AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್ ಖಾತೆಯನ್ನು ಸುಲಭವಾಗಿ ಡಿಲೀಟ್ ಮಾಡುವುದು ಹೇಗೆ?: ಇಲ್ಲಿದೆ ಟಿಪ್ಸ್

WhatsApp Tips: ಆಕರ್ಷಕ ಫೀಚರ್​ಗಳಿಂದ ನೀವು ವಾಟ್ಸ್​ಆ್ಯಪ್​ಗೆ ಅಡಿಕ್ಟ್ ಆಗಿ ಕೆಲ ಸಮಯ ವಿರಾಮ ಪಡೆದುಕೊಳ್ಳುವ ಪ್ಲಾನ್​ನಲ್ಲಿದ್ದೀರಾ?, ಹಾಗಿದ್ದರೆ ವಾಟ್ಸ್​ಆ್ಯಪ್ ಅನ್ನು ಸುಲಭವಾಗಿ ಡಿಲೀಟ್ ಮಾಡುವ ಮೂಲಕ ಇದರ ಚಟದಿಂದ ಹೊರಬಹುದು.

WhatsApp: ವಾಟ್ಸ್​ಆ್ಯಪ್ ಖಾತೆಯನ್ನು ಸುಲಭವಾಗಿ ಡಿಲೀಟ್ ಮಾಡುವುದು ಹೇಗೆ?: ಇಲ್ಲಿದೆ ಟಿಪ್ಸ್
WhatsApp
TV9 Web
| Updated By: Vinay Bhat|

Updated on:Sep 12, 2022 | 12:35 PM

Share

ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಅನ್ನು ಇಂದು ಉಪಯೋಗಿಸುತ್ತಿರುವವರ ಸಂಖ್ಯೆ ಮಿಲಿಯನ್ ಗಟ್ಟಲೆಯಿದೆ. ಕೇವಲ ಮೆಸೇಜ್ ಕಳುಹಿಸಲು ಮಾತ್ರವಲ್ಲದೆ ಫೋಟೋ, ವಿಡಿಯೋ, ಆಡಿಯೋ, ಡಾಕ್ಯುಮೆಂಟ್​ಗಳನ್ನು ಕಳುಹಿಸಲು ಕೂಡ ವಾಟ್ಸ್​ಆ್ಯಪ್​ ಅನ್ನು ಬಳಸುತ್ತಿದ್ದಾರೆ. ಈ ವರ್ಷದಲ್ಲಿಂತು ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ಅನೇಕ ಫೀಚರ್​ಗಳನ್ನು ಪರಿಚಯಿಸಿದೆ. ಮೆಸೇಜ್ ರಿಯಾಕ್ಷನ್ (Message Reactions), ಮೆಸೇಜ್ ಡಿಲೀಟ್ ಮಾಡಲು ಹೆಚ್ಚಿನ ಕಾಲವಕಾಶ, ವೀವ್ ಒನ್ಸ್ ಫೀಚರ್ ಸೇರಿದಂತೆ ಅನೇಕ ಆಯ್ಕೆಗಳನ್ನು ನೀಡಿದೆ. ಕೆಲವೇ ದಿನಗಳಲ್ಲಿ ಲಾಗೌಟ್ ಫೀಚರ್ (WhatsApp Logout), ಗ್ರೂಪ್ ಅಡ್ಮಿನ್​ಗೆ ಯಾವುದೇ ಮೆಸೇಜ್ ಡಿಲೀಟ್ ಮಾಡುವ ಅಧಿಕಾರ ಸೇರಿದಂತೆ ಇನ್ನೂ ಕೆಲ ಆಯ್ಕೆಗಳು ಬರಲಿದೆ. ಇದರಲ್ಲಿರುವ ಆಕರ್ಷಕ ಫೀಚರ್​ಗಳಿಂದ ನೀವು ವಾಟ್ಸ್​ಆ್ಯಪ್​ಗೆ ಅಡಿಕ್ಟ್ ಆಗಿ ಕೆಲ ಸಮಯ ವಿರಾಮ ಪಡೆದುಕೊಳ್ಳುವ ಪ್ಲಾನ್​ನಲ್ಲಿದ್ದೀರಾ?, ಹಾಗಿದ್ದರೆ ವಾಟ್ಸ್​ಆ್ಯಪ್ ಅನ್ನು ಸುಲಭವಾಗಿ ಡಿಲೀಟ್ ಮಾಡುವ ಮೂಲಕ ಇದರ ಚಟದಿಂದ ಹೊರಬಹುದು.

