AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI

RBI

ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಕೇಂದ್ರ ಬ್ಯಾಂಕಿಂಗ್ ಸಂಸ್ಥೆಯಾಗಿದ್ದು, ಭಾರತದ ಆರ್ಥಿಕ ಚೌಕಟ್ಟಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 1935 ರಲ್ಲಿ ಸ್ಥಾಪಿತವಾದ ಆರ್‌ಬಿಐ ಭಾರತೀಯ ರೂಪಾಯಿಯನ್ನು ವಿತರಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ, ರಾಷ್ಟ್ರದ ಹಣಕಾಸು ನೀತಿಯನ್ನು ನಿಯಂತ್ರಿಸುತ್ತದೆ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುತ್ತದೆ. ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇದು ಕೇಂದ್ರೀಯ ನಿರ್ದೇಶಕರ ಮಂಡಳಿಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ. ಆರ್‌ಬಿಐ ಬ್ಯಾಂಕುಗಳನ್ನು ನಿಯಂತ್ರಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ, ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ನೀತಿಗಳನ್ನು ಜಾರಿಗೊಳಿಸುತ್ತದೆ.

ಇನ್ನೂ ಹೆಚ್ಚು ಓದಿ

ಎನ್​ಆರ್​ಐಗಳ ಡೆಪಾಸಿಟ್​ಗಳನ್ನು ಕೈಬೀಸಿ ಕರೆಯುತ್ತಿವೆ ಭಾರತದ ಹೊಸ FCNR(B) ದರಗಳು; ಅನಿವಾಸಿ ಭಾರತೀಯರಿಗೆ ಹೇಗೆ ಲಾಭ?

How India's new FCNR B rates can benefit NRIs: ಆರ್​ಬಿಐ FCNR (B) ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಅದರ ಪರಿಣಾಮವಾಗಿ ಹಲವು ಬ್ಯಾಂಕುಗಳು ಇದರ ದರಗಳನ್ನು ಹೆಚ್ಚಿಸಿವೆ. ಅನಿವಾಸಿ ಭಾರತೀಯರು ತಾವು ಕೆಲಸ ಮಾಡುವ ದೇಶಗಳ ಕರೆನ್ಸಿಯಲ್ಲೇ ಭಾರತದ ಬ್ಯಾಂಕುಗಳಲ್ಲಿ ಠೇವಣಿ ಇಡಬಹುದು. ಭಾರತೀಯರಿಗೆ ಸಿಗುವ ಎಫ್​ಡಿ ದರಗಳು ಆ ಎನ್​ಆರ್​ಐ ಠೇವಣಿಗಳಿಗೂ ಸಿಗುತ್ತವೆ. ಕರೆನ್ಸಿ ವಿನಿಮಯದ ಅಗತ್ಯವೇ ಇರುವುದಿಲ್ಲ.

ಮೇ ತಿಂಗಳಲ್ಲಿ ಬೆಲೆ ಏರಿಕೆಗೆ ಇನ್ನಷ್ಟು ವೇಗ; ರೀಟೇಲ್ ಹಣದುಬ್ಬರ ಶೇ. 3.93 ದಾಖಲು

RBI Under Pressure as India's Retail Inflation Jumps: ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ 3.93% ಕ್ಕೆ ಏರಿ, ಸತತ ಐದನೇ ತಿಂಗಳು ಹೆಚ್ಚಳ ಕಂಡಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ, ಸಾರಿಗೆ ವೆಚ್ಚ ಮತ್ತು ಚಿನ್ನದ ದರಗಳ ಜಿಗಿತವೇ ಇದಕ್ಕೆ ಪ್ರಮುಖ ಕಾರಣ. ಗ್ರಾಮೀಣ ಪ್ರದೇಶಗಳಲ್ಲಿ ಬೆಲೆ ಏರಿಕೆಯ ಬಿಸಿ ತೀವ್ರವಾಗಿದೆ. ಆರ್‌ಬಿಐ ತನ್ನ ಗುರಿಯ ಸಮೀಪ ಹಣದುಬ್ಬರವನ್ನು ತಲುಪುತ್ತಿದ್ದು, ಮುಂಗಾರು ವೈಫಲ್ಯ ಅಥವಾ ಕಚ್ಚಾ ತೈಲ ಏರಿಕೆಯಾದರೆ ಬಡ್ಡಿದರ ಹೆಚ್ಚಳದ ಸವಾಲು ಎದುರಿಸಲಿದೆ.

