
Farmer
ರೈತರನ್ನು ಈ ದೇಶದಲ್ಲಿ ಅನ್ನದಾತರೆಂದೇ ಗೌರವಿಸಲಾಗುತ್ತದೆ. ಪ್ರತಿಯೊಬ್ಬರು ಬದುಕಲು ಬೇಕಾದ ಆಹಾರವನ್ನು ಬೆಳೆಯುವುದು ರೈತರೇ. ಭಾರತ ಈಗಲೂ ಕೂಡ ಕೃಷಿ ಆಧಾರಿತ ಆರ್ಥಿಕತೆ ಇರುವ ದೇಶ. ಆದರೆ, ರೈತನಿಗೆ ಆತನ ಶ್ರಮಕ್ಕೆ ತಕ್ಕಷ್ಟು ಆದಾಯ ಸಿಗುತ್ತಿಲ್ಲದಿರುವುದು ವಾಸ್ತವದ ಸಂಗತಿ. ಅಂತೆಯೇ, ಗ್ರಾಮೀಣ ಭಾಗ ಈಗಲೂ ಕೂಡ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ. ನೆರೆ, ಬರ ಇತ್ಯಾದಿ ಪ್ರಕೃತಿ ವಿಕೋಪಗಳಿಂದ ಬೆಳೆ ನಾಶ ಆಗುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿನ ಏರುಪೇರಿನಿಂದ ರೈತನ ಬೆಳೆಗೆ ನ್ಯಾಯಯುತ ಬೆಲೆ ಸಿಗುವುದಿಲ್ಲ. ಹೀಗೆ ಹಲವು ಹಿನ್ನಡೆ, ಸಮಸ್ಯೆಗಳ ನಡುವೆ ರೈತನ ಕೈಂಕರ್ಯ ಮುಂದುವರಿಯುತ್ತಿರುತ್ತದೆ.
Agri exports: ಭಾರತದಿಂದ ಅಕ್ಕಿ ರಫ್ತು ಶೇ. 20 ಹೆಚ್ಚಳ; ವಾಣಿಜ್ಯ ಬೆಳೆಗಳ ರಫ್ತು ಶೇ. 17 ಹೆಚ್ಚಳ
India's Agricultural Exports Surge: ಭಾರತದ ಅಕ್ಕಿ ಮತ್ತು ವಾಣಿಜ್ಯ ಬೆಳೆಗಳ ರಫ್ತು 2024-25ರಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಕಾಫಿ, ಚಹಾ, ತಂಬಾಕು ಮತ್ತು ಮಸಾಲೆಗಳ ರಫ್ತು 9.16 ಬಿಲಿಯನ್ ಡಾಲರ್ಗಳಷ್ಟು ತಲುಪಿದೆ. ಅಕ್ಕಿ ರಫ್ತು 20% ಹೆಚ್ಚಳ ಕಂಡಿದೆ. ಆದಾಗ್ಯೂ, ಆಂತರಿಕ ಬೇಡಿಕೆ ಪೂರೈಸಲು ಸರ್ಕಾರ ಎಚ್ಚರಿಕೆ ವಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೃಷಿ ಉತ್ಪನ್ನಗಳ ಒಟ್ಟು ರಫ್ತು 13% ಏರಿಕೆಯಾಗಿದೆ.
- Vijaya Sarathy SN
- Updated on: Apr 17, 2025
- 6:14 pm
Patanjali: ಕೃಷಿಯಿಂದ ಹಿಡಿದು ಶಿಕ್ಷಣದವರೆಗೆ, ಬಾಬಾ ರಾಮದೇವ್ ಅವರ ಪತಂಜಲಿಯ ಸಾಮಾಜಿಕ ಕೈಂಕರ್ಯಗಳಿವು
Patanjali company's social activities: ಪತಂಜಲಿ ಆಯುರ್ವೇದ ಸಂಸ್ಥೆಯು ಯೋಗ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ಚಟುವಟಿಕೆಗಳನ್ನು ನಡೆಸುತ್ತಿದೆ. ಪತಂಜಲಿ ಸಂಸ್ಥೆಯು ಹಿಂದುಳಿದ ಸಮುದಾಯಗಳಿಗೆ ಸಮಾಲೋಚನೆ ಮತ್ತು ಆಯುರ್ವೇದ ಚಿಕಿತ್ಸೆಯನ್ನು ಒದಗಿಸುತ್ತದೆ. ಆಯುರ್ವೇದ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತದೆ. ದತ್ತಿ ಆಸ್ಪತ್ರೆಗಳನ್ನು ನಡೆಸುತ್ತದೆ ಮತ್ತು ಸ್ವಚ್ಛ ಪರಿಸರಕ್ಕಾಗಿ ಮರ ನೆಡುವಿಕೆ ಮತ್ತು ಜಲ ಸಂರಕ್ಷಣಾ ಅಭಿಯಾನಗಳನ್ನು ಸಹ ನಡೆಸುತ್ತದೆ.
