ಕಾಫಿನಾಡು ಚಿಕ್ಕಮಗಳೂರಿನ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಸಂಗಮೇಶ್ವರ ಪೇಟೆ, ಮಾಗಲು ಗ್ರಾಮ, ಕೊಪ್ಪ, ಎನ್.ಆರ್.ಪುರ ಸೇರಿ ಹಲವಡೆ ವರುಣ ಅಬ್ಬರಿಸಿದ್ದಾನೆ. ಬಿರುಗಾಳಿ ಸಹಿತ ಸುರಿದ ಮಳೆ ಕೆಲ ಕಾಲ ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದ್ದು, ಭಾರಿ ಪ್ರಮಾಣದ ಆಲಿಕಲ್ಲುಗಳನ್ನು ಕಂಡು ಜನ ಬೆಚ್ಚಿರುವ ಪ್ರಸಂಗವೂ ನಡೆದಿದೆ.