AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Farmer

Farmer

ರೈತರನ್ನು ಈ ದೇಶದಲ್ಲಿ ಅನ್ನದಾತರೆಂದೇ ಗೌರವಿಸಲಾಗುತ್ತದೆ. ಪ್ರತಿಯೊಬ್ಬರು ಬದುಕಲು ಬೇಕಾದ ಆಹಾರವನ್ನು ಬೆಳೆಯುವುದು ರೈತರೇ. ಭಾರತ ಈಗಲೂ ಕೂಡ ಕೃಷಿ ಆಧಾರಿತ ಆರ್ಥಿಕತೆ ಇರುವ ದೇಶ. ಆದರೆ, ರೈತನಿಗೆ ಆತನ ಶ್ರಮಕ್ಕೆ ತಕ್ಕಷ್ಟು ಆದಾಯ ಸಿಗುತ್ತಿಲ್ಲದಿರುವುದು ವಾಸ್ತವದ ಸಂಗತಿ. ಅಂತೆಯೇ, ಗ್ರಾಮೀಣ ಭಾಗ ಈಗಲೂ ಕೂಡ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ. ನೆರೆ, ಬರ ಇತ್ಯಾದಿ ಪ್ರಕೃತಿ ವಿಕೋಪಗಳಿಂದ ಬೆಳೆ ನಾಶ ಆಗುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿನ ಏರುಪೇರಿನಿಂದ ರೈತನ ಬೆಳೆಗೆ ನ್ಯಾಯಯುತ ಬೆಲೆ ಸಿಗುವುದಿಲ್ಲ. ಹೀಗೆ ಹಲವು ಹಿನ್ನಡೆ, ಸಮಸ್ಯೆಗಳ ನಡುವೆ ರೈತನ ಕೈಂಕರ್ಯ ಮುಂದುವರಿಯುತ್ತಿರುತ್ತದೆ.

ಇನ್ನೂ ಹೆಚ್ಚು ಓದಿ

ನೈಸರ್ಗಿಕ ಕೃಷಿಗಾರಿಕೆ ಭಾರತದ ಕೃಷಿ ಕ್ಷೇತ್ರದ ಭವಿಷ್ಯದ ಹಾದಿ: ನರೇಂದ್ರ ಮೋದಿ

PM Narendra Modi's blog post on natural farming: ಭಾರತೀಯ ರೈತರು ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ತಮ್ಮ ಲಿಂಕ್ಡ್​ನ್ ಪೋಸ್ಟ್​ನಲ್ಲಿ ಬ್ಲಾಗ್ ಬರೆದಿರುವ ಮೋದಿ, ರಾಸಾಯನಿಕ ಬಳಕೆ ನಿಲ್ಲಿಸಿ, ಸಂಪೂರ್ಣ ದೇಸೀಯವಾದ ಕೃಷಿ ವಿಧಾನಗಳನ್ನು ಅನುಸರಿಸಬೇಕೆಂದು ಸಲಹೆ ನೀಡಿದ್ದಾರೆ. ಪಂಚಗವ್ಯ, ಜೀವಾಮೃತ, ಬೀಜಾಮೃತ, ಮಲ್ಚಿಂಗ್ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು ಎಂದಿದ್ದಾರೆ.

PM Kisan: ಪಿಎಂ ಕಿಸಾನ್ ಹಣ ಸಿಕ್ಕಿಲ್ಲವಾ? ಈ ಕಾರಣಗಳಿದ್ದೀತು ಗಮನಿಸಿ

Possible reasons for many farmers not getting PM Kisan money: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 21ನೇ ಕಂತಿನ ಹಣ ನ. 19ರಂದು ಬಿಡುಗಡೆ ಆಗಿದೆ. ಯೋಜನೆಗೆ ನೊಂದಾಯಿಸಿದ್ದರೂ ಹಲವರಿಗೆ ಕಂತಿನ ಹಣ ಬಂದಿಲ್ಲ. ಇಕೆವೈಸಿ ಅಪ್​ಡೇಟ್ ಆಗದೇ ಇರುವುದೂ ಸೇರಿ ಹಲವು ಕಾರಣಗಳಿಗೆ ಹಣ ಬಿಡುಗಡೆ ಆಗದೇ ಇರಬಹುದು.

