ಅರುಣಾಚಲ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಭಾರಿ ಹಿಮಪಾತ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಈ ವೇಳೆ, ಗಡಿ ರಸ್ತೆಗಳ ಸಂಸ್ಥೆ (BRO) ಸಿಬ್ಬಂದಿ ಶೋಂಗಟ್ಸರ್ ಸರೋವರ, ಪಿಟಿ ತ್ಸೋ ನಡುವೆ ಮೈನಸ್ ಡಿಗ್ರಿ ತಾಪಮಾನದಲ್ಲಿ ರಸ್ತೆ ತೆರವುಗೊಳಿಸಿ ಸೇನಾ ಹಾಗೂ ನಾಗರಿಕ ಸಂಚಾರ ಸುಗಮಗೊಳಿಸಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಹಿಮದಲ್ಲಿ ಸಿಲುಕಿದ್ದ ಕಾರು ತಳ್ಳಿ ನೆರವಾದ ವಿಡಿಯೋ ವೈರಲ್ ಆಗಿದ್ದು, ಅವರ ಸಾಹಸ ಮೆಚ್ಚುಗೆಗೆ ಪಾತ್ರವಾಗಿದೆ.