Farmer's Protest
ರೈತರನ್ನು ಈ ದೇಶದಲ್ಲಿ ಅನ್ನದಾತರೆಂದೇ ಗೌರವಿಸಲಾಗುತ್ತದೆ. ಪ್ರತಿಯೊಬ್ಬರು ಬದುಕಲು ಬೇಕಾದ ಆಹಾರವನ್ನು ಬೆಳೆಯುವುದು ರೈತರೇ. ಭಾರತ ಈಗಲೂ ಕೂಡ ಕೃಷಿ ಆಧಾರಿತ ಆರ್ಥಿಕತೆ ಇರುವ ದೇಶ. ಆದರೆ, ರೈತನಿಗೆ ಆತನ ಶ್ರಮಕ್ಕೆ ತಕ್ಕಷ್ಟು ಆದಾಯ ಸಿಗುತ್ತಿಲ್ಲದಿರುವುದು ವಾಸ್ತವದ ಸಂಗತಿ. ಅಂತೆಯೇ, ಗ್ರಾಮೀಣ ಭಾಗ ಈಗಲೂ ಕೂಡ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ. ನೆರೆ, ಬರ ಇತ್ಯಾದಿ ಪ್ರಕೃತಿ ವಿಕೋಪಗಳಿಂದ ಬೆಳೆ ನಾಶ ಆಗುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿನ ಏರುಪೇರಿನಿಂದ ರೈತನ ಬೆಳೆಗೆ ನ್ಯಾಯಯುತ ಬೆಲೆ ಸಿಗುವುದಿಲ್ಲ. ಹೀಗೆ ಹಲವು ಹಿನ್ನಡೆ, ಸಮಸ್ಯೆಗಳ ನಡುವೆ ರೈತನ ಕೈಂಕರ್ಯ ಮುಂದುವರಿಯುತ್ತಿರುತ್ತದೆ.
ಇನ್ನೂ ಹೆಚ್ಚು ಓದಿಕಾವೇರಿ ವಿವಾದ: KRS ಜಲಾಶಯದ ಗೇಟ್ ಮುಂದೆ ಉರುಳು ಸೇವೆ ಮಾಡಿದ ಮಹಿಳಾ ಹೋರಾಟಗಾರರು
ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶ ಖಂಡಿಸಿ ಮಂಡ್ಯದ ಕೆಆರ್ಎಸ್ ಜಲಾಶಯದ ಬಳಿ ಭಾರೀ ಪ್ರತಿಭಟನೆ ನಡೆಯಿತು. ಮಹಿಳಾ ಹೋರಾಟಗಾರರು ಉರುಳು ಸೇವೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಿಗರ ರಕ್ಷಣಾ ವೇದಿಕೆ ಮತ್ತು ರೈತರು ಈ ಆದೇಶದಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದರು.
- Dileep CP
- Updated on: Jul 31, 2026
- 10:31 am
ಮಂಡ್ಯದಲ್ಲಿ ಕಾವೇರಿ ಹೋರಾಟ ತೀವ್ರ: ಕೆಆರ್ಎಸ್ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ, 1500 ಪೊಲೀಸ್ ಸಿಬ್ಬಂದಿ ನಿಯೋಜನೆ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಬಿಜೆಪಿ ನಾಯಕರು ಇಂದು ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆ ತಡೆಯಲು ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.
- Dileep CP
- Updated on: Jul 31, 2026
- 10:32 am
ಕಾವೇರಿ ನೀರು ಬಿಡಲು ವಿರೋಧ: ಮಂಡ್ಯದಲ್ಲಿ ರೈತರ ಆಕ್ರೋಶ, ರಾಜ್ಯಾದ್ಯಂತ ಪ್ರತಿಭಟನೆಯ ಕಿಚ್ಚು
Cauvery Dispute and Karnataka Protest: ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶ ವಿರೋಧಿಸಿ ಮಂಡ್ಯದಲ್ಲಿ ರೈತರ ಆಕ್ರೋಶ ತೀವ್ರಗೊಂಡಿದೆ. ಹೆದ್ದಾರಿ ತಡೆ, ಉರುಳು ಸೇವೆ, ಅರೆಬೆತ್ತಲೆ ಪ್ರತಿಭಟನೆ ಸೇರಿದಂತೆ ಹಲವು ರೀತಿಯಲ್ಲಿ ಹೋರಾಟ ನಡೆದಿದೆ. ರಾಜ್ಯದ ವಿವಿಧೆಡೆ ಕನ್ನಡಪರ ಸಂಘಟನೆಗಳ ಪ್ರತಿಭಟನೆ ಮುಂದುವರಿದಿದೆ.
