು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಇದು ಸಾಮಾನ್ಯ ಜನರು ಮತ್ತು ಬಡ ಜನರ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಹೆಚ್ಚಿನ ಬಳಕೆದಾರರು 28 ದಿನಗಳವರೆಗಿನ ಅಗ್ಗದ ರೀಚಾರ್ಜ್‌ಗೆ ಸರಾಸರಿ 200 ರೂ. ಗಳನ್ನು ಖರ್ಚು ಮಾಡುತ್ತಿದ್ದಾರೆ.

ET ಟೆಲಿಕಾಂ ವರದಿಯು ಬರ್ನ್‌ಸ್ಟೈನ್ ಎಂಬ ಬ್ರೋಕರೇಜ್ ಸಂಸ್ಥೆಯನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಈ ಕ್ರಮವು ಉದ್ಯಮದಲ್ಲಿನ ದರ ದುರಸ್ತಿ ಪ್ರಯತ್ನಗಳ ಭಾಗವಾಗಿದೆ. 2027 ರ ಆರ್ಥಿಕ ವರ್ಷದವರೆಗೆ ಸುಂಕ ಹೆಚ್ಚಳ ಮುಂದುವರಿಯಬಹುದು ಎಂದು ಹೇಳಲಾಗಿದೆ. ನವೆಂಬರ್-ಡಿಸೆಂಬರ್‌ನಲ್ಲಿ ದುಬಾರಿಯಾಗಲಿದೆ ಎಂದು ಹೇಳಲಾಗುವ ರೀಚಾರ್ಜ್‌ಗಳು ಮೊಬೈಲ್ ಕಂಪನಿಗಳಿಗೆ ನೇರವಾಗಿ ಲಾಭವನ್ನು ನೀಡುತ್ತವೆ. ಅವರ ಆದಾಯ ಕೂಡ ಹೆಚ್ಚಾಗಬಹುದು.

ಜಿಯೋ, ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ಕಳೆದ ವರ್ಷ ತಮ್ಮ ಎಲ್ಲಾ ಮೊಬೈಲ್ ರೀಚಾರ್ಜ್‌ಗಳನ್ನು ದುಬಾರಿಯನ್ನಾಗಿ ಮಾಡಿದ್ದವು ಎಂಬುದು ಗಮನಿಸಬೇಕಾದ ಸಂಗತಿ. 5G ನೆಟ್‌ವರ್ಕ್ ಅನ್ನು ಪ್ರಾರಂಭಿಸಿದ ನಂತರ ಕಂಪನಿಗಳು ಮೊಬೈಲ್ ಯೋಜನೆಗಳನ್ನು ದುಬಾರಿಯಾಗಿಸಲಿಲ್ಲ, ಆದ್ದರಿಂದ ಇದು ಸಂಭವಿಸುವುದು ಖಚಿತ ಎಂದು ಈ ಹಿಂದೆ ಹೇಳಲಾಗಿತ್ತು. ಈಗಿರುವ ಯೋಜನೆಗಳು ಕೆಲವು ವರ್ಷಗಳ ಕಾಲ ಇರಲಿದೆ ಎಂದು ನಂಬಲಾಗಿತ್ತು. ಆದರೆ ನವೆಂಬರ್-ಡಿಸೆಂಬರ್‌ನಲ್ಲಿ ಮೊಬೈಲ್ ರೀಚಾರ್ಜ್‌ಗಳು ದುಬಾರಿಯಾಗುತ್ತಿರುವುದರಿಂದ, ಇದು ಆರು ವರ್ಷಗಳಲ್ಲಿ ನಾಲ್ಕನೇ ಹೆಚ್ಚಳವಾಗಲಿದೆ.