PM Fasal Bima Yojana: ಬೆಳೆ ವಿಮೆ ವ್ಯಾಪ್ತಿ ಹೆಚ್ಚಳ; ಅಪಾಯ ಮೂಲಗಳ ಪಟ್ಟಿಗೆ ಕಾಡುಪ್ರಾಣಿಗಳೂ ಸೇರ್ಪಡೆ

New modalities for PM Fasal Bima Yojana: ಮುಂಬರುವ ಬೇಸಿಗೆ ಹಂಗಾಮಿನಿಂದ ಪಿಎಂ ಫಸಲ್ ಬಿಮಾ ಯೋಜನೆಯ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ತರಲಾಗುತ್ತಿದೆ. ಬೆಳೆ ಹಾನಿಗೆ ಕಾರಣವಾಗುವ ಸ್ಥಳೀಕೃತ ಅಪಾಯಗಳ ಪಟ್ಟಿಗೆ ಕಾಡುಪ್ರಾಣಿಗಳ ದಾಳಿಯನ್ನೂ ಸೇರಿಸಲಾಗಿದೆ. ಬೇಸಿಗೆ ಬೆಳೆಗಳಿಗೆ ಇನ್ಷೂರೆನ್ಸ್ ಪ್ರೀಮಿಯಮ್ ಶೇ. 2, ಹಿಂಗಾರು ಬೆಳೆಗಳಿಗೆ ಶೇ. 1.5 ಪ್ರೀಮಿಯಮ್ ಇದೆ.

PM Kisan 21st Installment: ಪಿಎಂ ಕಿಸಾನ್ ಯೋಜನೆ; 9 ಕೋಟಿ ರೈತರಿಗೆ 2,000 ರೂಗಳ 21ನೇ ಕಂತಿನ ಹಣ ಇಂದು ಬಿಡುಗಡೆ

ಪಿಎಂ ಕಿಸಾನ್ ಯೋಜನೆ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 21ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಅವರು ನ. 19, ಬುಧವಾರ ಬಿಡುಗಡೆ ಮಾಡುತ್ತಿದ್ದಾರೆ. ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಭೇಟಿ ನೀಡುತ್ತಿರುವ ನರೇಂದ್ರ ಮೋದಿ ಮಧ್ಯಾಹ್ನ ಕೊಯಮತ್ತೂರಿಗೆ ತೆರಳುತ್ತಿದ್ದಾರೆ. ಕೊಯಮತ್ತೂರಿನಲ್ಲಿ ನೈಸರ್ಗಿಕ ಕೃಷಿ ಶೃಂಗಸಭೆಗೆ ಚಾಲನೆ ನೀಡಿದ ಬಳಿಕ ಪಿಎಂ ಕಿಸಾನ್​ನ ಹೊಸ ಕಂತಿನ ಹಣದ ಬಿಡುಗಡೆ ಮಾಡುತ್ತಾರೆ.

PM Kisan 21st Installment: ಪಿಎಂ ಕಿಸಾನ್ ಹೊಸ ಕಂತಿನ ಹಣ ಬಿಡುಗಡೆ ಸದ್ಯದಲ್ಲೇ

PM Kisan scheme 21st Installment Date and Time: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 21ನೇ ಕಂತಿನ ಹಣ ನ. 19, ಬುಧವಾರ ಬಿಡುಗಡೆ ಆಗಲಿದೆ. ಇದಕ್ಕೆ ಮುನ್ನ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅಪ್​ಡೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