ಷೇರುಬಜಾರಿನಲ್ಲಿ ಭಾರಿ ಗೂಳಿ ಓಟ; ಗರಿಬಿಚ್ಚಿದ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆಯ ಭರ್ಜರಿ ಆಟಕ್ಕೆ ಕಾರಣಗಳೇನು?

Indian Stock Market Surges: ಭಾರತೀಯ ಷೇರು ಮಾರುಕಟ್ಟೆ ಇಂದು ಭಾರಿ ಏರಿಕೆ ಕಂಡಿದೆ, ಸೆನ್ಸೆಕ್ಸ್ 1,700 ಅಂಕ, ನಿಫ್ಟಿ 23,600 ದಾಟಿದೆ. ಹೂಡಿಕೆದಾರರ ಸಂಪತ್ತು ₹7 ಲಕ್ಷ ಕೋಟಿ ಹೆಚ್ಚಾಗಿದೆ. ಯುಎಸ್-ಇರಾನ್ ಶಾಂತಿ ಭರವಸೆ, ಕಚ್ಚಾ ತೈಲ ಬೆಲೆ ಇಳಿಕೆ, ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಟ್ರೆಂಡ್, ಬಲಗೊಂಡ ರೂಪಾಯಿ ಮತ್ತು ಆರ್‌ಬಿಐ ಕ್ರಮಗಳು ಈ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಬ್ಯಾಂಕಿಂಗ್, ಐಟಿ ಸೇರಿದಂತೆ ಎಲ್ಲಾ ವಲಯಗಳು ಲಾಭ ಕಂಡಿವೆ.

ಅನಿವಾಸಿ ಭಾರತೀಯರ FCNR-B ಠೇವಣಿಗಳಿಗೆ ಭಾರತದ ಬ್ಯಾಂಕುಗಳಿಂದ ಭರ್ಜರಿ ಬಡ್ಡಿ ಆಫರ್

High Interest FCNR-B Rates: ಆರ್‌ಬಿಐ ನಿಯಮ ಬದಲಾವಣೆಯ ನಂತರ, ಭಾರತೀಯ ಬ್ಯಾಂಕ್‌ಗಳು ಅನಿವಾಸಿ ಭಾರತೀಯರಿಗೆ (NRI) FCNR-B ಠೇವಣಿಗಳ ಮೇಲೆ ಬಡ್ಡಿ ದರಗಳನ್ನು ಗಣನೀಯವಾಗಿ ಹೆಚ್ಚಿಸಿವೆ, ಇದು 7.1% ವರೆಗೆ ತಲುಪಿದೆ. ಈ ಠೇವಣಿಗಳು ವಿದೇಶಿ ಕರೆನ್ಸಿಯಲ್ಲಿ ಹಣವನ್ನು ಇಡಲು, ತೆರಿಗೆ-ಮುಕ್ತ ಬಡ್ಡಿ ಗಳಿಸಲು ಮತ್ತು ಸುಲಭವಾಗಿ ಹಣವನ್ನು ವಾಪಸ್ ವರ್ಗಾಯಿಸಲು ಅವಕಾಶ ನೀಡುತ್ತವೆ. ಇದು NRIs ಗೆ ಹೆಚ್ಚಿನ ಆದಾಯದೊಂದಿಗೆ, ದೇಶದ ವಿದೇಶಿ ವಿನಿಮಯ ಸಂಪತ್ತಿಗೆ ಸಹ ಸಹಕಾರಿಯಾಗಿದೆ.

