
Gyanvapi
ಜ್ಞಾನವಾಪಿ ಮಸೀದಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿದೆ. 17 ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನಿಂದ ಕೆಡವಲ್ಪಟ್ಟ ಮೂಲ ಕಾಶಿ ವಿಶ್ವನಾಥ ದೇವಾಲಯದ ಸ್ಥಳದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂಬ ಹಿಂದೂ ಗುಂಪುಗಳ ಹೇಳಿಕೆಯಿಂದಾಗಿ ಜ್ಞಾನವಾಪಿ ಮಸೀದಿ ಸಂಕೀರ್ಣವು ಕಾನೂನು ವಿವಾದದ ವಿಷಯವಾಗಿದೆ. ವಿವಾದಿತ ಪ್ರದೇಶದಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ 1991 ರಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಾಗ ಸೈಟ್ನ ಕಾನೂನು ಹೋರಾಟ ತೀವ್ರಗೊಂಡಿತು. ಜ್ಞಾನವಾಪಿ ಮಸೀದಿ ಪ್ರಕರಣ ಎಂದು ಕರೆಯಲ್ಪಡುವ ಈ ಪ್ರಕರಣವು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ವಿವಾದದ ವಿಷಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಿಂದೂ ಗುಂಪುಗಳು ಕಾಶಿ ವಿಶ್ವನಾಥ ದೇವಾಲಯದ ಮೂಲ ಸ್ಥಳವೆಂದು ಹಿಂದೂಗಳು ವಾದಿಸಿದ್ದರಿಂದ ವಿವಾದವು ಮತ್ತಷ್ಟು ಗಮನ ಸೆಳೆಯಿತು. ಜ್ಞಾನವಾಪಿ ಪ್ರಕರಣವು ಭಾರತದಲ್ಲಿ ಇತಿಹಾಸ, ಪುರಾತತ್ತ್ವ ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಸಂಕೀರ್ಣ ಭಿನ್ನತೆಯನ್ನು ಒತ್ತಿಹೇಳುತ್ತದೆ. ಜ್ಞಾನವಾಪಿ ಎಂಬುದು ಸಂಸ್ಕೃತ ಪದಗಳಾದ ‘ಜ್ಞಾನ್’ (ಜ್ಞಾನ) ಮತ್ತು ‘ವಾಪಿ’ (ಬಾವಿ) ದಿಂದ ಬಂದಿದೆ. ಇದು ಜ್ಞಾನದ ಬಾವಿಯ ಉಪಸ್ಥಿತಿಯನ್ನು ಸೂಚಿಸುತ್ತದೆ. ಈ ಬಾವಿ ಐತಿಹಾಸಿಕವಾಗಿ ಮಹತ್ವದ್ದಾಗಿದ್ದು ಇದು ಮೂಲ ದೇವಾಲಯದ ಸಂಕೀರ್ಣದ ಒಂದು ಭಾಗವಾಗಿದೆ ಎಂದು ನಂಬಲಾಗಿದೆ. ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಜ್ಞಾನವಾಪಿ ಮಸೀದಿಯೊಳಗೆ ಪ್ರಾರ್ಥನೆ ನಡೆಸಲು ಹಿಂದೂಗಳಿಗೆ ಅನುಮತಿ ನೀಡಿದೆ.ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಸಮೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಜ್ಞಾನವಾಪಿ ಸಂಕೀರ್ಣದೊಳಗಿನ ‘ವಜೂಖಾನಾ’ ಪ್ರದೇಶವನ್ನು ಮುಚ್ಚಲು ಹಿಂದೂ ಕಡೆಯವರು ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ 2022 ರಲ್ಲಿ ‘ವಜೂಖಾನಾ’ವನ್ನು ಸೀಲ್ ಮಾಡಲಾಗಿತ್ತು.
