CM of Karnataka
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ರಾಜ್ಯದ ಸರಕಾರದ ಮುಖ್ಯಸ್ಥರಾಗಿರುತ್ತಾರೆ. ಅಲ್ಲದೇ ಮುಖ್ಯಮಂತ್ರಿಯು ರಾಜ್ಯದ ಕಾರ್ಯಾಂಗದ ಮುಖ್ಯಸ್ಥರು ಹೌದು. ಮುಖ್ಯಮಂತ್ರಿಯನ್ನು ರಾಜ್ಯದ ವಿಧಾನ ಸಭೆಯಲ್ಲಿ ಬಹುಮತ ಪಡೆದ ಪಕ್ಷ ಅಥವಾ ಪಕ್ಷಗಳ ಒಕ್ಕೂಟದ ಶಾಸಕರು ಆರಿಸುತ್ತಾರೆ. ಇವರ ಅಧಿಕಾರಾವಧಿ ಐದು ವರ್ಷ, ಪುನರಾಯ್ಕೆಯಾಗುವ ಅವಕಾಶವಿರುತ್ತದೆ.
ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ಇತರ ಸಚಿವರನ್ನು ನೇಮಿಸುತ್ತಾರೆ. ಮುಖ್ಯಮಂತ್ರಿಗಳು ತಮ್ಮ ಸಹೋದ್ಯೋಗಿಗಳ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಮುಕ್ತ ಹಸ್ತವನ್ನು ಹೊಂದಿದ್ದಾರೆ. ರಾಜ್ಯಪಾಲರು ಸಚಿವಾಲಯಕ್ಕೆ ಸೇರಿಸಬೇಕಾದ ಶಾಸಕರ ಹೆಸರನ್ನು ಸೂಚಿಸಬಹುದು, ಆದರೆ ಅವರು ಯಾವುದೇ ಶಾಸಕರನ್ನು ಸಚಿವಾಲಯಕ್ಕೆ ಸೇರಿಸಿಕೊಳ್ಳಲು ಒತ್ತಾಯಿಸುವಂತಿಲ್ಲ. ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ರಾಜ್ಯಪಾಲರು ಮಂತ್ರಿಗಳಿಗೆ ಇಲಾಖೆಗಳು ಅಥವಾ ಖಾತೆಗಳನ್ನು ನಿಯೋಜಿಸುತ್ತಾರೆ.
ಸರ್ಕಾರ ವಾಸ್ತವವಾಗಿ ಮುಖ್ಯಮಂತ್ರಿಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ, ಮುಖ್ಯಮಂತ್ರಿಗಳು ತಮ್ಮ ಸಚಿವ ಸಂಪುಟಕ್ಕೆ ತಮಗೆ ಬೇಕಾದ ಪಕ್ಷದ ಶಾಸಕರುಗಳನ್ನು ಸೇರಿಸಿಕೊಳ್ಳಬಹುದು. ಅಲ್ಲದೇ ಸಚಿವರ ಸಭೆ, ಸಚಿವ ಸಂಪುಟ ಪುನರ್ ರಚನೆ ಮಾಡಿಕೊಳ್ಳಬಹುದು. ಅಲ್ಲದೇ ಸಚಿವರ ರಾಜೀನಾಮೆ ಪಡೆಯುವ ಅಧಿಕಾರ ಸಿಎಂ ಹೊಂದಿರುತ್ತಾರೆ. ಒಂದು ವೇಳೆ ಮಂತ್ರಿ ರಾಜೀನಾಮೆ ನೀಡಲು ನಿರಾಕರಿಸಿದರೆ ಸಿಎಂ, ರಾಜ್ಯಪಾಲರಿಂದ ವಜಾಗೊಳಿಸಬಹುದು.