- Ganapathi Sharma
- Updated on: Jul 31, 2026
- 10:32 am
ಪಿಎಂ ಕೃಷಿ ಸಿಂಚಯಿ ಯೋಜನೆ: ನೀರಾವರಿ ಸಿಸ್ಟಮ್ಸ್ ಅಳವಡಿಸಲು ಭರ್ಜರಿ ರಿಯಾಯಿತಿ; ಇಲ್ಲಿದೆ ಸಬ್ಸಿಡಿ ಮತ್ತಿತರ ಸೌಲಭ್ಯಗಳ ವಿವರ
Pradhan Mantri Krishi Sinchayee Yojana details: ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ ರೈತರ ಜಮೀನುಗಳಿಗೆ ಡ್ರಿಪ್ ಇರಿಗೇಶನ್ ಇತ್ಯಾದಿ ನೀರಾವರಿ ವ್ಯವಸ್ಥೆ ಅಳವಡಿಸಲು ನೆರವಾಗುತ್ತದೆ. ಹನಿ ನೀರಾವರಿ, ಸ್ಪ್ರಿಂಕ್ಲರ್, ಕೃಷಿ ಹೊಂಡ, ಸೋಲಾರ್ ಪಂಪ್ಸೆಟ್ಗಳಿಗೆ ಸರ್ಕಾರ ಸಾಕಷ್ಟು ಸಬ್ಸಿಡಿ ನೀಡುತ್ತದೆ. ದೊಡ್ಡ ರೈತರಿಗೆ ಶೇ. 45ರಷ್ಟು ಸಬ್ಸಿಡಿ ಸಿಗುತ್ತದೆ. ಹಿಂದುಳಿದ ವರ್ಗದ ರೈತರಿಗೆ ಶೇ. 90ಕ್ಕಿಂತ ಹೆಚ್ಚು ಸಬ್ಸಿಡಿ ಸಿಗುತ್ತದೆ.
- Vijaya Sarathy SN
- Updated on: Jul 6, 2026
- 4:36 pm
ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆ ವಿಬಿ-ಜಿ-ರಾಮ್-ಜಿಗೆ ನೊಂದಣಿ ಹೇಗೆ? ಕೆಲಸ ಸಿಗದಿದ್ದರೆ ಎಷ್ಟು ಭತ್ಯೆ?
VB G-RAM-G rural employment guarantee scheme full details: ಜುಲೈ 1ರಿಂದ ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾದ ವಿಬಿ-ಜಿ-ರಾಮ್-ಜಿ ಜಾರಿಗೆ ಬಂದಿದೆ. ಗ್ರಾಮೀಣ ಭಾಗದ ಒಂದು ಕುಟುಂಬಕ್ಕೆ ಒಂದು ವರ್ಷದಲ್ಲಿ ಕನಿಷ್ಠ 125 ದಿನಗಳ ಕೌಶಲ್ಯರಹಿತ ಕೂಲಿ ಕೆಲಸಗಳನ್ನು ಇದು ಖಾತ್ರಿಪಡಿಸುತ್ತದೆ. ಒಂದು ಕುಟುಂಬವು ಕೃಷಿಗಾರಿಕೆಯ ಜೊತೆ ಜೊತೆಗೆ ಒಂದು ವರ್ಷದಲ್ಲಿ 45,000 ರೂನಿಂದ 60,000 ರೂವರೆಗೆ ಹೆಚ್ಚುವರಿ ಸಂಪಾದಿಸಬಹುದು.
- Vijaya Sarathy SN
- Updated on: Jul 3, 2026
- 3:44 pm
ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ವಿ ಬಿ ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ
VB G RAM G Replaces MGNREGA Scheme: ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆಯಾದ ವಿಬಿ ಜಿ ರಾಮ್ ಜಿ ಇಂದಿನಿಂದ (ಜುಲೈ 1) ಜಾರಿಗೆ ಬಂದಿದೆ. ಇದರೊಂದಿಗೆ 20 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಮನ್ರೇಗಾ ಯೋಜನೆ ಮುಕ್ತಾಯಗೊಂಡಿದೆ. ಅದರ ಸುಧಾರಿತ ರೂಪವಾದ ಜಿ ರಾಮ್ ಜಿ ಯೋಜನೆಯಲ್ಲಿ ಕೆಲ ಪ್ರಮುಖ ಬದಲಾವಣೆಗಳಿವೆ.
