ಮೈಸೂರು ಜಿಲ್ಲೆ ನಂಜನಗೂಡು ಕಪಿಲಾ ನದಿ ಪಾತ್ರದಲ್ಲಿ ಶ್ರೀಕಂಠೇಶ್ವರ ದೇಗುಲದ ಹದಿನಾರುಕಾಲು ಮಂಟಪದ ಬಳಿಯ 10ಕ್ಕೂ ಅಧಿಕ ಮರಗಳನ್ನು ದುಷ್ಕರ್ಮಿಗಳು ಕಡಿದುಹಾಕಿದ್ದಾರೆ. ಹಾಡಹಗಲೇ ಮರಗಳನ್ನು ಕಡಿಯಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಮರಗಳ ಮಾರಣಹೋಮದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಮರ ಕಡಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.