ಪಿಎಂ ಕಿಸಾನ್: ಈ ಬಾರಿ ಕೆಲ ರೈತರಿಗೆ 2,000 ಬದಲು 4,000 ರೂ ಸಿಗುತ್ತಾ? ಇಲ್ಲಿದೆ ಕಾರಣ

PM Kisan Samman Nidhi Yojana: ಪಿಎಂ ಕಿಸಾನ್ ಯೋಜನೆಯಲ್ಲಿ ಈ ಬಾರಿ 21ನೇ ಕಂತಿನ ಹಣ ಈ ತಿಂಗಳೇ ಬಿಡುಗಡೆ ಆಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಕಳೆದ ಬಾರಿ ಹಲವು ರೈತರಿಗೆ 20ನೇ ಕಂತಿನ ಹಣ ಸಿಕ್ಕಿರಲಿಲ್ಲ. ಕೆವೈಸಿ ದಾಖಲೆಗಳು ಸರಿ ಇಲ್ಲದೇ ಇರುವುದು ಮತ್ತಿತರ ಕಾರಣಕ್ಕೆ ಕಂತಿನ ಹಣ ಕೆಲವರಿಗೆ ಸಿಕ್ಕಿರಲಿಲ್ಲ. ಅನರ್ಹರನ್ನು ಫಿಲ್ಟರ್ ಮಾಡಲಾಗುತ್ತಿದೆ. ಅರ್ಹರಿದ್ದೂ 20ನೇ ಕಂತಿನ ಸಿಕ್ಕಿಲ್ಲದೇ ಇದ್ದವರಿಗೆ ಈ ಬಾರಿ ಎರಡು ಕಂತುಗಳ ಹಣ ಒಟ್ಟಿಗೆ ಸಿಗಬಹುದು.

ಸಕ್ಕರೆ ಉತ್ಪಾದನೆ ಶೇ. 16ರಷ್ಟು ಏರಿಕೆ ಸಾಧ್ಯತೆ; ಮಹಾರಾಷ್ಟ್ರ, ಕರ್ನಾಟಕದಲ್ಲಿ ಹೆಚ್ಚು ಹೆಚ್ಚಳ ನಿರೀಕ್ಷೆ

Sugar production is estimated to increase by 16pc: 2024-25ರಲ್ಲಿ 296.1 ಲಕ್ಷ ಟನ್​ಗಳಷ್ಟು ಇದ್ದ ಸಕ್ಕರೆ ಉತ್ಪಾದನೆ 2025-26ರಲ್ಲಿ 343.5 ಲಕ್ಷ ಟನ್​ಗೆ ಏರುವ ನಿರೀಕ್ಷೆ ಇದೆ. ಉತ್ತಮ ಮಳೆ, ನೀರಿನ ವ್ಯವಸ್ಥೆ, ಸರ್ಕಾರದ ಉತ್ತೇಜಕಾರಿ ಕ್ರಮದಿಂದ ಸಕ್ಕರೆ ಉತ್ಪಾದನೆ ಹೆಚ್ಚಾಗಿದೆ. ಭಾರತದ ಅತಿಹೆಚ್ಚು ಕಬ್ಬು ಬೆಳೆಗಾರ ರಾಜ್ಯವಾದ ಮಹಾರಾಷ್ಟ್ರದಲ್ಲಿ ಈ ಬಾರಿ ಸಕ್ಕರೆ ಉತ್ಪಾದನೆ ಗಣನೀಯವಾಗಿ ಹೆಚ್ಚುತ್ತಿದೆ.

ಏಳು ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಪೆಹಚಾನ್ ಪತ್ರ; ಏನಿದರ ವಿಶೇಷತೆ?

Kisan Pehchaan patra, multipurpose ID for farmers: ರೈತರ ರಾಷ್ಟ್ರೀಯ ನೊಂದಣಿ ರಚಿಸುತ್ತಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಿಸಾನ್ ಪೆಹಚಾನ್ ಕಾರ್ಡ್ ಯೋಜನೆ ಜಾರಿ ತಂದಿದೆ. ಈಗಾಗಲೇ 16 ರಾಜ್ಯಗಳಿಂದ 7.4 ಕೋಟಿ ರೈತರಿಗೆ ಪೆಹಚಾನ್ ಕಾರ್ಡ್ ವಿತರಿಸಲಾಗಿದೆ. ಮತ್ತಷ್ಟು ರಾಜ್ಯಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ದೇಶಾದ್ಯಂತ ಅಂದಾಜು 14 ಕೋಟಿ ರೈತರಿದ್ದಾರೆ.

ಪಿಎಂ ಕಿಸಾನ್ 21ನೇ ಕಂತಿನ ಹಣ ಯಾಕೆ ವಿಳಂಬವಾಗುತ್ತಿದೆ ಗೊತ್ತಾ? ಇಲ್ಲಿದೆ ಕಾರಣ

PM Kisan 21st installment, know why money release getting delayed: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 21ನೇ ಕಂತಿನ ಹಣ ಬಿಡುಗಡೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ. ಹತ್ತಿರಹತ್ತಿರ 10 ಕೋಟಿ ರೈತರು 20ನೇ ಕಂತಿನ ಹಣ ಸ್ವೀಕರಿಸಿದ್ದರು. ಸದ್ಯಕ್ಕೆ ಎಲ್ಲಾ ಫಲಾನುಭವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು ಅನರ್ಹರನ್ನು ಗುರುತಿಸುವ ಕೆಲಸ ಆಗುತ್ತಿದೆ.