ಬಂಡವಾಳ ಆಕರ್ಷಿಸಲು ಬ್ಯಾಂಕುಗಳಿಗೆ ಹೆಡ್ಡಿಂಗ್ ಸಪೋರ್ಟ್​ನಿಂದ ಹಿಡಿದು ಎನ್​ಆರ್​ಐ ಹೂಡಿಕೆ ಮಿತಿ ಹೆಚ್ಚಳದವರೆಗೆ ಆರ್​ಬಿಐನಿಂದ 5 ಕ್ರಮಗಳು

RBI Unveils 5 Measures To Boost Capital Inflows: ಭಾರತಕ್ಕೆ ಬಹಳ ಅಗತ್ಯ ಇರುವ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಕೆಲ ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಷೇರು ಮಾರುಕಟ್ಟೆಯಲ್ಲಿ ಎನ್​ಆರ್​ಐಗಳಿಗೆ ಇರುವ ಹೂಡಿಕೆ ಮಿತಿಯನ್ನು ಹೆಚ್ಚಿಸಲಾಗಿದೆ. ಬ್ಯಾಂಕುಗಳಿಗೆ ಹೆಡ್ಜಿಂಗ್ ಸಪೋರ್ಟ್ ನೀಡಲಾಗಿದೆ. ರಫ್ತು ಆದಾಯ ತರುವ ಅವಧಿ 9 ತಿಂಗಳಿಗೆ ಕಡಿತಗೊಳಿಸಲಾಗಿದೆ.

RBI MPC: ರೆಪೋ ದರ ಶೇ. 5.25, ಜಿಡಿಪಿ ದರ ಶೇ. 6.6, ಹಣದುಬ್ಬರ ಶೇ. 5.1 ಸಾಧ್ಯತೆ; ಆರ್​ಬಿಐ ಎಂಪಿಸಿ ಪ್ರಕಟಣೆ

RBI MPC announcements: ಆರ್​ಬಿಐ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು ಶೇ. 5.25ರಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಜೂನ್ 3ರಿಂದ ನಡೆದ ಎಂಪಿಸಿ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವರ್ಷ ಜಿಡಿಪಿ ಬೆಳವಣಿಗೆ ಶೇ. 6.9 ಅಲ್ಲ, ಶೇ. 6.6ರಷ್ಟು ಮಾತ್ರ ಬೆಳೆಯಬಹುದು. ಹಣದುಬ್ಬರ ಶೇ. 5.1ರಷ್ಟು ಇರಬಹುದು ಎಂದು ಆರ್​ಬಿಐ ಅಂದಾಜಿಸಿದೆ.

ರಿಸರ್ವ್ ಬ್ಯಾಂಕ್ ಎಂಪಿಸಿ ಸಭೆ; ರೆಪೋ ದರ ಇಳಿಕೆಯಾಗುತ್ತಾ? ಶುಕ್ರವಾರ ನಿರ್ಧಾರ ಪ್ರಕಟಿಸಲಿದ್ದಾರೆ ಆರ್​ಬಿಐ ಗವರ್ನರ್

RBI MPC meeting, policy announcements on June 5th: ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿ ಸಭೆ ಜೂನ್ 3ರಿಂದ 5ರವರೆಗೆ ನಡೆಯುತ್ತಿದೆ. ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನಾಳೆ ಶುಕ್ರವಾರ ಎಂಪಿಸಿ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ರೆಪೋ ದರ ಶೇ. 5.25ರಷ್ಟು ಇದ್ದು, ಆ ಯಥಾಸ್ಥಿತಿಯೇ ಮುಂದುವರಿಯುವ ನಿರೀಕ್ಷೆ ಇದೆ. ಇತರ ನೀತಿಗಳಲ್ಲೂ ಬದಲಾವಣೆ ಆಗದೇ ಹೋಗಬಹುದು.

