Tech Tips: ಈ 8 ತಪ್ಪುಗಳು ನಿಮ್ಮ ಫೋನ್‌ನ ಬ್ಯಾಟರಿಯನ್ನು ಹಾಳು ಮಾಡುತ್ತದೆ: ಇಂದೇ ಈ ಅಭ್ಯಾಸ ಬದಲಾಯಿಸಿ

ನಿಮ್ಮ ಫೋನ್ ಅನ್ನು ನೀವು ರಾತ್ರಿಯಿಡೀ ಚಾರ್ಜ್ ಮಾಡಲು ಬಿಡಬಾರದು. ಹೀಗೆ ಮಾಡುವುದರಿಂದ ಫೋನಿನ ಬ್ಯಾಟರಿ ಬಾಳಿಕೆ ಮತ್ತು ಬ್ಯಾಟರಿ ಎರಡೂ ಹಾಳಾಗಬಹುದು. ಇಂದು ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಆಟೋ ಕಟ್ ವೈಶಿಷ್ಟ್ಯ ನೀಡಲಾಗಿದೆ. ಅಂತಹ ಮೊಬೈಲ್ ಗಳಲ್ಲಾದರೆ ತೊಂದರೆಯಿಲ್ಲ. ಆದರೆ, ಇದು ಎಲ್ಲ ಫೋನುಗಳಲ್ಲಿ ಲಭ್ಯವಿಲ್ಲ.

Tech Tips: ಈ 8 ತಪ್ಪುಗಳು ನಿಮ್ಮ ಫೋನ್‌ನ ಬ್ಯಾಟರಿಯನ್ನು ಹಾಳು ಮಾಡುತ್ತದೆ: ಇಂದೇ ಈ ಅಭ್ಯಾಸ ಬದಲಾಯಿಸಿ
Smartphone Battery Tips
Follow us
ಪ್ರೀತಿ ಭಟ್​, ಗುಣವಂತೆ
| Updated By: Vinay Bhat

Updated on: Jan 11, 2025 | 12:29 PM

ಸ್ಮಾರ್ಟ್‌ಫೋನ್ ಚಾರ್ಜಿಂಗ್‌ಗೆ ಸಂಬಂಧಿಸಿದಂತೆ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದಾಗ ಗೊಂದಲ ಮೂಡುವುದು ಸಹಜ. ಇಂದು ನಾವು ನಿಮಗೆ ಫೋನ್‌ನ ಬ್ಯಾಟರಿಯನ್ನು ಚಾರ್ಜ್ ಮಾಡುವ ಕುರಿತು ಕೆಲವು ವಿಷಯಗಳನ್ನು ಹೇಳುತ್ತಿದ್ದೇವೆ. ಸಾಮಾನ್ಯವಾಗಿ, ಅನೇಕ ಬಾರಿ ನಾವು ತಿಳಿದೊ ತಿಳಿಯದೊ ಕೆಲವು ತಪ್ಪುಗಳನ್ನು ಮಾಡುತ್ತೇವೆ, ಅವುಗಳಿಂದ ಫೋನ್‌ನ ಬ್ಯಾಟರಿ ಹಾಳಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಫೋನ್‌ನ ಬ್ಯಾಟರಿ ಹಾಳಾಗುವುದನ್ನು ತಡೆಯುವ 8 ಸಲಹೆಗಳನ್ನು ನಾವು ಇಲ್ಲಿ ನೀಡಲಾಗಿದೆ.

ಈ 8 ಅಭ್ಯಾಸಗಳು ನಿಮ್ಮ ಫೋನ್‌ನ ಬ್ಯಾಟರಿಯನ್ನು ಹಾಳು ಮಾಡುತ್ತದೆ:

  • ನಿಮ್ಮ ಫೋನ್ ಅನ್ನು ನೀವು ರಾತ್ರಿಯಿಡೀ ಚಾರ್ಜ್ ಮಾಡಲು ಬಿಡಬಾರದು. ಹೀಗೆ ಮಾಡುವುದರಿಂದ ಫೋನಿನ ಬ್ಯಾಟರಿ ಬಾಳಿಕೆ ಮತ್ತು ಬ್ಯಾಟರಿ ಎರಡೂ ಹಾಳಾಗಬಹುದು. ಇಂದು ಕೆಲವು ಸ್ಮಾರ್ಟ್​ಫೋನ್​ಗಳಲ್ಲಿ ಆಟೋ ಕಟ್ ವೈಶಿಷ್ಟ್ಯ ನೀಡಲಾಗಿದೆ. ಅಂತಹ ಮೊಬೈಲ್​ ಗಳಲ್ಲಾದರೆ ತೊಂದರೆಯಿಲ್ಲ. ಆದರೆ, ಇದು ಎಲ್ಲ ಫೋನುಗಳಲ್ಲಿ ಲಭ್ಯವಿಲ್ಲ. ಹೀಗೆ ಮಾಡುವುದರಿಂದ ಫೋನ್‌ನ ಬ್ಯಾಟರಿಯು ಓವರ್‌ಚಾರ್ಜ್‌ನಿಂದ ಹಾನಿಗೊಳಗಾಗಬಹುದು.
  • ನೀವು ಫೋನ್ ಅನ್ನು ಚಾರ್ಜ್ ಮಾಡುವಾಗ ಅದನ್ನು ಬಳಸುವ ಅಭ್ಯಾಸವನ್ನು ಹೊಂದಿದ್ದರೆ, ಈ ಅಭ್ಯಾಸವನ್ನು ಬದಲಾಯಿಸಬೇಕು. ಚಾರ್ಜ್ ಮಾಡುವಾಗ ಫೋನ್ ಬಳಸುವುದರಿಂದ ಫೋನಿನ ಬ್ಯಾಟರಿ ಹಾಳಾಗಬಹುದು. ಅಲ್ಲದೆ ಬ್ಯಾಕಪ್ ಕೂಡ ಕಡಿಮೆಯಾಗಬಹುದು. ಕೆಲವೊಂದು ಬಾರಿ ಇದು ಸ್ಫೋಟಕ್ಕೂ ಕಾರಣವಾಗಬಹುದು.
  • ಚಾರ್ಜ್ ಮಾಡಲು ಫೋನ್‌ನ ಬ್ಯಾಟರಿ ಸಂಪೂರ್ಣವಾಗಿ ಖಾಲಿಯಾಗುವವರೆಗೆ ನೀವು ಕಾಯಬಾರದು. ಫೋನ್‌ನ ಬ್ಯಾಟರಿ ಶೇಕಡಾ 10 ಅಥವಾ 15 ರವರೆಗೆ ಉಳಿದಿದ್ದರೆ, ಫೋನ್ ಅನ್ನು ಚಾರ್ಜ್‌ನಲ್ಲಿ ಇರಿಸಬೇಕು. ಇದರಿಂದ ಬ್ಯಾಟರಿ ಹಾಳಾಗುವ ಸಾಧ್ಯತೆ ಇದೆ. ಹಾಗೆಯೆ ಶೇ. 80 ಅಥವಾ 85ಕ್ಕೆ ತಲುಪಿದ ತಕ್ಷಣ ಚಾರ್ಜ್​ನಿಂದ ತೆಗೆದರೆ ಉತ್ತಮ.
  • ಥರ್ಡ್ ಪಾರ್ಟಿ ಚಾರ್ಜರ್‌ನೊಂದಿಗೆ ಫೋನ್ ಬ್ಯಾಟರಿಯನ್ನು ಎಂದಿಗೂ ಚಾರ್ಜ್ ಮಾಡಬಾರದು. ಫೋನ್ ಅನ್ನು ಯಾವಾಗಲೂ ಅದರ ಮೂಲ ಚಾರ್ಜರ್‌ನೊಂದಿಗೆ ಮಾತ್ರ ಚಾರ್ಜ್ ಮಾಡಬೇಕು. ಇದರೊಂದಿಗೆ ಫೋನ್‌ನ ಬ್ಯಾಟರಿ ಯಾವಾಗಲೂ ಆರೋಗ್ಯಕರವಾಗಿರುತ್ತದೆ.
  • ಫೋನ್ ಬಳಸುವಾಗ ಅದು ಬಿಸಿಯಾಗಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಫೋನ್ ಹೆಚ್ಚು ಬಿಸಿಯಾಗಿದ್ದರೆ, ತಕ್ಷಣ ಅದನ್ನು ಪಕ್ಕಕ್ಕೆ ಇರಿಸಿ. ಇದನ್ನು ಮಾಡದಿದ್ದರೆ ಫೋನ್ ಬ್ಯಾಟರಿ ಹಾಳಾಗಬಹುದು. ಹೀಗೆ ಮಾಡಿ ಫೋನ್ ಬ್ಲಾಸ್ಟ್ ಆದ ಅನೇಕ ಪ್ರಕರಣಗಳು ವರದಿ ಆಗಿವೆ.
  • ಭಾರವಾದ ಫೋನ್ ಕೇಸ್‌ನೊಂದಿಗೆ ಫೋನ್ ಅನ್ನು ಎಂದಿಗೂ ಬಳಸಬಾರದು. ಈ ಕಾರಣದಿಂದಾಗಿ, ಚಾರ್ಜಿಂಗ್ ಸಮಯದಲ್ಲಿ ಉತ್ಪತ್ತಿಯಾಗುವ ಶಾಖವು ಹೊರಬರಲು ಸಾಧ್ಯವಾಗುವುದಿಲ್ಲ. ಇದರಿಂದ ಫೋನ್ ಬ್ಯಾಟರಿ ಹಾಳಾಗುತ್ತದೆ.
  • ಫೋನ್‌ನಲ್ಲಿರುವ ಕೆಲವು ಆ್ಯಪ್ ಫೋನ್‌ನ ಕಾರ್ಯಕ್ಷಮತೆಯನ್ನು ಹಾಳುಮಾಡುತ್ತದೆ ಮಾತ್ರವಲ್ಲದೆ ಬ್ಯಾಟರಿಯನ್ನು ಸಹ ಹಾಳುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್‌ನಲ್ಲಿ ಅನಗತ್ಯ ಅಪ್ಲಿಕೇಶನ್‌ಗಳನ್ನು ತೆರೆಯುವುದನ್ನು ತಪ್ಪಿಸಿ. ಅವು ತೆರೆದಿದ್ದರೂ, ಬ್ರ್ಯಾಕ್​ಗ್ರೌಂಡ್​ನಿಂದ ಅಳಿಸಿ.
  • ಫೋನ್‌ನ ವೈ-ಫೈ, ಜಿಪಿಎಸ್ ಮತ್ತು ಬ್ಲೂಟೂತ್ ಅನ್ನು ಸದಾ ಆನ್‌ನಲ್ಲಿ ಇರಿಸಬೇಡಿ. ಈ ಕಾರಣದಿಂದಾಗಿ, ಫೋನ್‌ನ ಬ್ಯಾಟರಿ ವೇಗವಾಗಿ ಖಾಲಿಯಾಗುತ್ತದೆ ಮತ್ತು ನೀವು ಫೋನ್ ಅನ್ನು ಮತ್ತೆ ಮತ್ತೆ ಚಾರ್ಜಿಂಗ್‌ನಲ್ಲಿ ಇರಿಸಬೇಕಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್