- Vijaya Sarathy SN
- Updated on: Apr 9, 2025
- 2:32 pm
PM Kisan 20th Installment: ಪಿಎಂ ಕಿಸಾನ್: ಅರ್ಹರಲ್ಲದ ರೈತರು ಯಾರು? 20ನೇ ಕಂತು ಯಾವಾಗ? ಇಲ್ಲಿದೆ ಡೀಟೇಲ್ಸ್
PM Kisan scheme: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 19ನೇ ಕಂತಿನ ಹಣ 2025ರ ಫೆಬ್ರುವರಿ 19ರಂದು ಬಿಡುಗಡೆ ಆಗಿತ್ತು. ಈಗ 20ನೇ ಕಂತಿನ ಹಂದ ನಿರೀಕ್ಷೆಯಲ್ಲಿ ಫಲಾನುಭವಿಗಳಿದ್ದಾರೆ. ಏಪ್ರಿಲ್ನಿಂದ ಜುಲೈವರೆಗಿನ ಅವಧಿಯ ಕಂತಿನ ಹಣ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ, ಯಾವಾಗ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ.
- Vijaya Sarathy SN
- Updated on: Apr 7, 2025
- 5:43 pm
Crop Insurance: ರೈತರಿಗೆ ಬೆಳೆ ವಿಮೆ ಯೋಜನೆ ಪಿಎಂಎಫ್ಬಿವೈ; ಪಿಎಂ ಫಸಲ್ ಬಿಮಾ ಯೋಜನೆಯ ಸಮಗ್ರ ಮಾಹಿತಿ
PM Fasal Bima Yojana explained: ಪ್ರತಿಯೊಬ್ಬ ವ್ಯಕ್ತಿಗೂ ಮೆಡಿಕಲ್ ಇನ್ಷೂರೆನ್ಸ್, ಲೈಫ್ ಇನ್ಷೂರೆನ್ಸ್ ಹೇಗೆ ಮುಖ್ಯವೋ ಹಾಗೇ ರೈತರಿಗೆ ಬೆಳೆ ವಿಮೆ ಬಹಳ ಅಗತ್ಯ. ಬರ, ಪ್ರವಾಹ, ಅತಿವೃಷ್ಟಿ ಇತ್ಯಾದಿ ಕಾರಣಗಳಿಗೆ ರೈತರ ಬೆಳೆಗೆ ಹಾನಿಯಾದರೆ ಅದಕ್ಕೆ ವಿಮಾ ಪರಿಹಾರ ಪಡೆಯಬಹುದು. ಕೇಂದ್ರ ಸರ್ಕಾರ ರೂಪಿಸಿರುವ ಪಿಎಂ ಫಸಲ್ ಬಿಮಾ ಯೋಜನೆ ಅಡಿ ರೈತರು ಕ್ರಾಪ್ ಇನ್ಷೂರೆನ್ಸ್ ಪಡೆಯಬಹುದು. ಈ ಬಗ್ಗೆ ಸಮಗ್ರ ಮಾಹಿತಿ...
