ಜಿಂಕೆಯೊಂದು ಬ್ಯಾಂಕಿಗೆ ನುಗ್ಗಿದ ಪ್ರಸಂಗ ಭದ್ರಾವತಿ ತಾಲೂಕು ಶಂಕರಘಟ್ಟದಲ್ಲಿ ನಡೆದಿದೆ. ಡಿಸಿಸಿ ಬ್ಯಾಂಕ್ಗೆ ನುಗ್ಗಿದ್ದ ಜಿಂಕೆ ಗಾಬರಿಯಲ್ಲಿ ಗ್ಲಾಸ್ಗೆ ಗುದ್ದಿ ಕುಸಿದು ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆಯ ರಕ್ಷಣೆ ಮಾಡಿದ್ದಾರೆ. ಬೆನ್ನಟ್ಟಿಬಂದ ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕುವೆಂಪು ವಿವಿ ಒಳಭಾಗದಿಂದ ಜಿಗಿದು ಬ್ಯಾಂಕ್ಗೆ ಜಿಂಕೆ ನುಗ್ಗಿತ್ತು ಎನ್ನಲಾಗಿದೆ. ಬ್ಯಾಂಕ್ ಸಿಬ್ಬಂದಿ ತಕ್ಷಣ ಗೇಟ್ಗಳನ್ನು ಬಂದ್ ಮಾಡಿ ಜಿಂಕೆಯನ್ನು ರಕ್ಷಿಸಿದ್ದಾರೆ.