AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI

RBI

ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಕೇಂದ್ರ ಬ್ಯಾಂಕಿಂಗ್ ಸಂಸ್ಥೆಯಾಗಿದ್ದು, ಭಾರತದ ಆರ್ಥಿಕ ಚೌಕಟ್ಟಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 1935 ರಲ್ಲಿ ಸ್ಥಾಪಿತವಾದ ಆರ್‌ಬಿಐ ಭಾರತೀಯ ರೂಪಾಯಿಯನ್ನು ವಿತರಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ, ರಾಷ್ಟ್ರದ ಹಣಕಾಸು ನೀತಿಯನ್ನು ನಿಯಂತ್ರಿಸುತ್ತದೆ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುತ್ತದೆ. ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇದು ಕೇಂದ್ರೀಯ ನಿರ್ದೇಶಕರ ಮಂಡಳಿಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ. ಆರ್‌ಬಿಐ ಬ್ಯಾಂಕುಗಳನ್ನು ನಿಯಂತ್ರಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ, ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ನೀತಿಗಳನ್ನು ಜಾರಿಗೊಳಿಸುತ್ತದೆ.

ಇನ್ನೂ ಹೆಚ್ಚು ಓದಿ

ಆರ್​ಬಿಐ ಹೊಸ ನಿಯಮಗಳ ಪ್ರಸ್ತಾಪ; ಸಾಲಗಳ ಇಎಂಐ ಮೇಲಾಗುವ ಪರಿಣಾಮಗಳೇನು?

New RBI Rules, How Your Home, Personal Loan EMIs Will Change In 2027: ಭಾರತೀಯ ರಿಸರ್ವ್ ಬ್ಯಾಂಕ್ ಫ್ಲೋಟಿಂಗ್ ರೇಟ್ ಸಾಲಗಳ ನಿಯಮದಲ್ಲಿ ಬದಲಾವಣೆ ತರುವ ನಿಯಮ ರೂಪಿಸಿದೆ. ಇದು ಇನ್ನೂ ಪ್ರಸ್ತಾಪಿತ ಹಂತದಲ್ಲಿದ್ದು, ಈ ಕರಡು ನಿಯಮಕ್ಕೆ ಸಮ್ಮತಿ ಸಿಕ್ಕರೆ ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರುತ್ತದೆ. ಹೋಮ್ ಲೋನ್, ಪರ್ಸನಲ್ ಲೋನ್, ಗೋಲ್ಡ್ ಲೋನ್​ಗಳ ಪೈಕಿ ಯಾವುದಕ್ಕೆ ಈ ನಿಯಮ ಅನ್ವಯ ಆಗುತ್ತದೆ?

ಅನಿವಾಸಿ ಭಾರತೀಯರ ಎಫ್​ಸಿಎನ್​ಆರ್ ಠೇವಣಿಗಳು: ಗಡುವನ್ನು ಒಂದು ತಿಂಗಳು ಹಿಂದೂಡಿದ ಆರ್​ಬಿಐ

FCNRB deposit swapping facility special window, new date of closure August 31st: ಭಾರತೀಯ ಬ್ಯಾಂಕುಗಳಿಗೆ ಅನಿವಾಸಿ ಭಾರತೀಯರಿಂದ ಎಫ್​ಸಿಎನ್​ಆರ್​ಬಿ ಡೆಪಾಸಿಟ್​ಗಳನ್ನು ಪಡೆಯಲು ಅವಕಾಶ ಕೊಟ್ಟಿದ್ದ ಆರ್​ಬಿಐ, ಗಡುವನ್ನು ಒಂದು ತಿಂಗಳು ಹಿಂದೂಡಿದೆ. ಡೆಪಾಸಿಟ್​ಗಳಿಗೆ ಸೆಪ್ಟೆಂಬರ್ 30ರವರೆಗೂ ಕಾಲಾವಕಾಶ ಇತ್ತು. ಅದನ್ನು ಆಗಸ್ಟ್ 31ಕ್ಕೆ ಹಿಂದೂಡಲಾಗಿದೆ. ಈ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗೆ ಉತ್ತಮ ಸ್ಪಂದನೆ ಸಿಕ್ಕು ನಿರೀಕ್ಷಿತ ಪ್ರಮಾಣದಲ್ಲಿ ಠೇವಣಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸಣ್ಣ ಸಾಲಗಳಿಗೆ ಮನಬಂದಂತೆ ಬಡ್ಡಿವಿಧಿಸುವ ಬ್ಯಾಂಕುಗಳ ಆಟಕ್ಕೆ ಬ್ರೇಕ್ ಹಾಕಹೊರಟ ಆರ್​ಬಿಐ

RBI proposed changes to how banks and non-banks calculate interest rates: ಪರ್ಸನಲ್ ಲೋನ್​ನಂತಹ ಸಣ್ಣ ಸಾಲಗಳಿಗೆ ಹಣಕಾಸು ಸಂಸ್ಥೆಗಳು ಮಿತಿ ಮೀತಿ ಬಡ್ಡಿ ವಸೂಲಿ ಮಾಡುವಂತಿಲ್ಲ ಎನ್ನುವ ನಿಯಮ ಜಾರಿಗೆ ತರಲು ಆರ್​ಬಿಐ ಹೊರಟಿದೆ. ಹಣಕಾಸು ಸಂಸ್ಥೆಗಳು ಆನುಯಲ್ ಪರ್ಸೆಂಟೇಜ್ ರೇಟ್​ಗೆ ಮಿತಿ ಇಟ್ಟು ಅದನ್ನು ಮೀರಿ ಬಡ್ಡಿ ನಿಗದಿಯಾಗದಂತೆ ನೋಡಿಕೊಳ್ಳಬೇಕು. ಇಂಥ ಪ್ರಸ್ತಾಪವನ್ನು ರಿಸರ್ವ್ ಬ್ಯಾಂಕ್ ಮಾಡಿದೆ.

ರೀಟೇಲ್ ಹಣದುಬ್ಬರ ಜುಲೈನಲ್ಲಿ ಶೇ. 4.45ಕ್ಕೆ ಏರಿಕೆ; ಆರ್​ಬಿಐನ ತಾಳಿಕೆ ಮಿತಿಯೊಳಗಿದೆ ಬೆಲೆ ಏರಿಕೆ ದರ

Retail Inflation in July 2026 rise to 4.45pc: ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ ಜುಲೈ ತಿಂಗಳಲ್ಲಿ ಶೇ. 4.45ರಷ್ಟಿದೆ. ಜೂನ್ ತಿಂಗಳಲ್ಲಿ ಇದು ಶೇ. 4.38ರಷ್ಟಿತ್ತು. ಜುಲೈನಲ್ಲಿ ಹಣದುಬ್ಬರ ಮೇಲೆ ಹೋಗಲು ಆಹಾರವಸ್ತುಗಳ ಬೆಲೆ ಏರಿಕೆ ಪ್ರಮುಖ ಕಾರಣವಾಗಿದೆ. ಮುಂಗಾರು ಮಳೆ ನಿರೀಕ್ಷಿತ ರೀತಿಯಲ್ಲಿ ಬಂದಿಲ್ಲದಿರುವುದು ಇನ್ನೊಂದು ಕಾರಣವಿರಬಹುದು.

ಆರ್​ಬಿಐ ಅಂದಾಜಿಗಿಂತಲೂ ಹೆಚ್ಚು ವೇಗದಲ್ಲಿ ಭಾರತದ ಆರ್ಥಿಕತೆ ಬೆಳೆಯಲಿದೆ: ಅರವಿಂದ್ ಪನಗರಿಯಾ

Indian economy to grow by atleast 7pc, says Arvind Panagariya: ಭಾರತದ ಆರ್ಥಿಕತೆಯು ಪ್ರಸಕ್ತ ಸಾಲಿನಲ್ಲಿ ಆರ್​ಬಿಐನ ಅಂದಾಜನ್ನೂ ಮೀರಿಸಿ ಬೆಳೆಯಲಿದೆ ಎಂದು ಆರ್ಥಿಕಜ್ಞ ಅರವಿಂದ್ ಪನಗರಿಯಾ ಹೇಳಿದ್ದಾರೆ. ಕಳೆದ ವಾರದ ಎಂಪಿಸಿ ಸಭೆಯಲ್ಲಿ 2026-27ರ ವರ್ಷದಲ್ಲಿ ಜಿಡಿಪಿ ಶೇ. 6.7ರಷ್ಟು ಹೆಚ್ಚಬಹುದು ಎಂದು ಆರ್​ಬಿಐ ಅಂದಾಜು ಮಾಡಿತ್ತು. ಅರವಿಂದ್ ಪನಗರಿಯಾ ಪ್ರಕಾರ ಆರ್ಥಿಕತೆಯು ಶೇ. 7ರ ದರದಲ್ಲಿ ಹೆಚ್ಚಬಹುದು.

ಎಂಡಿಆರ್ ಶುಲ್ಕ ಕೇವಲ ಶೇ. 0.04? ದೊಡ್ಡ ವ್ಯಾಪಾರಿಗಳಿಗೆ ಮಾತ್ರವಾ ಈ ಶುಲ್ಕ? ಯಾರು ದೊಡ್ಡ ವ್ಯಾಪಾರಿಗಳು?

Large merchants may bear UPI MDR under proposed framework: ಯುಪಿಐ ವಹಿವಾಟುಗಳಿಗೆ ಎಂಡಿಆರ್ ಶುಲ್ಕ ವಿಧಿಸುವ ನೀತಿಯನ್ನು ಸರ್ಕಾರ ರೂಪಿಸುವ ಸಾಧ್ಯತೆ ಇದೆ. ಆದರೆ, ಸಾಮಾನ್ಯ ಗ್ರಾಹಕರಿಗೆ ಈ ಶುಲ್ಕ ಇರುವುದಿಲ್ಲ. ಬ್ಯುಸಿನೆಸ್ ಟುಡೆ ವರದಿ ಪ್ರಕಾರ, ದೊಡ್ಡ ವ್ಯಾಪಾರಿಗಳಿಗೆ ಶೇ. 0.04ರಷ್ಟು ಎಂಡಿಆರ್ ಶುಲ್ಕ ವಿಧಿಸಬಹುದು ಎನ್ನಲಾಗುತ್ತಿದೆ. ಇಂಥದ್ದೊಂದು ಪ್ರಸ್ತಾಪವು ಸರ್ಕಾರದ ಪರಿಗಣನೆಯಲ್ಲಿದೆ.

ಟರ್ಮ್ ಲೋನ್ ಮಾತ್ರ ಕೊಡಿ, ರಿವಾಲ್ವಿಂಗ್ ಕ್ರೆಡಿಟ್ ಬೇಡ: NBFCಗಳಿಗೆ ಬರಲಿದೆ ಹೊಸ ಮಾರ್ಗಸೂಚಿ

RBI's draft guidelines to NBFCs: ಸಾಲ ನೀಡುವ ವಿಚಾರದಲ್ಲಿ ಎನ್​ಬಿಎಫ್​ಸಿಗಳಿಗೆ ಆರ್​ಬಿಐ ಕರಡು ಮಾರ್ಗಸೂಚಿ ರೂಪಿಸಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರಿಗೆ ರಿವಾಲ್ವಿಂಗ್ ಕ್ರೆಡಿಟ್ ಅಥವಾ ಪುನರಾವರ್ತಿತ ಸಾಲದ ಸೌಲಭ್ಯ ನಿಲ್ಲಿಸಬೇಕು ಎಂದು ಆರ್​ಬಿಐ ಪ್ರಸ್ತಾಪಿಸಿದೆ. ಹಾಗೆಯೇ, ಟರ್ಮ್ ಲೋನ್​ಗಳನ್ನು ಮಾತ್ರವೇ ನೀಡಬೇಕು ಎಂದು ಕರಡು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಯುಪಿಐ ಪೇಮೆಂಟ್​ಗೆ ಎಂಡಿಆರ್ ಶುಲ್ಕ ಇದ್ದರೆ ಯಾರು ಭರಿಸಬೇಕು? ಆರ್​ಬಿಐ ಗವರ್ನರ್ ಹೇಳಿದ್ದಿದು

Will customers pay for UPI transactions?: ಡಿಜಿಟಲ್ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಲಾಗಿದೆ. ಎಂಡಿಆರ್ ಶುಲ್ಕವನ್ನು ಗ್ರಾಹಕರು ಭರಿಸಬೇಕಾಗುವುದಿಲ್ಲ. ವ್ಯಾಪಾರಿಗಳಿಗೆ ಹೊರೆ ಬೀಳಬಹುದು, ಅಥವಾ ಸರ್ಕಾರವೇ ಭರಿಸಬಹುದು ಎಂದು ಆರ್​​ಬಿಐ ಗವರ್ನರ್ ಹೇಳಿದ್ದಾರೆ. ಆದರೆ, ಸದ್ಯಕ್ಕೆ ಯುಪಿಐ ಪೇಮೆಂಟ್​ಗಳಿಗೆ ಎಂಡಿಆರ್ ವಿಧಿಸುವ ಪ್ರಸ್ತಾಪ ಇಲ್ಲ ಎಂದಿದ್ದಾರೆ ಸಂಜಯ್ ಮಲ್ಹೋತ್ರಾ.

ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು

RBI MPC meeting updates: ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿ ತನ್ನ ದರಗಳನ್ನು ಪ್ರಕಟಿಸಿದ್ದು, ರೆಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಿದೆ. ಇತರ ದರಗಳೂ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಜಿಡಿಪಿ ಈ ಹಣಕಾಸು ವರ್ಷ ಶೇ. 6.7ರಷ್ಟು ಉತ್ತಮ ಬೆಳವಣಿಗೆ ಕಾಣಬಹುದು ಎಂದು ಎಂಪಿಸಿ ಅಂದಾಜಿಸಿದೆ. ಹಣದುಬ್ಬರ ಶೇ. 5ಕ್ಕೆ ಸೀಮಿತವಾಗಬಹುದು ಎಂದು ರಿಸರ್ವ್ ಬ್ಯಾಂಕ್ ನಿರೀಕ್ಷಿಸಿದೆ.

ಜಾಗತಿಕ ಅನಿಶ್ಚಿತತೆಯ ಸ್ಥಿತಿ ಮುಂದುವರಿಕೆಯಲ್ಲಿ ಆರ್​ಬಿಐ ಎಂಪಿಸಿ ಸಭೆ ಬಡ್ಡಿ ದರ ಪರಿಷ್ಕರಿಸುತ್ತಾ?

RBI MPC meeting, policy decision announcement: ಆರ್​ಬಿಐ ಮಾನಿಟರಿ ಪಾಲಿಸಿ ಕಮಿಟಿಯ ಮೂರು ದಿನಗಳ ಸಭೆ ಆಗಸ್ಟ್ 3ರಂದು ಆರಂಭವಾಗಿದೆ. ಆಗಸ್ಟ್ 5, ಬುಧವಾರದಂದು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಸಮಿತಿ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ರೆಪೋ ದರ, ಜಿಡಿಪಿ, ಹಣದುಬ್ಬರದ ಅಂದಾಜು ಬಗ್ಗೆ ಎಂಪಿಸಿ ಅಭಿಪ್ರಾಯವೇನು ಎನ್ನುವ ಕುತೂಹಲ ಇದೆ.

ಎಂಡಿಆರ್ ಶುಲ್ಕ ಜಾರಿಯಾದರೆ 3,000 ರೂಗಿಂತ ಹೆಚ್ಚಿನ ಪಾವತಿಗೆ ಶೇ. 53 ಮಂದಿ ಹಿಂದೇಟು; ಸಮೀಕ್ಷೆ ಅಭಿಪ್ರಾಯ

53% may stop using UPI for payments above ₹3,000 if MDR returns, survey claims: ದೊಡ್ಡ ಮೊತ್ತದ ಯುಪಿಐ ಪಾವತಿಗಳ ಮೇಲೆ ಎಂಡಿಆರ್ ಶುಲ್ಕದ ವ್ಯವಸ್ಥೆ ತರಲು ಆರ್​ಬಿಐ ಚಿಂತಿಸುತ್ತಿದೆ. ಇದೇನಾದರೂ ಜಾರಿಗೆ ಬಂದರೆ ಶೇ. 53ರಷ್ಟು ಜನರು ದೊಡ್ಡ ಮೊತ್ತದ ಯುಪಿಐ ಪಾವತಿ ನಿಲ್ಲಿಸಬಹುದು ಎನ್ನುತ್ತಿದೆ ಒಂದು ಸಮೀಕ್ಷೆ. ಶೇ. 20ರಷ್ಟು ಜನರು ನಗದು ಬಳಕೆಗೆ ಮರಳಬಹುದು ಎನ್ನುತ್ತಿದೆ ಲೋಕಲ್ ಸರ್ಕಲ್ಸ್ ಸಮೀಕ್ಷೆ.

ಆರ್​ಬಿಐ ಹೊಸ ಮಾರ್ಗಸೂಚಿ; ಅ. 1ರಿಂದ ಬದಲಾಗಲಿವೆ ಬ್ಯಾಂಕ್ ಡೆಪಾಸಿಟ್ ನಿಯಮಗಳು

RBI Fixed Deposit Rules From October 1: ಭಾರತೀಯ ರಿಸರ್ವ್ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಅಕ್ಟೋಬರ್ 1ರಿಂದ ಹೊಸ ಕ್ರಮ ಜಾರಿಗೆ ಬರುತ್ತದೆ. ಒಂದು ಬ್ಯಾಂಕ್​ನ ಎಲ್ಲಾ ಶಾಖೆಗಳಲ್ಲೂ ಸಮಾನ ಠೇವಣಿ ದರ ಇರಬೇಕು ಎಂಬುದು ಪ್ರಮುಖ ಹೊಸ ನಿಯಮ. ದೊಡ್ಡ ಮೊತ್ತದ ಠೇವಣಿಯಾದರೆ ಬ್ಯಾಂಕುಗಳು ಬಡ್ಡಿದರದಲ್ಲಿ ವ್ಯತ್ಯಾಸ ಮಾಡಲು ಸ್ವತಂತ್ರವಾಗಿರುತ್ತವೆ.

ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