Gyanvapi Mosque Case: ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಪೂಜೆ: ಮುಸ್ಲಿಮರಿಗೆ ಮತ್ತೆ ಹಿನ್ನಡೆ
ಜ್ಞಾನವಾಪಿ ಮಸೀದಿ ಪ್ರಕರಣ: ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದುಗಳಿಗೆ ಪೂಜೆಗೆ ಅವಕಾಶ ನೀಡಿರುವ ವಿಚಾರದಲ್ಲಿ ಮುಸ್ಲಿಮರಿಗೆ ಮತ್ತೆ ಹಿನ್ನಡೆಯಾಗಿದೆ. ಪೂಜೆಗೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿ, ಮುಸ್ಲಿಮರು ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಇದರೊಂದಿಗೆ ಹಿಂದುಗಳ ಪೂಜೆ ಮುಂದುವರಿಯಲಿದೆ.
- Ganapathi Sharma
- Updated on: Feb 26, 2024
- 10:50 am
Gyanvapi Case: ಜ್ಞಾನವಾಪಿ ಆವರಣದಲ್ಲಿ ಹಿಂದೂಗಳ ಪೂಜೆಗೆ ಸದ್ಯಕ್ಕಿಲ್ಲ ನಿರ್ಬಂಧ: ಅಲಹಾಬಾದ್ ಹೈಕೋರ್ಟ್
ವಾರಾಣಸಿಯ ಜ್ಞಾನವಾಪಿಯಲ್ಲಿ ಹಿಂದೂಗಳ ಪೂಜೆ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಮಸೀದಿ ಸಮಿತಿಗೆ ಭಾರಿ ಹಿನ್ನಡೆಯಾಗಿದೆ. ಸದ್ಯಕ್ಕೆ ಹಿಂದೂಗಳ ಪೂಜೆಗೆ ತಡೆ ನೀಡಲಾಗದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದು, ಫೆಬ್ರವರಿ 6 ರ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
- Ganapathi Sharma
- Updated on: Feb 2, 2024
- 2:11 pm
ಜ್ಞಾನವಾಪಿ ಸಂಕೀರ್ಣದಲ್ಲಿ ಹಿಂದೂಗಳಿಂದ ಪೂಜೆ, ವಾರಾಣಸಿ ಬಂದ್ಗೆ ಕರೆ ನೀಡಿದ ಮುಸ್ಲಿಮರು
ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದ್ದು ನಿನ್ನೆಯಿಂದಲೇ ಪೂಜೆ, ಭಜನೆಗಳು ನಡೆಯುತ್ತಿವೆ. ಇದನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ವಾರಾಣಸಿ ಬಂದ್ಗೆ ಕರೆ ನೀಡಿವೆ ಅಷ್ಟೇ ಅಲ್ಲದೇ ಈ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ವರೆಗೆ ಕೊಂಡೊಯ್ದಿದೆ. ಮಸೀದಿಯಲ್ಲಿ ವಿಷ್ಣು, ಹನುಮಂತ ಸೇರಿದಂತೆ ಹಲವು ವಿಗ್ರಹಗಳು ಪತ್ತೆಯಾಗಿವೆ.
- Nayana Rajeev
- Updated on: Feb 2, 2024
- 12:02 pm
ಕೃಷ್ಣ ಜನ್ಮಭೂಮಿ ಕೇಸ್ ಹಿಂಪಡೆಯುವಂತೆ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾಗೆ ಬೆದರಿಕೆ ಪತ್ರ
ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಅವರು ಜನವರಿ 30 ರಂದು ಹೈಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾಗಲು ಹೋಗಿದ್ದರು. ಜನವರಿ 31 ರಂದು ದೆಹಲಿಯಲ್ಲಿರುವ ತಮ್ಮ ಮನೆಗೆ ಹಿಂದಿರುಗಿದಾಗ, ಮನೆಯ ಗೇಟ್ನಲ್ಲಿ ಹಳದಿ ಲಕೋಟೆಯನ್ನು ನೇತುಹಾಕಿರುವುದು ಕಂಡುಬಂದಿದೆ ಎಂದು ಗುಪ್ತಾ ನ್ಯೂಸ್ 9 ಗೆ ತಿಳಿಸಿದರು.
