ದೇಶದ ಅತ್ಯುನ್ನತ UPSC ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶೈಕ್ಷಣಿಕವಾಗಿ ಹಿಂದುಳಿದ ಯಾದಗಿರಿ ಜಿಲ್ಲೆಯ ನಾಲ್ಕು ಜನ ಆಯ್ಕೆಯಾಗಿದ್ದಾರೆ. ಯಾದಗಿರಿ ನಗರದ ಡಾ.ನಿವೇದಿತಾ ಬಾವಿಮನಿ 469 ಟಿಂಕ್ ಪಡೆದಿದ್ದಾರೆ. ನಿವೇದಿತಾ ತಂದೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ತಾಯಿ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ PDO ಆಗಿ ಕೆಲಸ ಮಾಡುತ್ತಿದ್ದಾರೆ. ಎಂಬಿಬಿಎಸ್ ಓದಿ ವೈದ್ಯೆ ಆಗಿದ್ದ ನಿವೇದಿತಾ ಕಳೆದ 3 ವರ್ಷಗಳ ಹಿಂದೆ ವೈದ್ಯೆ ವೃತ್ತಿ ಬಿಟ್ಟು UPSC ಪರೀಕ್ಷೆ ತಯಾರಿ ನಡೆಸಿದ್ದರು.