- Vijaya Sarathy SN
- Updated on: Apr 4, 2025
- 12:53 pm
ಈರುಳ್ಳಿ ಮೇಲಿನ ಶೇ. 20 ರಫ್ತು ಸುಂಕ ರದ್ದು; ಏಪ್ರಿಲ್ 1ರಿಂದ ಈರುಳ್ಳಿ ಬೆಲೆ ಕಣ್ಣೀರು ಬರಿಸುವ ಸಾಧ್ಯತೆ
Govt to withdraw export duty on Onion: ಈರುಳ್ಳಿ ರಫ್ತು ಮೇಲೆ ಇರುವ ಶೇ. 20ರಷ್ಟು ಸುಂಕವನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಏಪ್ರಿಲ್ 1ರಿಂದ ಈರುಳ್ಳಿ ರಫ್ತು ಅನಿರ್ಬಂಧಿತವಾಗಿರಲಿದೆ. 2024ರ ಸೆಪ್ಟೆಂಬರ್ನಿಂದಲೂ ಶೇ. 20ರಷ್ಟು ರಫ್ತು ಸುಂಕ ಇದೆ. ಇಷ್ಟಾದರೂ ಈ ಹಣಕಾಸು ವರ್ಷದಲ್ಲಿ ಈರುಳ್ಳಿ ರಫ್ತು ಗಣನೀಯವಾಗಿ ಹೆಚ್ಚಿದೆ. ಏಪ್ರಿಲ್ 1ರಿಂದ ರಫ್ತು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಆಂತರಿಕವಾಗಿ ಈರುಳ್ಳಿ ಕೊರತೆ ಸೃಷ್ಟಿಯಾಗುತ್ತಾ ಎನ್ನುವುದು ಪ್ರಶ್ನೆ.
- Vijaya Sarathy SN
- Updated on: Mar 24, 2025
- 12:03 pm
ಕಾಶ್ಮೀರ, ಹಿಮಾಚಲ ಅಲ್ಲ, ಮರಳುಗಾಡಿನಲ್ಲಿ ಸೇಬು ಬೆಳೆದು ಸೈ ಎನಿಸಿದ ರಾಜಸ್ಥಾನದ ರೈತರು
Apples grown in Rajasthan's desert regions: ಕಾಶ್ಮೀರ, ಹಿಮಾಚಲ, ಊಟಿ ಇತ್ಯಾದಿ ಶೀತ ಪ್ರದೇಶಗಳಲ್ಲಿ ಬೆಳೆಯುವಂತಹ ಸೇಬು ಹಣ್ಣನ್ನು ರಾಜಸ್ಥಾನದ ರೈತರು ಅಪ್ಪಿದ್ದಾರೆ. ಸಿಕರ್, ಝುನಝುನು ಜಿಲ್ಲೆಯಲ್ಲಿ ಈಗ ಹಲವು ರೈತರು ಸೇಬು ಬೆಳೆಯುತ್ತಿದ್ದಾರೆ. ಉಷ್ಣ ಪ್ರದೇಶಗಳಿಗೆ ಹೊಂದಿಕೆಯಾಗಬಲ್ಲಂತಹ ಎಚ್ಆರ್ಎಂಎನ್-99 ತಳಿಯ ಸೇಬನ್ನು ಇಲ್ಲಿ ಬೆಳೆಯಲಾಗುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ ರೈತರಿಗೆ ಐದಾರು ಲಕ್ಷ ರೂನಷ್ಟಾದರೂ ಲಾಭ ಸಿಗುತ್ತದೆ.
- Vijaya Sarathy SN
- Updated on: Mar 21, 2025
- 12:50 pm
ಪಿಎಂ ಕಿಸಾನ್; ಬ್ಯಾಂಕ್ ಖಾತೆಗೆ ಹಣ ಬಂದಿಲ್ಲವಾ? ಕಾರಣಗಳೇನು, ಮಾರ್ಗೋಪಾಯಗಳೇನು? ಇಲ್ಲಿದೆ ಡೀಟೇಲ್ಸ್
PM Kisan scheme: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಫೆಬ್ರುವರಿ 24ರಂದು 10 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗೆ 2,000 ರೂ ಹಣ ಬಿಡುಗಡೆ ಮಾಡಲಾಗಿದೆ. ಳೆದ ಬಾರಿ ಬಹಳಷ್ಟು ಜನರು ತಾವು ಯೋಜನೆಗೆ ನೊಂದಾಯಿಸಿದರೂ ಹಣ ಬಂದಿಲ್ಲ ಎಂದು ದೂರಿದ್ದರು. ಯೋಜನೆಗೆ ರಿಜಿಸ್ಟರ್ ಮಾಡಿದ್ದರೂ ಹಣ ಬರದೇ ಇರುವುದಕ್ಕೆ ಕೆಲ ಪ್ರಮುಖ ಕಾರಣಗಳಿವೆ.