- Rashmi Kallakatta
- Updated on: Feb 2, 2024
- 12:03 pm
ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ಜೀ ಕಾ ತಹಖಾನಾ’ದಲ್ಲಿ ಪೂಜೆಗೆ ಅನುಮತಿ; ನೆಲಮಾಳಿಗೆಗೆ ಈ ಹೆಸರು ಹೇಗೆ ಬಂತು
ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ಜೀ ಕಾ ತಹಖಾನಾ’ದಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ವಾರಣಾಸಿ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ. ಜ್ಞಾನವಾಪಿಯಲ್ಲಿರುವ ಈ ತಹಖಾನಾ ಅಥವಾ ನೆಲಮಾಳಿಗೆಗೆ ವ್ಯಾಸ್ ಜೀ ಕಾ ತಹಖಾನಾ ಎಂಬ ಹೆಸರು ಹೇಗೆ ಬಂತು?. ಪೂಜೆ ಸಲ್ಲಿಸಲು ಅವಕಾಶ ಕೋರಿ ಸಲ್ಲಿಸಿದ ಅರ್ಜಿಯಲ್ಲೇನಿತ್ತು? ಇಲ್ಲಿದೆ ಮಾಹಿತಿ
- Rashmi Kallakatta
- Updated on: Feb 2, 2024
- 12:03 pm
Gyanvapi mosque case: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ನಡೆಸಲು ಹಿಂದೂಗಳಿಗೆ ಅನುಮತಿ
ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಬಹುದು ಎಂದು ವಾರಣಾಸಿ ನ್ಯಾಯಾಲಯ ಹೇಳಿದೆ. ಈ ಮಸೀದಿ ಒಳಗಿರುವ ವ್ಯಾಸ್ ಜೀ ಕಾ ತಹಖಾನಾದಲ್ಲಿ ಹಿಂದೂಗಳು ಪೂಜೆ ಮಾಡಬಹುದಾಗಿದೆ. ಇದಕ್ಕಾಗಿ ಜಿಲ್ಲಾಡಳಿತವು 7 ದಿನಗಳಲ್ಲಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.
- Rashmi Kallakatta
- Updated on: Feb 2, 2024
- 12:02 pm
ಜ್ಞಾನವಾಪಿ ಸಂಕೀರ್ಣದಲ್ಲಿ ವಿಷ್ಣು, ಹನುಮಂತನ ವಿಗ್ರಹಗಳು ಪತ್ತೆ
Gyanvapi Survey: ಜ್ಞಾನವಾಪಿ(Gyanvapi) ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ವಿಷ್ಣು, ಹನುಮಂತನ ವಿಗ್ರಹಗಳು ಲಭ್ಯವಾಗಿವೆ. ಇದನ್ನು ಮೊದಲು ಶಿವನಿಗೆ ಮೀಸಲಾದ ಸ್ಥಳ ಎಂದು ಭಾವಿಸಲಾಗಿತ್ತು, ಇದೀಗ ಎಎಸ್ಐನಿಂದ ಪತ್ತೆಯಾದ ಕಲಾಕೃತಿಗಳಲ್ಲಿ ವಿಷ್ಣು ಹಾಗೂ ಹನುಮಂತನ ಚಿತ್ರವಿದೆ. ಗಮನಾರ್ಹವಾದ ಆವಿಷ್ಕಾರಗಳಲ್ಲಿ ಹನುಮಂತನ ಶಿಲ್ಪದ ಕೆಳಗಿನ ಅರ್ಧ ಭಾಗವು ಒಂದು ಬಂಡೆಯ ಮೇಲೆ ಒಂದು ಕಾಲನ್ನು ಇರಿಸಿದೆ, ಇದು ದೇವತೆಯ ಪ್ರತಿಮಾರೂಪದ ಭಂಗಿಯನ್ನು ಸೂಚಿಸುತ್ತದೆ.
- Nayana Rajeev
- Updated on: Feb 2, 2024
- 12:03 pm
ಕಾಶಿ ಜ್ಞಾನವಾಪಿ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಇತಿಹಾಸ ತಜ್ಞ ಡಾ ಶೆಲ್ವಪಿಳೈ ಅಯ್ಯಂಗಾರ್
ಮೈಸೂರಿನಲ್ಲಿ ಟಿವಿ9 ಜೊತೆ ಮಾತನಾಡಿರುವ ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್, ಕಾಶಿ ಜ್ಞಾನವಾಪಿ ವರದಿ ಅತ್ಯಂತ ವೈಜ್ಞಾನಿಕವಾಗಿ ತಯಾರಿಸಿ ಮಂಡಿಸಲಾಗಿದೆ. ಒಬ್ಬ ಇತಿಹಾಸ ಸಂಶೋಧನಾ ವಿದ್ಯಾರ್ಥಿಯಾಗಿ ನನಗೆ ತುಂಬಾ ಖುಷಿ ಕೊಟ್ಟಿದೆ. ವರದಿಯನ್ನು ಸಂಪೂರ್ಣ ಓದಿದ್ದೇನೆ ಎಂದು ಹೇಳಿದ್ದಾರೆ. ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಪರ್ಸಿಯನ್, ಅರೆಬಿಕ್ ಮತ್ತು ಬ್ರಾಹ್ಮಿ ಸೇರಿದಂತೆ ಲಿಪಿಗಳು ಪತ್ತೆಯಾಗಿವೆ ಎಂದಿದ್ದಾರೆ.
- Ram
- Updated on: Feb 2, 2024
- 12:03 pm
ಜ್ಞಾನವಾಪಿ ಮಸೀದಿ ವಿವಾದ: ಮಸೀದಿಗೂ ಮುನ್ನ ದೊಡ್ಡ ದೇಗುಲ, ಭಾರತೀಯ ಪುರಾತತ್ವ ಇಲಾಖೆ ವರದಿ ಬಹಿರಂಗ
ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಪುರಾತತ್ವ ಇಲಾಖೆ ನಡೆಸಿದ್ದ ಸರ್ವೆ ವರದಿ ಬಹಿರಂಗವಾಗಿದೆ. ಮಸೀದಿ ನಿರ್ಮಾಣಕ್ಕೂ ಮುನ್ನ ದೊಡ್ಡ ದೇಗುಲ ಇತ್ತೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
- Gangadhar Saboji
- Updated on: Feb 2, 2024
- 12:03 pm
ಜ್ಞಾನವಾಪಿ ಮಸೀದಿಯ ಎಎಸ್ಐ ಸಮೀಕ್ಷೆ ವರದಿ ಸಾರ್ವಜನಿಕಗೊಳಿಸಲಾಗುವುದು: ವಾರಣಾಸಿ ನ್ಯಾಯಾಲಯ
ಎಎಸ್ಐ ಡಿಸೆಂಬರ್ 19 ರಂದು ವಾರಣಾಸಿ ನ್ಯಾಯಾಲಯದಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ತಾನು ಕೈಗೊಂಡ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಸಲ್ಲಿಸಿತ್ತು. ವಾರಣಾಸಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಎಸ್ಐ ಈ ಸಮೀಕ್ಷೆಯನ್ನು ಕೈಗೊಂಡಿತ್ತು, ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸುವುದಕ್ಕಾಗಿತ್ತು ಈ ಸಮೀಕ್ಷೆ.
- Rashmi Kallakatta
- Updated on: Feb 2, 2024
- 12:03 pm