ಒಂದು ವೇಳೆ ವಾಟ್ಸ್​ಆ್ಯಪ್ ಡಿಲೀಟ್​ ಮಾಡಬೇಕು ಅಂದುಕೊಂಡಿದ್ದರೆ ಕೆಲ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು. ಅಂದಹಾಗೆ ವಾಟ್ಸ್​ಆ್ಯಪ್​ ಖಾತೆಯಲ್ಲಿನ ಮಾಹಿತಿಯನ್ನು ಡಿಲೀಟ್ ಮಾಡುವುದಕ್ಕೆ 90 ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಗುತ್ತದೆ. ಇಲ್ಲಿದೆ ನೋಡಿ ವಾಟ್ಸ್​ಆ್ಯಪ್ ಅನ್ನು ಡಿಲೀಟ್ ಮಾಡುವ ಸುಲಭ ವಿಧಾನ.

ಆಂಡ್ರಾಯ್ಡ್​ನಲ್ಲಿ ವಾಟ್ಸ್​ಆ್ಯಪ್ ಡಿಲೀಟ್ ಹೇಗೆ?:

ಇದನ್ನೂ ಓದಿ
Image
iPhone Mobiles: iPhone 14 ಬಿಡುಗಡೆಯಾಗಿದ್ದರೂ ಕಡಿತ ಬೆಲೆಯೊಂದಿಗೆ ಲಭ್ಯವಾಗಲಿದೆ iPhone 13
Image
Best Smartphone: 25,000 ರೂ. ಗಿಂತ ಕಡಿಮೆ ಬೆಲೆಗೆ ಸಿಗುತ್ತಿರುವ ಬೆಸ್ಟ್​ ಸ್ಮಾರ್ಟ್​​ಫೋನ್​ಗಳು ಇದುವೇ ನೋಡಿ
Image
iOS 16: ಇಂದು ಬಹುನಿರೀಕ್ಷಿತ iOS 16 ಆಪರೇಟಿಂಗ್‌ ಸಿಸ್ಟಂ ಬಿಡುಗಡೆ: ಹೊಸ ಅಪ್ಡೇಟ್​ನಲ್ಲಿ ಏನಿರಲಿದೆ?
Image
Fake App: ಪ್ಲೇ ಸ್ಟೋರ್​ನಲ್ಲಿ ಅಪಾಯಕಾರಿ ಆ್ಯಪ್ ಪತ್ತೆ: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
  • ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ವಾಟ್ಸ್​ಆ್ಯಪ್ ತೆರೆಯಿರಿ.
  • ಇನ್ನಷ್ಟು ಆಯ್ಕೆಗಳನ್ನು ಟ್ಯಾಪ್ ಮಾಡಿ, ನಂತರ ಸೆಟ್ಟಿಂಗ್‌ಗಳಿಗೆ ಹೋಗಿ.
  • ಸೆಟ್ಟಿಂಗ್ಸ್​ನಲ್ಲಿ ಅಕೌಂಟ್ ಮೇಲೆ ಕ್ಲಿಕ್ ಮಾಡಿ ಡಿಲೀಟ್ ಮೈ ಅಕೌಂಟ್ ಆಯ್ಕೆ ಒತ್ತಿ.
  • ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಡಿಲೀಟ್ ಮೈ ಅಕೌಂಟ್ ಸೆಲೆಕ್ಟ್ ಮಾಡಿ.
  • ಡ್ರಾಪ್‌ಡೌನ್‌ನಲ್ಲಿ ನೀವು ಅಕೌಂಟ್ ಅನ್ನು ಏಕೆ ಡಿಲೀಟ್ ಮಾಡುತ್ತೀರಿ ಎಂಬುದಕ್ಕೆ ಕಾರಣ ನೀಡಿ.
  • ಈಗ ನಿಮ್ಮ ವಾಟ್ಸ್​ಆ್ಯಪ್ ಅಕೌಂಟ್ ಡಿಲೀಟ್ ಆಗುತ್ತಿದೆ. ನಂತರ ಎಲ್ಲ ಮೆಸೇಜ್ ಡಿಲೀಟ್ ಆಗುತ್ತದೆ.
  • ವಾಟ್ಸ್​ಆ್ಯಪ್ ಡಿಲೀಟ್ ಮಾಡಿದರೆ ಎಲ್ಲ ಗ್ರೂಪ್​ನಿಂದ ನೀವು ಹೊರಬರುತ್ತೀರಿ.