ಇನ್ನೂ ಹೆಚ್ಚು ಓದಿಆತುರ ಬೇಡ, ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳ ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್
ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ವಯ ಉಳಿದ ಬರಪೀಡಿತ ತಾಲೂಕುಗಳನ್ನು ಶೀಘ್ರವೇ ಅಧಿಕೃತವಾಗಿ ಘೋಷಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಎಷ್ಟೋ ಕಡೆ ಬೆಳೆ ನಾಶವಾಗಿದ್ದು, ಅಂತರ್ಜಲ ಕುಸಿದಿದೆ. ಅನೇಕ ಕಡೆ ಬೆಳೆ ಹಾಕಲು ಆಗಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಅಭಾವ ಹೆಚ್ಚಾಗುವ ಸಾಧ್ಯತೆಗಳಿವೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
- Prasanna Hegde
- Updated on: Sep 14, 2026
- 4:09 pm
ಸಿಎಂ ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ಬಣ್ಣ ಬಣ್ಣದ ದೀಪಗಳಲ್ಲಿ ಕಂಗೊಳಿಸಿದ ವಿಧಾನಸೌಧ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರ ಯಶಸ್ವಿ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ದೃಢ ಕರ್ನಾಟಕದ ಸಂಕಲ್ಪ, ಶತಕದ ಪಥ, ಪ್ರಗತಿಯ ರಥ ಅಭಿಯಾನದ ಭಾಗವಾಗಿ ವಿಧಾನಸೌಧಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಲೇಸರ್ ಪ್ರದರ್ಶನದ ಮೂಲಕ ಸರ್ಕಾರದ 100 ದಿನಗಳ ಸಾಧನೆ ಮತ್ತು ಗೃಹಲಕ್ಷ್ಮಿ ಯೋಜನೆಯ ಯಶಸ್ಸನ್ನು ಬಿಂಬಿಸಲಾಗಿದೆ.
- Prasanna Hegde
- Updated on: Sep 14, 2026
- 3:03 pm
ಡಿಕೆ ಶಿವಕುಮಾರ್ ಸರ್ಕಾರಕ್ಕೆ 100ರ ಸಂಭ್ರಮ :ಬಿಕೆ ಹರಿಪ್ರಸಾದ್ ಅಸಮಾಧಾನ!
ಡಿಕೆ ಶಿವಕುಮಾರ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರ್ಣಗೊಳಿಸಿದ್ದು, ಈ ಶತದಕ ಸಂಭ್ರಮವನ್ನು ಡಿಕೆ ಶಿವಕುಮಾರ್ ಮೊನ್ನೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಇನ್ನು ಈ ಕಾರ್ಯಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯನವರಿಂದ ಉದ್ಘಾಟಿಸಿದ್ದು ವಿಶೇಷ. ಆದ್ರೆ, ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನಲ್ಲಿ ಅಸಮಧಾನ ಭುಗಿಲೆದ್ದಿದೆ. ಹೌದು...ಸ್ವತಃ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಅಸಮಾಧಾನಗೊಂಡಿದ್ದಾರೆ.
- Ramesh B Jawalagera
- Updated on: Sep 14, 2026
- 12:38 pm
ಗಣೇಶ ಕೇವಲ ಬಿಜೆಪಿ ಆಸ್ತಿಯಲ್ಲ,ಎಲ್ಲರ ಆಸ್ತಿ, ಎಲ್ಲಿ ಬೇಕಾದ್ರೂ ಹೋಗಲಿ: ಸಿಎಂ
ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ನೀಡಿದ ಎಚ್ಚರಿಕೆಯು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಟಿ. ನರಸೀಪುರಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದ್ದಾರೆ. ಅಲ್ಲದೇ ಇನ್ಸ್ಪೆಕ್ಟರ್ನ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೊಂದೆಡೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಅಶಾಂತಿ ಮೂಡಿಸೋಕೆ ದೊಡ್ಡ ಕುತಂತ್ರ ನಡೆಯುತ್ತಿದೆ. ದೊಡ್ಡ ಕುತಂತ್ರ ನಡೆಯುತ್ತಿದೆ ಎಂದು ನಮಗೆ ಅರಿವಿದೆ. ಅವರು ಏನೂ ಬೇಕಾದ್ರೂ ಮಾಡಲಿ. ಪೊಲೀಸರಿಗೆ ಹುಷಾರಾಗಿರಿ ಎಂದು ನಾವು ಹೇಳಿದ್ದೇವೆ. ಗಣೇಶ ಕೇವಲ ಬಿಜೆಪಿ ಆಸ್ತಿಯಲ್ಲ, ಗಣೇಶ ಎಲ್ಲರ ಆಸ್ತಿ. ಎಲ್ಲಿ ಬೇಕಾದ್ರೂ ಹೋಗಲಿ, ಏನು ಬೇಕಾದ್ರೂ ಮಾಡಲಿ. ಅವರ ಪರಿಮಿತಿಯಲ್ಲಿ ಅವರು ಮಾಡಲಿ ಅಷ್ಟೇ ಎಂದು ಸ್ಪಷ್ಟಪಡಿಸಿದರು.
- Ramesh B Jawalagera
- Updated on: Sep 13, 2026
- 3:27 pm
KSRTC ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಇದ್ದಲ್ಲೇ ನಿಮ್ಮ ವಾಟ್ಸಾಪ್ ಮೂಲಕ ಟಿಕೆಟ್ ಬುಕ್ ಮಾಡ್ಬಹುದು
ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಪ್ರಯಾಣಿಕರಿಗೆ ಮತ್ತಷ್ಟು ಸುಲಭ, ಸರಳ ಹಾಗೂ ಅನುಕೂಲಕರ ಸಾರಿಗೆ ಸೇವೆ ಒದಗಿಸಲು ಮುಂದಾಗಿದೆ.ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ನೀಡಲು ಮುಂದಾಗಿದ್ದು, ಇದರೊಂದಿಗೆ ನೀವು ಇನ್ನು ಮುಂದೆ ವಾಟ್ಸಾಪ್ ಮೂಲಕವೂ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣದ ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ. ಅದು ಹೇಗೆ ಎನ್ನುವ ಡಿಟೇಲ್ಸ್ ಇಲ್ಲಿದೆ.
- Ramesh B Jawalagera
- Updated on: Sep 10, 2026
- 8:17 pm
ಡಿಕೆ ಶಿವಕುಮಾರ್ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಇಂದಿಗೆ 100 ದಿನಗಳು ಪೂರೈಸಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ನಂಬಿದ ನೊಣವಿನಕೆರೆ ಮಠದ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕೈಯಲ್ಲಿ ಬೆಂಕಿ ಇಟ್ಟುಕೊಂಡು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ನುಂಗಲೂ ಆಗದ, ಉಗುಳಲೂ ಆಗದ ಸ್ಥಿತಿಯಲ್ಲಿ ಸಮಾಜ ಸಿಲುಕಿದೆ. ಎಲ್ಲರ ಭಾವನೆ ಗೌರವಿಸುವವರಿಗೆ ಶ್ರೀಮಠದ ಪೂರ್ಣ ಆಶೀರ್ವಾದ ಇರುತ್ತದೆ. ಸಮನ್ವಯತೆಯಿಂದ ಸಮಾಜ ಮುನ್ನಡೆಸುವ ನಾಯಕನಿಗೆ ಬೆಂಬಲ.
- Jagadisha B
- Updated on: Sep 10, 2026
- 5:48 pm
ಮಹಾಸಂಕಲ್ಪ ಮತ್ತು ನವಸಂಕಲ್ಪ, 2037ರ ಭವ್ಯ ಕನಸು: ಡಿಕೆ ಶಿವಕುಮಾರ್ ಸಂಕಲ್ಪ
ಡಿಕೆ ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ (ಸೆಪ್ಟೆಂಬರ್ 10) 100 ದಿನಗಳು ಪೂರೈಸಿವೆ. ಹೀಗಾಗಿ ಈ ಶತಕದ ಸಂಭ್ರಮಕ್ಕಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ದೃಢ ಕರ್ನಾಟಕದ ಸಂಕಲ್ಪ ಎನ್ನುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಮಹತ್ವದ ವಿಚಾರಣಗಳನ್ಜು ಹಂಚಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳು ಹಾಗೂ ಮುಂದಿನ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಕಾರ್ಯಕ್ರಮಗಳನ್ನು ನೀಡುವ ಬಗ್ಗೆ ವಿವರಿಸಿದ್ದಾರೆ.