- Vijaya Sarathy SN
- Updated on: Feb 25, 2025
- 12:06 pm
PM Kisan 19th Instalment: ಇವತ್ತು ಪಿಎಂ ಕಿಸಾನ್ ಹೊಸ ಕಂತು ಬಿಡುಗಡೆ; ಇಕೆವೈಸಿ ಆಗದಿದ್ದರೆ ಹಣ ಸಿಗಲ್ಲ; ಇಲ್ಲಿದೆ ಡೀಟೇಲ್ಸ್
PM Kisan eKYC: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 19ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಇಂದು ಸೋಮವಾರ ಬಿಡುಗಡೆ ಮಾಡುತ್ತಿದ್ದಾರೆ. 2018-19ರಲ್ಲಿ ಆರಂಭವಾದ ಈ ಸ್ಕೀಮ್ನಲ್ಲಿ ಇಲ್ಲಿಯವರೆಗೆ 2,000 ರೂಗಳ 18 ಕಂತುಗಳ ಹಣವನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ. ಕೃಷಿ ಜಮೀನು ಹೊಂದಿರುವ ರೈತರು ಈ ಸ್ಕೀಮ್ಗೆ ಅರ್ಹರಾಗಿರುತ್ತಾರೆ. ನೊಂದಣಿ ಮಾಡಿಸಿದ್ದರೂ ಪ್ರತಿಯೊಬ್ಬರೂ ಇಕೆವೈಸಿ ಮಾಡಿಸಿರಬೇಕು.
- Vijaya Sarathy SN
- Updated on: Feb 24, 2025
- 10:48 am
ಭಾರತದ ಕೃಷಿ ತಂತ್ರಜ್ಞಾನ ಕ್ಷೇತ್ರಕ್ಕೆ ಪುಷ್ಟಿ ನೀಡುತ್ತಿರುವ ನಮೋ ಡ್ರೋನ್ ದೀದಿ, ಕಿಸಾನ್ ಡ್ರೋನ್ ಮತ್ತಿತರ ಸ್ಕೀಮ್ಗಳು…
Govt empowering rural women through drone and other schemes: ಸರ್ಕಾರ ಜಾರಿಗೆ ತಂದಿರುವ ನಮೋ ಡ್ರೋನ್ ದೀದಿ ಯೋಜನೆ, ಕಿಸಾನ್ ಡ್ರೋನ್ ಯೋಜನೆಗಳು ಕೃಷಿ ಕ್ಷೇತ್ರವನ್ನು ಬಲಪಡಿಸುತ್ತಿವೆ ಎನ್ನಲಾಗಿದೆ. ಮಹಿಳಾ ನೇತೃತ್ವದ 15,000 ಸ್ವಸಹಾಯ ಸಂಘಗಳನ್ನು ಬಲಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ನಮೋ ಡ್ರೋನ್ ದೀದಿ ಯೋಜನೆಯಲ್ಲಿ ಮಹಿಳೆಯರಿಗೆ ಡ್ರೋನ್ ಖರೀದಿಸಲು ಶೇ. 80ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.
- Vijaya Sarathy SN
- Updated on: Feb 21, 2025
- 5:38 pm
ಪಿಎಂ ಕಿಸಾನ್ 19ನೇ ಕಂತಿನ ಹಣ ಫೆ. 24ಕ್ಕೆ ಬಿಡುಗಡೆ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ…
PM Kisan Scheme 19th installment release date: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ 19ನೇ ಕಂತಿನ ಹಣ ಇದೇ ಫೆಬ್ರುವರಿ 24, ಸೋಮವಾರದಂದು ಬಿಡುಗಡೆ ಆಗಲಿದೆ. ನರೇಂದ್ರ ಮೋದಿ ಅವರು ಹಣ ರಿಲೀಸ್ ಮಾಡಲಿದ್ದಾರೆ ಎಂದು ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ. ಸರ್ಕಾರ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರೂಗಳನ್ನು ಫಲಾನುಭವಿ ರೈತರ ಖಾತೆಗಳಿಗೆ ನೀಡುತ್ತದೆ. 19ನೇ ಕಂತಿನಲ್ಲಿ 2,000 ರೂ ನೀಡಲಾಗುತ್ತಿದೆ.
- Vijaya Sarathy SN
- Updated on: Feb 18, 2025
- 4:05 pm