ಐಫೋನ್​ನಲ್ಲಿ ವಾಟ್ಸ್​ಆ್ಯಪ್ ಡಿಲೀಟ್ ಹೇಗೆ?:

  • ನಿಮ್ಮ ಐಫೋನ್​ನಲ್ಲಿ ವಾಟ್ಸ್​ಆ್ಯಪ್ ತೆರೆಯಿರಿ.
  • ಸೆಟ್ಟಿಂಗ್‌ಗಳಿಗೆ ಹೋಗಿ ಅಕೌಂಟ್ ಮೇಲೆ ಕ್ಲಿಕ್ ಮಾಡಿ ಡಿಲೀಟ್ ಮೈ ಅಕೌಂಟ್ ಆಯ್ಕೆ ಒತ್ತಿ.
  • ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಡಿಲೀಟ್ ಮೈ ಅಕೌಂಟ್ ಸೆಲೆಕ್ಟ್ ಮಾಡಿ.

ವಾಟ್ಸ್​ಆ್ಯಪ್​​ಗೆ ಪರ್ಯಾಯಗಳಿವೆಯಾ?:

ಹಲವಾರು ಮಂದಿ ಈಗಾಗಲೇ ವಾಟ್ಸ್​ಆ್ಯಪ್ ಬಿಟ್ಟು ಬೇರೆ ಬೇರೆ ಮೆಸೇಜಿಂಗ್ ಆ್ಯಪ್​ಗೆ ಬದಲಾಗಿದ್ದಾರೆ. ಅದರಲ್ಲಿ ಟೆಲಿಗ್ರಾಮ್ ಮತ್ತು ಸಿಗ್ನಲ್ ಕೂಡ ಇವೆ. ಸದ್ಯಕ್ಕೆ ಇವೆರಡು ನಂಬಿಕಸ್ತ ಮೆಸೇಜಿಂಗ್ ಆ್ಯಪ್​ಗಳಾಗಿವೆ. ಟೆಲಿಗ್ರಾಮ್​ನಲ್ಲಿ ಎಂಡ್ ಟು ಎಂಡ್ ಎನ್​ಕ್ರಿಪ್ಷನ್ ಸೀಕ್ರೆಟ್ ಚಾಟ್​ಗೆ, ಒನ್ಆನ್ಒನ್ ವಿಡಿಯೋ ಅಥವಾ ವಾಯ್ಸ್ ವಾಯ್ಸ್​ ಕಾಲ್​ಗಳಿಗೆ ಮಾತ್ರ ಇದೆ. ಯಾರಿಗೆ ಭದ್ರತೆ ಬಗ್ಗೆ ಆತಂಕ ಇದೆಯೋ ಅಂಥವರು ಸೀಕ್ರೆಟ್ ಚಾಟ್​ ಮೋಡ್ ಎನೇಬಲ್ ಮಾಡಿಕೊಳ್ಳಬಹುದು.

Published On - 12:32 pm, Mon, 12 September 22

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