- Vijaya Sarathy SN
- Updated on: Jul 1, 2026
- 1:43 pm
ಪಿಎಂ ಕಿಸಾನ್ ಯೋಜನೆ, ನೊಂದಾಯಿಸಿದ್ದರೂ 23ನೇ ಕಂತಿನ ಬಂದಿಲ್ಲವಾ? ಇವಿರಬಹುದು ಕಾರಣಗಳು
PM Kisan Samman Nidhi Yojana 23rd installment: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 23ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಜೂನ್ 20ರಂದು ಬಿಡುಗಡೆ ಮಾಡಿದೆ. 9.44 ಕೋಟಿ ರೈತರಿಗೆ ತಲಾ 2,000 ರೂ ಹಣ ಕ್ರೆಡಿಟ್ ಆಗಿದೆ. ಈ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತುಗಳಿಂದ ಒಟ್ಟು 6,000 ರೂ ಹಣವು ರೈತರಿಗೆ ಸಿಗುತ್ತದೆ. ಯೋಜನೆಗೆ ನೊಂದಾಯಿಸಿಯೂ ಕೆಲವರಿಗೆ ಬೇರೆ ಬೇರೆ ಕಾರಣಕ್ಕೆ ಹಣ ಬಂದಿಲ್ಲದೇ ಇರಬಹುದು.
- Vijaya Sarathy SN
- Updated on: Jun 21, 2026
- 12:30 pm
ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ ದಿನಾಂಕ ಪ್ರಕಟ; ಇನ್ನೆರಡು ದಿನದಲ್ಲಿ ರೈತರ ಖಾತೆಗೆ ಬರಲಿದೆ 2,000 ರೂ
PM Kisan scheme 23rd installmentrelease date announced: ಪ್ರಧಾನಮಂತ್ರಿ ಕಿಸಾನ್ ಸ್ಕೀಮ್ನಲ್ಲಿ 23ನೇ ಕಂತಿನ ಹಣ ಜೂನ್ 20, ಶನಿವಾರದಂದು ಬಿಡುಗಡೆ ಆಗಲಿದೆ. ಯೋಜನೆಯ ಅಧಿಕೃತ ಸೋಷಿಯಲ್ ಮಿಡಿಯಾ ಅಕೌಂಟ್ನಿಂದ ಈ ಮಾಹಿತಿ ಪ್ರಕಟವಾಗಿದೆ. ಮಾರ್ಚ್ ತಿಂಗಳಲ್ಲಿ 22ನೇ ಕಂತಿನ ಹಣ ಬಿಡುಗಡೆ ಆಗಿತ್ತು. ಇಲ್ಲಿಯವರೆಗೆ ಈ ಯೋಜನೆಯಲ್ಲಿ ಸರ್ಕಾರವು ರೈತರಿಗೆ 4.25 ಲಕ್ಷ ಕೋಟಿ ರೂಗೂ ಅಧಿಕ ಹಣ ಬಿಡುಗಡೆ ಮಾಡಿದೆ.
- Vijaya Sarathy SN
- Updated on: Jun 18, 2026
- 1:31 pm
ಮುಂಗಾರು ಬಿತ್ತನೆಗೆ ಮುನ್ನ ರೈತರಿಗೆ ಖುಷಿ ಸುದ್ದಿ, ಯೂರಿಯಾ ಬೆಲೆ ಅರ್ಧಕರ್ಧ ಕುಸಿತ
Urea Import Prices Crash: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಆಮದು ಬೆಲೆ ಗಣನೀಯವಾಗಿ ಕುಸಿದಿದೆ. ಇದು ಭಾರತದ ರೈತರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ದೊಡ್ಡ ನಿರಾಳತೆಯನ್ನು ತಂದಿದೆ. ಚೀನಾ ರಫ್ತು ನಿರ್ಬಂಧಗಳನ್ನು ಸಡಿಲಗೊಳಿಸಿರುವುದು ಬೆಲೆ ಇಳಿಕೆಗೆ ಕಾರಣ. ಮುಂಗಾರು ಹಂಗಾಮಿಗೆ ಅಗ್ಗದ ಯೂರಿಯಾ ಲಭ್ಯವಾಗಲಿದ್ದು, ರೈತರಿಗೆ ನೆರವಾಗಲಿದೆ. ಜೊತೆಗೆ, ಸರ್ಕಾರದ ರಸಗೊಬ್ಬರ ಸಬ್ಸಿಡಿ ಹೊರೆಯೂ ಕಡಿಮೆಯಾಗಲಿದೆ. ಇದು ಕೃಷಿ ಕ್ಷೇತ್ರಕ್ಕೆ ಸಮಾಧಾನಕರ ಬೆಳವಣಿಗೆ.