ಫಾರೆಕ್ಸ್​ನ ಚಿನ್ನ ಮಾರಿರುವ ಸುದ್ದಿ ಸುಳ್ಳು ಎಂದ ಸರ್ಕಾರ; ದೇಶದ ಬಂಗಾರದ ದಾಸ್ತಾನು 880.52 ಟನ್‌ಗಳಷ್ಟು ಸುರಕ್ಷಿತವಂತೆ

RBI Denies $12B Gold Sale Claims: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಚಿನ್ನದ ದಾಸ್ತಾನನ್ನು ಮಾರಾಟ ಮಾಡಿದೆ ಎಂಬ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರ ಮತ್ತು RBI ಸ್ಪಷ್ಟವಾಗಿ ನಿರಾಕರಿಸಿವೆ. ದೇಶದ ಭೌತಿಕ ಚಿನ್ನದ ಸಂಗ್ರಹ 880.52 ಮೆಟ್ರಿಕ್ ಟನ್‌ಗಳಷ್ಟು ಸುರಕ್ಷಿತವಾಗಿದೆ. ಜಾಗತಿಕ ಚಿನ್ನದ ಬೆಲೆಗಳಲ್ಲಿನ ಏರಿಳಿತ ಮತ್ತು ರೂಪಾಯಿ ಮೌಲ್ಯದ ವ್ಯತ್ಯಾಸದಿಂದ ವಿದೇಶಿ ವಿನಿಮಯ ನಿಧಿಯ ಚಿನ್ನದ ಮೌಲ್ಯದಲ್ಲಿ ಬದಲಾವಣೆಯಾಗಿದೆ ಹೊರತು, ಮಾರಾಟದಿಂದಲ್ಲ ಎಂದು RBI ತಿಳಿಸಿದೆ. ಸಾರ್ವಜನಿಕರು ಅಧಿಕೃತ ಮಾಹಿತಿಗಳನ್ನು ಮಾತ್ರ ನಂಬಲು ಮನವಿ ಮಾಡಲಾಗಿದೆ.

ಜೂನ್ ತಿಂಗಳಲ್ಲಿ ಮೊಹರಂ ಸೇರಿ 12 ದಿನಗಳವರೆಗೆ ಬ್ಯಾಂಕ್ ರಜೆ; ಕರ್ನಾಟಕ ಹಾಗೂ ದೇಶವ್ಯಾಪಿ ಎಷ್ಟಿದೆ ರಜೆ?

Bank holidays of upto 12 days in 2026 June: ಆರ್​ಬಿಐ ವೇಳಾಪಟ್ಟಿ ಪ್ರಕಾರ 2026ರ ಜೂನ್ ತಿಂಗಳಲ್ಲಿ ಬ್ಯಾಂಕುಗಳು 12 ದಿನಗಳವರೆಗೆ ರಜೆ ಹೊಂದಿರುತ್ತವೆ. ಇದರಲ್ಲಿ ಆರು ವೀಕೆಂಡ್ ರಜೆಗಳೇ ಇವೆ. ಮೊಹರಂ, ಕಬೀರ್ ಜಯಂತಿ, ಮಹಾರಾಣ ಪ್ರತಾಪ್ ಜಯಂತಿ ಇತ್ಯಾದಿ ಕೆಲ ವಿಶೇಷ ಹಬ್ಬ ಹರಿದಿನಗಳು ಜೂನ್​ನಲ್ಲಿ ಇವೆ. ಕರ್ನಾಟಕದಲ್ಲಿ 7 ದಿನಗಳು ಬ್ಯಾಂಕ್ ರಜೆ ಇರುತ್ತದೆ.