ಪಿಎಂ ಕಿಸಾನ್ ಹಣ ನವೆಂಬರ್ ಮೊದಲ ವಾರದಲ್ಲಿ? ಕೃಷಿ ಸಚಿವರು ಇತ್ತೀಚೆಗೆ ಹೊರಡಿಸಿದ ಸೂಚನೆ ಗಮನಿಸಿ…

PM Kisan scheme, 21st installment likely on November first week: ಪಿಎಂ ಕಿಸಾನ್ 21ನೇ ಕಂತಿನ ಹಣ ಅಕ್ಟೋಬರ್ ಕೊನೆಯ ವಾರದಲ್ಲಿ ಬರುವ ನಿರೀಕ್ಷೆ ಇತ್ತು. ಆದರೆ ನವೆಂಬರ್ ಮೊದಲ ವಾರದಲ್ಲಿ ಬರಬಹುದು ಎಂದು ಹೇಳಲಾಗುತ್ತಿದೆ. ಇಕೆವೈಸಿ ಪೂರ್ಣಗೊಂಡಿರುವ ರೈತರ ಪೂರ್ಣ ಪಟ್ಟಿಯನ್ನು ಬೇಗ ಕಳುಹಿಸಿಕೊಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಮನವಿ ಮಾಡಿದೆ.

ಕಳೆದ ಬಾರಿ ವಿಳಂಬವಾಗಿದ್ದ ಪಿಎಂ ಕಿಸಾನ್ ಹಣ ಈ ಬಾರಿ ಬೇಗ ಸಿಗುವ ನಿರೀಕ್ಷೆ; ಇಲ್ಲಿದೆ 21ನೇ ಕಂತಿನ ಬಿಡುಗಡೆ ದಿನಾಂಕ

PM Kisan scheme 21st installment release date: ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ 20 ಕಂತುಗಳ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈಗ 21ನೇ ಕಂತಿನ ಬಿಡುಗಡೆಗೆ ನಿರೀಕ್ಷೆ ಮಾಡಲಾಗುತ್ತಿದೆ. ಆಗಸ್ಟ್​ನಲ್ಲಿ 20ನೇ ಕಂತು ಬಿಡುಗಡೆ ಆಗಿತ್ತು. ಈ ತಿಂಗಳೊಳಗೆಯೇ 21ನೇ ಕಂತು ಬಿಡುಗಡೆ ಆಗುವ ಸಾಧ್ಯತೆ ಇಲ್ಲದಿಲ್ಲ. 10 ಕೋಟಿ ರೈತರಿಗೆ ಈ ಬಾರಿ ಪಿಎಂ ಕಿಸಾನ್ ಹಣ ಸಿಗಬಹುದು.

ದಿಢೀರನೆ ಕುಸಿದ ಈರುಳ್ಳಿ ಬೆಲೆ; ಹೂಡಿಕೆಯ ಖರ್ಚೂ ಬರ್ತಿಲ್ಲ ಅಂತ ರೈತರ ಗೋಳು

ಈರುಳ್ಳಿ ಬೆಲೆ ದಿಢೀರ್​​ ಕುಸಿತದಿಂದಾಗಿ ಹುಬ್ಬಳ್ಳಿಯ ಈರುಳ್ಳಿ ಬೆಳೆಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ. ಸಾವಿರಾರು ರೂ. ಖರ್ಚು ಮಾಡಿ ತಿಂಗಳುಗಟ್ಟಲೆ ದುಡಿದ ಶ್ರಮಕ್ಕೆ ಬೆಲೆಯಿಲ್ಲದಂತಾಗಿದೆ. ಖರ್ಚು ವೆಚ್ಚಗಳಿಗೆ ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ. ಉತ್ತಮ ಬೆಲೆಗೆ ವ್ಯವಸ್ಥೆ ಕಲ್ಪಿಸುವಂತೆ ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