- Vijaya Sarathy SN
- Updated on: Jun 11, 2026
- 6:09 pm
PM Kisan Scheme: ಪಿಎಂ ಕಿಸಾನ್ 23ನೇ ಕಂತಿನ ಹಣ ಜೂನ್ನಲ್ಲಿ ಬರುತ್ತಾ? ಈ ಕಾರ್ಯ ಮಾಡದವರಿಗೆ ಸಿಕ್ಕೋದಿಲ್ಲಾ ಹಣ
PM Kisan Scheme, 23rd installment release date: ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 9 ಕೋಟಿಗೂ ಅಧಿಕ ರೈತರು 23ನೇ ಕಂತಿನ ಹಣದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಮಾರ್ಚ್ ತಿಂಗಳಲ್ಲಿ 22ನೇ ಕಂತಿನ ಹಣ ಬಿಡುಗಡೆ ಆಗಿತ್ತು. 23ನೆಯದು ಜೂನ್ನಲ್ಲಿ ಆಗುವ ಸಂಭವ ಇದೆ ಎನ್ನಲಾಗುತ್ತಿದೆ. ಇಕೆವೈಸಿ ಅಪ್ಡೇಟ್ ಮಾಡದ ಫಲಾನುಭವಿಗಳಿಗೆ 23ನೇ ಕಂತಿನ ಹಣ ಸಿಕ್ಕದೇ ಹೋಗಬಹುದು.
- Vijaya Sarathy SN
- Updated on: May 29, 2026
- 4:21 pm
ಪಿಎಂ ಕಿಸಾನ್ ಯೋಜನೆ; ನೊಂದಣಿ, ಆದಾಯ, ಫಲಾನುಭವಿಗಳ ಸಂಖ್ಯೆ ಇತ್ಯಾದಿ ಮಾಹಿತಿ
PM Kisan Samman Nidhi Yojana details: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಇಲ್ಲಿಯವರೆಗೆ 22 ಕಂತಿನ ಹಣ ಬಿಡುಗಡೆ ಆಗಿದೆ. 23ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ. ಮುಂದಿನ ತಿಂಗಳು ಕಂತಿನ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ. 2018-19ರಲ್ಲಿ ಶುರುವಾದ ಈ ಯೋಜನೆಯಲ್ಲಿ ಸದ್ಯ ಒಂಬತ್ತೂವರೆ ಕೋಟಿ ಸಂಖ್ಯೆಯಲ್ಲಿ ಫಲಾನುಭವಿಗಳಿದ್ದಾರೆ.
- Vijaya Sarathy SN
- Updated on: May 24, 2026
- 11:35 am
ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸ್ಕೀಮ್ನ ಪ್ರಮುಖ ಮಾಹಿತಿ
PM Kisan Samman Nidhi Yojana: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ. ಸ್ವಂತ ಕೃಷಿಭೂಮಿ ಹೊಂದಿರುವ ರೈತರು ಈ ಯೋಜನೆಗೆ ಅರ್ಹರು. ತೆರಿಗೆ ಪಾವತಿದಾರರು, ವೃತ್ತಿಪರರು, ಸರ್ಕಾರಿ ನೌಕರರು ಮೊದಲಾದ ಇತರ ವೃತ್ತಿಯವರು ಕೃಷಿಭೂಮಿ ಇದ್ದರೂ ಕೂಡ ಯೋಜನೆಗೆ ಅರ್ಹರಿರುವುದಿಲ್ಲ.
- Vijaya Sarathy SN
- Updated on: Apr 20, 2026
- 4:21 pm