Farmer

Farmer

ರೈತರನ್ನು ಈ ದೇಶದಲ್ಲಿ ಅನ್ನದಾತರೆಂದೇ ಗೌರವಿಸಲಾಗುತ್ತದೆ. ಪ್ರತಿಯೊಬ್ಬರು ಬದುಕಲು ಬೇಕಾದ ಆಹಾರವನ್ನು ಬೆಳೆಯುವುದು ರೈತರೇ. ಭಾರತ ಈಗಲೂ ಕೂಡ ಕೃಷಿ ಆಧಾರಿತ ಆರ್ಥಿಕತೆ ಇರುವ ದೇಶ. ಆದರೆ, ರೈತನಿಗೆ ಆತನ ಶ್ರಮಕ್ಕೆ ತಕ್ಕಷ್ಟು ಆದಾಯ ಸಿಗುತ್ತಿಲ್ಲದಿರುವುದು ವಾಸ್ತವದ ಸಂಗತಿ. ಅಂತೆಯೇ, ಗ್ರಾಮೀಣ ಭಾಗ ಈಗಲೂ ಕೂಡ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ. ನೆರೆ, ಬರ ಇತ್ಯಾದಿ ಪ್ರಕೃತಿ ವಿಕೋಪಗಳಿಂದ ಬೆಳೆ ನಾಶ ಆಗುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿನ ಏರುಪೇರಿನಿಂದ ರೈತನ ಬೆಳೆಗೆ ನ್ಯಾಯಯುತ ಬೆಲೆ ಸಿಗುವುದಿಲ್ಲ. ಹೀಗೆ ಹಲವು ಹಿನ್ನಡೆ, ಸಮಸ್ಯೆಗಳ ನಡುವೆ ರೈತನ ಕೈಂಕರ್ಯ ಮುಂದುವರಿಯುತ್ತಿರುತ್ತದೆ.

ಇನ್ನೂ ಹೆಚ್ಚು ಓದಿ

Kangana Ranaut: ಪಕ್ಷದ ನೀತಿ ಬಗ್ಗೆ ಮಾತನಾಡಲು ಕಂಗನಾ ರಣಾವತ್‌ಗೆ ಅಧಿಕಾರವಿಲ್ಲ; ಬಿಜೆಪಿ ಎಚ್ಚರಿಕೆ

ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ರೈತರ ಪ್ರತಿಭಟನೆಯು ಬಾಂಗ್ಲಾದೇಶದಂತಹ ಬಿಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಈ ಹೇಳಿಕೆಯ ಬಳಿಕ ಬಿಜೆಪಿ ಕಂಗನಾ ರಣಾವತ್ ಅವರಿಂದ ಅಂತರ ಕಾಯ್ದುಕೊಂಡಿದೆ.

ಅರಣ್ಯ ಒತ್ತುವರಿ ತೆರವಿಗೆ ಸೂಚನೆ ಬೆನ್ನಲ್ಲೇ ರೈತರನ್ನು ನಕ್ಸಲರನ್ನಾಗಿ ಮಾಡಬೇಡಿ ಎಂದು ಬ್ಯಾನರ್

ಅರಣ್ಯ ಒತ್ತುವರಿ ತೆರವಿಗೆ ರಾಜ್ಯ ಸರ್ಕಾರ ಖಡಕ್ ಸೂಚನೆ ರವಾನಿಸಿದ ಬೆನ್ನಲ್ಲೇ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮತ್ತೆ ನಕ್ಸಲ್ ಸದ್ದು ಮಾಡಲಾರಂಭಿಸಿದೆ. ಅರಣ್ಯ ಇಲಾಖೆಯು ಒತ್ತುವರಿ ತೆರವು ಸಂಬಂಧ ನೋಟಿಸ್ ನೀಡಿದ್ದರಿಂದ ರೈತರನ್ನು ನಕ್ಸಲರನ್ನಾಗಿ ಮಾಡಬೇಡಿ ಎಂದು ಬ್ಯಾನರ್ ಹಿಡಿದು ಎಚ್ಚರಿಕೆ ನೀಡಿದ್ದಾರೆ.

PM Kisan: ಪಿಎಂ ಕಿಸಾನ್ ಹಣ ಶೇ. 30ರಷ್ಟು ಹೆಚ್ಚಿಸುವ ಸಾಧ್ಯತೆ; ಬಜೆಟ್​ನಲ್ಲಿ 80,000 ಕೋಟಿ ರೂ ನಿಯೋಜನೆ?

Budget 2024: ಮುಂಬರುವ ಕೇಂದ್ರ ಬಜೆಟ್​ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೆಚ್ಚಿನ ಹಣ ಹಂಚಿಕೆ ಆಗಬಹುದು ಎನ್ನಲಾಗುತ್ತಿದೆ. ವರದಿಗಳ ಪ್ರಕಾರ ಶೇ. 30ರಷ್ಟು ಹೆಚ್ಚು ಅಲೋಕೇಶನ್ ಆಗಬಹುದು. ಮಧ್ಯಂತರ ಬಜೆಟ್​ನಲ್ಲಿ ಈ ಯೋಜನೆಗೆ 60,000 ರೂ ಹಣ ಘೋಷಿಸಲಾಗಿತ್ತು. ಅದನ್ನು 80,000 ಕೋಟಿ ರೂಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ.

ಬಜೆಟ್​ನಲ್ಲಿ ಪಿಎಂ ಕಿಸಾನ್ ಯೋಜನೆಯ 6,000 ರೂ ಮೊತ್ತ ಹೆಚ್ಚಳ ಆಗುತ್ತಾ?

PM Kisan Scheme and Union Budget 2024: ಜುಲೈ 23ರಂದು ಮಂಡನೆ ಆಗಲಿರುವ ಕೇಂದ್ರ ಬಜೆಟ್​ನಲ್ಲಿ ಪಿಎಂ ಕಿಸಾನ್ ಯೋಜನೆಯ ಮೊತ್ತ ವಿಸ್ತರಿಸಬಹುದು ಎನ್ನುವ ಮಾತಿದೆ. ಈ ಯೋಜನೆಯಲ್ಲಿ ಈಗ ಒಂದು ವರ್ಷದಲ್ಲಿ ಒಟ್ಟು 6,000 ರೂ ಹಣವನ್ನು ಫಲಾನುಭವಿ ರೈತರಿಗೆ ನೀಡಲಾಗುತ್ತಿದೆ. ಇದನ್ನು ಎಂಟು ಸಾವಿರ ರೂಗೆ ಹೆಚ್ಚಿಸಬೇಕೆಂದು ನಿರೀಕ್ಷೆ ಇದೆ.

ಪಿಎಂ ಕಿಸಾನ್ ಎಐ ಚಾಟ್​ಬೋಟ್ ಬಳಸಿದ್ದೀರಾ? ಕಿಸಾನ್ ಇಮಿತ್ರಾ ಬಗ್ಗೆ ಇಲ್ಲಿದೆ ಡೀಟೇಲ್ಸ್

Kisan eMitra chatbot in PM Kisan website: ಪಿಎಂ ಕಿಸಾನ್ ಸ್ಕೀಮ್​ನ ವೆಬ್​ಸೈಟ್​ನಲ್ಲಿ ವರ್ಷದ ಹಿಂದೆ ಚಾಟ್​ಬೋಟ್ ಫೀಚರ್ ಅಳವಡಿಸಲಾಗಿದೆ. ಕಿಸಾನ್ ಇಮಿತ್ರಾ ಚಾಟ್​ಬೋಟ್​ನಲ್ಲಿ ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆ, ಅನುಮಾನಗಳಿದ್ದರೆ ಕೇಳಿ ಉತ್ತರ ಪಡೆಯಬಹುದು. ಈ ಚಾಟ್​ಬೋಟ್ ಇಂಗ್ಲೀಷ್ ಹಾಗೂ 10 ಭಾರತೀಯ ಭಾಷೆಗಳಲ್ಲಿ ಲಭ್ಯ ಇದೆ. ಕನ್ನಡದಲ್ಲೂ ನೀವು ಸಂವಾದ ನಡೆಸಬಹುದು.

ಕೇಂದ್ರ ಬಜೆಟ್ 2024: ಏಕೀಕೃತ ಸಬ್ಸಿಡಿ, ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಸೇರಿದಂತೆ ಕೃಷಿ ವಲಯದ ವಿವಿಧ ಬೇಡಿಕೆಗಳಿವು…

Agricultural sector expectations from Union Budget 2024: ಕೃಷಿ ಕ್ಷೇತ್ರದ ಸಂಘ ಸಂಸ್ಥೆಗಳು, ತಜ್ಞರು ಮೊದಲಾದವರು ಇಂದು (ಜೂನ್ 21) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಉತ್ತೇಜನ ಸಿಗಲು ಯಾವೆಲ್ಲಾ ಅಂಶಗಳು ಬೇಕಾಗಬಹುದು ಎಂದು ಇವರು ಸಲಹೆ ನೀಡಿರುವುದು ತಿಳಿದುಬಂದಿದೆ. ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಕೊಡಬೇಕು, ಯೂರಿಯಾ ದರ ಏರಿಸಬೇಕು ಎಂಬಿತ್ಯಾದಿ ಬೇಡಿಕೆಗಳು ಈ ಸಂದರ್ಭದಲ್ಲಿ ವ್ಯಕ್ತವಾಗಿವೆ.

News Alert: ಶುಭ ಸುದ್ದಿ; ಪಿಎಂ ಕಿಸಾನ್ ಫಲಾನುಭವಿಗಳು, ಕಟ್ಟಡ ಕಾರ್ಮಿಕರಿಗೆ 10 ಲಕ್ಷ ರೂವರೆಗೆ ವಿಮಾ ಕವರೇಜ್?

PM Kisan Beneficiaries Insurance Coverage: ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯ ಅಡಿಯ ಇನ್ಷೂರೆನ್ಸ್ ಸ್ಕೀಮ್​ನಲ್ಲಿ ಫಲಾನುಭವಿಗಳ ಸಂಖ್ಯೆಯನ್ನು 100 ಕೋಟಿಗೆ ಹೆಚ್ಚಿಸುವ ಗುರಿ ಇದೆ. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು ಮೊದಲಾದವರನ್ನೂ ವಿಮಾ ವ್ಯಾಪ್ತಿಗೆ ತರಬಹುದು. ಪಿಎಂ ಕಿಸಾನ್ ಯೋಜನಯಲ್ಲಿ ನೀಡಲಾಗುವ ಧನಸಹಾಯದ ಪ್ರಮಾಣವನ್ನು 6,000 ರೂನಿಂದ 8,000 ರೂಗೆ ಹೆಚ್ಚಿಸಬಹುದು.