ಇದನ್ನೂ ಓದಿ
Image
ಬರೋಬ್ಬರಿ 14 ತಿಂಗಳ ರೀಚಾರ್ಜ್ ಪ್ಲ್ಯಾನ್, ಕಡಿಮೆ ಬೆಲೆ: BSNL​ನಿಂದ ಬಂಪರ್
Image
10,00ಕ್ಕಿಂತ ಕಡಿಮೆ ಬೆಲೆ: 4 ಕ್ಯಾಮೆರಾ, 5000mAh ಬ್ಯಾಟರಿಯ ಫೋನ್ ರಿಲೀಸ್
Image
ರಾತ್ರಿಯಲ್ಲಿ ಫ್ರಿಡ್ಜ್ ಆಫ್ ಮಾಡಿಡುವುದು ಉತ್ತಮವೇ ಅಥವಾ ಹಾನಿಕಾರಕವೇ?
Image
AI ವೈಶಿಷ್ಟ್ಯಗಳು-50MP ಕ್ಯಾಮೆರಾದೊಂದಿಗೆ ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ

ಬರೋಬ್ಬರಿ 14 ತಿಂಗಳ ರೀಚಾರ್ಜ್ ಪ್ಲ್ಯಾನ್, ಕಡಿಮೆ ಬೆಲೆ: ಬಿಎಸ್ಎನ್ಎಲ್​ನಿಂದ ಬಂಪರ್

ಕಾರಣ 5G ನೆಟ್‌ವರ್ಕ್‌ನ ವಿಸ್ತರಣೆ:

5G ನೆಟ್‌ವರ್ಕ್‌ನ ವಿಸ್ತರಣೆ ಮತ್ತು ಅದರ ವೆಚ್ಚ ಹೆಚ್ಚಾಗುತ್ತಿರುವುದು ಸುಂಕ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮೊಬೈಲ್ ಕಂಪನಿಗಳು ತಮ್ಮ ಜಾಲವನ್ನು ವಿಸ್ತರಿಸುವುದು, ಸ್ಪೆಕ್ಟ್ರಮ್ ಖರೀದಿಸುವುದು ಇತ್ಯಾದಿಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಾಗುತ್ತದೆ. ಇದರಿಂದಾಗಿ ಮೊಬೈಲ್ ರೀಚಾರ್ಜ್‌ಗಳು ದುಬಾರಿಯಾಗಬಹುದು, ಆದರೆ ಇದು ಸಾಮಾನ್ಯ ಜನರಿಗೆ, ವಿಶೇಷವಾಗಿ ಬಡವರಿಗೆ ನೇರ ಪರಿಣಾಮ ಬೀರುತ್ತದೆ.

ಮನಿ ಕಂಟ್ರೋಲ್ ವರದಿಯ ಪ್ರಕಾರ, ವೊಡಾಫೋನ್-ಐಡಿಯಾ ಸಿಇಒ ಅಕ್ಷಯ್ ಮುಂದ್ರಾ ಅವರು ಭಾರತದಂತಹ ಮಾರುಕಟ್ಟೆಯಲ್ಲಿ ಪ್ರತಿ 9 ತಿಂಗಳಿಗೊಮ್ಮೆ ಸುಂಕಗಳು ಹೆಚ್ಚಾಗಬೇಕು ಎಂದು ಹೇಳುತ್ತಾರೆ. ದೇಶಾದ್ಯಂತ ಉತ್ತಮ ಸೇವೆ ಮತ್ತು ಉತ್ತಮ ನೆಟ್‌ವರ್ಕ್ ಒದಗಿಸಲು ಈ ಹಂತ ಅಗತ್ಯ ಎಂದು ಕಂಪನಿಗಳು ನಂಬುತ್ತವೆ. ಜಿಯೋ ಮತ್ತು ಏರ್‌ಟೆಲ್‌ನಂತಹ ಕಂಪನಿಗಳು ದುಬಾರಿ ರೀಚಾರ್ಜ್‌ನ ನೇರ ಲಾಭವನ್ನು ಪಡೆಯಲಿವೆ. ಅವರ ಆದಾಯವು ಶೇಕಡಾ 19 ರಷ್ಟು ಬೆಳೆಯುವ ನಿರೀಕ್ಷೆಯಿದೆ. ವರದಿಯ ಪ್ರಕಾರ, ಎಲ್ಲಾ ಟೆಲಿಕಾಂ ಕಂಪನಿಗಳಲ್ಲಿ, ಏರ್‌ಟೆಲ್ ಉದ್ಯಮದಲ್ಲಿ ಅತ್ಯುತ್ತಮ ಸ್ಥಾನದಲ್ಲಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