- Ramesh B Jawalagera
- Updated on: Sep 10, 2026
- 4:44 pm
ಯಶವಂತಪುರ ಎಪಿಎಂಸಿಗೆ ದಿಢೀರ್ ಭೇಟಿ, ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ನಡೆಗೆ ಹೈಕೋರ್ಟ್ನಿಂದ ಪ್ರಶಂಸೆ
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದಿಢೀರ್ ಭೇಟಿಯನ್ನು ಕರ್ನಾಟಕ ಹೈಕೋರ್ಟ್ ಪ್ರಶಂಸಿಸಿದೆ. ಕಾರ್ಮಿಕ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಶಿವಕುಮಾರ್ರವರ ನಡೆ ಶ್ರೇಷ್ಠ ಕಾರ್ಯ ಎಂದು ಬಣ್ಣಿಸಿದ್ದಾರೆ. ಈರುಳ್ಳಿ, ಬೆಳ್ಳುಳ್ಳಿ ದರ ಪರಿಶೀಲನೆ ಹಾಗೂ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದಕ್ಕೆ ಈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Ramesha M
- Updated on: Sep 9, 2026
- 7:00 pm
ನೇಗಿಲ ಯೋಗಿ, ತೇಗ ಸಿರಿ: ರೈತರಿಗಾಗಿ ಹಲವು ಯೋಜನೆ ಜಾರಿಗೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್
ಸಣ್ಣ ರೈತರಿಗೆ ಉಚಿತ ಉಳುಮೆ ಸೌಲಭ್ಯ ಒದಗಿಸುವ ‘ಮುಖ್ಯಮಂತ್ರಿ ನೇಗಿಲಯೋಗಿ’ ಹಾಗೂ ತೇಗದ ಗಿಡ ನೀಡುವ ‘ತೇಗ ಸಿರಿ’ ಯೋಜನೆ ಸೇರಿದಂತೆ ಹಲವು ಕೃಷಿ ಉತ್ತೇಜನ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
- Prasanna Gaonkar
- Updated on: Sep 9, 2026
- 6:06 pm
ಡಿಕೆಶಿ ಸರ್ಕಾರಕ್ಕೆ 100ರ ಸಂಭ್ರಮ: ಸೆ.10ರಂದು “ಶತಕದ ಪಥ, ಪ್ರಗತಿಯ ರಥ” ವಿಶೇಷ ಕಾರ್ಯಕ್ರಮ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದು ನಾಳೆಗೆ (ಸೆಪ್ಟೆಂಬರ್ 10) 100 ದಿನಗಳನ್ನ ಪೂರೈಸಲಿದೆ. ಹೀಗಾಗು ಯಶಸ್ವಿ 100 ದಿನಗಳನ್ನು ಸಂಭ್ರಮಿಸಲು ಸರ್ಕಾರ ವಿಶೇಷ ಕಾರ್ಯಕ್ರವೊಂದನ್ನು ಆಯೋಜಿಸಿದೆ. "ಶತಕದ ಪಥ, ಪ್ರಗತಿಯ ರಥ" ಎನ್ನುವ ವಿಶೇಷ ಕಾರ್ಯಕ್ರಮ ಎಲ್ಲಿ ಯಾವಾಗ ನಡೆಯಲಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ.
- Ramesh B Jawalagera
- Updated on: Sep 9, 2026
- 5:51 pm
ಸಚಿವ ಸಂಪುಟ ಸಭೆ: ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗೆ ಕ್ಯಾಬಿನೆಟ್ ಅಸ್ತು
ರಾಜ್ಯದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ 2026-27ರಿಂದ ವಿದ್ಯಾರ್ಥಿ ಸಂಘದ ಚುನಾವಣೆ ಪುನರಾರಂಭ, ಏರೋಸ್ಪೇಸ್ ಪಾಲಿಸಿ ಹಾಗೂ ಉದ್ಯೋಗ ಪ್ರೋತ್ಸಾಹಧನ ಯೋಜನೆ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಪರಮೇಶ್ವರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
- Prasanna Gaonkar
- Updated on: Sep 9, 2026
- 6:14 pm
ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ 100 ದಿನಗಳ ಸಂಭ್ರಮ! ಗ್ಯಾರಂಟಿ ಫಲಾನುಭವಿಗಳೊಂದಿಗೆ ನಾಳೆ ಸಿಎಂ ಸಂವಾದ
ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಯಶಸ್ವಿಯಾಗಿ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ನಾಳೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸರಳ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನಾ ವರದಿ ಬಿಡುಗಡೆ ಮಾಡಲಿದ್ದು, ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ. ಈ ವೇಳೆ ವಿಪಕ್ಷಗಳ ಆರೋಪಗಳಿಗೆ ಸಿಎಂ ಡಿಕೆಶಿ ಕೌಂಟರ್ ನೀಡಿದ್ದಾರೆ.
- Iranna Basava
- Updated on: Sep 9, 2026
- 1:20 pm