ಜಾಗತಿಕ ಸವಾಲುಗಳ ನಡುವೆಯೂ 2026-27ರಲ್ಲಿ ಭಾರತದ ಜಿಡಿಪಿ ಶೇ. 6.9 ವೃದ್ಧಿ: ಆರ್​ಬಿಐ ವಾರ್ಷಿಕ ವರದಿಯಲ್ಲಿ ಅಂದಾಜು

RBI predicts Indian growth rate to be 6.9% for 2026-27: ಭಾರತೀಯ ರಿಸರ್ವ್ ಬ್ಯಾಂಕ್​ನ ವಾರ್ಷಿಕ ವರದಿಯ ಪ್ರಕಾರ ಪಶ್ಚಿಮ ಏಷ್ಯಾ ಸಂಘರ್ಷದ ಭೀತಿಯಿದ್ದರೂ ಭಾರತದ ಆರ್ಥಿಕ ಸ್ಥಿರತೆ ಧೃಢವಾಗಿದೆ. ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ ಮುಂದುವರಿಯಲಿದೆ. ಮುಂದಿನ ಹಣಕಾಸು ವರ್ಷದಲ್ಲಿ (2026-27) ಜಿಡಿಪಿ ಶೇ. 6.9ರಷ್ಟು ಹೆಚ್ಚಬಹುದು ಎಂದು ಆರ್​ಬಿಐ ಅಂದಾಜಿಸಿದೆ.

ನೋಟು ಹಾಳಾಗುವ ಭಯ ಬೇಡ; ಕಾಗದದ ಬದಲು ಪಾಲಿಮರ್ ನೋಟು ಮುದ್ರಿಸಲು ಸರ್ಕಾರದ ಆಲೋಚನೆ

India May Soon Have Polymer Banknotes: ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾಂಪ್ರದಾಯಿಕ ಕಾಗದದ ಕರೆನ್ಸಿ ಬದಲಿಗೆ ಅತ್ಯಾಧುನಿಕ ಪ್ಲಾಸ್ಟಿಕ್ ಅಥವಾ ಪೋಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ನೋಟುಗಳು ದೀರ್ಘ ಬಾಳಿಕೆ, ಜಲನಿರೋಧಕ ಸಾಮರ್ಥ್ಯ ಮತ್ತು ನಕಲಿ ನೋಟು ತಡೆಗಟ್ಟುವ ಅತ್ಯುನ್ನತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಆರಂಭದಲ್ಲಿ ದೇಶದ ಆಯ್ದ ಐದು ನಗರಗಳಲ್ಲಿ ಇವುಗಳನ್ನು ಪರೀಕ್ಷಾರ್ಥವಾಗಿ ಚಲಾವಣೆಗೆ ತರಲಾಗುವುದು.

ಆರ್​ಬಿಐನಿಂದ ಸರ್ಕಾರಕ್ಕೆ ಈ ವರ್ಷ 2.87 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಹೊಸ ದಾಖಲೆ

RBI Approves Record ₹2.87 Lakh Crore Dividend to Centre: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2025-26ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ ದಾಖಲೆ ಮಟ್ಟದ 2.87 ಲಕ್ಷ ಕೋಟಿ ರೂ. ಲಾಭಾಂಶ ನೀಡಿದೆ. ಇದು ಆರ್‌ಬಿಐ ಇತಿಹಾಸದಲ್ಲೇ ಅತಿ ದೊಡ್ಡ ವರ್ಗಾವಣೆಯಾಗಿದ್ದು, ಕಚ್ಚಾ ತೈಲ ಬೆಲೆ ಏರಿಕೆಯಂತಹ ಜಾಗತಿಕ ಸವಾಲುಗಳ ನಡುವೆ ಸರ್ಕಾರದ ವಿತ್ತೀಯ ಕೊರತೆ ನಿಯಂತ್ರಿಸಲು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು ಮಹತ್ವದ ಆರ್ಥಿಕ ಬಲ ನೀಡಲಿದೆ.

ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು